Advertisement
MIRROR FOCUS

ಒಬ್ಬರಿಗೊಂದೇ “ಆಧಾರ್” – ಇಲ್ಲಿ ಇಬ್ಬರಿಗೊಂದೇ “ಆಧಾರ”…! : ಅಲೆದಾಡಿದ ಈ ಮಹಿಳೆಯರಿಗೆ ಪರಿಹಾರವೂ ದೂರ…!

Share

ಸುಳ್ಯ: ಒಬ್ಬರಿಗೊಂದೇ ಆಧಾರ . ದೇಶಕ್ಕೊಂದು ಆಧಾರ್, ವ್ಯಕ್ತಿಗೊಂದು ಆಧಾರ್ ನಂಬರ್…!.  ಹೀಗಾಗಿ ಈಗ ಎಲ್ಲಾ ದಾಖಲೆಗಳಿಗೂ ಆಧಾರ್ ಲಿಂಕ್. ಒಂದರ್ಥದಲ್ಲಿ ಬದುಕಿಗೇ ಆಧಾರ್ ಲಿಂಕ್..!. ಈ ಲಿಂಕ್.. ಲಿಂಕ್.. ಮಾಡಿ ಜನಸಾಮಾನ್ಯರು ಸುಲಭದ ಹಾದಿಯಲ್ಲಿದ್ದಾರೆ. ಕೆಲವರಿಗೆ ಆಧಾರ್ ಲಿಂಕ್ ಮಾಡುವುದಕ್ಕೂ ಆಧಾರ ಇಲ್ಲವಾಗಿದೆ. ಅವರಿಗೆ ಸಂಕಷ್ಟ ತಪ್ಪಿಲ್ಲ. ಈಗ ಲಿಂಕೂ ಇಲ್ಲ… ಕನೆಕ್ಟೂ ಇಲ್ಲ..! ಈ ಹಂತದಲ್ಲಿದ್ದಾರೆ ಇಬ್ಬರು ಬಡ ಮಹಿಳೆಯರು. ಇವರ ಸಮಸ್ಯೆ ಹೀಗಿದೆ… ಸಾಧ್ಯವಾದರೆ ಪರಿಹಾರ ಮಾಡಿಸಿಕೊಡಿ ಅಂತ ದು:ಖ ತೋಡುತ್ತಾರೆ.ಅಚ್ಚರಿ ಎಂದರೆ ಇವರು ಅತ್ತೆ-ಸೊಸೆ. ಹೀಗಾಗಿ ಅತ್ತೆ-ಸೊಸೆಗೊಂದೇ ಆಧಾರ್…!

ಅವರು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲ ನಿವಾಸಿಗಳು. ಅವರಿಬ್ಬರೂ ಅತ್ತೆ-ಸೊಸೆ. ಈಗ ಒಂದೇ ಮನೆಯಲ್ಲಿದ್ದಾರೆ. ಅಚ್ಚರಿ ಎಂದರೆ ಇವರಿಗೆ  ಆಧಾರ್ ನಂಬರೂ ಒಂದೇ…!. ಹಿಂದೆ ತಿಳಿದಿರಲಿಲ್ಲ. ಈ ಬಗ್ಗೆ ಗಮನಿಸಲೂ ಇಲ್ಲ. ಪ್ರತೀ ವ್ಯಕ್ತಿಗೆ ಬೇರೆ ಬೇರೆ ಆಧಾರ್ ನಂಬರ್ ಎಂಬ ಅರಿವು ಇರಲಿಲ್ಲ. ಈಚೆಗೆ  ಯಾವುದೋ ಸೌಲಭ್ಯಕ್ಕೆ ಹೋದಾಗ, ರೇಶನ್ ಪಡೆಯುವುದಕ್ಕೆ ಹೋದಾಗ ತಿಳಿದಿದೆ. ಈಗ ಸಮಸ್ಯೆಯಾಗಿದೆ.  ಸಮಸ್ಯೆ ತಿಳಿದ ಬಳಿಕ ಇಬ್ಬರೂ ಮಹಿಳೆಯರೂ ಕಚೇರಿಗಳಿಗೆ, ಆಧಾರ್ ಕೇಂದ್ರಗಳಿಗೆ ಅಲೆದಾಡಿದ್ದು 6 ಬಾರಿ..! ಇಂದಿಗೂ ಸರಿಯಾಗಿಲ್ಲ.  ಈ ಮಹಿಳೆಯರಲ್ಲಿ ಒಬ್ಬರು 70 ವರ್ಷ ಮೇಲ್ಪಟ್ಟವರು, ಇನ್ನೊಬ್ಬರು 50 ವರ್ಷ ಮೇಲ್ಪಟ್ಟವರು. ಒಬ್ಬರ ಹೆಸರು ಕೆಂಚಮ್ಮ ಇನ್ನೊಬ್ಬರ ಹೆಸರು ಹೊನ್ನಮ್ಮ. ಮಹಿಳೆಯರ ಮನೆಯವರು ಪ್ರಯತ್ನ ಮಾಡಿದರು. ಎಲ್ಲಾ ಸರಿ ಮಾಡಿಸಿ ಮನೆಗೆ ಬಂದ ಬಳಿಕ  ಮತ್ತೆ ಅದೇ ಆಧಾರ್ ನಂಬರ್ ಇರುವ ಕಾರ್ಡ್ ಅಂಚೆ ಮೂಲಕ ಬರುತ್ತದೆ…!    ಈಗ ಸಾಕಾಗಿ ಹೋಗಿದೆ ಎಂದು ದು:ಖ ತೋಡುತ್ತಾರೆ. ಈಗ ಸಮೀಪದಲ್ಲಿ ಆಧಾರ್ ಕೇಂದ್ರವೂ ಇಲ್ಲ. ದೂರದ ಕಡೆಗೆ ತೆರಳಲು ಇವರಿಗೇ ಒಬ್ಬರು ಆಧಾರ ಕ್ಕೆ ಜನ ಬೇಕು. ಎಷ್ಟು ಬಾರಿ ಅಂತ ಬರುವುದು ನಿಮಗೆ ಆಧಾರಕ್ಕೆ ಅಂತ ಕೇಳಿದರೆ ಎಂದು ಮಹಿಳೆಯರು ಹೇಳುತ್ತಾರೆ.

ಹೀಗಾಗಿ ಈಗ ಸಮಸ್ಯೆಯ ಮಾತುಗಳ ಬದಲಾಗಿ ಈ ಮಹಿಳೆಯರಿಗೆ ಆಧಾರ್ ಪರಿಹಾರದ ಬಗ್ಗೆ ಸಲಹೆಗಳು ಬೇಕಾಗಿದೆ. ಇಲಾಖೆಗಳು ಈ ಮಹಿಳೆಯರಿಗೆ ಪ್ರತ್ಯೇಕ ಅವಕಾಶ ನೀಡಿ ಆಧಾರ್ ಕಾರ್ಡ್ ವ್ಯವಸ್ಥೆ ಮಾಡಿಸಿ ಕೊಡಬೇಕಾಗಿದೆ.  ಇಲಾಖೆಗಳ ವ್ಯವಸ್ಥೆ ಈ ಬಡ  ಮಹಿಳೆಯರಿಗೆ ಗೊತ್ತಿಲ್ಲ, ಒಂದಲ್ಲ ಹಲವು ಬಾರಿ ಹೋಗಿದ್ದಾರೆ, ತಕ್ಷಣ ಪರಿಹಾರ ಬೇಕಾಗಿದೆ. ಅಧಿಕಾರಿಗಳು ಮಾಡಿಸಿಕೊಡುವರೇ ?

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 06-09-2026 | ಕರ್ನಾಟಕದಲ್ಲಿ ಮಳೆ ಇಳಿಮುಖದ ಲಕ್ಷಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…

10 hours ago

ಭಾರತದ ಹಸಿರು ಯೋಜನೆಗಳಿಗೆ ಜಪಾನ್‌ನ ಕಾರ್ಬನ್ ಕ್ರೆಡಿಟ್ ಅವಕಾಶ – ರೈತರೂ ಪಡೆಯಬಹುದೇ ಇದರ ಲಾಭ?

ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…

13 hours ago

ಹಿಮಾಲಯದಲ್ಲಿ ಮತ್ತೊಂದು ಅಪಾಯದ ಎಚ್ಚರಿಕೆ..!

ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…

14 hours ago

ಎಲ್ ನಿನೊ ಮತ್ತಷ್ಟು ಬಲಗೊಳ್ಳುವ ಮುನ್ಸೂಚನೆ..!

2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…

15 hours ago

ಈಶಾನ್ಯದಿಂದ ಜಾರ್ಖಂಡ್‌ವರೆಗೆ ರಬ್ಬರ್‌ ಕೃಷಿಯ ವಿಸ್ತರಣೆ | ಹೊಸ ಪ್ರದೇಶಗಳಲ್ಲಿ ರಬ್ಬರ್‌ ಕೃಷಿ ವಿಸ್ತರಣೆ – ಅಪಾಯವೇ..? ಅವಕಾಶವೇ..?

ನಾಗಾಲ್ಯಾಂಡ್‌ನಲ್ಲಿ ರಬ್ಬರ್‌ ಕೃಷಿ ಸುಮಾರು 29,794 ಹೆಕ್ಟೇರ್‌ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್‌ನಲ್ಲಿ ಸೂಕ್ತ…

1 day ago

ದಾವಣಗೆರೆಯಲ್ಲಿ ಮಳೆ ಕೊರತೆ – ಮೆಕ್ಕೆಜೋಳ, ರಾಗಿ ಬೆಳೆ ಶೇ.50 ಹಾನಿ ಭೀತಿ

ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…

1 day ago