Advertisement
Share

ನನ್ನಮ್ಮ ಹೊತ್ತುಕೊಂಡಿದ್ದಾಳೆ ಕನಸುಗಳನ್ನು
ಹಿಡಿಯಲ್ಲಿ ಹಿಡಿಯದಷ್ಟು
ಹತ್ತಬಹುದು ಗಿರಿ ಶಿಖರಗಳನ್ನು
ಈಕೆಯ ಕನಸುಗಳಿವೆ ಹತ್ತಿ ಮುಗಿಯದಷ್ಟು..

ಬಡತನದ ಬೆವರಿನ ಹನಿಯೂ
ಪ್ರತಿ ನರನಾಡಿಗಳಲ್ಲೂ ಅರಗಿಸಲು
ಸಾಧ್ಯವಿಲ್ಲದ ನೋವು – ದುಃಖಗಲ್ಲೂ
ಕೊಟ್ಟಿದ್ದಾಳೆ ಭವಿಷ್ಯದ ಹೊಸ ಕನಸುಗಳನ್ನು..

ನನಸಾಗುವ ಹಾದಿಯಲ್ಲಿತ್ತು
ಆ ಕನಸುಗಳ ಗುಚ್ಛ
ತನ್ನಾಸೆಗಳ ಬದಿಗೊತ್ತಿ
ದುಡಿದಳು ನಿತ್ಯ ನಿರ್ಮಲೆಯಾಗಿ..

ಬತ್ತದಷ್ಟು ಬಯಕೆಗಳಿತ್ತು ಆ
ಕನಸುಗಳಲ್ಲಿ..ತಾನು ಮನಗಳಲ್ಲೂ
ಎಲ್ಲವನ್ನೂ ಅದುಮಿಟ್ಟಳು
ತನ್ನಂತರಂಗದ ಆಂತರ್ಯದಲ್ಲಿ..

ತನಗಾಗಿ ಹಿಗ್ಗಲ್ಲಿಲ್ಲ ಜಗ್ಗಲಿಲ್ಲ
ಹಿಗ್ಗಿದಳು ಕುಗ್ಗಿದಳು..ತನ್ನವರಿಗಾಗಿ
ಉಸಿರುಗಟ್ಟಿ ದುಡಿದಳು , ಶ್ರಮಿಸಿದಳು
ಎಂದೆಂದಿಗೂ ತನ್ನ ಕರುಳ ಬಳ್ಳಿಗಾಗಿ..

ಎಡೆಬಿಡದ ಕರ್ಮ , ಕ್ಲಿಷ್ಟ ಯಾತನೆಗಳ ಉದ್ದಕ್ಕೂ
ಬೀಳಲಿಲ್ಲ ಬದುಕ ಬಂಡಿ
ಕಣ್ಣುಗಳಲ್ಲಿತ್ತು ಕಾತುರಗಳ ಛಾಯೆ
ಕಾಯುತ್ತಿದ್ದಳು ಚೈತ್ರದ ಕ್ಷಣಕ್ಕಾಗಿ

ತುಂಬಿ ಹೋಗಿತ್ತು ಜೀವ , ಬದುಕು , ಉಸಿರು
ಎಲ್ಲವೂ ಒಂದೇ ಆಗಿತ್ತು
ಹೃದಯ – ಕಣ್ಣುಗಳೆರಡೂ ಬಯಸಿತ್ತು
ಕರುಳ ಕುಡಿಯ ಕನಸುಗಳ ಅಸ್ತಿತ್ವವನ್ನು..

# ನಯನ.ಜಿ.ಎಸ್. , ಕೋಟೆ ಮುಂಡುಗಾರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅನ್ನವೇ ಜೀವನ, ಅನ್ನವೇ ಮೃತ್ಯು

ಮಿತಾಹಾರ, ಯಜ್ಞಸ್ವರೂಪ ಭೋಜನ ಹಾಗೂ ಆಹಾರದ ಶಾಸ್ತ್ರೋಕ್ತ ಮಹತ್ವವನ್ನು ಶ್ರೀ ರಾಘವೇಶ್ವರ ಭಾರತೀ…

5 hours ago

ಕೃಷಿ ಕ್ಷೇತ್ರಕ್ಕೆ ಎಥೆನಾಲ್‌ ದೊಡ್ಡ ಅವಕಾಶ

ಎಥೆನಾಲ್‌ ನೀತಿಯಿಂದ ರೈತರಿಗೆ ಉತ್ತಮ ಬೆಲೆ ದೊರೆಯಲಿದ್ದು, ದೇಶದ ಇಂಧನ ಭದ್ರತೆಯೂ ಬಲಗೊಳ್ಳಲಿದೆ…

5 hours ago

ಮಾನವ–ವನ್ಯಜೀವಿ ಸಂಘರ್ಷ ತಡೆಗೆ ರಾಷ್ಟ್ರೀಯ ಕಾರ್ಯತಂತ್ರ – ಕರ್ನಾಟಕದ AI ಮಾದರಿಗೆ ಕೇಂದ್ರದ ಮೆಚ್ಚುಗೆ

ಮಾನವ–ವನ್ಯಜೀವಿ ಸಂಘರ್ಷ ತಡೆ ಕುರಿತು ನಡೆದ ಸಂಸದೀಯ ಸಭೆಯಲ್ಲಿ ಕರ್ನಾಟಕದ AI ಆಧಾರಿತ…

5 hours ago

ಅಕ್ರಮ ಅಡಿಕೆ ಆಮದು ತಡೆಗೆ ಕೇಂದ್ರದ ಭರವಸೆ – ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಭೇಟಿಯಾದ ಕ್ಯಾಂಪ್ಕೊ ನಿಯೋಗ

ಅಕ್ರಮ ಅಡಿಕೆ ಆಮದು, ಜಿಎಸ್‌ಟಿ ತಾರತಮ್ಯ ಹಾಗೂ ಸಹಕಾರ ಸಂಘಗಳ ಸಮಸ್ಯೆಗಳ ಕುರಿತು…

5 hours ago

ಹವಾಮಾನ ವರದಿ | 08-07-2026 | ರಾಜ್ಯದಲ್ಲಿ ಮುಂಗಾರು ಪರಿಸ್ಥಿತಿ ಹೇಗಿದೆ…? ಕರಾವಳಿಯಲ್ಲಿ ಮಳೆ ಕಡಿಮೆಯಾಗುತ್ತಿದೆಯೇ?

ಆಗಸ್ಟ್‌ 8ರಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯ ಪ್ರಮಾಣ ಇಳಿಕೆಯಾಗುವ ಲಕ್ಷಣಗಳಿವೆ. ಆಗಸ್ಟ್‌…

15 hours ago

ಮ್ಯಾನ್ಮಾರ್‌ನಿಂದ ಭಾರತಕ್ಕೆ ಅಕ್ರಮ ಅಡಿಕೆ ಜಾಲ | ಮೂರು ಹಂತದ ಕಳ್ಳಸಾಗಣೆ ಜಾಲವನ್ನು ಬಯಲಿಗೆಳೆದ ಇಡಿ

ಮ್ಯಾನ್ಮಾರ್‌ನಿಂದ ಭಾರತಕ್ಕೆ ಅಕ್ರಮವಾಗಿ ಅಡಿಕೆ ಸಾಗಿಸುತ್ತಿದ್ದ ಮೂರು ಹಂತದ ಜಾಲವನ್ನು ಇಡಿ ತನಿಖೆಯಲ್ಲಿ…

18 hours ago