ಅಡಿಕೆ ಬೆಳೆಗಾರರಿಗೂ ಧಾರಣೆಯ ಲಾಕ್ಡೌನ್ ? | ಕಾಂಗ್ರೆಸ್ ಮುಖಂಡ ವೆಂಕಪ್ಪ ಗೌಡ ಪ್ರಶ್ನೆ

April 29, 2020
2:15 PM

ಸುಳ್ಯ: ಲಾಕ್ಡೌನ್ ಹಿನ್ನೆಲೆಯಲ್ಲಿ ಅಡಿಕೆ , ಕೊಕೋವನ್ನು  ಕ್ಯಾಂಪ್ಕೋ ಸಂಸ್ಥೆ ಹಾಗೂ ಗೇರು ಬೀಜವನ್ನು ಸಹಕಾರಿ ಸಂಸ್ಥೆಗಳು ಖರೀದಿ ಮಾಡಲು ದಕ ಜಿಲ್ಲಾಡಳಿತ ಜವಾಬ್ದಾರಿ ವಹಿಸಿಕೊಟ್ಟಿರುದು ಶ್ಲಾಘನೀಯ. ಈ ಮೂಲಕ ಖರೀದಿ ಮಾಡುತ್ತಿರುವುದೂ ಅಭಿನಂದನೀಯ. ಆದರೆ ಅಡಿಕೆಗೆ 250 ರೂಪಾಯಿ ಹಾಗೂ ಗೇರುಬೀಜಕ್ಕೆ 70 ರೂಪಾಯಿಗೆ ಕಡಿಮೆಯಾಗದಂತೆ ಖರೀದಿ ಮಾಡಲು ನಿರ್ಧರಿಸಿತ್ತು. ಆದರೆ ಇಂದು ಅದೇ ಎಪಿಎಂಸಿ ಯಾರ್ಡ್ ನಲ್ಲಿ ಖಾಸಗಿ ವ್ಯಾಪಾರಿಗಳು ಅಡಿಕೆ ಹಾಗೂ ಕೊಕೋ, ಗೇರುಬೀಜ ಉತ್ತಮ ದರದಲ್ಲಿ  ಖರೀದಿ ಮಾಡುತ್ತಿದ್ದಾರೆ. ಅಡಿಕೆ ಬೆಳೆಗಾರರಿಗೆ ಧಾರಣೆಯಲ್ಲೂ ಲಾಕ್ಡೌನ್ ಇದೆಯೇ ಎಂದು ಕಾಂಗ್ರೆಸ್ ಮುಖಂಡ ವೆಂಕಪ್ಪ ಗೌಡ ಹೇಳಿದ್ದಾರೆ.

ಈ ಹಿಂದೆ ಅಡಿಕೆ ಕೆಜಿಗೆ 250 ರೂಪಾಯಿಗೆ ಕಡಿಮೆಯಾಗದಂತೆ ಹಾಗೂ ಗೇರುಬೀಜ 70 ರೂಪಾಯಿಗೆ ಕಡಿಮೆಯಾಗದಂತೆ ಖರೀದಿ ಮಾಡಲು ಈ ಹಿಂದೆ ಸಂಸ್ಥೆಗಳು ನಿರ್ಧರಿಸಿತ್ತು. ಇಂದು ಸುಳ್ಯ ಎಪಿಎಂಸಿ ಯಾರ್ಡ್ ನಲ್ಲಿ ಕ್ಯಾಂಪ್ಕೋ ಅಡಿಕೆಗೆ 250 – 255  ರೂಪಾಯಿ ದರಲ್ಲಿ ಖರೀದಿ ಮಾಡಿದರೆ  ಅದೇ ಯಾರ್ಡನಲ್ಲಿದ್ದ ಖಾಸಗಿ ವ್ಯಾಪಾರಿಗಳು 265  ರೂಪಾಯಿಗೆ ಖರೀದಿ ಮಾಡುತ್ತಿದ್ದಾರೆ. ಅದೇ ರೀತಿ ಗೇರು ಬೀಜಕ್ಕೆ ರೂ 85 ಕ್ಕೆ ಖರೀದಿ ಮಾಡಲಾಗುತ್ತಿದೆ.ಇದಕ್ಕೆ ರೈತಾಪಿ ವರ್ಗದವರು ಏನು ಹೇಳಬೇಕು ?. ಇದೂ ಲಾಕ್ಡೌನ್ ? ಎಂದು ಪ್ರಶ್ನಿಸಿದ್ದಾರೆ.

ಇದೆಲ್ಲಾ ಇದ್ದರೂ ಜನಪ್ರತಿನಿಧಿಗಳು ಇದಕ್ಕೂ ಅವರಿಗೂ ಸಂಬಂಧವೇ ಇಲ್ಲದಂತೆ ಕೂತಿರುದು ಸರಿಯೇ ?. ಇದೊಂದು ಸರಕಾರೀ ಸಂಸ್ಥೆಯಾಗಿದ್ದು ರೈತರನ್ನು ದರೋಡೆ ಮಾಡಿದಂತೆ ಅಲ್ವೇ ?  ಬೆಳೆಗಾರರಿಗೆ ಮಾಡುವ ಅನ್ಯಾಯ ಅಲ್ಲವೇ ? ವಾರಾಣಸಿ ಸುಬ್ರಾಯ ಭಟ್ ಅವರ ನೇತೃತ್ವದಲ್ಲಿ ಅಂದು ಹುಟ್ಟು ಹಾಕಿದ ಸಂಸ್ಥೆಯ ಉದ್ದೇಶ ರೈತ ಸಂಕಷ್ಟದಲ್ಲಿದ್ದಾಗ ಅವನ ಸಹಾಯಕ್ಕೆ ಧಾವಿಸಬೇಕು ಎಂಬುದಾಗಿತ್ತು.  ಆದರೆ  ಈಗಿನ ಆಡಳಿತದಲ್ಲಿ ಅದರ ಧ್ಯೇಯೋದ್ದೇಶ  ಬದಲಾಯಿತೇ ? ಈ ಸಂಕಷ್ಟ ಕಾಲದಲ್ಲೂ ರೈತರ ಶೋಷಣೆಯೇ ? ಇದನ್ನು ಕೇಳುವ ಸ್ವಭಾವದ ಜನಪ್ರತಿನಿಧಿಗಳು ಸುಳ್ಯಕ್ಕೆ ಇಲ್ಲದಂತಾಗಿರುದು ನಮ್ಮ ದುರಂತವೇ ಸರಿ ಎಂದು ವೆಂಕಪ್ಪ ಗೌಡ ಹೇಳಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಿಂದೂ ಮಹಾಸಾಗರದ ಹವಾಮಾನದಲ್ಲಿ ಹಠಾತ್ ಬದಲಾವಣೆ – ಮತ್ತೆ ಮಹಾಮಳೆಗೆ ಕಾರಣವಾಗುತ್ತಿದೆಯೇ?
August 3, 2026
12:03 PM
by: ಸಾಯಿಶೇಖರ್ ಕರಿಕಳ
ರಾಜ್ಯದಲ್ಲಿ ಭಾರೀ ಮಳೆ ಆರ್ಭಟ – ಕೆಲವು ಜಿಲ್ಲೆಗಳಲ್ಲಿ ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
August 3, 2026
7:20 AM
by: ದ ರೂರಲ್ ಮಿರರ್.ಕಾಂ
ಆಹಾರ-ನಿದ್ರೆ ಪರಸ್ಪರ ಪೂರಕ; ಉತ್ತಮ ನಿದ್ರೆಗೆ ಹಸಿವು ಅಗತ್ಯ: ರಾಘವೇಶ್ವರ ಶ್ರೀ
August 2, 2026
9:50 PM
by: ದ ರೂರಲ್ ಮಿರರ್.ಕಾಂ
ಕೃಷಿಕರ ಮಿತ್ರ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ ಪ್ರಶಸ್ತಿ
August 2, 2026
9:41 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror