ದುಬೈ: ನ.1 ಅನ್ಸಾರಿಯ ಯತೀಮ್ ಖಾನ ಮತ್ತು ನಿರ್ಗತಿಕರ ಕೇಂದ್ರ ಸುಳ್ಯ ಇದರ ಯು ಎ ಇ ಸಮಿತಿ ವತಿಯಿಂದ ಮೀಲಾದ್ ಸಮಾವೇಶ ಹಾಗು ಇತ್ತೀಚಿಗೆ ನಿಧನರಾದ ಮರ್ಹೂಂ ಅಬ್ಬಾಸ್ ಹಾಜಿ ಕಟ್ಟೆಕ್ಕಾರ್ ರವರ ಅನುಸ್ಮರಣಾ ಕಾರ್ಯಕ್ರಮವು ಶುಕ್ರವಾರ ಅಸರ್ ನಮಾಝ್ ಬಳಿಕ ದುಬೈನ ನೈಫ್ ನಲ್ಲಿರುವ ಮದರಸಾ ಸಭಾಂಗಣದಲ್ಲಿ ನಡೆಯಿತು.
ಪ್ರವಾದಿ ಮುಹಮ್ಮದ್ ಮುಸ್ತಫಾ [ಸ.ಅ] ರವರವರನ್ನು ಸ್ತುತಿಸುವ ಮೌಲೂದ್ ಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ದುಬೈನಲ್ಲಿ ಕೆಸಿಎಫ್ ಸಂಘಟನೆಯ ಕನ್ವೀನರ್ ಆಗಿರುವ ಕಬೀರ್ ಜಟ್ಟಿಪ್ಪಳ್ಳ ಮೌಲೂದ್’ ಹಾಗೂ ದುವಾಗೆ ನೇತೃತ್ವ ನೀಡಿದರು.
ಬಳಿಕ ಇತ್ತೀಚೆಗೆ ನಿಧನರಾದ ಸುಳ್ಯದ ಹಿರಿಯ ಸಾಮಾಜಿಕ ಮುಂದಾಳು ಹಾಗೂ ಹಿರಿಯ ಉದ್ಯಮಿಯಾಗಿದ್ದ ಅಬ್ಬಾಸ್ ಹಾಜಿ ಕಟ್ಟೆಕ್ಕಾರ್ಸ್ ಅವರಿಗೆ ತಹಲೀಲ್ ಸಮರ್ಪಿಸಲಾಯಿತು.
ಅನ್ಸಾರಿಯಾ ಯುಎಇ ಸಮಿತಿಯ ಅಧ್ಯಕ್ಷರಾದ ಝೈನುದ್ದೀನ್ ಬೆಳ್ಳಾರೆಯವರು ಮಾತನಾಡಿ, ಅಬ್ಬಾಸ್ ಹಾಜಿ ಅವರ ನಿಧನವು ಸುಳ್ಯದ ಜನತೆಗೆ ತುಂಬಲಾರದ ನಷ್ಟ. ಸುಳ್ಯ ದಲ್ಲಿ ಸರ್ವಧರ್ಮದವರು ಸಹಬಾಳ್ವೆಯಿಂದ ಜೀವನ ನಡೆಸಲು ಅಬ್ಬಾಸ್ ಹಾಜಿಯವರ ಮುಂದಾಳತ್ವ ಪ್ರಮುಖ ಪಾತ್ರ ವಹಿಸಿತ್ತು ಎಂದು ಹೇಳಿದರು.
ಸುಳ್ಯದ ಅನ್ಸಾರಿಯಾದ ವಠಾರದಲ್ಲಿ ನಿರ್ಮಾಣಗೊಳ್ಳುತ್ತಿರುವ ಶಾದಿ ಮಹಲ್ ಕಟ್ಟಡದ ಕಾಮಗಾರಿ ಸಾಧ್ಯವಾದಷ್ಟು ವೇಗದಲ್ಲಿ ಪೂರ್ತಿಗೊಳಿಸಲು ಸರ್ವರ ಸಹಕಾರ ಕೋರಿದರು.
ನಾಸಿರ್ ಜಟ್ಟಿಪ್ಪಳ್ಳ ಸ್ವಾಗತಿಸಿ, ಮುಖ್ತಾರ್ ಅರಂತೋಡು ವಂದನಾರ್ಪಣೆ ಮಾಡಿದರು. ಸಮಿತಿಯ ಪ್ರಮುಖರಾದ ಮುಹಮ್ಮದ್ ಇಂಜಿನಿಯರ್ ಮೇನಾಲ, ಖಜಾಂಚಿ ಮುನೀರ್ ಜಟ್ಟಿಪ್ಪಳ್ಳ, ಗೌರವಾಧ್ಯಕ್ಷರಾದ ಹಮೀದ್ ಕೆಯು, ಹಮೀದ್ ಪೆರಾಜೆ ಕಬಾಯಿಲ್, ಅಜ್ಮಾನ್ ಯುನಿಟ್ ಅಧ್ಯಕ್ಷರಾದ ಅಝೀಝ್ ಕುಂಬಕ್ಕೋಡು, ಅಬುಧಾಬಿ ಯುನಿಟ್ ಅಧ್ಯಕ್ಷರಾದ ಲತೀಫ್ ನ್ಯಾಷನಲ್, ಅಜ್ಮಾನ್ ಜಿಎಂಸಿ ಗ್ರೂಪ್, ಮೊಯ್ದೀನ್ ಕಬಾಯಿಲ್, ರಫೀಕ್ ಜಟ್ಟಿಪ್ಪಳ್ಳ ಸೇರಿ ಸುಳ್ಯ ತಾಲೂಕಿನ ಹಲವಾರು ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ತಬರ್ರುಖ್ ವಿತರಿಸಲಾಯಿತು.
ಕರ್ನಾಟಕದ ಹಲವು ಭಾಗಗಳಲ್ಲಿ ಜೂನ್ 20ರವರೆಗೆ ಪ್ರಸ್ತುತ ಹವಾಮಾನ ಮಾದರಿಯೇ ಮುಂದುವರಿಯುವ ಸಾಧ್ಯತೆ…
ತುಮಕೂರು ಜಿಲ್ಲೆಯಲ್ಲಿ ಅಡಿಕೆ ಬೆಳೆ ವಿಸ್ತೀರ್ಣ 94 ಸಾವಿರ ಹೆಕ್ಟೇರ್ ದಾಟಿದ್ದು, ತೆಂಗಿನ…
ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳು “ಇಂದೋರ್ ಘೋಷಣೆ” ಅಂಗೀಕರಿಸಿದ್ದು, ಆಹಾರ ಭದ್ರತೆ, ಡಿಜಿಟಲ್…
2026ರಲ್ಲಿ ಎಲ್ನಿನೊ ಅಧಿಕೃತವಾಗಿ ಆರಂಭಗೊಂಡಿದ್ದು, ಇದು ಅತ್ಯಂತ ಪ್ರಬಲ "ಸೂಪರ್ ಎಲ್ನಿನೊ" ಆಗುವ…
ಉತ್ತರ ಪ್ರದೇಶ ಸರ್ಕಾರವು ಭಾರತೀಯ ಸೇನೆಗೆ ದೇಶೀ ಹಸುವಿನ ಹಾಲಿನ ಉತ್ಪನ್ನಗಳನ್ನು ಪೂರೈಸಲು…
ಎಳೆಕಾಯಿ ಹಾಗೂ ಬಲಿತ ಅಡಿಕೆ ಒಡೆದು ಬೀಳುತ್ತಿರುವ ಸಮಸ್ಯೆ ಹಲವು ಭಾಗಗಳಲ್ಲಿ ಕಂಡುಬರುತ್ತಿದೆ.…