ಸುಳ್ಯ: ರಾಜಕೀಯ ಮಾಡಿ, ಆದರೆ ಅಭಿವೃದ್ಧಿಯಲ್ಲಿ ಅಲ್ಲ. ಎಲ್ಲಾ ಶಕ್ತಿ ಪ್ರದರ್ಶನ ಮಾಡಿ ತೋರಿಸಿ ಅಭಿವೃದ್ಧಿ ಕಾರ್ಯದಲ್ಲಿ…!. ಇದು ಯಾಕೆ ಹೇಳ್ತಾರೆ ಎಂದರೆ ಅಜ್ಜಾವರ ಗ್ರಾಮದ ಕಾಂತಮಂಗಲವಾಗಿ ಕೊಂಬರಡ್ಕ , ಪಳ್ಳತ್ತಡ್ಕವಾಗಿ ಮೇನಾಲ ಸೇರುವ ರಸ್ತೆಯನ್ನು ನೋಡಿ.
ಕಳೆದ ಅನೇಕ ವರ್ಷಗಳಿಂದ ಈ ರಸ್ತೆ ಅವ್ಯವಸ್ಥೆ ಇದೆ. ಹಾಗಿದ್ದರೂ ಅಭಿವೃದ್ಧಿಯಾಗಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.ಅಜ್ಜಾವರ ಗ್ರಾಮದ ಕಾಂತಮಂಗಲವಾಗಿ ಕೊಂಬರಡ್ಕ , ಪಳ್ಳತ್ತಡ್ಕವಾಗಿ ಮೇನಾಲ ಸೇರುವ ರಸ್ತೆ ಹಾಗೂ ಮುಳ್ಯ ಕಜೆ ಯಾಗಿ ಪೇರಾಲು ಸೇರುವ ರಸ್ತೆ ತೀರಾ ಅವ್ಯವಸ್ಥೆಯಿಂದ ಕೂಡಿದೆ. ಸಾವಿರಾರು ಮಂದಿ ದಿನವೂ ಓಡಾಡ್ತಾರೆ ಈ ರಸ್ತೆಯಲ್ಲಿ. ಆದರೆ ಅಭಿವೃದ್ಧಿ ಮಾತ್ರಾ ಆಗಿಲ್ಲ. ಹಾಗೆಂದು ಈ ರಸ್ತೆ ಅಭಿವೃದ್ಧಿಯಾಗಿಲ್ಲ ಎಂದರೆ ರಾಜಕೀಯ ಸೇರುತ್ತದೆ. ಅಷ್ಟು ಅನುದಾನ ನೀಡಿದೆ, ಇಷ್ಟು ಅನುದಾನ ನೀಡಿದೆ ಎಂದು ರಾಜಕೀಯ ಮಾಡಿ ಮಾತನಾಡುವ ಧ್ವನಿಯನ್ನೇ ಕುಗ್ಗಿಸಲಾಗುತ್ತದೆ ಎಂದು ಸ್ಥಳೀಯರು ವಿಷಾದದಿಂದ ಹೇಳುತ್ತಾರೆ. ಈಗಲೂ ಮತ್ತೆ ಕೇಳುತ್ತಾರೆ, ರಸ್ತೆ ಯಾವಾಗ ದುರಸ್ತಿಯಾಗುತ್ತದೆ…..??
ಯಾವುದಾದರೂ ಒಂದು ರಸ್ತೆಗೆ 50 ಮೀಟರ್ ಕಾಂಕ್ರೀಟ್ ಆದರೆ ತಕ್ಷಣವೇ ಬ್ಯಾನರ್ ಬೀಳುತ್ತದೆ, ಈ ರಸ್ತೆಗೂ ಒಂದು ಬ್ಯಾನರ್ ಹಾಕಿಸಬೇಕು ಎಂದು ಕೆಲವು ಮಂದಿ ಕುಹಕ ಮಾಡುತ್ತಾರೆ. ಬ್ಯಾನರ್ ಪ್ರಿಯರು ಇದನ್ನೂ ಗಮನಿಸಬೇಕು…!
ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…
ಹಸು ಕರು ಹಾಕಿದ ಬಳಿಕ ಸಿಗುವ ಪ್ಲಾಸೆಂಟಾ ಅಥವಾ ‘ಮಾಸ’ವನ್ನು ತ್ಯಾಜ್ಯವಾಗಿ ಬಿಸಾಡದೆ,…
ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…
ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ಗೋಡಂಬಿ ಸಂಸ್ಕರಣಾ ತ್ಯಾಜ್ಯದಿಂದ ಜೈವಿಕ ಇಂಧನ ಮತ್ತು…
ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆ, ಪೇಪರ್ ಕಪ್, ಪೇಪರ್ ಪ್ಲೇಟ್ ಸೇರಿದಂತೆ…
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…