Advertisement
Share

ನನ್ನಮ್ಮ ಹೊತ್ತುಕೊಂಡಿದ್ದಾಳೆ ಕನಸುಗಳನ್ನು
ಹಿಡಿಯಲ್ಲಿ ಹಿಡಿಯದಷ್ಟು
ಹತ್ತಬಹುದು ಗಿರಿ ಶಿಖರಗಳನ್ನು
ಈಕೆಯ ಕನಸುಗಳಿವೆ ಹತ್ತಿ ಮುಗಿಯದಷ್ಟು..

ಬಡತನದ ಬೆವರಿನ ಹನಿಯೂ
ಪ್ರತಿ ನರನಾಡಿಗಳಲ್ಲೂ ಅರಗಿಸಲು
ಸಾಧ್ಯವಿಲ್ಲದ ನೋವು – ದುಃಖಗಲ್ಲೂ
ಕೊಟ್ಟಿದ್ದಾಳೆ ಭವಿಷ್ಯದ ಹೊಸ ಕನಸುಗಳನ್ನು..

ನನಸಾಗುವ ಹಾದಿಯಲ್ಲಿತ್ತು
ಆ ಕನಸುಗಳ ಗುಚ್ಛ
ತನ್ನಾಸೆಗಳ ಬದಿಗೊತ್ತಿ
ದುಡಿದಳು ನಿತ್ಯ ನಿರ್ಮಲೆಯಾಗಿ..

ಬತ್ತದಷ್ಟು ಬಯಕೆಗಳಿತ್ತು ಆ
ಕನಸುಗಳಲ್ಲಿ..ತಾನು ಮನಗಳಲ್ಲೂ
ಎಲ್ಲವನ್ನೂ ಅದುಮಿಟ್ಟಳು
ತನ್ನಂತರಂಗದ ಆಂತರ್ಯದಲ್ಲಿ..

ತನಗಾಗಿ ಹಿಗ್ಗಲ್ಲಿಲ್ಲ ಜಗ್ಗಲಿಲ್ಲ
ಹಿಗ್ಗಿದಳು ಕುಗ್ಗಿದಳು..ತನ್ನವರಿಗಾಗಿ
ಉಸಿರುಗಟ್ಟಿ ದುಡಿದಳು , ಶ್ರಮಿಸಿದಳು
ಎಂದೆಂದಿಗೂ ತನ್ನ ಕರುಳ ಬಳ್ಳಿಗಾಗಿ..

ಎಡೆಬಿಡದ ಕರ್ಮ , ಕ್ಲಿಷ್ಟ ಯಾತನೆಗಳ ಉದ್ದಕ್ಕೂ
ಬೀಳಲಿಲ್ಲ ಬದುಕ ಬಂಡಿ
ಕಣ್ಣುಗಳಲ್ಲಿತ್ತು ಕಾತುರಗಳ ಛಾಯೆ
ಕಾಯುತ್ತಿದ್ದಳು ಚೈತ್ರದ ಕ್ಷಣಕ್ಕಾಗಿ

ತುಂಬಿ ಹೋಗಿತ್ತು ಜೀವ , ಬದುಕು , ಉಸಿರು
ಎಲ್ಲವೂ ಒಂದೇ ಆಗಿತ್ತು
ಹೃದಯ – ಕಣ್ಣುಗಳೆರಡೂ ಬಯಸಿತ್ತು
ಕರುಳ ಕುಡಿಯ ಕನಸುಗಳ ಅಸ್ತಿತ್ವವನ್ನು..

# ನಯನ.ಜಿ.ಎಸ್. , ಕೋಟೆ ಮುಂಡುಗಾರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ | ಜುಲೈ 21ರಂದು ಕ್ರೆಡಿಟ್ ಕಾರ್ಡ್ ಸೇಲ್ಸ್ ಟೀಮ್ ಲೀಡರ್ ಹುದ್ದೆಗೆ ನೇರ ಸಂದರ್ಶನ

ಕ್ಯಾಲಿಬರ್ ಕಂಪೆನಿ ವತಿಯಿಂದ ಕ್ರೆಡಿಟ್ ಕಾರ್ಡ್ ಸೇಲ್ಸ್ ಟೀಮ್ ಲೀಡರ್ ಹುದ್ದೆಗಳಿಗೆ ಜುಲೈ…

3 hours ago

ಜುಲೈ 31 ರೊಳಗೆ ಬೆಳೆವಿಮೆ ನೋಂದಣಿ ಮಾಡಿಸಿಕೊಳ್ಳಿ – ಅಡಿಕೆ, ಕಾಳುಮೆಣಸು ಬೆಳೆಗಾರರಿಗೆ ಅವಕಾಶ

ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಾರರಿಗೆ ಹವಾಮಾನ ಆಧಾರಿತ ಬೆಳೆವಿಮೆ…

4 hours ago

ಕರಾವಳಿ–ಹವಾಮಾನ ವರದಿ | 18-07-2026 | ಮಲೆನಾಡಿನಲ್ಲಿ ಇನ್ನೂ 10 ದಿನ ಮಳೆ ಮುಂದುವರಿಕೆ…! ಉತ್ತರ ಒಳನಾಡಿನಲ್ಲಿ ಜುಲೈ 19 ರಿಂದ ಮಳೆ ಇಳಿಮುಖ

ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಮಳೆ ಮುಂದುವರಿಯುವ…

11 hours ago

ಮಳೆ ಎಚ್ಚರಿಕೆ – ಉಡುಪಿ, ದಕ್ಷಿಣ ಕನ್ನಡ ಸೇರಿ ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ, ಗಂಟೆಗೆ 50 ಕಿ.ಮೀ. ವೇಗದ ಗಾಳಿ ಸಾಧ್ಯತೆ

ಮುಂದಿನ 3 ಗಂಟೆಗಳ ಕಾಲ ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ…

16 hours ago

ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!

ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…

3 days ago

ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?

ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…

3 days ago