Advertisement
ಅನುಕ್ರಮ

ಇಂದು ಗೆಳೆಯರ ದಿನ | ಗೆಳೆಯರೇ ನಿಮಗೆ ಶುಭಾಶಯ…….

Share

ಮಾತಿಗೆ ಕಿವಿಯಾಗುವ, ದುಃಖಕ್ಕೆ ಮರುಗುವ, ನಗುವಾಗ ನಗುವ ,ಅಳುವಾಗ ಕಣ್ಣೊರೆಸುವ, ಬಿದ್ದಾಗ ಎಬ್ಬಿಸುವ, ನೋವಿನಲ್ಲಿರುವಾಗ ಬೆನ್ನು ತಟ್ಟಿ ಸಮಾಧಾನಿಸುವ ಮನಸಿರುವುದು‌ ಗೆಳೆಯರಿಗೆ ಮಾತ್ರ.

ಯಾವುದೇ ಸ್ವಾರ್ಥವಿಲ್ಲದ , ಪ್ರೀತಿ ಸಿಗುವುದು ಗೆಳೆತನದಲ್ಲಿ. ಜಗತ್ತಿನಲ್ಲಿ ಉದಾಹರಣೆ ಯಾಗಬಲ್ಲ ಹಲವು ಮಿತ್ರ ಜೋಡಿಗಳಿವೆ. ಅವುಗಳಲ್ಲೆಲ್ಲ ನನ್ನ ಮಟ್ಟಿಗೆ ಶ್ರೇಷ್ಠವಾದ , ಇಷ್ಟವಾದ ಜೀವದ ಗೆಳೆಯರೆಂದರೆ  ಕೃಷ್ಣ, ಸುಧಾಮರು. ನಿಸ್ವಾರ್ಥ ಸ್ನೇಹಕ್ಕೆ ಯಾವಾಗಲು ಸೂಕ್ತ ಉದಾಹರಣೆ. ಗುರುಕುಲದಲ್ಲಿ ವಿದ್ಯಾರ್ಥಿ ಗಳೆಲ್ಲರೂ ಸಮಾನರು. ಅಂತಸ್ತಿನ ಹಂಗು ಅಲ್ಲಿರಲಿಲ್ಲ. ಗುರುಗಳ ಮುಂದೆ ಎಲ್ಲರೂ ಸಮಾನರು. ಬದುಕಿನ ಕ್ಷಣಗಳು ದುರ್ಬರವಾದಾಗ ಸುಧಾಮನ ಪತ್ನಿ ಗೆಳೆಯನ ಸಹಾಯ ಕೇಳಬಹುದಲ್ಲವೆಂದರೂ ಮನಸಿಲ್ಲದ ಮನಸಿನಿಂದ ಕೃಷ್ಣ ನ ಬಳಿಗೆ ಹೊರಟನು. ಅವಲಕ್ಕಿ ಕೃಷ್ಣ ನಿಗೆ ಪ್ರೀತಿಯೆಂದು ಆತನಿಗಾಗಿ ಮರೆಯದೆ ಕಟ್ಟಿಕೊಂಡನು. ಕೃಷ್ಣ ಎದುರಾದಾಗ ತನ್ನೆಲ್ಲಾ ಕಷ್ಟಗಳನ್ನು ಮರೆತು ಆತನ ಆನಂದದಲ್ಲಿ ತಾನು ಒಂದಾದ ಸುಧಾಮ. ಕೃಷ್ಣನೋ ಬಹು ಜಾಣ. ಸುಧಾಮನ ಮನೆವಾರ್ತೆಯ ಕುರಿತು ಏನೇನೂ ವಿಚಾರಿಸದೆ ಗುರುಕುಲದ ಸಮಯವನ್ನು ಮೆಲುಕು ಹಾಕುವುದರಲ್ಲೇ ಕಳೆದ. ಜೊತೆಗಿದ್ದ ನಾಲ್ಲು ದಿನಗಳು ಸಂತೋಷವಾಗಿ ಕಳೆದವು. ಕೃಷ್ಣ ನಿಂದ ಬೀಳ್ಗೊಂಡು ತನ್ನೂರಿಗೆ ಬಂದಾಗಲೇ ಸುಧಾಮನರಿವಿಗೆ ಬಂದದ್ದು ಕೃಷ್ಣನ ಮಹಿಮೆಯೇನೆಂದು.

ಗೆಳೆತನವೆಂದರೆ ಹಾಗೇ ಹೇಳದೇ ಅರಿಯಬೇಕು ನೋವ, ಕೇಳದೇ ಕೊಡಬೇಕು‌‌ ಅಕ್ಕರೆಯ, ಅಲ್ಲಿ ಕೊಡು ಕೊಳ್ಳುವ ವ್ಯವಹಾರಕ್ಕಿರಬಾರದು ಜಾಗ. ಗೆಳೆತನದ ಪ್ರೀತಿಯ ಮುಂದೆ ಬೇರೆಲ್ಲಾ ಗೌಣ. ಜೀವನದ ಎಲ್ಲಾ ಕ್ಷಣಗಳಲ್ಲಿ ಒಟ್ಟಿಗೇ ಇರ ಬೇಕೆಂದಿಲ್ಲ. ಶಾಲಾ ದಿನಗಳಲ್ಲಿ ಇದ್ದಂತೆ ಅವಾಗಾವಗ ಬೇಟಿಯಾಗುವುದು ಕಷ್ಟವೇ . ವಿವಿಧ ಕಾರಣಗಳಿಂದ ದೂರವಾಗಿರುವ ಗೆಳೆಯರು ಮಾನಸಿಕವಾಗಿ ಒಟ್ಟಿಗೇ ಇರುತ್ತಾರೆ. ಹೇಗೆಂದು ಅರ್ಥವಾಗದು. ತುಂಬಾ ಬೇಜಾರಾದಾಗ, ಮನಸಿಗೆ ಹಿಂಸೆಯೆನಿಸಿದಾಗ, ಒಂಟಿತನ ಕಾಡಿದಾಗ , ಇಂದು ಮಾತನಾಡಲೇ ಬೇಕು ಎನಿಸಿದಾಗ ನನ್ನ ಸ್ನೇಹಿತೆಯರು ಯಾವಾಗಲೂ ಸ್ಪಂಧಿಸುತ್ತಾರೆ ಎಂಬುದು ನನ್ನ ಭಾಗ್ಯವೇ ಸರಿ. ನಾನು ಹೆಮ್ಮೆಯಿಂದ ಹೇಳುವೆ ನನಗೂ ಭಾವನೆಗಳನ್ನು ಹಂಚಿಕೊಳ್ಳಲು ಮಿತ್ರರಿದ್ದಾರೆ ಎಂದು. ಎಲ್ಲರಿಗೂ   Happy friendship day.

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 16-08-2026 | ಕರಾವಳಿ–ಮಲೆನಾಡಿನಲ್ಲಿ ಮಳೆ ಕಡಿಮೆ – ಉತ್ತರ ಒಳನಾಡಿನಲ್ಲಿ 19 ರಿಂದ ಮಳೆ ಹೆಚ್ಚಳ ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 24ರವರೆಗೂ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…

16 hours ago

ಗ್ರಾಮೀಣ ಸಂಪರ್ಕಕ್ಕೆ 15 ಸಾವಿರ ಹೊಸ ಬಸ್‌ಗಳು: ಸಾರಿಗೆ ಸಚಿವ

ಗ್ರಾಮೀಣ ಹಾಗೂ ಸಾರಿಗೆ ಸಂಪರ್ಕದಿಂದ ವಂಚಿತ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸೇವೆ ಹೆಚ್ಚಿಸುವ…

21 hours ago

ಹವಾಮಾನ ವರದಿ | 15-08-2026 | ಕರಾವಳಿಯಲ್ಲಿ ಮುಂದಿನ 10 ದಿನವೂ ಮಳೆ ಚದುರಿಕೆ; ಒಳನಾಡಿನಲ್ಲಿ ಆಗಸ್ಟ್ 18–19ರಿಂದ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮಳೆ ಚಟುವಟಿಕೆ ಸದ್ಯಕ್ಕೆ ಇಳಿಕೆಯಾಗಿದ್ದು, ಕರಾವಳಿಯಲ್ಲಿ ಮುಂದಿನ 10 ದಿನವೂ ಚದುರಿದ…

2 days ago

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

2 days ago

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

2 days ago

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

3 days ago