ಅನುಕ್ರಮ

ಇಂದು ಗೆಳೆಯರ ದಿನ | ಗೆಳೆಯರೇ ನಿಮಗೆ ಶುಭಾಶಯ…….

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮಾತಿಗೆ ಕಿವಿಯಾಗುವ, ದುಃಖಕ್ಕೆ ಮರುಗುವ, ನಗುವಾಗ ನಗುವ ,ಅಳುವಾಗ ಕಣ್ಣೊರೆಸುವ, ಬಿದ್ದಾಗ ಎಬ್ಬಿಸುವ, ನೋವಿನಲ್ಲಿರುವಾಗ ಬೆನ್ನು ತಟ್ಟಿ ಸಮಾಧಾನಿಸುವ ಮನಸಿರುವುದು‌ ಗೆಳೆಯರಿಗೆ ಮಾತ್ರ.

Advertisement

ಯಾವುದೇ ಸ್ವಾರ್ಥವಿಲ್ಲದ , ಪ್ರೀತಿ ಸಿಗುವುದು ಗೆಳೆತನದಲ್ಲಿ. ಜಗತ್ತಿನಲ್ಲಿ ಉದಾಹರಣೆ ಯಾಗಬಲ್ಲ ಹಲವು ಮಿತ್ರ ಜೋಡಿಗಳಿವೆ. ಅವುಗಳಲ್ಲೆಲ್ಲ ನನ್ನ ಮಟ್ಟಿಗೆ ಶ್ರೇಷ್ಠವಾದ , ಇಷ್ಟವಾದ ಜೀವದ ಗೆಳೆಯರೆಂದರೆ  ಕೃಷ್ಣ, ಸುಧಾಮರು. ನಿಸ್ವಾರ್ಥ ಸ್ನೇಹಕ್ಕೆ ಯಾವಾಗಲು ಸೂಕ್ತ ಉದಾಹರಣೆ. ಗುರುಕುಲದಲ್ಲಿ ವಿದ್ಯಾರ್ಥಿ ಗಳೆಲ್ಲರೂ ಸಮಾನರು. ಅಂತಸ್ತಿನ ಹಂಗು ಅಲ್ಲಿರಲಿಲ್ಲ. ಗುರುಗಳ ಮುಂದೆ ಎಲ್ಲರೂ ಸಮಾನರು. ಬದುಕಿನ ಕ್ಷಣಗಳು ದುರ್ಬರವಾದಾಗ ಸುಧಾಮನ ಪತ್ನಿ ಗೆಳೆಯನ ಸಹಾಯ ಕೇಳಬಹುದಲ್ಲವೆಂದರೂ ಮನಸಿಲ್ಲದ ಮನಸಿನಿಂದ ಕೃಷ್ಣ ನ ಬಳಿಗೆ ಹೊರಟನು. ಅವಲಕ್ಕಿ ಕೃಷ್ಣ ನಿಗೆ ಪ್ರೀತಿಯೆಂದು ಆತನಿಗಾಗಿ ಮರೆಯದೆ ಕಟ್ಟಿಕೊಂಡನು. ಕೃಷ್ಣ ಎದುರಾದಾಗ ತನ್ನೆಲ್ಲಾ ಕಷ್ಟಗಳನ್ನು ಮರೆತು ಆತನ ಆನಂದದಲ್ಲಿ ತಾನು ಒಂದಾದ ಸುಧಾಮ. ಕೃಷ್ಣನೋ ಬಹು ಜಾಣ. ಸುಧಾಮನ ಮನೆವಾರ್ತೆಯ ಕುರಿತು ಏನೇನೂ ವಿಚಾರಿಸದೆ ಗುರುಕುಲದ ಸಮಯವನ್ನು ಮೆಲುಕು ಹಾಕುವುದರಲ್ಲೇ ಕಳೆದ. ಜೊತೆಗಿದ್ದ ನಾಲ್ಲು ದಿನಗಳು ಸಂತೋಷವಾಗಿ ಕಳೆದವು. ಕೃಷ್ಣ ನಿಂದ ಬೀಳ್ಗೊಂಡು ತನ್ನೂರಿಗೆ ಬಂದಾಗಲೇ ಸುಧಾಮನರಿವಿಗೆ ಬಂದದ್ದು ಕೃಷ್ಣನ ಮಹಿಮೆಯೇನೆಂದು.

ಗೆಳೆತನವೆಂದರೆ ಹಾಗೇ ಹೇಳದೇ ಅರಿಯಬೇಕು ನೋವ, ಕೇಳದೇ ಕೊಡಬೇಕು‌‌ ಅಕ್ಕರೆಯ, ಅಲ್ಲಿ ಕೊಡು ಕೊಳ್ಳುವ ವ್ಯವಹಾರಕ್ಕಿರಬಾರದು ಜಾಗ. ಗೆಳೆತನದ ಪ್ರೀತಿಯ ಮುಂದೆ ಬೇರೆಲ್ಲಾ ಗೌಣ. ಜೀವನದ ಎಲ್ಲಾ ಕ್ಷಣಗಳಲ್ಲಿ ಒಟ್ಟಿಗೇ ಇರ ಬೇಕೆಂದಿಲ್ಲ. ಶಾಲಾ ದಿನಗಳಲ್ಲಿ ಇದ್ದಂತೆ ಅವಾಗಾವಗ ಬೇಟಿಯಾಗುವುದು ಕಷ್ಟವೇ . ವಿವಿಧ ಕಾರಣಗಳಿಂದ ದೂರವಾಗಿರುವ ಗೆಳೆಯರು ಮಾನಸಿಕವಾಗಿ ಒಟ್ಟಿಗೇ ಇರುತ್ತಾರೆ. ಹೇಗೆಂದು ಅರ್ಥವಾಗದು. ತುಂಬಾ ಬೇಜಾರಾದಾಗ, ಮನಸಿಗೆ ಹಿಂಸೆಯೆನಿಸಿದಾಗ, ಒಂಟಿತನ ಕಾಡಿದಾಗ , ಇಂದು ಮಾತನಾಡಲೇ ಬೇಕು ಎನಿಸಿದಾಗ ನನ್ನ ಸ್ನೇಹಿತೆಯರು ಯಾವಾಗಲೂ ಸ್ಪಂಧಿಸುತ್ತಾರೆ ಎಂಬುದು ನನ್ನ ಭಾಗ್ಯವೇ ಸರಿ. ನಾನು ಹೆಮ್ಮೆಯಿಂದ ಹೇಳುವೆ ನನಗೂ ಭಾವನೆಗಳನ್ನು ಹಂಚಿಕೊಳ್ಳಲು ಮಿತ್ರರಿದ್ದಾರೆ ಎಂದು. ಎಲ್ಲರಿಗೂ   Happy friendship day.

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ |

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…

5 hours ago

ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…

20 hours ago

“ದ ಹಿಂದೂ ಮ್ಯಾನಿಫ್ಯಾಸ್ಟೋ” ಕೃತಿ ಬಿಡುಗಡೆ | ಅಹಿಂಸೆಯೇ ಭಾರತದ ನೈಜ ಧರ್ಮ-ಮೋಹನ್ ಭಾಗವತ್

ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ…

20 hours ago

ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರ ದಾಳಿ ಹಿನ್ನೆಲೆ | ಭಾರತದಲ್ಲಿ ಪಾಕ್ ಸರ್ಕಾರದ ಸಾಮಾಜಿಕ ಜಾಲತಾಣ ನಿಷೇಧ

ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿರುವ…

21 hours ago

ರಾಜ್ಯದಲ್ಲಿ ಒಂದು ವಾರ ಗುಡುಗು ಸಹಿತ ಮಳೆ ಸಾಧ್ಯತೆ | 19 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ

ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು…

21 hours ago