ಅಸ್ತಂಗತರಾದ ಗೋಳ್ತಜೆ ಸದಾಶಿವ ಮಾಸ್ಟ್ರು……. ನುಡಿನಮನ

October 2, 2019
9:42 AM

ಧರ್ಮಪತ್ನಿ ಲಕ್ಷ್ಮೀ ಅಮ್ಮ, ಜೇಷ್ಟ ಪುತ್ರ ಡಾಕ್ಟರ್ ಈಶ್ವರಯ್ಯ ಅವರನ್ನೊಳಗೊಂಡಂತೆ ಮೂವರು ಪುತ್ರರು ಮತ್ತು ನಾಲ್ವರು ಪುತ್ರಿಯರು ಮತ್ತು ಅಪಾರ ಬಂಧು, ಅಭಿಮಾನಿ ಬಳಗಕ್ಕೆ ನೆನಪುಗಳ ಮಧುರ ಭಾವಗಳನ್ನು ಬಿಟ್ಟು ತನ್ನ ಎಂಬತ್ತೊಂಬತ್ತನೇ ಹರೆಯದಲ್ಲಿ ಕಲ್ಮಡ್ಕ ಗ್ರಾಮದ ಗೋಳ್ತಜೆ ಸದಾಶಿವಯ್ಯನವರು ಇಹಲೋಕ ಯಾತ್ರೆ ಮುಗಿಸಿದರು.

Advertisement
Advertisement

ಸುಳ್ಯ ತಾಲೂಕಿನ ಶೇಣಿಯಲ್ಲಿ ಶಾಲಾ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಸದಾಶಿವಯ್ಯನವರು ಕಲ್ಮಡ್ಕ ಶಾಲೆಯಲ್ಲಿ ಅದ್ಯಾಪನಾ ಪ್ರವೃತ್ತಿಯನ್ನು ಮುಂದುವರಿಸಿ ನಿವೃತ್ತಿ ಹೊಂದಿ ಅದ್ಯಾಪಕರೆಂದರೆ ಹೇಗಿರಬೇಕೆಂದು ಮಾದರಿಯಾದವರು. ನೇರ ನಡೆ ನುಡಿಯವರಾದ ಸದಾಶಿವಯ್ಯನವರು ಹಿರಿಯ ಕಿರಿಯರೆನ್ನದೇ ಎಲ್ಲರೊಡನೆ ಆತ್ಮೀಯವಾಗಿ ಬೆರೆತು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು. ಅಧ್ಯಾಪನ ವೃತ್ತಿಯಂತೆಯೇ,ಕೃಷಿಯಲ್ಲೂ ಅಪಾರ ಅನುಭವ ಮತ್ತು ಪ್ರೀತಿ ಹೊಂದಿದ್ದರು.ಯುವಕರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುವ ಮನೋಧರ್ಮ ಇವರದಾಗಿತ್ತು.ತಮ್ಮ ಇಳಿ ವಯಸ್ಸಿನಲ್ಲೂ ತಮ್ಮೂರು ಕಲ್ಮಡ್ಕದ ಶಾಲೆಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವದಲ್ಲಿ ಹಾಜರಿದ್ದು ಮಕ್ಕಳಲ್ಲಿ ಮತ್ತು ಸಭಿಕರಲ್ಲಿ ದೇಶಪ್ರೇಮದ ಜಾಗೃತಿ ಮೂಡಿಸುತ್ತಿದ್ದರು. ಧಾರ್ಮಿಕವಾಗಿ ನೋಡಿದರೆ ಇವರು ಹವ್ಯಕ ಸಮುದಾಯದ ಪರಂಪರಾಗತ ಗುರಿಕ್ಕಾರರು. ಗುರಿಕ್ಕಾರರಾಗಿ ನಿಖರವಾದ ವಿಚಾರಗಳನ್ನು ಮಂಡಿಸಿ ಸಂಪ್ರದಾಯಗಳನ್ನು ಅನುಸರಿಸಿ ಪಾಲಿಸಿ ತಮ್ಮೊಡನೆ ಸಮಾಜವನ್ನು ಕೊಂಡೊಯ್ಯುತ್ತಿದ್ದರು. ಇಂತಹ ವಿಶಿಷ್ಟ ಚೇತನ ಇಂದು ಲೌಕಿಕವಾಗಿ ಮರೆಯಾದರೂ ಅವರ ನಡೆ ನುಡಿ,ಪ್ರೀತಿಯ ಸೆಲೆಗಳು ಸದಾ ಚಿರಾಯು.

Advertisement

ಕವಿ ಗೋಪಾಲಕೃಷ್ಣ ಅಡಿಗರ ಕವಿತೆ……

“ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ
ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ.
ಬೂದಿ ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ ಧನ್ಯವಾಯಿತು
ಹುಟ್ಟು ಸಾವಿನಲ್ಲಿ……….”

Advertisement

….. ಎಂಬಂತೆ ಅವರೆರೆದ ಅಕ್ಷರ ಸಾರ ಸದಾ ಜ್ಞಾನದ ಪೈರಾಗಿ ಅಮರವಾಗಿ ಜಗವ ಬೆಳಗೀತು,ಸುಜ್ಞಾನ ಸೇತುವಾಗಿ ಮತ್ತೊಮ್ಮೆ ಉದಿಸಿ ಬನ್ನೀ ……

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

ಮೇ.11 ವಳಲಂಬೆಯಲ್ಲಿ ಯಕ್ಷಗಾನ ಬಯಲಾಟ | ಕಲಾವಿದ ಉಬರಡ್ಕ ಉಮೇಶ್‌ ಶೆಟ್ಟಿಯವರಿಗೆ ಗೌರವಾರ್ಪಣೆ |
May 7, 2024
3:13 PM
by: ದ ರೂರಲ್ ಮಿರರ್.ಕಾಂ
ಮಲೆನಾಡು ಕಳೆದು ಹೋಗಿದೆ….! | ಯಾರಾದರೂ “ಮಲೆನಾಡಿಗೆ” ಈ ಮೊದಲಿನ “ಮಳೆಗಾಲ” ತಂದು ಕೊಡುವಿರಾ…. !
May 7, 2024
11:33 AM
by: ಪ್ರಬಂಧ ಅಂಬುತೀರ್ಥ
Karnataka Weather | 07-05-2024 | ಮಳೆಯ ಸೂಚನೆ ಬಂದೇ ಬಿಟ್ಟಿದೆ |ಹಲವು ಕಡೆ ಗುಡುಗು-ಸಿಡಿಲು ಇರಬಹುದು, ಇರಲಿ ಎಚ್ಚರಿಕೆ |
May 7, 2024
11:08 AM
by: ಸಾಯಿಶೇಖರ್ ಕರಿಕಳ
ಆಹಾರ ಬದಲಾವಣೆಯಿಂದ ವಾತಾವರಣದ ತಾಪಮಾನ ಏರಿಕೆಯ ಸಮಸ್ಯೆಗೂ ಪರಿಹಾರ…! | ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಖಾದರ್ ಪ್ರತಿಪಾದನೆ |
May 7, 2024
7:00 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror