Advertisement
Share

ನನ್ನಮ್ಮ ಹೊತ್ತುಕೊಂಡಿದ್ದಾಳೆ ಕನಸುಗಳನ್ನು
ಹಿಡಿಯಲ್ಲಿ ಹಿಡಿಯದಷ್ಟು
ಹತ್ತಬಹುದು ಗಿರಿ ಶಿಖರಗಳನ್ನು
ಈಕೆಯ ಕನಸುಗಳಿವೆ ಹತ್ತಿ ಮುಗಿಯದಷ್ಟು..

ಬಡತನದ ಬೆವರಿನ ಹನಿಯೂ
ಪ್ರತಿ ನರನಾಡಿಗಳಲ್ಲೂ ಅರಗಿಸಲು
ಸಾಧ್ಯವಿಲ್ಲದ ನೋವು – ದುಃಖಗಲ್ಲೂ
ಕೊಟ್ಟಿದ್ದಾಳೆ ಭವಿಷ್ಯದ ಹೊಸ ಕನಸುಗಳನ್ನು..

ನನಸಾಗುವ ಹಾದಿಯಲ್ಲಿತ್ತು
ಆ ಕನಸುಗಳ ಗುಚ್ಛ
ತನ್ನಾಸೆಗಳ ಬದಿಗೊತ್ತಿ
ದುಡಿದಳು ನಿತ್ಯ ನಿರ್ಮಲೆಯಾಗಿ..

ಬತ್ತದಷ್ಟು ಬಯಕೆಗಳಿತ್ತು ಆ
ಕನಸುಗಳಲ್ಲಿ..ತಾನು ಮನಗಳಲ್ಲೂ
ಎಲ್ಲವನ್ನೂ ಅದುಮಿಟ್ಟಳು
ತನ್ನಂತರಂಗದ ಆಂತರ್ಯದಲ್ಲಿ..

ತನಗಾಗಿ ಹಿಗ್ಗಲ್ಲಿಲ್ಲ ಜಗ್ಗಲಿಲ್ಲ
ಹಿಗ್ಗಿದಳು ಕುಗ್ಗಿದಳು..ತನ್ನವರಿಗಾಗಿ
ಉಸಿರುಗಟ್ಟಿ ದುಡಿದಳು , ಶ್ರಮಿಸಿದಳು
ಎಂದೆಂದಿಗೂ ತನ್ನ ಕರುಳ ಬಳ್ಳಿಗಾಗಿ..

ಎಡೆಬಿಡದ ಕರ್ಮ , ಕ್ಲಿಷ್ಟ ಯಾತನೆಗಳ ಉದ್ದಕ್ಕೂ
ಬೀಳಲಿಲ್ಲ ಬದುಕ ಬಂಡಿ
ಕಣ್ಣುಗಳಲ್ಲಿತ್ತು ಕಾತುರಗಳ ಛಾಯೆ
ಕಾಯುತ್ತಿದ್ದಳು ಚೈತ್ರದ ಕ್ಷಣಕ್ಕಾಗಿ

ತುಂಬಿ ಹೋಗಿತ್ತು ಜೀವ , ಬದುಕು , ಉಸಿರು
ಎಲ್ಲವೂ ಒಂದೇ ಆಗಿತ್ತು
ಹೃದಯ – ಕಣ್ಣುಗಳೆರಡೂ ಬಯಸಿತ್ತು
ಕರುಳ ಕುಡಿಯ ಕನಸುಗಳ ಅಸ್ತಿತ್ವವನ್ನು..

# ನಯನ.ಜಿ.ಎಸ್. , ಕೋಟೆ ಮುಂಡುಗಾರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕರ್ನಾಟಕದ 101 ತಾಲ್ಲೂಕುಗಳು ಬರಪೀಡಿತ : ಇನ್ನೂ 3 ತಾಲ್ಲೂಕುಗಳ ಮೇಲೂ ಬರದ ಛಾಯೆ

ರಾಜ್ಯದ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, 89 ತೀವ್ರ ಹಾಗೂ 12…

15 minutes ago

101 ತಾಲೂಕುಗಳಲ್ಲಿ ಬರದ ಛಾಯೆ – ಗ್ರಾಮೀಣರಿಗೆ ಉದ್ಯೋಗ ಹೆಚ್ಚಿಸಲು ಸಚಿವ ಖಂಡ್ರೆ ಸೂಚನೆ

ರಾಜ್ಯದ 101 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಗ್ರಾಮೀಣ ಜನರ ಬೇಡಿಕೆಗೆ ಅನುಗುಣವಾಗಿ…

21 minutes ago

ಹವಾಮಾನ ವರದಿ | 28-08-2026 | ಕರ್ನಾಟಕದ ಹವಾಮಾನದಲ್ಲಿ ಮುಂದಿನ ಬದಲಾವಣೆ ಎಲ್ಲಿದೆ?

ಕರ್ನಾಟಕದಲ್ಲಿ ಮುಂಗಾರು ಸದ್ಯ ದುರ್ಬಲಗೊಂಡಿದ್ದು, ಬಹುತೇಕ ಕಡೆ ಬಿಸಿಲು–ಮೋಡದ ವಾತಾವರಣ ಹಾಗೂ ಅಲ್ಲಲ್ಲಿ…

7 hours ago

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ

ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…

2 days ago

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ

ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…

2 days ago

ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ

ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…

3 days ago