Advertisement
MIRROR FOCUS

ಅಡಿಕೆ ಧಾರಣೆ ಜಿಗಿತ | ಮಾರುಕಟ್ಟೆ ಮೇಲೆ ಹಿಡಿತ | ಅಡಿಕೆ ಬೆಳೆಗಾರರಿಗೆ ಖುಷಿಯ ಜೊತೆಗೆ ಆತಂಕ…!

Share

ಅಡಿಕೆ ಧಾರಣೆ ಏರುತ್ತಿದೆ. ಈ ಬಾರಿ ಕೊರೊನಾ ಕಾರಣದಿಂದ ಅಡಿಕೆ ಬೆಳೆಯ ನಿಜವಾದ ಸಮಸ್ಯೆ ಏನು ಎಂಬುದು ಸೂಕ್ಷ್ಮವಾಗಿ ಅರ್ಥ ಮಾಡಿದರೆ ತಿಳಿಯುತ್ತದೆ. ಪ್ರತೀ ಬಾರಿ ಗುಟ್ಕಾ ನಿಷೇಧ ಎಂದಾಗ ಅಡಿಕೆ ಬೆಳೆಗಾರರು ಭಯಗೊಳ್ಳುತ್ತಿದ್ದರು. ಈ ಬಾರಿ ಗುಟ್ಕಾ ನಿಷೇಧವಾದರೂ ಅಡಿಕೆಗೆ ಬೇಡಿಕೆ ಇದೆ. ಅಡಿಕೆ ಧಾರಣೆ ಏರಿಕೆಯಾಗುತ್ತಿದೆ. ಎಲ್ಲೂ ದಾಸ್ತಾನು ಇಲ್ಲ. ಅಂದರೆ ಅಡಿಕೆ ಕಳ್ಳ ದಾರಿಯ ಮೂಲಕ ಭಾರತದೊಳಗೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಜಕಾರಣಿಗಳು ಎಷ್ಟೇ ಹೇಳಿದರೂ , ಯಾರು ಎಷ್ಟೇ ವಿಶ್ಲೇಷಣೆ ಮಾಡಿದರೂ ಅಡಿಕೆ ಆಮದು ತಡೆಗೆ ಸೂಕ್ತ ಕ್ರಮ ಆಗಲೇಬೇಕಿದೆ. ಅಡಿಕೆ ಬೆಳೆಗಾರರು ಗುಟ್ಕಾ ನಿಷೇಧಕ್ಕಲ್ಲ, ಅಡಿಕೆ ಆಮದು ಬಗ್ಗೆ ಭಯ ಪಡಬೇಕಿದೆ. ಇದರ ತಡೆಗೆ ಸೂಕ್ತ ಕ್ರಮ ಅಗತ್ಯವಿದೆ.


ಪುತ್ತೂರು: ಅಡಿಕೆ ಮಾರುಕಟ್ಟೆ ಏರಿಕೆ ಕಂಡಿದೆ. 300 ರೂಪಾಯಿ ಕಳೆದು ಬುಧವಾರ ಮತ್ತೆ ಧಾರಣೆ ಏರಿಕೆಯಾಗಿದೆ. ಹೊಸ ಅಡಿಕೆ 310 ಹಾಗೂ ಹಳೆ ಅಡಿಕೆ  325 ರೂಪಾಯಿಗೆ ಕ್ಯಾಂಪ್ಕೋ ಖರೀದಿ ಮಾಡುತ್ತಿದೆ.

ಖಾಸಗಿ ವಲಯದಲ್ಲೂ ಧಾರಣೆ ಏರಿಕೆಯಾಗಿದೆ. ಹೊಸ ಅಡಿಕೆ 325 ಹಾಗೂ ಹಳೆ ಅಡಿಕೆ 340 ರೂಪಾಯಿಗೆ ಖರೀದಿ ನಡೆಸಿದೆ. ಹಾಗಿದ್ದರೂ ಅಡಿಕೆ ಮಾರುಕಟ್ಟೆ ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ.ಬೇಡಿಕೆ ಏರುತ್ತಿದೆ. ಸಹಜವಾಗಿಯೇ ಧಾರಣೆ ಏರಿಕೆಯಾಗಿದೆ.

ಕೊರೊನಾ ಇಫೆಕ್ಟ್ ಇದು. ಕೊರೊನಾ ಕಾರಣದಿಂದ ಅಡಿಕೆ ಮಾರುಕಟ್ಟೆಗೆ ಬಿಡಲು ಕನಿಷ್ಟ ಎರಡು ತಿಂಗಳು ಬೆಳೆಗಾರರಿಗೆ ಸಾಧ್ಯವಾಗಿಲ್ಲ. ಇದೇ ಹೊತ್ತಿಗೆ ಅಕ್ರಮವಾಗಿ ಆಮದಾಗುತ್ತಿದ್ದ ಅಡಿಕೆಗಳೂ ಭಾರತದ ಒಳ ಬರಲು ಸಾಧ್ಯವಾಗಿಲ್ಲ. ಪ್ರತೀ ಬಾರಿಯೂ ಅಡಿಕೆ ಆಮದು ನಿಷೇಧ ಎಂದರೂ ಅಡಿಕೆ ಕಳ್ಳದಾರಿ ಮೂಲಕ ಬರುತ್ತಲೇ ಇತ್ತು. ಎಷ್ಟೇ ಹೇಳಿದರೂ ಅಡಿಕೆ ಕಳ್ಳ ದಾರಿಯ ಮೂಲಕ ಬರ್ಮಾ, ಬಾಂಗ್ಲಾದೇಶದಿಂದ ಬರುತ್ತಿತ್ತು. ಹೀಗಾಗಿ ಭಾರತದ ಅಡಿಕೆಗೆ ಧಾರಣೆ ಇಳಿಕೆಯಾಗುತ್ತಿತ್ತು. ಈ ಬಾರಿ ಅಡಿಕೆ ಕಳ್ಳದಾರಿಗೆ ಬ್ರೇಕ್ ಬಿದ್ದಿದೆ. ಹಾಗಾಗಿ ಮುಂಬಯಿ, ಉತ್ತರಪ್ರದೇಶ, ಗುಜರಾತ್  ಸೇರಿದಂತೆ ಉತ್ತರ ಭಾರತದಿಂದ ಅಡಿಕೆಗೆ ಬೇಡಿಕೆ ವ್ಯಕ್ತವಾಗಿದೆ. ಕೊರೊನಾ ಕಾರಣದಿಂದ ಉತ್ತರಭಾರತದಲ್ಲಿ ಇದ್ದ ಅಡಿಕೆ ದಾಸ್ತಾನು ಖಾಲಿಯಾಗಿದೆ.

ಈ ಕಡೆ ಕಳೆದ ವರ್ಷದ ಫಸಲಿನ ಕಾರಣದಿಂದ ಅಡಿಕೆ ಬೆಳೆ ಕಡಿಮೆ ಇದೆ. ಹೀಗಾಗಿ ಧಾರಣೆ ಎಷ್ಟೇ ಆದರೂ ಅಡಿಕೆ ಮಾರುಕಟ್ಟೆಗೆ ನೀಡುವ ಪ್ರಮಾಣ ಕಡಿಮೆಯೇ ಆಗಿದೆ. ಧಾರಣೆ ಏರಿಕೆಯಾಗುತ್ತಲೇ ಇದೆ. ಅಡಿಕೆ ಬೆಳೆಗಾರರು ಇನ್ನು ದೃಢ ನಿಲುವು ಮಾಡಿದರೆ ಅಡಿಕೆ ಮಾರುಕಟ್ಟೆ ಈ ಬಾರಿ ಏರಿಕೆಯಾಗುವುದು ನಿಶ್ಚಿತ. ಆದರೆ ಇನ್ನೊಂದು ಕಡೆ ಆತಂಕವೂ ಇದೆ. ಧಾರಣೆ ಎಗ್ಗಿಲ್ಲದೆ ಸಾಗಿದರೆ ಭವಿಷ್ಯದಲ್ಲಿ ಅಡಿಕೆ ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ. ಧಾರಣೆ ಏರಿಕೆ ಒಂದು ಹಂತದವರೆಗೆ ಮಾತ್ರವೇ ಉತ್ತಮ. ಅಧಿಕ ಪ್ರಮಾಣದಲ್ಲಿ ಏರಿಕೆಯಾದರೆ ಮಾರುಕಟ್ಟೆ ಸ್ಥಿರತೆ ಕಷ್ಟಸಾಧ್ಯವಿದೆ. ಹೀಗಾಗಿ ಅಡಿಕೆ ಬೆಳೆಗಾರರು ಭವಿಷ್ಯದ ಮಾರುಕಟ್ಟೆ ಬಗ್ಗೆಯೂ ಯೋಚಿಸಿ ನೂತನ ಯೋಜನೆ ರೂಪಿಸಬೇಕು ಎಂದು ಅಡಿಕೆ ಬೆಳೆಗಾರ ರಘುನಾಥ ರಾವ್ ಹೇಳುತ್ತಾರೆ.

ಅಡಿಕೆ ಮಾರುಕಟ್ಟೆ ಏರಿಕೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಉತ್ತರ ಭಾರತದಲ್ಲಿ ಅಡಿಕೆ ದಾಸ್ತಾನು ಕೊರತೆ. ಹೀಗಾಗಿ ಈಗ ಅಡಿಕೆ ಬೆಳೆಗಾರರು ಎಚ್ಚರಿಕೆ ನಡೆ , ಯೋಜನೆ ರೂಪಿಸಿಕೊಂಡು ಅಡಿಕೆ ಮಾರುಕಟ್ಟೆ ಬಿಟ್ಟರೆ ಧಾರಣೆಯನ್ನು ಕೆಲವು ಸಮಯದವರೆಗೆ ಹಿಡಿದಿರಿಸಬಹುದು. – ಅಶೋಕ್ ಕಿನಿಲ, ಅಧ್ಯಕ್ಷರು, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಆಹಾರ-ನಿದ್ರೆ ಪರಸ್ಪರ ಪೂರಕ; ಉತ್ತಮ ನಿದ್ರೆಗೆ ಹಸಿವು ಅಗತ್ಯ: ರಾಘವೇಶ್ವರ ಶ್ರೀ

ಉತ್ತಮ ಆರೋಗ್ಯಕ್ಕೆ ಸರಿಯಾದ ಆಹಾರ ಮತ್ತು ನಿದ್ರೆ ಎರಡೂ ಅವಿಭಾಜ್ಯ ಎಂದು ಶ್ರೀ…

8 hours ago

ಕೃಷಿಕರ ಮಿತ್ರ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ ಪ್ರಶಸ್ತಿ

ಮಳೆ ಮಾಹಿತಿ ಮೂಲಕ ಕೃಷಿಕರಿಗೆ ನೆರವಾಗುತ್ತಿರುವ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ…

8 hours ago

ಮಂಗಳೂರಿನಲ್ಲಿ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್‌ಗೆ ಚಾಲನೆ – 28 ರಾಜ್ಯ–ಕೇಂದ್ರಾಡಳಿತ ಪ್ರದೇಶಗಳಿಂದ 644 ಬಾಲಕಿ-ಬಾಲಕಿಯರು

ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್‌-11 ಚೆಸ್ ಚಾಂಪಿಯನ್ಶಿಪ್‌ಗೆ ಭವ್ಯ ಚಾಲನೆ ದೊರೆತಿದ್ದು, ದೇಶದ 28…

9 hours ago

ಹವಾಮಾನ ವರದಿ | 02-08-2026 | ಕರಾವಳಿಯಲ್ಲಿ ಮಳೆ ಇಳಿಮುಖ ..? ರಾಜ್ಯದಲ್ಲಿ ಮುಂಗಾರು ಸ್ಥಿತಿ ಏನು..?

ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ತೀವ್ರತೆ ಇಳಿಮುಖವಾಗಲಿದ್ದು, ಆಗಸ್ಟ್‌ 3ರಿಂದ ತೋಟದ…

11 hours ago

ಭಾರೀ ಮಳೆಯ ಎಚ್ಚರಿಕೆ : 24 ಗಂಟೆ ಸನ್ನದ್ಧವಾಗಿರಲು ಡಿಸಿ ಸೂಚನೆ, ಭೂಕುಸಿತ ಪ್ರದೇಶಗಳ ಮೇಲೆ ಕಟ್ಟೆಚ್ಚರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು 24…

22 hours ago

ಹುಬ್ಬಳ್ಳಿಯಲ್ಲಿ ಹಲಸು ಮೇಳಕ್ಕೆ ಚಾಲನೆ – 50ಕ್ಕೂ ಹೆಚ್ಚು ಮಳಿಗೆಗಳು, ಹಲಸಿನ ಬಿರಿಯಾನಿಯಿಂದ ಕಬಾಬ್‌ವರೆಗೆ ಸವಿಯುವ ಅವಕಾಶ

ಹುಬ್ಬಳ್ಳಿಯಲ್ಲಿ ಆರಂಭವಾದ ಮೂರು ದಿನಗಳ ಹಲಸು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.…

23 hours ago