ಪುತ್ತೂರು: ಮುಳಿಯ ಜ್ಯುವೆಲ್ಸ್ ಪುತ್ತೂರು ಮತ್ತು ಬೆಳ್ತಂಗಡಿ ಶೋರೂಂನಲ್ಲಿ ಅಕ್ಟೋಬರ್ 2 ರಿಂದ 8ರವರೆಗೆ ಚಿನ್ನೋತ್ಸವದ ಸಂಭ್ರಮ.
ಈ ದಸರಾ ಸಂದರ್ಭದಲ್ಲಿ ಅಷ್ಟ ಲಕ್ಷ್ಮೀಯರ ಆಶೀರ್ವಾದ ಚಿನ್ನಕೊಳ್ಳುವವರ ಮೇಲೆ ಇರಲಿದೆ ಎಂಬ ನಂಬಿಕೆ ಜನರಲ್ಲಿದೆ.ಪ್ರದರ್ಶನ ಮತ್ತು ಮಾರಾಟದ ಈ ಉತ್ಸವದಲ್ಲಿ “ಸೆಲೆಬರೇಟ್ ದ ಗೋಲ್ಡ್” ಎಂಬ ಧ್ಯೇಯ ವಾಕ್ಯದೊಂದಿಗೆ ವಿಶಾಲಶ್ರೇಣಿಯ, ವಿನೂತನ ಬಗೆಯ ವಿವಿಧ ಆಭರಣಗಳ ಸಂಗ್ರಹ ಈ ಮುಳಿಯ ಚಿನ್ನೋತ್ಸವದ ವಿಶೇಷ ಎಂದು ಕೃಷ್ಣನಾರಾಯಣ ಮುಳಿಯರವರು ತಿಳಿಸಿದರು.
1919 ಅಂದರೆ ಕಳೆದ 100 ವರ್ಷಗಳ ಹಿಂದೆ ಚಿನ್ನದ ಬೆಲೆ 1 ಗ್ರಾಂಗೆ ರೂ.1 ಅಂದಾಜು ಇತ್ತು. ಈಗ 2019ರಲ್ಲಿ ಬೆಲೆ ರೂ.3485/- ಇದೆ. ಮುಳಿಯ 75 ವರ್ಷಗಳ ಹಿಂದೆ ಆರಂಭವಾದಾಗ ಗ್ರಾಂ ಒಂದಕ್ಕೆ ರೂ.5/- ಇತ್ತು. ಹೀಗಾಗಿ ವರ್ಷದೊಳಗೆ ಮುಳಿಯ ಗ್ರಾಹಕರಿಗೆ ಲಾಭ-ಸಂತೋಷ ತಂದಿದೆ. “ಚಿನ್ನ ಎಂದೂ ಕೈ ಬಿಡುವುದಿಲ್ಲ” ಎಂಬ ನಂಬಿಕೆ ನಮ್ಮಲ್ಲಿದೆ ಎಂದು ಕೇಶವ ಪ್ರಸಾದ್ ಮುಳಿಯರವರು ವಿವರಿಸಿದರು.
ಚಿನ್ನೋತ್ಸವದ ಸಂದರ್ಭದಲ್ಲಿ ಅಲಂಕಾರ ಮೆಹೆಂದಿ ಪ್ರತೀ ದಿನ ಚಿನ್ನದ ನಾಣ್ಯ ಗೆಲ್ಲುವ, ವಾಕ್ ಇನ್ ಆದವರಿಗೆ ಬೆಳ್ಳಿ ನಾಣ್ಯ ಗೆಲ್ಲುವ ಅವಕಾಶ. ಮುಂತಾದ ವಿಶೇಷ ಕಾರ್ಯಕ್ರಮದ “ಸಂಭ್ರಮದ ಸೆಲೆಬರೇಶನ್ ಇರಲಿದೆ ಎಂದು ಶಾಖಾ ಪ್ರಬಂಧಕ ನಾಮ್ದೇವ್ ಮಲ್ಯ ತಿಳಿಸಿದ್ದಾರೆ.
ಚಿನ್ನೋತ್ಸವ ಸಂದರ್ಭದಲ್ಲಿ ಅಂತರ ರಾಷ್ಟ್ರೀಯ ಖ್ಯಾತಿಯ ಮೈಕ್ರೊ ಮೆಹೆಂದಿ ಡಿಸೈನರ್ ಅನು ಉಪಾಧ್ಯ ಅ.2ರಂದು ಪುತ್ತೂರಿನಲ್ಲಿ ಹಾಗೂ 3ರಂದು ಬೆಳ್ತಂಗಡಿಯಲ್ಲಿ ಮುಳಿಯ ಶೋರೂಂನಲ್ಲಿ ನಿಮಗಾಗಿ ಲಭ್ಯರಿರುವರು.
ಹಾಗೆಯೇ ಕೆನರಾ ಬ್ಯಾಂಕ್ನ ಜನರಲ್ ಮ್ಯಾನೇಜರಾದ ಯೋಗೀಶ್ ಆಚಾರ್ಯ ಇವರು ಚಿನ್ನೋತ್ಸವಕ್ಕೆ ಚಾಲನೆ ನೀಡಲಿದ್ದು, ಗಿರಿಗಿಟ್ ಸಿನಿಮಾ ಖ್ಯಾತಿಯ ನಾಯಕ ನಟಿಯೂ ಪುತ್ತೂರಿನವರೇ ಆದ ಕು. ಶಿಲ್ಪಾ ಶೆಟ್ಟಿ ಇವರನ್ನೂ ಸನ್ಮಾನಿಸಲಾಗುವುದು. ಕು. ಶಿಲ್ಪಾ ಶೆಟ್ಟಿ ಇವರು ಅಪ್ಸರಾ ಕಲೆಕ್ಷನ್ ಎಂಬ ಹೊಸ ರೋಸ್ ಗೋಲ್ಡ್ ಡಿಸೈನ್ ಗಳನ್ನು ಅನಾವರಣಗೊಳಿಸುವರು.
“ಈ ರೋಸ್ ಗೋಲ್ಡ್ ಡಿಸೈನ್ಗಳು, ಡ್ಯಾನ್ಸಿಂಗ್ ಸ್ಟೋನ್ ಆಭರಣಗಳು” ಇದೇ ಪ್ರಥಮ ಬಾರಿಗೆ ಇದು ಪುತ್ತೂರಿಗೆ ಮುಳಿಯ ಪರಿಚಯಿಸುತ್ತದೆ. 18 ಕ್ಯಾರೆಟ್ ನಲ್ಲಿ ಮಾಡಿರುವುದರಿಂದ ಪಾಕೆಟ್ ಪ್ರೆಂಡ್ಲೀ ಕೂಡಾ ಎಂದು ಬಣ್ಣಿಸಿದರು. ಶೋರೂಂಗೆ ಬಂದು ಇವುಗಳನ್ನು ನೋಡಿ ಮುಳಿಯ ಚಿನ್ನಾಭರಣಗಳೊಂದಿಗೆ ಸಂಭ್ರಮಿಸಿ ಎಂದು ಕೇಶವ ಪ್ರಸಾದ್ ಮುಳಿಯ ತಿಳಿಸಿದರು.
ತಾಪಮಾನ ಏರಿಕೆಯಿಂದ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ 30 ಹಾಸಿಗೆಗಳ ಸನ್ ಸ್ಟ್ರೋಕ್ ವಾರ್ಡ್…
ಭೂಮಿ ಉಳಿಸಿ ಸಮ್ಮೇಳನದಲ್ಲಿ ನಿತಿನ್ ಗಡ್ಕರಿ, ರೈತರು ಇಂಧನ ಉತ್ಪಾದನೆಗೆ ಕೈಜೋಡಿಸಿದರೆ ಮಾಲಿನ್ಯ…
ರೈತರಿಗೆ ಸರಳ ಹಣಕಾಸು ವ್ಯವಸ್ಥೆ ಅಗತ್ಯವಿದ್ದು, ಸಮಗ್ರ ಕೃಷಿ ಮಾದರಿಯಿಂದ ಆದಾಯ ಹೆಚ್ಚಿಸಬಹುದು…
ರಾಜ್ಯದಲ್ಲಿ ಬಿಸಿಲು ಮುಂದುವರಿದರೂ, ಏಪ್ರಿಲ್ 25ರಿಂದ ಮಳೆಯ ಚಟುವಟಿಕೆ ಹೆಚ್ಚಾಗುವ ಸೂಚನೆ ಇದೆ.…
ರಾಜ್ಯದಲ್ಲಿ ಮುಂದಿನ ಎರಡು ದಿನ ಮಳೆಯ ಪ್ರಮಾಣ ಕಡಿಮೆ ಇರಲಿದ್ದು, ಏಪ್ರಿಲ್ 25ರಿಂದ…
ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಮುಂದುವರಿಯಲಿದ್ದು, ಉತ್ತರ ಒಳನಾಡಿನಲ್ಲಿ ಏಪ್ರಿಲ್ 25ರವರೆಗೆ…