ಅನುಕ್ರಮ

ಆಕಾಶದತ್ತ ಒಮ್ಮೆಗಮನಿಸಿ ಅಚ್ಚರಿಯ ನೋಡಿ……….

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಆಕಾಶ ಯಾವಾಗಲೂ ಅಚ್ಚರಿಯ ತಾಣ . ಕುತೂಹಲ ಕೆರಳಿಸುವ ಲೋಕ. ಕೊನೆ ಮೊದಲಿಲ್ಲದ ಆಕರ್ಷಣೆ.  ಬೆಳದಿಂಗಳಿಲ್ಲದ ರಾತ್ರಿಯಲ್ಲಿ  ಮನೆಯಂಗಳದಲ್ಲಿ ಮಲಗಿ ಆಕಾಶ ನೋಡುತ್ತಾ ಕುಳಿತರೆ ಸಮಯ ಹೋದದ್ದೇ ತಿಳಿಯದು.

Advertisement
ಬಾಲ್ಯದಲ್ಲಿ ಅಪ್ಪ ತೆಂಗಿನ ಗಿಡಗಳಿಗೆ ಪೈಪ್ ನಲ್ಲಿ ರಾತ್ರಿಯ ಹೊತ್ತು ನೀರು ಹಿಡಿಯುತ್ತಿದ್ದಾಗ ಅವರೊಂದಿಗೆ ನಾನು ,ತಂಗಿ ಇಬ್ಬರೂ ಹೋಗುತ್ತಿದ್ದೆವು. ಮಿನುಗುವ ನಕ್ಷತ್ರ, ಹೊಳೆಯುವ ಗ್ರಹಗಳು, ಚಲಿಸುವ ಉಪಗ್ರಹಗಳತ್ತ ಎಂದಿಗೂ ಕುಂದದ ಆಕರ್ಷಣೆ. ಆಕಾಶದಲ್ಲಿ ದಿನನಿತ್ಯ ಅಚ್ಚರಿಯ ಘಟನೆಗಳು ವೈಚಿತ್ರ್ಯ ಗಳು ‌ನಡೆಯುತ್ತಿರುತ್ತವೆ. ಅನಂತವಾಗಿರುವ  ಆಗಸ ದಿನದಿನವೂ  ಹೊಸಪ್ರಪಂಚವನ್ನು , ಕಲ್ಪನೆಯನ್ನು ತೆರೆದಿಡುತ್ತದೆ.  ನೋಡ ನೋಡುವಂತೆಯೇ ಬೀಳವ ಉಲ್ಕೆಗಳು  ನಮ್ಮ ಕನಸಿನ ಹಾದಿಗೆ ಆಶೀರ್ವಾದವೆಂದೇ ಅನಿಸುತ್ತದೆ.
ಅಗಣಿತ ನಕ್ಷತ್ರಗಳ ಲೋಕವೆಂದರೆ‌ ಊಹೆಗೆ  ನಿಲುಕದ  ವಿಸ್ಮಯ ಲೋಕ.
ಮನೆಯಲ್ಲಿ ಸಂಜೆ ಏಳು ಕಾಲು  ಗಂಟೆಯಾಗುತ್ತಿದ್ದಂತೆ  ನಮ್ಮೆಜಮಾನ್ರು ಹೊರಗೆ ಒಳಗೆ ಸುತ್ತಲಾರಂಭಿಸಿದರು. ಟೆರೇಸ್ ಮೇಲೆ  ಹೋಗಿ ಆಕಾಶದತ್ತ ಮುಖ ಮಾಡಿ ಏನೋ ಹುಡುಕುತ್ತಿದ್ದರು.  ಸುಮಾರು ಹೊತ್ತು ನೋಡಿದಾಗ ಅವರು ಕಂಡು ಹಿಡಿದೇ ಬಿಟ್ಟರು. ಅದುವೇ   ನಿಯೋವೈಸ್ ಧೂಮಕೇತು .  ಈ ಶತಮಾನದ ಅಪರೂಪದ ಧೂಮಕೇತು  ದೊಡ್ಡದಾದ ಆಕಾಶಕಾಯ. ನಮ್ಮ ಜೀವಿತಾವಧಿಯಲ್ಲಿ ಸಿಕ್ಕ ದೊಡ್ಡ ಅವಕಾಶ.  ಈಗ ನಾವು  ಆಕಾಶದಲ್ಲಿ ಕಾಣಬಹುದು.  ಬರಿಗಣ್ಣಿಗೇ ಗೋಚರಿಸುತ್ತಿದೆ.  ಸಪ್ತ ಋಷಿ ಮಂಡಲದ ಕೆಳಗೆ ವಾಯವ್ಯ ದಿಕ್ಕಿನಲ್ಲಿ  ನಿಯೋ ವೈಸ್ ಧೂಮಕೇತು ಕಾಣಿಸುತ್ತಿದೆ. ಮೋಡಗಳಿಲ್ಲದ ಶುಭ್ರ ಆಕಾಶದಲ್ಲಿ ಧೂಮಕೇತು  ಸಂಜೆ 7.30 ರ ಸುಮಾರಿಗೆ ಕಾಣಸಿಗುತ್ತದೆ. ಒಂದು ಗಂಟೆಗಳ ಕಾಲ  ನೋಡಲು ಸಾಧ್ಯ.  ಆಗಸ್ಟ್ 15 ರವರೆಗೂ ಈ ದೃಶ್ಯ ಲಭ್ಯ ವಿರಬಹುದೆಂಬ ಅಂದಾಜು.  ಈ ಧೂಮಕೇತು ವನ್ನು ಇನ್ನೊಮ್ಮೆ ನೋಡಬೇಕೆಂದರೆ 6800 ವರ್ಷಗಳು ಬೇಕಾಗುತ್ತದೆ. ಹಾಗಾಗಿ ಮೋಡವಿಲ್ಲದ ಆಕಾಶ ಲಭ್ಯವಾದರೆ  ಧೂಮಕೇತು ವನ್ನು  ತಪ್ಪದೆ ವೀಕ್ಷಿಸಿ ಆನಂದಿಸಿ
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಬೈಂದೂರು | ಕಡಲ ತೀರದ ಸ್ವಚ್ಛತೆಯ 100ನೇ ವಾರದ ‘ಕ್ಲೀನ್ ಕಿನಾರ’ ಕಾರ್ಯಕ್ರಮ | 50 ಟನ್ ಗಳಷ್ಟು ಕಸ ಸಂಗ್ರಹಿಸಿ ವಿಲೇವಾರಿ |

ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…

2 hours ago

ಹೊಸರುಚಿ | ಗುಜ್ಜೆ ಚಟ್ನಿ

ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ:  ಗುಜ್ಜೆ 3/4 ಕಪ್ ,ನೀರು…

3 hours ago

ಮಂಗಳ ಗ್ರಹ ಸಂಚಾರ ಯೋಗ | ಈ 7 ರಾಶಿಗೆ ರಾಜಯೋಗ

2025ರಲ್ಲಿ ಮಂಗಳ ಗ್ರಹವು ವಿವಿಧ ನಕ್ಷತ್ರಗಳಲ್ಲಿ ಸಂಚಾರ ಮಾಡುವುದರಿಂದ ಕೆಲ ರಾಶಿಗಳಿಗೆ ವಿಶೇಷ…

3 hours ago

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ |

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…

13 hours ago

ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…

1 day ago