ಸುಳ್ಯ: ರಾಜಕೀಯ ಮಾಡಿ, ಆದರೆ ಅಭಿವೃದ್ಧಿಯಲ್ಲಿ ಅಲ್ಲ. ಎಲ್ಲಾ ಶಕ್ತಿ ಪ್ರದರ್ಶನ ಮಾಡಿ ತೋರಿಸಿ ಅಭಿವೃದ್ಧಿ ಕಾರ್ಯದಲ್ಲಿ…!. ಇದು ಯಾಕೆ ಹೇಳ್ತಾರೆ ಎಂದರೆ ಅಜ್ಜಾವರ ಗ್ರಾಮದ ಕಾಂತಮಂಗಲವಾಗಿ ಕೊಂಬರಡ್ಕ , ಪಳ್ಳತ್ತಡ್ಕವಾಗಿ ಮೇನಾಲ ಸೇರುವ ರಸ್ತೆಯನ್ನು ನೋಡಿ.
ಕಳೆದ ಅನೇಕ ವರ್ಷಗಳಿಂದ ಈ ರಸ್ತೆ ಅವ್ಯವಸ್ಥೆ ಇದೆ. ಹಾಗಿದ್ದರೂ ಅಭಿವೃದ್ಧಿಯಾಗಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.ಅಜ್ಜಾವರ ಗ್ರಾಮದ ಕಾಂತಮಂಗಲವಾಗಿ ಕೊಂಬರಡ್ಕ , ಪಳ್ಳತ್ತಡ್ಕವಾಗಿ ಮೇನಾಲ ಸೇರುವ ರಸ್ತೆ ಹಾಗೂ ಮುಳ್ಯ ಕಜೆ ಯಾಗಿ ಪೇರಾಲು ಸೇರುವ ರಸ್ತೆ ತೀರಾ ಅವ್ಯವಸ್ಥೆಯಿಂದ ಕೂಡಿದೆ. ಸಾವಿರಾರು ಮಂದಿ ದಿನವೂ ಓಡಾಡ್ತಾರೆ ಈ ರಸ್ತೆಯಲ್ಲಿ. ಆದರೆ ಅಭಿವೃದ್ಧಿ ಮಾತ್ರಾ ಆಗಿಲ್ಲ. ಹಾಗೆಂದು ಈ ರಸ್ತೆ ಅಭಿವೃದ್ಧಿಯಾಗಿಲ್ಲ ಎಂದರೆ ರಾಜಕೀಯ ಸೇರುತ್ತದೆ. ಅಷ್ಟು ಅನುದಾನ ನೀಡಿದೆ, ಇಷ್ಟು ಅನುದಾನ ನೀಡಿದೆ ಎಂದು ರಾಜಕೀಯ ಮಾಡಿ ಮಾತನಾಡುವ ಧ್ವನಿಯನ್ನೇ ಕುಗ್ಗಿಸಲಾಗುತ್ತದೆ ಎಂದು ಸ್ಥಳೀಯರು ವಿಷಾದದಿಂದ ಹೇಳುತ್ತಾರೆ. ಈಗಲೂ ಮತ್ತೆ ಕೇಳುತ್ತಾರೆ, ರಸ್ತೆ ಯಾವಾಗ ದುರಸ್ತಿಯಾಗುತ್ತದೆ…..??
ಯಾವುದಾದರೂ ಒಂದು ರಸ್ತೆಗೆ 50 ಮೀಟರ್ ಕಾಂಕ್ರೀಟ್ ಆದರೆ ತಕ್ಷಣವೇ ಬ್ಯಾನರ್ ಬೀಳುತ್ತದೆ, ಈ ರಸ್ತೆಗೂ ಒಂದು ಬ್ಯಾನರ್ ಹಾಕಿಸಬೇಕು ಎಂದು ಕೆಲವು ಮಂದಿ ಕುಹಕ ಮಾಡುತ್ತಾರೆ. ಬ್ಯಾನರ್ ಪ್ರಿಯರು ಇದನ್ನೂ ಗಮನಿಸಬೇಕು…!
ಆಗಸ್ಟ್ 2ರಿಂದ 8ರವರೆಗೆ ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಮುಕ್ತ ಹಾಗೂ ಬಾಲಕಿಯರ ಚೆಸ್…
ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…
ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…
ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…
ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…