ಸುಳ್ಯ: ಡಿ 29 ಇಬ್ಬನಿ ಸುಳ್ಯ ಸಾದರ ಪಡಿಸಿರುವ ಇಬ್ಬನಿ ಇಯರ್ ಎಂಡ್ ಟ್ರೋಫಿ ಸೀಸನ್ 2ರ ಅಂಡರ್ ಆರ್ಮ್ ಕ್ರಿಕೆಟ್ ಲೀಗ್ ಪಂದ್ಯಾಕೂಟ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಮೈದಾನದಲ್ಲಿ ಜರಗಿತು.
ಸುಳ್ಯ ವಿಧಾನ ಸಭಾ ವ್ಯಾಪ್ತಿಯ 96 ಆಟಗಾರರನ್ನು ಆಯ್ಕೆ ಮಾಡಿ ಐಪಿಯಲ್ ಮಾದರಿಯಲ್ಲಿ ಹರಾಜು ಮಾಡಿ 8 ಮಾಲಕರಿಗೆ ನೀಡಲಾಗಿತ್ತು. ಈ ಒಂದು ಪಂದ್ಯಾಕೂಟದಲ್ಲಿ ಬಿ.ಎಂ ರಫೀಕ್ ಮಾಲಿಕತ್ವದ ಬಿ.ಎಂ.ಎ ಚಾಲೆಂಜರ್ಸ್ ತಂಡವು 2019ರ ಇಬ್ಬನಿ ಇಯರ್ ಎಂಡ್ ಟ್ರೋಫಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ದ್ವಿತೀಯ ಸ್ಥಾನವನ್ನು ರಝಾಕ್ ಕೆ.ಎಂ ಮಾಲಿಕತ್ವದ ಫ್ರೆಂಡ್ಸ್ ಜಟ್ಟಿಪಳ್ಳ ತಂಡವು ತೃಪ್ತಿಪಟ್ಟುಕೊಂಡಿದೆ.
ಪಂದ್ಯಾಕೂಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಜಯಿಸಿದ ಕ್ರೀಡಾಪಟು ಸಂಶೀರ್ ಸುಳ್ಯ ಅವರು ಗಣ್ಯ ಆತಿಥಿಗಳಾಗಿ ವೇದಿಕೆಗೆ ಮೆರುಗು ನೀಡಿದರು. ಈ ಪಂದ್ಯಾಕೂಟದಲ್ಲಿ ರಾಮಚಂದ್ರ ಪೆಲ್ತಡ್ಕ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನವೀನ್ ಕುಮಾರ್ ಕಜೆ, ಅಬ್ದುಲ್ ಕಲಾಂ ಸುಳ್ಯ, ರಷೀದ್ ಜಟ್ಟಿಪಳ್ಳ, ತಾಜ್ ಅಬೂಬಕ್ಕರ್ ಜನಪ್ರಿಯ, ಶರೀಫ್ ಜಟ್ಟಿಪಳ್ಳ, ಫೈಝಲ್ ಕಟ್ಟೆಕ್ಕಾರ್, ಹಂಝ ಕಾತೂನ್ , ಶಿಹಾಬ್ ಷಾ ಜಟ್ಟಿಪಳ್ಳ, ಉಪಸ್ಥಿತರಿದ್ದರು ಇಬ್ಬನಿ ಅಧ್ಯಕ್ಷ ಖಾದರ್ ಜಟ್ಟಿಪಳ್ಳ ಸ್ವಾಗತಿಸಿ ವಂಧಿಸಿದರು.
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…
ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…
ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…
2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…
ನಾಗಾಲ್ಯಾಂಡ್ನಲ್ಲಿ ರಬ್ಬರ್ ಕೃಷಿ ಸುಮಾರು 29,794 ಹೆಕ್ಟೇರ್ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್ನಲ್ಲಿ ಸೂಕ್ತ…
ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…