Advertisement
Share

ನನ್ನಮ್ಮ ಹೊತ್ತುಕೊಂಡಿದ್ದಾಳೆ ಕನಸುಗಳನ್ನು
ಹಿಡಿಯಲ್ಲಿ ಹಿಡಿಯದಷ್ಟು
ಹತ್ತಬಹುದು ಗಿರಿ ಶಿಖರಗಳನ್ನು
ಈಕೆಯ ಕನಸುಗಳಿವೆ ಹತ್ತಿ ಮುಗಿಯದಷ್ಟು..

ಬಡತನದ ಬೆವರಿನ ಹನಿಯೂ
ಪ್ರತಿ ನರನಾಡಿಗಳಲ್ಲೂ ಅರಗಿಸಲು
ಸಾಧ್ಯವಿಲ್ಲದ ನೋವು – ದುಃಖಗಲ್ಲೂ
ಕೊಟ್ಟಿದ್ದಾಳೆ ಭವಿಷ್ಯದ ಹೊಸ ಕನಸುಗಳನ್ನು..

ನನಸಾಗುವ ಹಾದಿಯಲ್ಲಿತ್ತು
ಆ ಕನಸುಗಳ ಗುಚ್ಛ
ತನ್ನಾಸೆಗಳ ಬದಿಗೊತ್ತಿ
ದುಡಿದಳು ನಿತ್ಯ ನಿರ್ಮಲೆಯಾಗಿ..

ಬತ್ತದಷ್ಟು ಬಯಕೆಗಳಿತ್ತು ಆ
ಕನಸುಗಳಲ್ಲಿ..ತಾನು ಮನಗಳಲ್ಲೂ
ಎಲ್ಲವನ್ನೂ ಅದುಮಿಟ್ಟಳು
ತನ್ನಂತರಂಗದ ಆಂತರ್ಯದಲ್ಲಿ..

ತನಗಾಗಿ ಹಿಗ್ಗಲ್ಲಿಲ್ಲ ಜಗ್ಗಲಿಲ್ಲ
ಹಿಗ್ಗಿದಳು ಕುಗ್ಗಿದಳು..ತನ್ನವರಿಗಾಗಿ
ಉಸಿರುಗಟ್ಟಿ ದುಡಿದಳು , ಶ್ರಮಿಸಿದಳು
ಎಂದೆಂದಿಗೂ ತನ್ನ ಕರುಳ ಬಳ್ಳಿಗಾಗಿ..

ಎಡೆಬಿಡದ ಕರ್ಮ , ಕ್ಲಿಷ್ಟ ಯಾತನೆಗಳ ಉದ್ದಕ್ಕೂ
ಬೀಳಲಿಲ್ಲ ಬದುಕ ಬಂಡಿ
ಕಣ್ಣುಗಳಲ್ಲಿತ್ತು ಕಾತುರಗಳ ಛಾಯೆ
ಕಾಯುತ್ತಿದ್ದಳು ಚೈತ್ರದ ಕ್ಷಣಕ್ಕಾಗಿ

ತುಂಬಿ ಹೋಗಿತ್ತು ಜೀವ , ಬದುಕು , ಉಸಿರು
ಎಲ್ಲವೂ ಒಂದೇ ಆಗಿತ್ತು
ಹೃದಯ – ಕಣ್ಣುಗಳೆರಡೂ ಬಯಸಿತ್ತು
ಕರುಳ ಕುಡಿಯ ಕನಸುಗಳ ಅಸ್ತಿತ್ವವನ್ನು..

# ನಯನ.ಜಿ.ಎಸ್. , ಕೋಟೆ ಮುಂಡುಗಾರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 17-09-2026 | ಕರ್ನಾಟಕದಲ್ಲಿ ಇಂದಿನಿಂದ ಮಳೆ ಚುರುಕು ಸಾಧ್ಯತೆ

ಸೆ.18ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಚುರುಕಾಗುವ ಸೂಚನೆ ಇದ್ದು, ಸೆ.19ರಿಂದ ಉತ್ತರ…

2 days ago

ಬರಪೀಡಿತ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿಗೆ 12 ತಿಂಗಳ ವಿಸ್ತರಣೆ

ಬರಪೀಡಿತ ಎಂದು ಘೋಷಿಸಿರುವ ರಾಜ್ಯದ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿ ಅವಧಿಯನ್ನು…

2 days ago

25 ಸಾವಿರ ವರ್ಷಗಳ ಹಿಂದೆಯೇ ಅಡಿಕೆ ಬಳಕೆ ? ಪುರಾತನ ಹಲ್ಲುಗಳಲ್ಲಿ ಸಿಕ್ಕಿದ ಸುಳಿವು

ಇಂಡೋನೇಷ್ಯಾದ ಸುಲವೆಸಿಯಲ್ಲಿ ಪತ್ತೆಯಾದ ಸುಮಾರು 25,000 ವರ್ಷಗಳ ಹಿಂದಿನ ಮಾನವ ಹಲ್ಲುಗಳಲ್ಲಿ ಅಡಿಕೆ…

2 days ago

“ಹನುಮಾನ್ ಅಂಶ್‌” ಬಾಕ್ಸ್ ಆಫೀಸ್ ದಾಖಲೆ – 40ನೇ ದಿನವೂ ₹8.25 ಕೋಟಿ – ಪಠಾಣ್‌, ಛಾವಾ, ಉರಿ ದಾಖಲೆ ಮೀರಿಸಿದ ಸಿನಿಮಾ

‘ಹನುಮಾನ್ ಅಂಶ್’ ಸಿನಿಮಾ 40ನೇ ದಿನವೂ ₹8.25 ಕೋಟಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ…

2 days ago

ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ

ನೈಋತ್ಯ ಮುಂಗಾರು ಹಿಂದೆ ಸರಿಯಲು ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಸೆ.17ರ ವೇಳೆಗೆ ಪಶ್ಚಿಮ…

3 days ago

ಹವಾಮಾನ ವರದಿ | 16-09-2026 | ಕರಾವಳಿಯಲ್ಲಿ ಸೆಖೆ, ಸಂಜೆ ಅಲ್ಲಲ್ಲಿ ಮಳೆ ನಿರೀಕ್ಷೆ

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.17ರಂದು ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ…

3 days ago