Advertisement
ಅನುಕ್ರಮ

ಅವಳು ಬದುಕುತ್ತಿದ್ದಾಳೆ

Share
ಅವಳು ಬದುಕುತಿದ್ದಾಳೆ
ಅವಳಿಗಾಗಿ ಅಲ್ಲ…..
ಕಷ್ಟದ ಕದ ತೆರೆದಿದೆ
ಸಹನೆಯ ಕಟ್ಟೆಯೊಡೆದಿದೆ..
ಈ ಬದುಕು ಅವಳಿಗಾಗಿ ಅಲ್ಲ…!
ಕರಿಮಣ್ಣ ಹಗಲಿರುಳು ಹದ ಮಾಡುತಿಹಳು
ಹೊನ್ನ ಬೆಳೆಯ ಕಾಣುವಾಸೆಯಲಿ
ಆಸರೆಗೊಂದು ಸೂರು,ಹಸಿವಿಗಾಗಿ ಅನ್ನ
ಇನ್ನೇನು ಕಂಡವಳಲ್ಲ ಅವಳು
ನಿಜ!ಈ ಬದುಕು ಅವಳಿಗಾಗಿ ಅಲ್ಲ
ತುಸು ವಿಶ್ರಾಂತಿಯಿರದ ಬದುಕಲಿ ನೆಮ್ಮದಿಯು ಕನಸು
ಮರೆಮಾಚಿಹಳು ಸೆರಗಿನ ಮರೆಯಲ್ಲಿ ಕಣ್ಣೀರು
ಕಾಲಿಗೆ ಚಕ್ರ ಕಟ್ಟಿಕೊಂಡವಳಂತೆ
ಹಗಲಿರುಳ ದುಡಿಮೆಯೇ ಅವಳ ಬದುಕು..
ನಿಜ!ಅವಳ ಬದುಕು ಅವಳಿಗಾಗಿ ಅಲ್ಲ..
ತನ್ನೊಡನೆ ಸಪ್ತಪದಿಯ ತುಳಿದಾತ.
ಕಷ್ಟದಲಿ ಜೊತೆಯಿರುವೆನೆಂದು ವಚನ ಗೈದಾತ
ಸುಖವ ಅರಸಿ ಬಂದಾಕೆಗೆ ಕಷ್ಟದ ಬಾಗಿಲನು ತೆರೆದಾತ ಅವನೊಬ್ಬ ಹೆಂಡಕುಡುಕ
ನಿಜ!ಈ ಬದುಕು ಅವಳಿಗಾಗಿ ಅಲ್ಲ
ಅವರಿವರ ಚುಚ್ಚುಮಾತಿಗೆ ಕಿವಿಮುಚ್ಚಿ
ಗಂಡನ ಕುಡುಕತನದಾಟಕ್ಕೆ ಸೋತು ಕುಸಿಯದೆ
ಸೆರಗ ಮರೆಯಲ್ಲಿ ಮಕ್ಕಳ ಮರೆಮಾಚಿ ಸನ್ಮಾರ್ಗದಿ ನಡೆಸಿದಾಕೆ
ನಿಜ!ಈ ಬದುಕು ಅವಳಿಗಾಗಿ ಅಲ್ಲ
ತಂದೆಯಾದವ ಜವಬ್ಧಾರಿ ಮರೆತಾಗ
ಹೆಂಡಕುಡಿವುದೊಂದೇ ನಿತ್ಯ ಕಾಯಕ ಎಂದಾಗ
ತನ್ನುದರದ ಕುಡಿಗಳಿಗಾಗಿ ಬದುಕ ಸವೆಸಿದಾಕೆ…
ತನ್ನ ಕನಸುಗಳ ಕೊಂದು ಬದುಕಿದಾಕೆ
ನಿಜ! ಅವಳ ಬದುಕು  ಅವಳಿಗಾಗಿ ಅಲ್ಲ…..
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

“ಹನುಮಾನ್ ಅಂಶ್‌” ಬಾಕ್ಸ್ ಆಫೀಸ್ ದಾಖಲೆ – 40ನೇ ದಿನವೂ ₹8.25 ಕೋಟಿ – ಪಠಾಣ್‌, ಛಾವಾ, ಉರಿ ದಾಖಲೆ ಮೀರಿಸಿದ ಸಿನಿಮಾ

‘ಹನುಮಾನ್ ಅಂಶ್’ ಸಿನಿಮಾ 40ನೇ ದಿನವೂ ₹8.25 ಕೋಟಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ…

1 hour ago

ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ

ನೈಋತ್ಯ ಮುಂಗಾರು ಹಿಂದೆ ಸರಿಯಲು ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಸೆ.17ರ ವೇಳೆಗೆ ಪಶ್ಚಿಮ…

7 hours ago

ಹವಾಮಾನ ವರದಿ | 16-09-2026 | ಕರಾವಳಿಯಲ್ಲಿ ಸೆಖೆ, ಸಂಜೆ ಅಲ್ಲಲ್ಲಿ ಮಳೆ ನಿರೀಕ್ಷೆ

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.17ರಂದು ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ…

8 hours ago

ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?

ಕೋಲಾರದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 10 ಟನ್ ಸಿಂಥೆಟಿಕ್‌ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ…

15 hours ago

ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ

ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ…

23 hours ago

ಮಳೆಗೆ ಬೆಂಗಳೂರು ತತ್ತರ – ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ

ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಏಕಾಏಕಿ ಸುರಿದ ಭಾರೀ ಮಳೆಗೆ ಹಲವು ರಸ್ತೆಗಳು ಜಲಾವೃತವಾಗಿ…

1 day ago