Advertisement
ಅನುಕ್ರಮ

ಆಕಾಶದತ್ತ ಒಮ್ಮೆಗಮನಿಸಿ ಅಚ್ಚರಿಯ ನೋಡಿ……….

Share

ಆಕಾಶ ಯಾವಾಗಲೂ ಅಚ್ಚರಿಯ ತಾಣ . ಕುತೂಹಲ ಕೆರಳಿಸುವ ಲೋಕ. ಕೊನೆ ಮೊದಲಿಲ್ಲದ ಆಕರ್ಷಣೆ.  ಬೆಳದಿಂಗಳಿಲ್ಲದ ರಾತ್ರಿಯಲ್ಲಿ  ಮನೆಯಂಗಳದಲ್ಲಿ ಮಲಗಿ ಆಕಾಶ ನೋಡುತ್ತಾ ಕುಳಿತರೆ ಸಮಯ ಹೋದದ್ದೇ ತಿಳಿಯದು.

Advertisement
Advertisement
ಬಾಲ್ಯದಲ್ಲಿ ಅಪ್ಪ ತೆಂಗಿನ ಗಿಡಗಳಿಗೆ ಪೈಪ್ ನಲ್ಲಿ ರಾತ್ರಿಯ ಹೊತ್ತು ನೀರು ಹಿಡಿಯುತ್ತಿದ್ದಾಗ ಅವರೊಂದಿಗೆ ನಾನು ,ತಂಗಿ ಇಬ್ಬರೂ ಹೋಗುತ್ತಿದ್ದೆವು. ಮಿನುಗುವ ನಕ್ಷತ್ರ, ಹೊಳೆಯುವ ಗ್ರಹಗಳು, ಚಲಿಸುವ ಉಪಗ್ರಹಗಳತ್ತ ಎಂದಿಗೂ ಕುಂದದ ಆಕರ್ಷಣೆ. ಆಕಾಶದಲ್ಲಿ ದಿನನಿತ್ಯ ಅಚ್ಚರಿಯ ಘಟನೆಗಳು ವೈಚಿತ್ರ್ಯ ಗಳು ‌ನಡೆಯುತ್ತಿರುತ್ತವೆ. ಅನಂತವಾಗಿರುವ  ಆಗಸ ದಿನದಿನವೂ  ಹೊಸಪ್ರಪಂಚವನ್ನು , ಕಲ್ಪನೆಯನ್ನು ತೆರೆದಿಡುತ್ತದೆ.  ನೋಡ ನೋಡುವಂತೆಯೇ ಬೀಳವ ಉಲ್ಕೆಗಳು  ನಮ್ಮ ಕನಸಿನ ಹಾದಿಗೆ ಆಶೀರ್ವಾದವೆಂದೇ ಅನಿಸುತ್ತದೆ.
ಅಗಣಿತ ನಕ್ಷತ್ರಗಳ ಲೋಕವೆಂದರೆ‌ ಊಹೆಗೆ  ನಿಲುಕದ  ವಿಸ್ಮಯ ಲೋಕ.
ಮನೆಯಲ್ಲಿ ಸಂಜೆ ಏಳು ಕಾಲು  ಗಂಟೆಯಾಗುತ್ತಿದ್ದಂತೆ  ನಮ್ಮೆಜಮಾನ್ರು ಹೊರಗೆ ಒಳಗೆ ಸುತ್ತಲಾರಂಭಿಸಿದರು. ಟೆರೇಸ್ ಮೇಲೆ  ಹೋಗಿ ಆಕಾಶದತ್ತ ಮುಖ ಮಾಡಿ ಏನೋ ಹುಡುಕುತ್ತಿದ್ದರು.  ಸುಮಾರು ಹೊತ್ತು ನೋಡಿದಾಗ ಅವರು ಕಂಡು ಹಿಡಿದೇ ಬಿಟ್ಟರು. ಅದುವೇ   ನಿಯೋವೈಸ್ ಧೂಮಕೇತು .  ಈ ಶತಮಾನದ ಅಪರೂಪದ ಧೂಮಕೇತು  ದೊಡ್ಡದಾದ ಆಕಾಶಕಾಯ. ನಮ್ಮ ಜೀವಿತಾವಧಿಯಲ್ಲಿ ಸಿಕ್ಕ ದೊಡ್ಡ ಅವಕಾಶ.  ಈಗ ನಾವು  ಆಕಾಶದಲ್ಲಿ ಕಾಣಬಹುದು.  ಬರಿಗಣ್ಣಿಗೇ ಗೋಚರಿಸುತ್ತಿದೆ.  ಸಪ್ತ ಋಷಿ ಮಂಡಲದ ಕೆಳಗೆ ವಾಯವ್ಯ ದಿಕ್ಕಿನಲ್ಲಿ  ನಿಯೋ ವೈಸ್ ಧೂಮಕೇತು ಕಾಣಿಸುತ್ತಿದೆ. ಮೋಡಗಳಿಲ್ಲದ ಶುಭ್ರ ಆಕಾಶದಲ್ಲಿ ಧೂಮಕೇತು  ಸಂಜೆ 7.30 ರ ಸುಮಾರಿಗೆ ಕಾಣಸಿಗುತ್ತದೆ. ಒಂದು ಗಂಟೆಗಳ ಕಾಲ  ನೋಡಲು ಸಾಧ್ಯ.  ಆಗಸ್ಟ್ 15 ರವರೆಗೂ ಈ ದೃಶ್ಯ ಲಭ್ಯ ವಿರಬಹುದೆಂಬ ಅಂದಾಜು.  ಈ ಧೂಮಕೇತು ವನ್ನು ಇನ್ನೊಮ್ಮೆ ನೋಡಬೇಕೆಂದರೆ 6800 ವರ್ಷಗಳು ಬೇಕಾಗುತ್ತದೆ. ಹಾಗಾಗಿ ಮೋಡವಿಲ್ಲದ ಆಕಾಶ ಲಭ್ಯವಾದರೆ  ಧೂಮಕೇತು ವನ್ನು  ತಪ್ಪದೆ ವೀಕ್ಷಿಸಿ ಆನಂದಿಸಿ
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಅಡಿಕೆ ಬಳಕೆಯ ನಿಯಂತ್ರಣಕ್ಕೆ ‘MPOWER’ ನೀತಿ ಅಗತ್ಯ : ವಿಶ್ವ ಆರೋಗ್ಯ ಸಂಸ್ಥೆ

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಡಿಕೆ ಬಳಕೆಯಿಂದ ಹೆಚ್ಚುತ್ತಿರುವ ಬಾಯಿ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ…

53 minutes ago

ಅರೆಕಾನಟ್ ಚಾಲೆಂಜ್ : ಅಡಿಕೆ ನಿಯಂತ್ರಣ ಕುರಿತು WHO ಉತ್ಸುಕತೆ – ಕ್ಲಿನಿಕಲ್ ಪರೀಕ್ಷೆಗಳ ಅಗತ್ಯಕ್ಕೆ ತಜ್ಞರ ಒತ್ತಾಯ

ಅರೆಕಾನಟ್ ಚಾಲೆಂಜ್ : ಟರ್ನಿಂಗ್ ಪಾಲಿಸಿ ಇನ್ಟು ಇಂಪ್ಯಾಕ್ಟ್ ಇನ್ ದ ಸೌತ್…

1 hour ago

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ

ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…

11 hours ago

“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ

ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…

11 hours ago

ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ

ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್‌…

11 hours ago

ಮಾಯಾಮೃಗ ಮಾಯಾಮೃಗ….

ಪ್ರಯತ್ನ, ಪರಿಶ್ರಮ, ಛಲ ಇದ್ದರೂ ಸೋಲು ಬೆನ್ನತ್ತಿದರೆ ಕಾರಣವೇನು? ಹಿರಿಯರ ಪಾಪದ ಫಲ,…

12 hours ago