ಸುಳ್ಯ: ರಾಜಕೀಯ ಮಾಡಿ, ಆದರೆ ಅಭಿವೃದ್ಧಿಯಲ್ಲಿ ಅಲ್ಲ. ಎಲ್ಲಾ ಶಕ್ತಿ ಪ್ರದರ್ಶನ ಮಾಡಿ ತೋರಿಸಿ ಅಭಿವೃದ್ಧಿ ಕಾರ್ಯದಲ್ಲಿ…!. ಇದು ಯಾಕೆ ಹೇಳ್ತಾರೆ ಎಂದರೆ ಅಜ್ಜಾವರ ಗ್ರಾಮದ ಕಾಂತಮಂಗಲವಾಗಿ ಕೊಂಬರಡ್ಕ , ಪಳ್ಳತ್ತಡ್ಕವಾಗಿ ಮೇನಾಲ ಸೇರುವ ರಸ್ತೆಯನ್ನು ನೋಡಿ.
ಕಳೆದ ಅನೇಕ ವರ್ಷಗಳಿಂದ ಈ ರಸ್ತೆ ಅವ್ಯವಸ್ಥೆ ಇದೆ. ಹಾಗಿದ್ದರೂ ಅಭಿವೃದ್ಧಿಯಾಗಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.ಅಜ್ಜಾವರ ಗ್ರಾಮದ ಕಾಂತಮಂಗಲವಾಗಿ ಕೊಂಬರಡ್ಕ , ಪಳ್ಳತ್ತಡ್ಕವಾಗಿ ಮೇನಾಲ ಸೇರುವ ರಸ್ತೆ ಹಾಗೂ ಮುಳ್ಯ ಕಜೆ ಯಾಗಿ ಪೇರಾಲು ಸೇರುವ ರಸ್ತೆ ತೀರಾ ಅವ್ಯವಸ್ಥೆಯಿಂದ ಕೂಡಿದೆ. ಸಾವಿರಾರು ಮಂದಿ ದಿನವೂ ಓಡಾಡ್ತಾರೆ ಈ ರಸ್ತೆಯಲ್ಲಿ. ಆದರೆ ಅಭಿವೃದ್ಧಿ ಮಾತ್ರಾ ಆಗಿಲ್ಲ. ಹಾಗೆಂದು ಈ ರಸ್ತೆ ಅಭಿವೃದ್ಧಿಯಾಗಿಲ್ಲ ಎಂದರೆ ರಾಜಕೀಯ ಸೇರುತ್ತದೆ. ಅಷ್ಟು ಅನುದಾನ ನೀಡಿದೆ, ಇಷ್ಟು ಅನುದಾನ ನೀಡಿದೆ ಎಂದು ರಾಜಕೀಯ ಮಾಡಿ ಮಾತನಾಡುವ ಧ್ವನಿಯನ್ನೇ ಕುಗ್ಗಿಸಲಾಗುತ್ತದೆ ಎಂದು ಸ್ಥಳೀಯರು ವಿಷಾದದಿಂದ ಹೇಳುತ್ತಾರೆ. ಈಗಲೂ ಮತ್ತೆ ಕೇಳುತ್ತಾರೆ, ರಸ್ತೆ ಯಾವಾಗ ದುರಸ್ತಿಯಾಗುತ್ತದೆ…..??
ಯಾವುದಾದರೂ ಒಂದು ರಸ್ತೆಗೆ 50 ಮೀಟರ್ ಕಾಂಕ್ರೀಟ್ ಆದರೆ ತಕ್ಷಣವೇ ಬ್ಯಾನರ್ ಬೀಳುತ್ತದೆ, ಈ ರಸ್ತೆಗೂ ಒಂದು ಬ್ಯಾನರ್ ಹಾಕಿಸಬೇಕು ಎಂದು ಕೆಲವು ಮಂದಿ ಕುಹಕ ಮಾಡುತ್ತಾರೆ. ಬ್ಯಾನರ್ ಪ್ರಿಯರು ಇದನ್ನೂ ಗಮನಿಸಬೇಕು…!
ಕೊಕ್ಕೋ ಧಾರಣೆ ವಾರದಲ್ಲಿ 100 ರೂಪಾಯಿ ಇಳಿಕೆಯಾಗಿದೆ.
ಮೇ 9 ರಿಂದ ಉತ್ತರ ಒಳನಾಡು ಭಾಗಗಳಲ್ಲಿ ಸಹ ಮಳೆ ಆರಂಭವಾಗುವ ಮುನ್ಸೂಚೆನೆ…
ನಮ್ಮ ಮುಂದಿನ ಮಕ್ಕಳನ್ನು ಸ್ವಾವಲಂಬಿಗಳಾಗಿ ಮಾಡಬೇಕೇ ಹೊರತು ಪರಾವಲಂಬಿಗಳಾಗಿ ಮಾಡಬಾರದು. ಜನರು ಆತ್ಮಾಭಿಮಾನದಿಂದ…
ಯಕ್ಷ ಕಲಾಭಿಮಾನಿ ಮಿತ್ರರು ಎಲಿಮಲೆ-ಗುತ್ತಿಗಾರು ಇವರ ವತಿಯಿಂದ ಯಕ್ಷಗಾನ ಕಲಾವಿದ ಉಬರಡ್ಕ ಉಮೇಶ್…
ಮಲೆನಾಡಿನ ಸೊಗಬು ಕಣ್ಮರೆಯಾಗುತ್ತಿರುವುದು ಏಕೆ? ಈ ಬಗ್ಗೆ ಬರೆದಿದ್ದಾರೆ ಪ್ರಬಂಧ ಅಂಬುತೀರ್ಥ.
ಮೇ 9ರಿಂದ ಉತ್ತರ ಒಳನಾಡು ಭಾಗಗಳಲ್ಲಿಯೂ ಮಳೆಯಾಗುವ ಲಕ್ಷಣಗಳಿವೆ.ಕರಾವಳಿ ಭಾಗಗಳಲ್ಲಿ ಈಗಾಗಲೇ ಮಳೆ…