ಸುಳ್ಯ: ಇನ್ನರ್ವ್ಹೀಲ್ ಕ್ಲಬ್ ಸುಳ್ಯ ಇದರ ಜಿಲ್ಲಾಧ್ಯಕ್ಷರ ಭೇಟಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಹರ್ಷಿತಾ ಪುರುಷೋತ್ತಮ್ ವಹಿಸಿದ್ದರು.
ಜಿಲ್ಲಾ 318ರ ಜಿಲ್ಲಾಧ್ಯಕ್ಷೆ ಅನುರಾಧ ನಂದಕುಮಾರ್ ಮಾತನಾಡಿ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಚಿತ್ರಕಲೆಯಲ್ಲಿ ಸಾಧನೆ ಮಾಡಿದ ಕು. ಚಂದನಾ ಗೌಡರವರನ್ನು ಸನ್ಮಾನಿಸಿ, ವಿವಿಧ ಶಾಲೆಗಳಗೆ ಕೊಡುಗೆಗಳನ್ನು ನೀಡಲಾಯಿತು. ಈ ಸಂಧರ್ಭದಲ್ಲಿ ನೂತನ ಸದಸ್ಯರಾಗಿ ಡಾ. ತಾರಾ ನಂದನ್, ಡಾ. ಶ್ರಮಿಕಾ ಸೂಂತೋಡು, ಸವಿತಾ ನಾರ್ಕೋಡು, ಮಮತಾ ನಾರ್ಕೋಡು, ಸೌಮ್ಯಾ ಮಾಣಿಬೆಟ್ಟು ಮತ್ತು ಕೃಪಾ ದಿನೇಶ್ ರವರು ಕ್ಲಬ್ಗೆ ಸೇರ್ಪಡೆಗೊಂಡರು.
ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷೆ ಮಮತಾ ಸತೀಶ್, ಕಾರ್ಯದರ್ಶಿ ಜಯಮಣಿ ಮಾಧವ, ಖಜಾಂಜಿ ಪೂಜಾ ಸಂತೋಷ್, ಉಪಾಧ್ಯಕ್ಷೆ ವಿನುತಾ ಶೇಟ್, ಲಿಟ್ರೆಸಿ ಸಂಯೋಜಕಿ ಜಯಲಕ್ಷ್ಮೀ ಜೆ.ಕೆ. ರೈ, ಐ.ಎಸ್.ಒ. ಪ್ರಜ್ಞಾ ಮನುಜೇಶ್, ಜತೆ ಕಾರ್ಯದರ್ಶಿ ಸವಿತಾ ಸಿ.ಕೆ., ಸಂಪಾದಕಿ ಮಧುರಾ ಜಗದೀಶ್ ಉಪಸ್ಥಿತರಿದ್ದರು.
ಡಾ. ಹರ್ಷಿತಾ ಪುರುಷೋತ್ತಮ್ ಸ್ವಾಗತಿಸಿ, ಜಯಮಣಿ ಮಾಧವ್ ವರದಿ ವಾಚಿಸಿದರು. ವಿನುತಾ ಶೇಟ್ ವಂದಿಸಿ, ಶ್ರೀದೇವಿ ನಾಗರಾಜ್ ಹಾಗೂ ಆಶಿತಾ ಕೇಶವ್ ಕಾರ್ಯಕ್ರಮ ನಿರೂಪಿಸಿದರು.
ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…
ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…
ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…
ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…
ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…
ಕೊಪ್ಪರ ಬೆಲೆಯ ಏರಿಳಿತದಿಂದ ತುಮಕೂರಿನಲ್ಲಿ ರೈತರು ಅಡಿಕೆ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಇದರ…