ಪಂಜ: ವಿವಿಧ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಾತಿಯ ಕಾರಣದಿಂದ ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆ ಮುಂದೂಡಿದ ಘಟನೆ ಬುಧವಾರ ಪಂಜದಲ್ಲಿ ನಡೆದಿದೆ.
ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆ ಬುಧವಾರ ಆಯೋಜನೆಗೊಂಡಿತ್ತು. ಆರಂಭದಲ್ಲಿ ಜನರ ಕೋರಂ ಇಲ್ಲದ ಕಾರಣ ತಡವಾಗಿ ಗ್ರಾಮ ಸಭೆ ಆರಂಭವಾಯಿತು. ನಂತರ ಜನರು ಬಮದರೂ ಅಧಿಕಾರಿಗಳ ಕೊರತೆ ಕಂಡುಬಂತು. ಈ ಸಂದರ್ಭ ಜನರು ಗ್ರಾಪಂ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಪಿ ಡಿ ಒ ಅವರು ವಿವಿಧ ಇಲಾಖೆಗೆ ಸಂಪರ್ಕ ಮಾಡಿ ಅಧಿಕಾರಿಗಳನ್ನು ಕರೆಯಿಸಿದರೂ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ , ಮೆಸ್ಕಾಂ, ಪಶುಸಂಗೋಪನಾ ಇಲಾಖಾ ಅಧಿಕಾರಿಗಳು ಗೈರಾಗಿದ್ದರು. ಹೀಗಾಗಿ ಗ್ರಾಮಸ್ಥರೇ ವರದಿ ನೀಡಿ ಬಳಿಕ ಸಭೆಯಿಂದ ಹೊರನಡೆದರು. ಹೀಗಾಗಿ ಗ್ರಾಮ ಸಬೆ ಮುಂದೂಡಲಾಯಿತು.
ಗ್ರಾಮ ಸರಕಾರ ಇತ್ತೀಚೆಗೆ ವೈಫಲ್ಯವಾಗುತ್ತಿದೆ. ಅಧಿಕಾರ ಹಳ್ಳಿಯಲ್ಲೇ ಇದೆ. ಪ್ರತೀ ಹಂತದಲ್ಲೂ ಗ್ರಾಮ ಸಭೆಯ ನಿರ್ಣವೇ ಅಂತಿಮವಾಗುತ್ತದೆ. ಹೀಗಾಗಿ ಅಧಿಕಾರ ಜನರಲ್ಲೇ ಇದೆ. ಈ ಕಾರಣದಿಂದ ಗ್ರಾಮ ಸಭೆ, ಗ್ರಾಮ ಪಂಚಾಯತ್ ಆಡಳಿತ ಬಲವಾಗಬೇಕು. ಇಲಾಖೆಗಳು, ಅಧಿಕಾರಿಗಳು ಗ್ರಾಮ ಸಭೆ, ಗ್ರಾಮ ಸರಕಾರವನ್ನು ನಿರ್ಲಕ್ಷ್ಯ ಮಾಡುವ ಬಗ್ಗೆ ಸುಳ್ಯನ್ಯೂಸ್.ಕಾಂ ಇಂದು ಫೋಕಸ್ ಸ್ಟೋರಿ ಮಾಡಿತ್ತು. ಇದಕ್ಕೆ ಪಂಜದ ವರದಿಯೂ ಸಾಕ್ಷಿಯಾಯಿತು.
ಈ ವರದಿಯ ಲಿಂಕ್ ಇಲ್ಲಿದೆ…
https://theruralmirror.com/?p=6965
ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…
ಪಶ್ಚಿಮ ಬಂಗಾಳ ಕರಾವಳಿಯಲ್ಲಿ ರೂಪುಗೊಳ್ಳಲಿರುವ ವಾಯುಭಾರ ಕುಸಿತದಿಂದ ಕರ್ನಾಟಕದಲ್ಲಿ ಮತ್ತೆ ಮುಂಗಾರು ಚುರುಕುಗೊಳ್ಳುವ…
ಆಗಸ್ಟ್ 2ರಿಂದ 8ರವರೆಗೆ ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಮುಕ್ತ ಹಾಗೂ ಬಾಲಕಿಯರ ಚೆಸ್…
ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…
ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…