ಸುಳ್ಯ: ಡಿ 29 ಇಬ್ಬನಿ ಸುಳ್ಯ ಸಾದರ ಪಡಿಸಿರುವ ಇಬ್ಬನಿ ಇಯರ್ ಎಂಡ್ ಟ್ರೋಫಿ ಸೀಸನ್ 2ರ ಅಂಡರ್ ಆರ್ಮ್ ಕ್ರಿಕೆಟ್ ಲೀಗ್ ಪಂದ್ಯಾಕೂಟ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಮೈದಾನದಲ್ಲಿ ಜರಗಿತು.
ಸುಳ್ಯ ವಿಧಾನ ಸಭಾ ವ್ಯಾಪ್ತಿಯ 96 ಆಟಗಾರರನ್ನು ಆಯ್ಕೆ ಮಾಡಿ ಐಪಿಯಲ್ ಮಾದರಿಯಲ್ಲಿ ಹರಾಜು ಮಾಡಿ 8 ಮಾಲಕರಿಗೆ ನೀಡಲಾಗಿತ್ತು. ಈ ಒಂದು ಪಂದ್ಯಾಕೂಟದಲ್ಲಿ ಬಿ.ಎಂ ರಫೀಕ್ ಮಾಲಿಕತ್ವದ ಬಿ.ಎಂ.ಎ ಚಾಲೆಂಜರ್ಸ್ ತಂಡವು 2019ರ ಇಬ್ಬನಿ ಇಯರ್ ಎಂಡ್ ಟ್ರೋಫಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ದ್ವಿತೀಯ ಸ್ಥಾನವನ್ನು ರಝಾಕ್ ಕೆ.ಎಂ ಮಾಲಿಕತ್ವದ ಫ್ರೆಂಡ್ಸ್ ಜಟ್ಟಿಪಳ್ಳ ತಂಡವು ತೃಪ್ತಿಪಟ್ಟುಕೊಂಡಿದೆ.
ಪಂದ್ಯಾಕೂಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಜಯಿಸಿದ ಕ್ರೀಡಾಪಟು ಸಂಶೀರ್ ಸುಳ್ಯ ಅವರು ಗಣ್ಯ ಆತಿಥಿಗಳಾಗಿ ವೇದಿಕೆಗೆ ಮೆರುಗು ನೀಡಿದರು. ಈ ಪಂದ್ಯಾಕೂಟದಲ್ಲಿ ರಾಮಚಂದ್ರ ಪೆಲ್ತಡ್ಕ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನವೀನ್ ಕುಮಾರ್ ಕಜೆ, ಅಬ್ದುಲ್ ಕಲಾಂ ಸುಳ್ಯ, ರಷೀದ್ ಜಟ್ಟಿಪಳ್ಳ, ತಾಜ್ ಅಬೂಬಕ್ಕರ್ ಜನಪ್ರಿಯ, ಶರೀಫ್ ಜಟ್ಟಿಪಳ್ಳ, ಫೈಝಲ್ ಕಟ್ಟೆಕ್ಕಾರ್, ಹಂಝ ಕಾತೂನ್ , ಶಿಹಾಬ್ ಷಾ ಜಟ್ಟಿಪಳ್ಳ, ಉಪಸ್ಥಿತರಿದ್ದರು ಇಬ್ಬನಿ ಅಧ್ಯಕ್ಷ ಖಾದರ್ ಜಟ್ಟಿಪಳ್ಳ ಸ್ವಾಗತಿಸಿ ವಂಧಿಸಿದರು.
ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.
''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…
ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…
ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.
ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್ ಇಂಡಸ್ಟ್ರೀಸ್(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…
ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…