Advertisement
ಅನುಕ್ರಮ

ಅವಳು ಬದುಕುತ್ತಿದ್ದಾಳೆ

Share
ಅವಳು ಬದುಕುತಿದ್ದಾಳೆ
ಅವಳಿಗಾಗಿ ಅಲ್ಲ…..
ಕಷ್ಟದ ಕದ ತೆರೆದಿದೆ
ಸಹನೆಯ ಕಟ್ಟೆಯೊಡೆದಿದೆ..
ಈ ಬದುಕು ಅವಳಿಗಾಗಿ ಅಲ್ಲ…!
ಕರಿಮಣ್ಣ ಹಗಲಿರುಳು ಹದ ಮಾಡುತಿಹಳು
ಹೊನ್ನ ಬೆಳೆಯ ಕಾಣುವಾಸೆಯಲಿ
ಆಸರೆಗೊಂದು ಸೂರು,ಹಸಿವಿಗಾಗಿ ಅನ್ನ
ಇನ್ನೇನು ಕಂಡವಳಲ್ಲ ಅವಳು
ನಿಜ!ಈ ಬದುಕು ಅವಳಿಗಾಗಿ ಅಲ್ಲ
ತುಸು ವಿಶ್ರಾಂತಿಯಿರದ ಬದುಕಲಿ ನೆಮ್ಮದಿಯು ಕನಸು
ಮರೆಮಾಚಿಹಳು ಸೆರಗಿನ ಮರೆಯಲ್ಲಿ ಕಣ್ಣೀರು
ಕಾಲಿಗೆ ಚಕ್ರ ಕಟ್ಟಿಕೊಂಡವಳಂತೆ
ಹಗಲಿರುಳ ದುಡಿಮೆಯೇ ಅವಳ ಬದುಕು..
ನಿಜ!ಅವಳ ಬದುಕು ಅವಳಿಗಾಗಿ ಅಲ್ಲ..
ತನ್ನೊಡನೆ ಸಪ್ತಪದಿಯ ತುಳಿದಾತ.
ಕಷ್ಟದಲಿ ಜೊತೆಯಿರುವೆನೆಂದು ವಚನ ಗೈದಾತ
ಸುಖವ ಅರಸಿ ಬಂದಾಕೆಗೆ ಕಷ್ಟದ ಬಾಗಿಲನು ತೆರೆದಾತ ಅವನೊಬ್ಬ ಹೆಂಡಕುಡುಕ
ನಿಜ!ಈ ಬದುಕು ಅವಳಿಗಾಗಿ ಅಲ್ಲ
ಅವರಿವರ ಚುಚ್ಚುಮಾತಿಗೆ ಕಿವಿಮುಚ್ಚಿ
ಗಂಡನ ಕುಡುಕತನದಾಟಕ್ಕೆ ಸೋತು ಕುಸಿಯದೆ
ಸೆರಗ ಮರೆಯಲ್ಲಿ ಮಕ್ಕಳ ಮರೆಮಾಚಿ ಸನ್ಮಾರ್ಗದಿ ನಡೆಸಿದಾಕೆ
ನಿಜ!ಈ ಬದುಕು ಅವಳಿಗಾಗಿ ಅಲ್ಲ
ತಂದೆಯಾದವ ಜವಬ್ಧಾರಿ ಮರೆತಾಗ
ಹೆಂಡಕುಡಿವುದೊಂದೇ ನಿತ್ಯ ಕಾಯಕ ಎಂದಾಗ
ತನ್ನುದರದ ಕುಡಿಗಳಿಗಾಗಿ ಬದುಕ ಸವೆಸಿದಾಕೆ…
ತನ್ನ ಕನಸುಗಳ ಕೊಂದು ಬದುಕಿದಾಕೆ
ನಿಜ! ಅವಳ ಬದುಕು  ಅವಳಿಗಾಗಿ ಅಲ್ಲ…..
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ತಕ್ಷಣ ಪೂರ್ಣಾವಧಿ ಕೃಷಿ ಸಚಿವರನ್ನು ನೇಮಿಸಿ – ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆಗ್ರಹ

ಕರ್ನಾಟಕದಲ್ಲಿ ಮಳೆ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೂರ್ಣಾವಧಿ ಕೃಷಿ ಸಚಿವರನ್ನು ತಕ್ಷಣ ನೇಮಿಸಬೇಕು…

45 minutes ago

ಕ್ಯಾಂಪ್ಕೊ ಚಾಕಲೇಟ್ ಕಾರ್ಖಾನೆಯಲ್ಲಿ ಯೋಗ ಹಾಗೂ ಸ್ವಚ್ಛತಾ ಅಭಿಯಾನ

ವಿಶ್ವ ಯೋಗ ದಿನದ ಅಂಗವಾಗಿ ಕ್ಯಾಂಪ್ಕೊ ಚಾಕಲೇಟ್ ಕಾರ್ಖಾನೆ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರ್…

1 hour ago

ಮುಂಗಾರು ಮಳೆ ಕೊರತೆ 40%ಕ್ಕೆ ಏರಿಕೆ – ದೇಶದ ಕೃಷಿಯ ಹೃದಯಭಾಗದಲ್ಲಿ ಮೋಡಗಳೇ ಇಲ್ಲ..!

ದೇಶದಲ್ಲಿ ಮುಂಗಾರು ಮಳೆ ಕೊರತೆ 40%ಕ್ಕೆ ಏರಿಕೆಯಾಗಿದ್ದು, ಪ್ರಮುಖ ಕೃಷಿ ಪ್ರದೇಶಗಳಲ್ಲಿ ಮೋಡಗಳ…

2 hours ago

ಕೇರಳ ಬಜೆಟ್‌ನಲ್ಲಿ ರಬ್ಬರ್‌ ಬೆಳೆಗಾರರಿಗೆ ಬಂಪರ್‌ ಸಿಹಿ ಸುದ್ದಿ- ಬೆಂಬಲ ಬೆಲೆ ₹250ಕ್ಕೆ ಏರಿಕೆ

ಕೇರಳ ಸರ್ಕಾರ ರಬ್ಬರ್‌ ಬೆಂಬಲ ಬೆಲೆಯನ್ನು ₹200ರಿಂದ ₹250ಕ್ಕೆ ಹೆಚ್ಚಿಸಿದೆ. ಮಾರುಕಟ್ಟೆ ಬೆಲೆ…

8 hours ago

ಮೂರು ವರ್ಷಗಳಲ್ಲಿ 28 ಲಕ್ಷಕ್ಕೂ ಅಧಿಕ ಮರ ಕಡಿಯಲು ಅನುಮತಿ…! ಪರಿಸರದ ಮೇಲೆ ಹೆಚ್ಚುತ್ತಿರುವ ಒತ್ತಡ

ಮೂರು ವರ್ಷಗಳಲ್ಲಿ ದೇಶದ ಅರಣ್ಯ ಪ್ರದೇಶಗಳಲ್ಲಿ 28 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯಲು…

17 hours ago

ಜೂನ್ 30ರೊಳಗೆ LPG e-KYC ಮಾಡಿಸದಿದ್ದರೆ ಗ್ಯಾಸ್ ಸಬ್ಸಿಡಿ ಸ್ಥಗಿತ ? ಗ್ರಾಹಕರಿಗೆ ಮಹತ್ವದ ಎಚ್ಚರಿಕೆ

ಜೂನ್ 30ರೊಳಗೆ LPG e-KYC ಪೂರ್ಣಗೊಳಿಸುವಂತೆ ಗ್ರಾಹಕರಿಗೆ ಸೂಚನೆ ನೀಡಲಾಗಿದೆ. e-KYC ಬಾಕಿ…

17 hours ago