ಮಾತಿಗೆ ಕಿವಿಯಾಗುವ, ದುಃಖಕ್ಕೆ ಮರುಗುವ, ನಗುವಾಗ ನಗುವ ,ಅಳುವಾಗ ಕಣ್ಣೊರೆಸುವ, ಬಿದ್ದಾಗ ಎಬ್ಬಿಸುವ, ನೋವಿನಲ್ಲಿರುವಾಗ ಬೆನ್ನು ತಟ್ಟಿ ಸಮಾಧಾನಿಸುವ ಮನಸಿರುವುದು ಗೆಳೆಯರಿಗೆ ಮಾತ್ರ.
ಯಾವುದೇ ಸ್ವಾರ್ಥವಿಲ್ಲದ , ಪ್ರೀತಿ ಸಿಗುವುದು ಗೆಳೆತನದಲ್ಲಿ. ಜಗತ್ತಿನಲ್ಲಿ ಉದಾಹರಣೆ ಯಾಗಬಲ್ಲ ಹಲವು ಮಿತ್ರ ಜೋಡಿಗಳಿವೆ. ಅವುಗಳಲ್ಲೆಲ್ಲ ನನ್ನ ಮಟ್ಟಿಗೆ ಶ್ರೇಷ್ಠವಾದ , ಇಷ್ಟವಾದ ಜೀವದ ಗೆಳೆಯರೆಂದರೆ ಕೃಷ್ಣ, ಸುಧಾಮರು. ನಿಸ್ವಾರ್ಥ ಸ್ನೇಹಕ್ಕೆ ಯಾವಾಗಲು ಸೂಕ್ತ ಉದಾಹರಣೆ. ಗುರುಕುಲದಲ್ಲಿ ವಿದ್ಯಾರ್ಥಿ ಗಳೆಲ್ಲರೂ ಸಮಾನರು. ಅಂತಸ್ತಿನ ಹಂಗು ಅಲ್ಲಿರಲಿಲ್ಲ. ಗುರುಗಳ ಮುಂದೆ ಎಲ್ಲರೂ ಸಮಾನರು. ಬದುಕಿನ ಕ್ಷಣಗಳು ದುರ್ಬರವಾದಾಗ ಸುಧಾಮನ ಪತ್ನಿ ಗೆಳೆಯನ ಸಹಾಯ ಕೇಳಬಹುದಲ್ಲವೆಂದರೂ ಮನಸಿಲ್ಲದ ಮನಸಿನಿಂದ ಕೃಷ್ಣ ನ ಬಳಿಗೆ ಹೊರಟನು. ಅವಲಕ್ಕಿ ಕೃಷ್ಣ ನಿಗೆ ಪ್ರೀತಿಯೆಂದು ಆತನಿಗಾಗಿ ಮರೆಯದೆ ಕಟ್ಟಿಕೊಂಡನು. ಕೃಷ್ಣ ಎದುರಾದಾಗ ತನ್ನೆಲ್ಲಾ ಕಷ್ಟಗಳನ್ನು ಮರೆತು ಆತನ ಆನಂದದಲ್ಲಿ ತಾನು ಒಂದಾದ ಸುಧಾಮ. ಕೃಷ್ಣನೋ ಬಹು ಜಾಣ. ಸುಧಾಮನ ಮನೆವಾರ್ತೆಯ ಕುರಿತು ಏನೇನೂ ವಿಚಾರಿಸದೆ ಗುರುಕುಲದ ಸಮಯವನ್ನು ಮೆಲುಕು ಹಾಕುವುದರಲ್ಲೇ ಕಳೆದ. ಜೊತೆಗಿದ್ದ ನಾಲ್ಲು ದಿನಗಳು ಸಂತೋಷವಾಗಿ ಕಳೆದವು. ಕೃಷ್ಣ ನಿಂದ ಬೀಳ್ಗೊಂಡು ತನ್ನೂರಿಗೆ ಬಂದಾಗಲೇ ಸುಧಾಮನರಿವಿಗೆ ಬಂದದ್ದು ಕೃಷ್ಣನ ಮಹಿಮೆಯೇನೆಂದು.
ಗೆಳೆತನವೆಂದರೆ ಹಾಗೇ ಹೇಳದೇ ಅರಿಯಬೇಕು ನೋವ, ಕೇಳದೇ ಕೊಡಬೇಕು ಅಕ್ಕರೆಯ, ಅಲ್ಲಿ ಕೊಡು ಕೊಳ್ಳುವ ವ್ಯವಹಾರಕ್ಕಿರಬಾರದು ಜಾಗ. ಗೆಳೆತನದ ಪ್ರೀತಿಯ ಮುಂದೆ ಬೇರೆಲ್ಲಾ ಗೌಣ. ಜೀವನದ ಎಲ್ಲಾ ಕ್ಷಣಗಳಲ್ಲಿ ಒಟ್ಟಿಗೇ ಇರ ಬೇಕೆಂದಿಲ್ಲ. ಶಾಲಾ ದಿನಗಳಲ್ಲಿ ಇದ್ದಂತೆ ಅವಾಗಾವಗ ಬೇಟಿಯಾಗುವುದು ಕಷ್ಟವೇ . ವಿವಿಧ ಕಾರಣಗಳಿಂದ ದೂರವಾಗಿರುವ ಗೆಳೆಯರು ಮಾನಸಿಕವಾಗಿ ಒಟ್ಟಿಗೇ ಇರುತ್ತಾರೆ. ಹೇಗೆಂದು ಅರ್ಥವಾಗದು. ತುಂಬಾ ಬೇಜಾರಾದಾಗ, ಮನಸಿಗೆ ಹಿಂಸೆಯೆನಿಸಿದಾಗ, ಒಂಟಿತನ ಕಾಡಿದಾಗ , ಇಂದು ಮಾತನಾಡಲೇ ಬೇಕು ಎನಿಸಿದಾಗ ನನ್ನ ಸ್ನೇಹಿತೆಯರು ಯಾವಾಗಲೂ ಸ್ಪಂಧಿಸುತ್ತಾರೆ ಎಂಬುದು ನನ್ನ ಭಾಗ್ಯವೇ ಸರಿ. ನಾನು ಹೆಮ್ಮೆಯಿಂದ ಹೇಳುವೆ ನನಗೂ ಭಾವನೆಗಳನ್ನು ಹಂಚಿಕೊಳ್ಳಲು ಮಿತ್ರರಿದ್ದಾರೆ ಎಂದು. ಎಲ್ಲರಿಗೂ Happy friendship day.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್ನಲ್ಲಿ ಪ್ರಧಾನಿ…
ಅಹಿಂಸೆಯೇ ಭಾರತದ ನೈಜ ಧರ್ಮವಾಗಿದೆ. ಆದರೆ, ಹಿಂಸಾಮಾರ್ಗದಲ್ಲಿ ಸಾಗುವವರ ದಮನ ಮಾಡುವುದೂ ಸಹ…
ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಪಾಕ್ ಪ್ರೇರಿತ ಭಯೋತ್ಪಾದಕರು ದಾಳಿ ನಡೆಸಿರುವ…
ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು…