Advertisement
ಸುದ್ದಿಗಳು

ಕೊರೊನಾ‌ ಲಾಕ್ಡೌನ್ | ಮೇ.11 ರಿಂದ ಬೆಳ್ಳಾರೆಯಲ್ಲಿ ಲಾಕ್ಡೌನ್ ಕಟ್ಟುನಿಟ್ಟು | 2 ಗಂಟೆ ನಂತರ ಅಂಗಡಿಗಳು ಬಂದ್ | ಮಾಸ್ಕ್ ಇಲ್ಲದಿದ್ದರೆ ದಂಡ |

Share

ಬೆಳ್ಳಾರೆ: ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೇ 11 ರಿಂದ ಮುಂದಿನ ಆದೇಶದವರೆಗೆ ಲಾಕ್ಡೌನ್   ಕಟ್ಟುನಿಟ್ಟಾಗಿ  ಜಾರಿಯಲ್ಲಿರುತ್ತದೆ.

ಗ್ರಾಮ ಪಂಚಾಯತ್ ಹೊರಡಿಸಿರುವ ಕಟ್ಟುನಿಟ್ಟಿನ ಕ್ರಮಗಳು ಹೀಗಿವೆ…

  • ಮುಂದಿನ ಆದೇಶ ದವರೆಗೆ ಗ್ರಾ.ಪಂ ವ್ಯಾಪ್ತಿಯಲ್ಲಿ ವ್ಯಾಪಾರ ನಡೆಸಲು ಬೆಳಗ್ಗೆ6 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ಅವಕಾಶವಿರುತ್ತದೆ.
  • ವ್ಯಾಪಾರದ ಸಂದರ್ಭದಲ್ಲಿ ಅಲ್ಲದೆ ಗ್ರಾ.ಪಂ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತದ್ದು,ಇಲ್ಲವಾದಲ್ಲಿ ರೂ 100 ದಂಡವನ್ನು ಕಟ್ಟಬೇಕಾಗುತ್ತದೆ
  • ಯಾವುದೇ ಸಂದರ್ಭದಲ್ಲೂ ಅಂತರ ವನ್ನು ಕಾಪಾಡಿಕೊಳ್ಳಬೇಕಾದುದು ನಮ್ಮ ಆದ್ಯ ಕರ್ತವ್ಯವಾಗಿದೆ
  • 2 ಗಂಟೆಯ ಬಳಿಕ ಯಾವುದೇ ಅಂಗಡಿ ಗಳನ್ನು ತೆರೆಯುವಂತಿಲ್ಲ. ಅಂತಹದು ಕಂಡು ಬಂದಲ್ಲಿ ಕಠಿಣ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ
  • ಪಂಚಾಯತ್ ವ್ಯಾಪ್ತಿಯಲ್ಲಿ ಮುಂದಿನ ಆದೇಶದವರೆಗೂ 3 ಕಡೆ ಚೆಕ್ ಪೋಸ್ಟ್ ಗಳಿರುತ್ತವೆ. ( ಜ್ಞಾನ ಗಂಗಾ ಶಾಲಾ ಬಳಿ, ಬೆಳ್ಳಾರೆ ಯ ಮಾಸ್ತಿಕಟ್ಟೆ ದ್ವಾರದ ಬಳಿ ,ಕೆ ಪಿ ಎಸ್ ಶಾಲಾ ಬಳಿ ಬೆಳ್ಳಾರೆ)
  • ಚೆಕ್ ಪೋಸ್ಟ್ ಬಳಿ ಪೋಲಿಸರು ,ಆಶಾ ಕಾರ್ಯ ಕರ್ತೆಯರು ,ಪಂಚಾಯತ್ ಸಿಬ್ಬಂದಿ /ಪಂಚಾಯತ್ ನಿಂದ ನೇಮಕ ಗೊಂಡ ಸ್ವಯಂ ಸೇವಕರು ಇರುತ್ತಾರೆ.
  • ಚೆಕ್ ಪೋಸ್ಟ್ ಬಳಿ ಮೇಲೆ ತಿಳಿಸಿದ ಅಧಿಕಾರಿಗಳು ಅಲ್ಲದೆ ಸ್ವಯಂ ಸೇವಕರೊಂದಿಗೆ ಅವರ ನಿಯಮಕ್ಕೆ ಅನುಸಾರವಾಗಿ ಸಾರ್ವಜನಿಕರು ಸಹಕರಿಸಲಿದ್ದಾರೆ.
  • ಪ್ರತಿ ಚೆಕ್ ಪೋಸ್ಟ್ ಬಳಿ ಟೆಂಪರೇಚರ್ ಟೆಸ್ಟಿಂಗ್ ಇರುತ್ತದೆ
  • ಸಾರ್ವಜನಿಕ ರು ಸಂಚರಿಸುವಾಗ ಸಂಚಾರಿ ನಿಯಮ ಕಡ್ಡಾಯವಾಗಿ ಪಾಲಿಸುವಂತದ್ದು ಅದರೊಂದಿಗೆ ಮಾಸ್ಕ್ ಕೂಡ ಕಡ್ಡಾಯ ವಾಗಿರುತ್ತದೆ. ಇಲ್ಲವಾದಲ್ಲಿ ದಂಡ ತೆರಬೇಕಾಗುತ್ತದೆ.
  • ಅನಗತ್ಯ ಓಡಾಡಕ್ಕೆ ,ಸೋಶಿಯಲ್ ಡಿಸ್ಟೆನ್ಸ್ ಮೈಂಟೈನ್ ಮಾಡಿಲ್ಲದಿದ್ದರೂ ದಂಡ ತೆರಬೇಕಾಗುತ್ತದೆ .
  • ಅಂಗಡಿ ಮಾಲಿಕರು ತಮ್ಮ ಅಂಗಡಿ ಮುಂದೆ ಗ್ರಾಹಕರನ್ನು ಸೋಶಿಯಲ್ ಡಿಸ್ಟೆನ್ಸ್ ಪಾಲಿಸುವಂತೆ ನೋಡಿಕೊಳ್ಳಬೇಕು ಇಲ್ಲವಾದಲ್ಲಿ ಮೊದಲನೆ ಬಾರಿ 100 ರೂ ದಂಡ ವಿದಿಸಲಾಗುವುದು ಮುಂದುವರಿದರೆ ಗರಿಷ್ಠ 1000 ರೂ ದಂಡ ವಿಧಿಸಲಾಗುವುದು .
  • ಅಂಗಡಿಯವರು MRP ದರಕ್ಕಿಂತ ಹೆಚ್ಚು ಮಾರಾಟ ಮಾಡುವುದು ಕಂಡುಬಂದಲ್ಲಿ ಅಥವಾ ಸಾರ್ವಜನಿಕ ವಾಗಿ ದರಪಟ್ಟಿ ಅಳವಡಿಸದಿದ್ದರೆ ಮೊದಲನೆ ಬಾರಿ 100  ರೂ ದಂಡ .ದಂಡ ಮುಂದುವರಿದರೆ ಗರಿಷ್ಠ 1000 ರೂ ದಂಡ ದಿನಕ್ಕೆ ವಿಧಿಸಲಾಗುವುದು.
  • ವ್ಯಾಪಾರ ಮಾಡುವವರನ್ನು ಬಿಟ್ಟು ಬೇರೆ ಯಾವ ವ್ಯಕ್ತಿ ಅಂಗಡಿಗಳಲ್ಲಿ ಕೂರಬಾರದು ಅದಕ್ಕೂ ದಂಡ ವಿಧಿಸಲಾಗುವುದು. ಜನರು ಸೋಶಿಯಲ್ ಡಿಸ್ಟೆನ್ಸ್ ಕಾಯ್ದುಕೊಳ್ಳದೆ ಗುಂಪಾಗಿ ನಿಂತರೆ ಅವರಿಗೆ ಕನಿಷ್ಟ 100 ರೂ ದಂಡ ಪ್ರತಿ ಸಲ ವಿಧಿಸಲಾಗುವುದು.

ಇದರ ಕುರಿತು ಯಾವುದೇ ಗೊಂದಲಗಳಿದ್ದಲ್ಲಿ ನೇರವಾಗಿ ಈ ಕೆಳಗಿನ ನಂಬರನ್ನು ಸಂಪರ್ಕಿಸಬಹುದು ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಂಜಯ ಕೆ.ಆರ್.ತಿಳಿಸಿದ್ದಾರೆ.

ಆಂಜನೇಯ ರೆಡ್ಡಿ
ಠಾಣಾಧಿಕಾರಿ ,ಬೆಳ್ಳಾರೆ ಪೋಲಿಸ್ ಠಾಣೆ
ಮೊ :- 9535556173

ಧನಂಜಯ ಕೆ ಆರ್
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬೆಳ್ಳಾರೆ ಗ್ರಾ.ಪಂ

ಮೊ : +917760381009

ಶಕುಂತಲಾ ನಾಗರಾಜ್
ಅಧ್ಯಕ್ಷೆ ,ಬೆಳ್ಳಾರೆ ಗ್ರಾ.ಪಂ
ಮೊ :- +91872247665

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 16-06-2026 | ರಾಜ್ಯದಲ್ಲಿ ಇನ್ನೂ ದುರ್ಬಲ ಮಳೆ ಚಟುವಟಿಕೆ – ಜೂ.22 ರಿಂದ ಕರಾವಳಿಯಲ್ಲಿ ಮುಂಗಾರು ಚೇತರಿಕೆ ಸಾಧ್ಯತೆ

ರಾಜ್ಯದಲ್ಲಿ ಮುಂಗಾರು ಅತಿ ದುರ್ಬಲವಾಗಿದ್ದು, ಜೂನ್ 22 ರಿಂದ ಕರಾವಳಿ ಭಾಗದಲ್ಲಿ ಅಲ್ಪ…

55 minutes ago

ಅಡಿಕೆ ಒಡೆದು ಉದುರುತ್ತಿದೆಯೇ..? ಕಾರಣ ಕೇವಲ ಬೋರಾನ್ ಕೊರತೆ ಅಷ್ಟೇ ಅಲ್ಲ- ಕೀಟವೂ ಇರಬಹುದು ಎನ್ನುತ್ತಾರೆ ವಿಜ್ಞಾನಿಗಳು

ಅಡಿಕೆ ಒಡೆದು ಬೀಳುವ ಸಮಸ್ಯೆಗೆ ಬೋರಾನ್ ಕೊರತೆ ಮಾತ್ರವಲ್ಲ, ಪೆರಿಯಾಂತ್ ಮೈಟ್ ಕೀಟದ…

18 hours ago

ಎಲ್ ನಿನೋ ಅಧಿಕೃತವಾಗಿ ಆರಂಭ – ಕರಾವಳಿ ಕರ್ನಾಟಕದ ಮಳೆ ಮೇಲೆ ಪರಿಣಾಮ ಬೀಳುತ್ತಾ? ಹವಾಮಾನ ಇಲಾಖೆ ನಿಗಾ

ಭಾರತೀಯ ಹವಾಮಾನ ಇಲಾಖೆ ಎಲ್ ನಿನೋ ಆರಂಭಗೊಂಡಿರುವುದನ್ನು ಅಧಿಕೃತವಾಗಿ ದೃಢಪಡಿಸಿದೆ. ಕರಾವಳಿ ಕರ್ನಾಟಕದಲ್ಲಿ…

18 hours ago

ಬರಗಾಲದಿಂದ ಹೆಚ್ಚಾಗಬಹುದು ಆ್ಯಂಟಿಬಯೋಟಿಕ್ ಪ್ರತಿರೋಧ..! ಹೊಸ ಸಂಶೋಧನೆಯ ಎಚ್ಚರಿಕೆ

ಬರಗಾಲದ ಪರಿಸ್ಥಿತಿಗಳು ಮಣ್ಣಿನಲ್ಲಿನ ಬ್ಯಾಕ್ಟೀರಿಯಾಗಳಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧ ಹೆಚ್ಚಿಸಲು ಕಾರಣವಾಗಬಹುದು ಎಂದು ಹೊಸ…

1 day ago

ಜೇನುನೊಣಗಳ ಅಳಿವು ಕೃಷಿಗೂ, ಆಹಾರ ಭದ್ರತೆಗೂ ದೊಡ್ಡ ಅಪಾಯ – ತಜ್ಞರ ಎಚ್ಚರಿಕೆ

ಜೇನುನೊಣಗಳ ಸಂಖ್ಯೆ ಕುಸಿಯುತ್ತಿರುವುದು ಕೃಷಿ ಉತ್ಪಾದನೆ, ಆಹಾರ ಭದ್ರತೆ ಮತ್ತು ಪರಿಸರ ಸಮತೋಲನಕ್ಕೆ…

1 day ago

ಒಂದು ಹಕ್ಕಿಯ ಫೋಟೋಗಾಗಿ 7 ತಿಂಗಳು ಕಾಯ್ದ ವ್ಯಕ್ತಿ..!, 60ನೇ ಹುಟ್ಟುಹಬ್ಬವನ್ನೂ ವಿಭಿನ್ನವಾಗಿ ಆಚರಿಸಿದರು..!

ವಿಟ್ಲದ ಆರ್‌. ಕೆ. ಪೈ ಅವರು ತಮ್ಮ 60ನೇ ಹುಟ್ಟುಹಬ್ಬವನ್ನು ಮಕ್ಕಳಲ್ಲಿ ಪ್ರಕೃತಿ…

2 days ago