ಸುಳ್ಯ: ಇಬ್ಬನಿ ಸುಳ್ಯ ಕನ್ನಡ ರಾಜ್ಯೋತ್ಸವದ ಸಲುವಾಗಿ ಪ್ರಸ್ತುತಪಡಿಸಿದ ಸುಳ್ಯ ತಾಲೂಕು ಮಟ್ಟದ ಪ್ರಬಂಧ ಸ್ಪರ್ದೆಯ ಬಹುಮಾನ ವಿತರಣೆ ಕಾರ್ಯಕ್ರಮ ಖಾದರ್ ಜಟ್ಟಿಪಳ್ಳ ಇವರ ಅಧ್ಯಕ್ಷತೆಯಲ್ಲಿ ಗಾಂಧೀನಗರದಲ್ಲಿ ನಡೆಯಿತು.
‘ಕನ್ನಡ ಬಾಷೆಯ ಬೆಳವಣಿಗೆಯಲ್ಲಿ ಸಂಘಟನೆಗಳ ಪಾತ್ರ’ ಎಂಬ ವಿಷಯದಲ್ಲಿ ಪ್ರಬಂಧಗಳನ್ನು ಆಹ್ವಾನಿಸಲಾಗಿತ್ತು. 51 ಪ್ರಬಂಧಗಳು ಸ್ವೀಕೃತಗೊಂಡು 15 ಪ್ರಬಂಧಗಳು ಬಹುಮಾನಕ್ಕೆ ಆಯ್ಕೆಯಾಗಿತ್ತು.
ಪ್ರಥಮ ಬಹುಮಾನವನ್ನು ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜು ವಿಧ್ಯಾರ್ಥಿನಿ ಫಾತಿಮತ್ ಶಮೀರಾ ಪಡೆದುಕೊಂಡಿದ್ದಾರೆ. ದ್ವಿತೀಯ ಬಹುಮಾನವನ್ನು ಕೆ.ಎಸ್.ಎಸ್ ಪ್ರಥಮ ದರ್ಜೆ ಕಾಲೇಜು ಪ್ರಥಮ ವರ್ಷ ಬಿ.ಕಾಂ ವಿಧ್ಯಾರ್ಥಿನಿ ಸಿಂಧು ಬೈರವಿ ದೇರಳ ಪಡೆದರು.
ಉತ್ತಮ ಬರಹ, ಪ್ರೋತ್ಸಾಹಕ ಬಹುಮಾನಕ್ಕೆ 13 ಸ್ಪರ್ಧಾರ್ಥಿಗಳ ಬರಹ ಆಯ್ಕೆಮಾಡಿ ಬಹುಮಾನ ವಿತರಿಸಲಾಯಿತು. ಅರ್ಫಿನಾ ಆಸಿಫ್ ಪನ್ನೆ, ರಮ್ಯ ಎಂ ಮರ್ಕಂಜ ಎಸ್ ಆರ್ ಓಲ್ಡ್ ಗೇಟ್, ಆಶಯ್ ಕೆ.ಎ ಅಮರ ಜ್ಯೋತಿ ಕಾಲೇಜು , ಫಾರಿಸ ಜಿ.ಎಚ್, ಮಹಮ್ಮದ್ ರಿಲ್ವಾನ್ ಜಿ, ಫಾತಿಮತ್ ಝಿಹಾನ ಕೆ.ಎಚ್, ಪರಿಷ್ಮ ಎ.ಪಿ ದ್ವಿತೀಯ ವಿಜ್ಞಾನ ವಿಭಾಗ ನೆ.ಸ್ಮಾ.ಪ.ಪೂ ಕಾಲೇಜು ಅರಂತೋಡು, ಜಾಹಿರ್ ಪೆರಾಜೆ, ಲಿಖಿತ ಎಂ ಸ.ಪ.ಪೂ.ಕಾ ಸುಳ್ಯ, ಹಸೀನ ಎ.ಎಂ ಜಯನಗರ, ಸೌಜನ್ಯ ಎಸ್ ಪ್ರಥಮ ಪಿ.ಯು.ಸಿ ವಾಣಿಜ್ಯ ಬಿಭಾಗ ಶ್ರೀ ಶಾರದಾ ಮಹಿಳಾ ಕಾಲೇಜು ಸುಳ್ಯ, ಹನ್ನತ್ ಸಿದ್ದೀಕ್ ಜಯನಗರ ಪಡೆದಿರುತ್ತಾರೆ.
ಮುಖ್ಯ ಅಥಿತಿಗಳಾಗಿ ಹರೀಶ್ ಬಂಟ್ವಾಳ್, ಬೀಮರಾವ್ ವಾಸ್ಠರ್, ಹರ್ಷಿತ್ ಮಿತ್ತಡ್ಕ, ಶರೀಫ್ ಜಟ್ಟಿಪಳ್ಳ, ರಷೀದ್ ಜಟ್ಟಿಪಳ್ಳ, ಆಸಿಫ್ ಪನ್ನೆ ಹಾಗೂ ನಾಸಿರ್ ಸಿ.ಎ ಉಪಸ್ಥಿತರಿದ್ದರು. ಹಜರತ್ ಖಲೀಲ್ ನಿರೂಪಿಸಿ ಸ್ವಾಗತಿಸಿ ವಂದಿಸಿದರು.
ಅಡಿಕೆ ಒಡೆದು ಬೀಳುವ ಸಮಸ್ಯೆಗೆ ಬೋರಾನ್ ಕೊರತೆ ಮಾತ್ರವಲ್ಲ, ಪೆರಿಯಾಂತ್ ಮೈಟ್ ಕೀಟದ…
ಭಾರತೀಯ ಹವಾಮಾನ ಇಲಾಖೆ ಎಲ್ ನಿನೋ ಆರಂಭಗೊಂಡಿರುವುದನ್ನು ಅಧಿಕೃತವಾಗಿ ದೃಢಪಡಿಸಿದೆ. ಕರಾವಳಿ ಕರ್ನಾಟಕದಲ್ಲಿ…
ಬರಗಾಲದ ಪರಿಸ್ಥಿತಿಗಳು ಮಣ್ಣಿನಲ್ಲಿನ ಬ್ಯಾಕ್ಟೀರಿಯಾಗಳಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧ ಹೆಚ್ಚಿಸಲು ಕಾರಣವಾಗಬಹುದು ಎಂದು ಹೊಸ…
ಜೇನುನೊಣಗಳ ಸಂಖ್ಯೆ ಕುಸಿಯುತ್ತಿರುವುದು ಕೃಷಿ ಉತ್ಪಾದನೆ, ಆಹಾರ ಭದ್ರತೆ ಮತ್ತು ಪರಿಸರ ಸಮತೋಲನಕ್ಕೆ…
ವಿಟ್ಲದ ಆರ್. ಕೆ. ಪೈ ಅವರು ತಮ್ಮ 60ನೇ ಹುಟ್ಟುಹಬ್ಬವನ್ನು ಮಕ್ಕಳಲ್ಲಿ ಪ್ರಕೃತಿ…
ನಾಗ್ಪುರದ ಕಾಂಪ್ಟಿಯಲ್ಲಿ FDA ಹಾಗೂ ಪೊಲೀಸರು ನಡೆಸಿದ ದಾಳಿಯಲ್ಲಿ ₹1.11 ಕೋಟಿ ಮೌಲ್ಯದ…