Advertisement
ಅನುಕ್ರಮ

ಮನೆಯೇ ಮೊದಲ ಪಾಠ ಶಾಲೆ…

Share

ಮಗಳು ಬೆಳಿಗ್ಗೆ ಶಾಲೆಗೆ ಹೋದರೆ ಮನೆಗೆ ಬರೋದು ಸಾಯಂಕಾಲ. ಮುಂದಿನ ವರ್ಷದಿಂದ ಮಗನೂ ಶಾಲೆಗೆ ಹೋಗಲು ಪ್ರಾರಂಭಿಸುತ್ತಾನೆ. ಆಗ ನಾನು ಸ್ವಲ್ಪ ಫ್ರೀ. ಮಕ್ಕಳಿಬ್ಬರನ್ನೂ ಶಾಲೆಗೆ ಕಳುಹಿಸಿ ನಾನು ಸಿಕ್ಕ ಸಮಯದಲ್ಲಿ ಪತಿಯೊಡನೆ ಪೂರ್ಣ ಪ್ರಮಾಣದಲ್ಲಿ ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಅಂದುಕೊಂಡಿದ್ದೆ ಕಳೆದ ವರ್ಷ. ಎಲ್ಲಾ ನಾವಂದುಕೊಂಡಂತೆ ಆಗುವುದಿಲ್ಲ ಅನ್ನುವುದು ಅಕ್ಷರಷಃ ಸತ್ಯ ಅನ್ನೋ ಹಾಗೇ ನನ್ನ ಲೆಕ್ಕಾಚಾರಗಳು ಎಲ್ಲಾ ಉಲ್ಟಾಪಲ್ಟಾ ಹೊಡೆದಿವೆ..!! ಎಲ್ಲಾ ಕೊರೋನಾ ಮಹಾಮಾರಿಯ ಮಾಯೆ..

ಕೆಲಸದಲ್ಲಿ ಬದಲಾವಣೆಯಾದದ್ದಂತು ನಿಜ. ಅಮ್ಮನಾಗಿದ್ದವಳು “ಟೀಚರಮ್ಮ”ನಾಗಿದ್ದೇನೆ. ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಮಕ್ಕಳಿಗೆ ಪಾಠ ಶಾಲೆಗಳಲ್ಲಿಯೇ ಆಗುತ್ತಿತ್ತು. ಮನೆಗೆ ಮರಳಿದ ನಂತರ ಹೋಂವರ್ಕ್, ಅಲ್ಪ ಸ್ವಲ್ಪ ರಿವಿಜನ್ ಮಾಡಿಸಿದರೆ ಸಾಕಾಗುತ್ತಿತ್ತು.ಈಗ ಹಾಗಲ್ಲ ನೋಡಿ. ಎಲ್ಲಾ ಆನ್‍ಲೈನ್ ಕ್ಲಾಸ್‍ಗಳು. ಅದು ನಗರ ಪ್ರದೇಶಗಳಲ್ಲಿ ಸೀಮಿತ ಸಮಯದ ಲೈವ್‍ಕ್ಲಾಸ್ ನಡೆದರೆ, ಇಂಟರ್‍ನೆಟ್ ಸಮಸ್ಯೆ, ಇನ್ನೂ ನಾನಾ ಕಾರಣಗಳಿಂದ ಹಳ್ಳಿ ಪ್ರದೇಶಗಳಲ್ಲಿ ಸ್ವಲ್ಪ ವಿಭಿನ್ನ. ಹಾಗಾಗಿ ಟೀಚರ್ಸ್‍ಗಳು ಪುಟ್ಟ ಮಕ್ಕಳಿಗೆ ಪಾಠಮಾಡಿ ಆಡಿಯೋ- ವಿಡಿಯೋಗಳನ್ನು ಪೋಷಕರ ನಂಬರಿಗೆ ವಾಟ್ಸಾಪ್‍ ಮೂಲಕ ಕಳುಹಿಸುತ್ತಾರೆ.

ಮತ್ತೆ ಪ್ರಾರಂಭವಾಗುವುದು ಅಮ್ಮಂದಿರೆಲ್ಲಾ ಟೀಚರಮ್ಮ ಆಗುವ ಛಾಲೆಂಜಿಂಗ್ ಕೆಲಸ. ಕಾರ್ಟೂನ್, ಕತೆ, ಇನ್ನಿತರ ವಿಡಿಯೋಗಳನ್ನು ನೋಡಲು ಕರೆಯದೆ ಬರುವ ಮಕ್ಕಳನ್ನು ಪಾಠದ ವಿಷಯಕ್ಕೆ ಬಂದಾಗ ಒತ್ತಾಯಪೂರ್ವಕವಾಗಿ ಕೂರಿಸಬೇಕು. ಶಾಲೆಯಲ್ಲಾದರೆ ಸಮಪ್ರಾಯದ ಮಕ್ಕಳೊಡನೆ ಆಡುತ್ತಾ , ನಲಿಯುತ್ತಾ, ಅವನಿಂದ ಮೊದಲು ನಾನು ಮುಗಿಸಬೇಕೆನ್ನುವ ಕಾಂಪಿಟೀಷನ್‍ನಿಂದಾಗಿ ಸಲೀಸಾಗಿ ಓದಿ ಬರೆಯುವ ಮಕ್ಕಳು ಮನೆಯಲ್ಲಿಅಮ್ಮನೊಡನೆ ಮಾಡೋ ತಕರಾರು ನಾನಾ ತರಹ. ಪಾಠದ ನಡುವೆ ಆಗಾಗ ಬರುವ ತೂಕಡಿಕೆ, ಬಾಯಾರಿಕೆ, ಬೋರ್‍ನಿಂದ ಹೊರಬರಿಸಿ ಇಂಟರೆಸ್ಟಿಂಗ್ ಆಗಿ ಪಾಠದ ಆಡಿಯೋ ಕೇಳಿಸಿ, ಅದರ ಅರ್ಥ ಮಗುವಿಗೆ ಮನದಟ್ಟಾಗುವಂತೆ ಮಾಡಿಸಬೇಕಾದ ಅನಿವಾರ್ಯತೆ ಅಮ್ಮನದ್ದು.
ಅಂದ ಹಾಗೆ ಈಗ ಶಾಲೆಗೆ ಹೊರಡಿಸುವ ಗಡಿಬಿಡಿಯಿಲ್ಲ. ಲಂಚ್ ಬಾಕ್ಸ್‍ಗೆ ಏನು ತುಂಬಿಸಲಿ ಎನ್ನುವ ತಲೆಬಿಸಿ ಇಲ್ಲ. ಕಳೆದ ವರ್ಷ ಅನಿವಾರ್ಯ ಎನಿಸಿಕೊಂಡಿದ್ದ ವಸ್ತುಗಳು ಈಗ ಅನಿವಾರ್ಯವಲ್ಲ.

ಯುನಿಫಾರ್ಮ್ ಕಳೆದ ವರ್ಷ ಇಟ್ಟದ್ದುಇನ್ನೂ ಹಾಗೇ ಭದ್ರವಾಗಿ ಬೀರುವಿನಲ್ಲಿದೆ. ಸಾಕ್ಸ್, ಶೂ ಗಳು ಪುಟ್ಟು ಕಾಲುಗಳು ಯಾವಾಗ ನಮ್ಮನ್ನು ಧರಿಸುತ್ತವೆಯೋ ಎನ್ನುವ ಹಾಗೇ ಇಣುಕುತ್ತಿವೆ. ಮಕ್ಕಳೇ ಮೊಬೈಲ್ ಮುಟ್ಟಬೇಡಿ. ನಿಮಗಲ್ಲಅದು ಎನ್ನುತ್ತಿದ್ದ ಹೆತ್ತವರು ಈಗ ಮೊಬೈಲ್‍ನಲ್ಲಿ ಪಾಠ ನೋಡು ಎನ್ನುವಂತಾಗಿದೆ. ಮಕ್ಕಳ ಪಾಠದ ಸಲುವಾಗಿ ಸಾವಿರಾರು ರುಪಾಯಿ ವ್ಯಯಿಸಿ ನೆಟ್ ಬೂಸ್ಟರ್ ಹಾಕಿಸುತ್ತಿದ್ದಾರೆ. ಕಾಲಾಯ ತಸ್ಮೈ ನಮಃ ಎನ್ನುವುದು ಇದಕ್ಕೇ ಇರಬೇಕು.

ಸದ್ಯದ ಪರಿಸ್ಥಿತಿಯಲ್ಲಿ ಅಮ್ಮನ ಹೆಚ್ಚಿನ ಸಮಯ ಮಕ್ಕಳಿಗೆ ಮೀಸಲಾಗಬೇಕಿದೆ. ಏಕೆಂದರೆ ಸಮಯಕ್ಕೆ ಸರಿಯಾಗಿ ಪಾಠ, ನೋಟ್ಸ್, ಡಿಕ್ಟೇಷನ್, ಕಾಪಿ ರೈಟಿಂಗ್, ಪಾಠ ಓದಿಸುವುದು ಹೀಗೆ ಎಲ್ಲಾ ವಿಷಯಗಳಿಗೂ ಅಮ್ಮನೇ ಈಗಿರುವ ಏಕೈಕ ಟೀಚರ್. ಮಕ್ಕಳ ಪಾಠದ ವಿಷಯದಲ್ಲಿ ಪ್ರಸ್ತುತ ಶಾಲಾ ಶಿಕ್ಷಕಿಯರಿಗೆ 50% ಕೆಲಸವಾದರೆ ಇನ್ನರ್ಧ ಅಮ್ಮನ ಪಾಲಿಗಿದೆ. ಮನೆಯಲ್ಲೇ ಮಕ್ಕಳಿರುವ ಕಾರಣ ಕೇವಲ ಶಾಲಾ ಚಟುವಟಿಕೆಗೆ ಮಾತ್ರ ಮಕ್ಕಳನ್ನು ಸೀಮಿತಗೊಳಿಸದೆ ಮನೆಯ ಚಿಕ್ಕ ಪುಟ್ಟ ಕೆಲಸಕ್ಕೆ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದರಿಂದ ಪಠ್ಯೇತರ ಚಟುವಟಿಕೆ ಕೂಡಾ ಮನೆಯಲ್ಲೇ ದೊರೆತಂತಾಗುವುದು. ಅಮ್ಮನ ಉದಾಸೀನತೆ ಮಕ್ಕಳನ್ನು ಓದಿನ ವಿಷಯದಲ್ಲಿ ಹಿಂದಕ್ಕೆ ಕಳಿಸೀತು. ಮನೆಯೇ ಮೊದಲ ಪಾಠ ಶಾಲೆಯಾಗಲು ಇದು ಸಕಾಲ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಕೀಟನಾಶಕವೇ ರೈತರ ಜೀವಕ್ಕೆ ಕಂಟಕ…? ರಾಜಸ್ಥಾನದಲ್ಲಿ 2 ವರ್ಷದಲ್ಲಿ 535 ರೈತರ ಸಾವು – ಬೆಚ್ಚಿಬೀಳಿಸಿದ ವರದಿ..!

ರಾಜಸ್ಥಾನದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕೀಟನಾಶಕ ಬಳಕೆಯಿಂದ 535 ರೈತರು ಮೃತಪಟ್ಟಿರುವುದು ಬಹಿರಂಗವಾಗಿದೆ.…

5 hours ago

ಕೊಟ್ಟಿಯೂರು ದೇವಸ್ಥಾನದಲ್ಲಿ ‘ಬಾವಳಿಕೆಟ್ಟು’ ವಿವಾದ – ಮುಸ್ಲಿಂ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ, ನಿಜಾಂಶವೇನು?

ಕೊಟ್ಟಿಯೂರು ದೇವಸ್ಥಾನದಲ್ಲಿ ‘ಬಾವಳಿಕೆಟ್ಟು’ ಆಚರಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವಿವಾದ ಹುಟ್ಟಿಕೊಂಡಿದೆ.…

7 hours ago

ಹವಾಮಾನ ವರದಿ | 07.06.2026 | ಜೂನ್ 8ರಿಂದ ರಾಜ್ಯದಲ್ಲಿ ಮುಂಗಾರು ಚುರುಕು| ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ, ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ

ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆಗಳು ಜೂ. 8ರಿಂದ ಮತ್ತಷ್ಟು ಚುರುಕುಗೊಳ್ಳುವ ಲಕ್ಷಣಗಳು ಕಂಡುಬಂದಿದ್ದು, ಕರಾವಳಿ…

13 hours ago

“ಜಾಕ್‌ಫ್ರೂಟ್‌ ಹಬ್ಬ”ಕ್ಕೆ ಜನಸಾಗರ – 50 ಕ್ಕೂ ಹೆಚ್ಚು ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ

ಜೋಯಿಡಾದಲ್ಲಿ ನಡೆದ ಹಲಸು ಉತ್ಸವದಲ್ಲಿ 50ಕ್ಕೂ ಹೆಚ್ಚು ಮೌಲ್ಯವರ್ಧಿತ ಹಲಸಿನ ಉತ್ಪನ್ನಗಳು ಪ್ರದರ್ಶನಗೊಂಡು…

1 day ago

ಕ್ಯಾಂಪ್ಕೋ ಬ್ರಹ್ಮ ವಾರಣಾಶಿ ಸುಬ್ರಾಯ ಭಟ್‌ ಜನ್ಮಶತಮಾನೋತ್ಸವ ವರ್ಷ – ಅಡಿಕೆ ಬೆಳೆಗಾರರ ಬದುಕು ಬದಲಿಸಿದ ಮಹಾನ್ ದಾರ್ಶನಿಕ

ಕ್ಯಾಂಪ್ಕೋ ಸಂಸ್ಥಾಪಕ ವಾರಣಾಶಿ ಸುಬ್ರಾಯ ಭಟ್‌ ಅವರ ಜನ್ಮಕ್ಕೆ 99 ವರ್ಷಗಳು ಪೂರ್ಣಗೊಂಡಿದ್ದು,…

1 day ago

ಹವಾಮಾನ ವರದಿ | 06-06-2026 | ಮುಂಗಾರು ಬಂದರೂ ಮಳೆ ಇಲ್ಲ! – ಕರ್ನಾಟಕದಲ್ಲಿ ಮುಂದಿನ ವಾರದ ಹವಾಮಾನ ಹೇಗಿರಲಿದೆ?

ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದರೂ ಅದರ ಬಲ ಇನ್ನೂ ದುರ್ಬಲವಾಗಿದೆ. ಕರಾವಳಿಯಲ್ಲಿ ಜೂನ್ 8ರಿಂದ…

2 days ago