ಮಂಗಳೂರು: ಎರಡು ಚಂಡಮಾರುತ ದಾಟಿ ಹೋಯಿತು. ಇದೀಗ ಇನ್ನೊಂದು ಚಂಡಮಾರುತ ಏಳುವ ಸೂಚನೆ ಇದೆ. ಕ್ಯಾರ್ ಬಳಿಕ ಮಹಾ ಚಂಡಮಾರುತ ಜೊತೆ ಜೊತೆಯಾಗಿಯೇ ಬಂದರೂ ಎಲ್ಲೂ ಭಾರೀ ಅಪಾಯವಾಗದೆ ದೂರವಾಗಿದೆ. ಈಗ ಮಹಾ ಚಂಡಮಾರುತವು ಗುಜರಾತ್ ಪ್ರದೇಶದಲ್ಲಿ ಕಂಡುಬಂದರೆ ಕ್ಯಾರ್ ದುರ್ಬಲವಾಗುತ್ತಾ ಒಮನ್ ಪ್ರದೇಶದಲ್ಲಿ ಹಾದು ಹೋಗಿದೆ.ಈಗ ಹಿಂದು ಮಹಾಸಾಗರದಲ್ಲಿ ಮತ್ತೊಂದು ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಇದೆ. ಈ ಹಿಂದೆಯೇ ಈ ಬಗ್ಗೆ ಹವಾಮಾನ ವರದಿಗಳು ಹೇಳಿದ್ದವು.
ಅರಬ್ಬೀ ಸಮುದ್ರದಲ್ಲಿ ಎರಡು ಚಂಡಮಾರುತಗಳು ಒಮ್ಮೆಲೇ ಕಾಣಿಸಿಕೊಂಡ ಅಪರೂಪದ ಘಟನೆಗೆ ದೇಶ ಸಾಕ್ಷಿಯಾಯಿತು. ಕ್ಯಾರ್ ಹಾಗೂ ಮಹಾ ಚಂಡಮಾರುತ ಇದು. 54 ವರ್ಷಗಳ ಹಿಂದೆ ಅಂದರೆ 1965 ರಲ್ಲಿ ಇಂತಹ ವಿದ್ಯಮಾನ ಜರುಗಿತ್ತು.
‘ಮಹಾ’ ಗುಜರಾತ್ ಕಡೆಗೆ: ‘ಮಹಾ’ ಚಂಡಮಾರುತ ಗುಜರಾತ್ ಹಾಗೂ ಮಹಾರಾಷ್ಟ್ರ ಕಡೆಗೆ ಚಲಿಸಿದೆ. ಇದರಿಂದ ಆ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಸೋಮವಾರ ಮಡಿಕೇರಿ, ಕಾಸರಗೋಡು, ಕಾರ್ಕಳ, ಹೊರನಾಡು ಸೇರಿದಂತೆ ವಿವಿದೆಡೆ ಮಳೆಯಾಗಬಹುದು. ಬೆಂಗಳೂರು ನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ, ಮಂಡ್ಯ ಸೇರಿದಂತೆ ಕೆಲವೆಡೆ ಮೋಡಕವಿದ ವಾತಾವರಣ ಕಂಡುಬಂದಿದೆ.
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…
ದಕ್ಷಿಣ ಕನ್ನಡ ಜಿಲ್ಲೆಗೆ ಆಗಸ್ಟ್ 3 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಭಾರಿ…
ಕುಟುಂಬದ ನೆಮ್ಮದಿಗಾಗಿ ತನ್ನ ನೋವನ್ನೂ ಮರೆಮಾಚುವ ಅಮ್ಮಂದಿರ ಮೌನ ತ್ಯಾಗವನ್ನು 'ತಿರುವು' ಅಂಕಣ…
ಹಿಂದೂ ಮಹಾಸಾಗರದ ಹವಾಮಾನ ಬದಲಾವಣೆ ಹಾಗೂ ಸಕಾರಾತ್ಮಕ IOD ಪರಿಣಾಮದಿಂದ ಕರ್ನಾಟಕದಲ್ಲಿ ಮುಂಗಾರು…
ರಾಜ್ಯದ ಹಲವೆಡೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.…
ಉತ್ತಮ ಆರೋಗ್ಯಕ್ಕೆ ಸರಿಯಾದ ಆಹಾರ ಮತ್ತು ನಿದ್ರೆ ಎರಡೂ ಅವಿಭಾಜ್ಯ ಎಂದು ಶ್ರೀ…