Advertisement
ಕೃಷಿ

ಅಡಿಕೆ ಮರ ಏರುವ ಸುಲಭ ಉಪಾಯದ ಪ್ರಯತ್ನದಲ್ಲಿ ಪದವೀಧರ ಕೃಷಿಕ

Share

ಬೆಳ್ಳಾರೆ: ಇವರು ಸಿವಿಲ್ ಇಂಜಿನಿಯರ್. ಕೃಷಿ ಮಾಡುತ್ತಿರುವ ಯುವಕ. ಇಂಜಿನಿಯರಿಂಗ್ ಬಳಿಕ ಕೃಷಿಯಲ್ಲೇ ತೊಡಗಿಕೊಂಡು ಕೃಷಿ ಅಭಿವೃದ್ಧಿಗೆ ವಿವಿಧ ಪ್ರಯತ್ನ ಮಾಡಿದ್ದಾರೆ. ಇದೀಗ ಅಡಿಕೆ ಮರ ಏರಲು ಸುಲಭ ಉಪಾಯ ಕಂಡುಹಿಡಿಯುವ ಪ್ರಯತ್ನದಲ್ಲಿ ಇದ್ದಾರೆ. ಈ ಯುವ ಕೃಷಿಕ ಸುಳ್ಯ ತಾಲೂಕಿನ ಮುಪ್ಪೇರ್ಯ ಗ್ರಾಮದ ಕಲ್ಮಡ್ಕ ಬಳಿಯ ಲಾಲ್ ಕೃಷ್ಣ ಕೈಂತಜೆ.

 

 

ಅಡಿಕೆ ಬೆಳೆಗಾರರಿಗೆ ಸದಾ ಕಾಡುವ ಚಿಂತೆ, ಅಡಿಕೆ ಮರ ಏರುವುದು ಹೇಗೆ ? ಅದರ ಜೊತೆಗೆ ಕೊಳೆರೋಗಕ್ಕೆ ಔಷಧಿ ಸಿಂಪಡಣೆ , ಅಡಿಕೆ ಕೊಯ್ಲು ಇದೆರಡೂ ಈಗ ಬೆಳೆಗಾರರಿಗೆ ಕಾಡುವ ಬಹುದೊಡ್ಡ ಸಮಸ್ಯೆ. ಇದಕ್ಕಾಗಿ ವಿವಿಧ ಪ್ರಯತ್ನ ಆಗುತ್ತಿದೆ. ಒಂದು ಕಡೆ ಯಂತ್ರಗಳ ಆವಿಷ್ಕಾರ ನಡೆಯುತ್ತಿದ್ದರೆ ಮತ್ತೊಂದು ಕಡೆ ಸುಲಭದಲ್ಲಿ ಹಾಗೂ ರಕ್ಷಣಾತ್ಮಕವಾಗಿ ಹೇಗೆ ಮರ ಏರಬಹುದು ಎಂಬ ಬಗ್ಗೆಯೂ ಅಧ್ಯಯನ, ಪ್ರಯತ್ನ ನಡೆಯುತ್ತಿದೆ. ಇಂತಹ ಒಂದು ಪ್ರಯತ್ನ ಮುಪ್ಪೇರ್ಯ ಗ್ರಾಮದ ಕಲ್ಮಡ್ಕ ಬಳಿಯ ಲಾಲ್ ಕೃಷ್ಣ ಕೈಂತಜೆ ಮಾಡಿದ್ದಾರೆ.


ಲಾಲ್ ಕೃಷ್ಣ್ ಅವರು ಮರ ಏರುವ ಯಂತ್ರಗಳ ಬಗ್ಗೆ , ಸುಲಭ ಉಪಾಯಗಳ ಬಗ್ಗೆ ಹುಡುಕುತ್ತಿದ್ದಾಗ ಬ್ರೆಜಿಲ್ ನಲ್ಲಿ ಕೃಷಿಕರು ಬಳ್ಳಿಯ ಸಹಾಯದಿಂದ ಮರ ಏರುವ ಉಪಾಯವನ್ನು ನೋಡಿದರು. ಅಲ್ಲಿ ತೆಂಗಿನ ಮರಕ್ಕೆ ಈ ಬಳ್ಳಿಯ ಸಹಾಯದಿಂದ ಏರುತ್ತಿದ್ದರು. ಅದೇ ಮಾದರಿಯಲ್ಲಿ ಅಡಿಕೆ ಮರ ಏರಲು ಬೇಕಾದ ವಿನ್ಯಾಸ ಮಾಡಿದರು. ಎರಡು ಬಳ್ಳಿ ಹಾಗೂ ಬೈಕ್, ಸ್ಕೂಟರ್ ಟಯರ್ ಇದ್ದರೆ ಈ ಪ್ರಯತ್ನ ಸಾಧ್ಯವಾಗುತ್ತದೆ. ಬಳ್ಳಿಯ ಒಂದು ತುದಿಗೆ ಟಯರ್ ಕಟ್ಟಿ, ಇನ್ನೊಂದು ತುದಿಯನ್ನು ಅಡಿಕೆ ಮರಕ್ಕೆ ಸಿಕ್ಕಿಸಿಕೊಂಡು ಏರುವ ಐಡಿಯಾ ಇದು. ಇದರಲ್ಲಿ ಇನ್ನಷ್ಟು ಸುಧಾರಣೆಗಳು ಇವೆ. ಈ ಮೂಲಕ ಸುಲಭದಲ್ಲಿ ಮರ ಏರಲು ಸಾಧ್ಯವಾಗುತ್ತದೆ, ಹಾಗೂ ಆಯಾಸ ಕಡಿಮೆಯಾಗುತ್ತದೆ ಎನ್ನುವುದು ಅವರ ಅಭಿಪ್ರಾಯ. ಇನ್ನೂ ಸುಧಾರಣೆಗಳು ಇವೆ. ಇದು ಆರಂಭವಷ್ಟೇ ಎನ್ನುವ ಲಾಲ್ ಕೃಷ್ಣ, ಇದರಲ್ಲಿ ಇನ್ನಷ್ಟು ರಕ್ಷಣಾ ವ್ಯವಸ್ಥೆಗಳನ್ನೂ ಮರ ಏರುವವರು ಮಾಡಿಕೊಳ್ಳಬಹುದು ಎನ್ನುತ್ತಾರೆ.

ಕೃಷಿಕರ ಬೆಳವಣಿಗೆಗೆ ಹಾಗೂ ಕೃಷಿ ಸುಲಭಕ್ಕೆ ಲಾಲ್ ಕೃಷ್ಣ ಹಾಗೂ ಅವರ ಕುಟುಂಬ ವಿವಿಧ ಪ್ರಯೋಗ ಮಾಡುತ್ತಲೇ ಇದ್ದಾರೆ. ಯುವಕರ ಯೋಚನೆಗಳಿಗೆ ತಕ್ಕಂತೆ ಲಾಲ್ ಕೃಷ್ಣ ಯುವ ಕೃಷಿಕರಾಗಿ ಹೊಸ ಹೊಸ ಐಡಿಯಾ ಹೊಂದಿರುವುದು ಕೃಷಿ ಬೆಳವಣಿಗೆಗೆ ಭರವಸೆ ಮೂಡಿಸುತ್ತಾರೆ.

(ಲಾಲ್ ಕೃಷ್ಣ ಸಂಪರ್ಕ – 9449568502)

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!

ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…

2 days ago

ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?

ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…

2 days ago

ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…

3 days ago

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ

ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…

4 days ago

ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…

4 days ago

ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…

4 days ago