ಸುಳ್ಯ: ಇಬ್ಬನಿ ಸುಳ್ಯ ಕನ್ನಡ ರಾಜ್ಯೋತ್ಸವದ ಸಲುವಾಗಿ ಪ್ರಸ್ತುತಪಡಿಸಿದ ಸುಳ್ಯ ತಾಲೂಕು ಮಟ್ಟದ ಪ್ರಬಂಧ ಸ್ಪರ್ದೆಯ ಬಹುಮಾನ ವಿತರಣೆ ಕಾರ್ಯಕ್ರಮ ಖಾದರ್ ಜಟ್ಟಿಪಳ್ಳ ಇವರ ಅಧ್ಯಕ್ಷತೆಯಲ್ಲಿ ಗಾಂಧೀನಗರದಲ್ಲಿ ನಡೆಯಿತು.
‘ಕನ್ನಡ ಬಾಷೆಯ ಬೆಳವಣಿಗೆಯಲ್ಲಿ ಸಂಘಟನೆಗಳ ಪಾತ್ರ’ ಎಂಬ ವಿಷಯದಲ್ಲಿ ಪ್ರಬಂಧಗಳನ್ನು ಆಹ್ವಾನಿಸಲಾಗಿತ್ತು. 51 ಪ್ರಬಂಧಗಳು ಸ್ವೀಕೃತಗೊಂಡು 15 ಪ್ರಬಂಧಗಳು ಬಹುಮಾನಕ್ಕೆ ಆಯ್ಕೆಯಾಗಿತ್ತು.
ಪ್ರಥಮ ಬಹುಮಾನವನ್ನು ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜು ವಿಧ್ಯಾರ್ಥಿನಿ ಫಾತಿಮತ್ ಶಮೀರಾ ಪಡೆದುಕೊಂಡಿದ್ದಾರೆ. ದ್ವಿತೀಯ ಬಹುಮಾನವನ್ನು ಕೆ.ಎಸ್.ಎಸ್ ಪ್ರಥಮ ದರ್ಜೆ ಕಾಲೇಜು ಪ್ರಥಮ ವರ್ಷ ಬಿ.ಕಾಂ ವಿಧ್ಯಾರ್ಥಿನಿ ಸಿಂಧು ಬೈರವಿ ದೇರಳ ಪಡೆದರು.
ಉತ್ತಮ ಬರಹ, ಪ್ರೋತ್ಸಾಹಕ ಬಹುಮಾನಕ್ಕೆ 13 ಸ್ಪರ್ಧಾರ್ಥಿಗಳ ಬರಹ ಆಯ್ಕೆಮಾಡಿ ಬಹುಮಾನ ವಿತರಿಸಲಾಯಿತು. ಅರ್ಫಿನಾ ಆಸಿಫ್ ಪನ್ನೆ, ರಮ್ಯ ಎಂ ಮರ್ಕಂಜ ಎಸ್ ಆರ್ ಓಲ್ಡ್ ಗೇಟ್, ಆಶಯ್ ಕೆ.ಎ ಅಮರ ಜ್ಯೋತಿ ಕಾಲೇಜು , ಫಾರಿಸ ಜಿ.ಎಚ್, ಮಹಮ್ಮದ್ ರಿಲ್ವಾನ್ ಜಿ, ಫಾತಿಮತ್ ಝಿಹಾನ ಕೆ.ಎಚ್, ಪರಿಷ್ಮ ಎ.ಪಿ ದ್ವಿತೀಯ ವಿಜ್ಞಾನ ವಿಭಾಗ ನೆ.ಸ್ಮಾ.ಪ.ಪೂ ಕಾಲೇಜು ಅರಂತೋಡು, ಜಾಹಿರ್ ಪೆರಾಜೆ, ಲಿಖಿತ ಎಂ ಸ.ಪ.ಪೂ.ಕಾ ಸುಳ್ಯ, ಹಸೀನ ಎ.ಎಂ ಜಯನಗರ, ಸೌಜನ್ಯ ಎಸ್ ಪ್ರಥಮ ಪಿ.ಯು.ಸಿ ವಾಣಿಜ್ಯ ಬಿಭಾಗ ಶ್ರೀ ಶಾರದಾ ಮಹಿಳಾ ಕಾಲೇಜು ಸುಳ್ಯ, ಹನ್ನತ್ ಸಿದ್ದೀಕ್ ಜಯನಗರ ಪಡೆದಿರುತ್ತಾರೆ.
ಮುಖ್ಯ ಅಥಿತಿಗಳಾಗಿ ಹರೀಶ್ ಬಂಟ್ವಾಳ್, ಬೀಮರಾವ್ ವಾಸ್ಠರ್, ಹರ್ಷಿತ್ ಮಿತ್ತಡ್ಕ, ಶರೀಫ್ ಜಟ್ಟಿಪಳ್ಳ, ರಷೀದ್ ಜಟ್ಟಿಪಳ್ಳ, ಆಸಿಫ್ ಪನ್ನೆ ಹಾಗೂ ನಾಸಿರ್ ಸಿ.ಎ ಉಪಸ್ಥಿತರಿದ್ದರು. ಹಜರತ್ ಖಲೀಲ್ ನಿರೂಪಿಸಿ ಸ್ವಾಗತಿಸಿ ವಂದಿಸಿದರು.
ಗ್ರಾಮೀಣ ಭಾಗದ ನಂಬಿಕೆಗಳು ಮಾನಸಿಕವಾಗಿ ಹೆಚ್ಚು ಶಕ್ತಿ ನೀಡುತ್ತವೆ. ಅಂತಹದೊಂದು ನಂಬಿಕೆ ಶಿಶಿಲದಲ್ಲಿ…
ಚುನಾವಣೆಯ ಸಮಯದಲ್ಲಿ ಕೋವಿ ಠೇವಣಾತಿಯ ಬಗ್ಗೆ ಕೃಷಿಕರ ಸಂಕಷ್ಟಕ್ಕೆ ನ್ಯಾಯಾಲಯವು ಪರಿಹಾರ ನೀಡಿದೆ.
ಮಿಶ್ರ ಬೆಳೆ, ಪರ್ಯಾಯ ಬೆಳೆ, ಬಹು ಬೆಳೆ(Mixed cropping, alternating cropping, multiple…
ವಿವೇಕಾನಂದ ಎಚ್ ಕೆ ಅವರ ಬರಹ
ಆಹಾರ ಹಾಗೂಆಹಾರ ಪದ್ಧತಿಗಳ ಬಗ್ಗೆ ವಿವೇಕ್ ಆಳ್ವ ಅವರು ಬರೆದಿದ್ದಾರೆ.
`ಶುಗರ್ ಫ್ರೀ’(Sugar Free) ಎಂಬ ಹೆಸರಿನಲ್ಲಿ ಕೃತಕ ಸಿಹಿಕಾರಕಗಳ(Artificial sweet) ಟ್ರೆಂಡ್(Trend) ಹೆಚ್ಚುತ್ತಿರುವ…