Advertisement
MIRROR FOCUS

ಈ ಬಾರಿಯೂ ಅಡಿಕೆ ಬೆಳೆಗಾರರನ್ನು ಕಾಡಿತು ಕೊಳೆರೋಗ

Share

ಅಡಿಕೆಗೆ ಕೊಳೆರೋಗ ಬಾಧಿಸಿದೆ. ಕೆಲವು ಕಡೆಗಳಲ್ಲಿ ವಿಪರೀತವಾದ ಕೊಳೆರೋಗ ಕಂಡುಬಂದಿದೆ. ಸುಳ್ಯ , ಪುತ್ತೂರು, ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ  ಕೊಳೆರೋಗ ಈಗ ಸದ್ದು ಮಾಡುತ್ತಿದೆ. ಎರಡು ಬಾರಿ ಔಷಧಿ ಸಿಂಪಡಣೆ ನಂತರವೂ ಕೊಳೆರೋಗ ಕಂಡುಬಂದಿರುವುದು ಬೆಳೆಗಾರಿಗೆ ಆತಂಕ ಮೂಡಿಸಿದೆ. 


ಅಡಿಕೆಗೆ ಈ ಬಾರಿಯೂ ಕೊಳೆರೋಗ ಬಾಧಿಸಿದೆ. ಕಳೆದ ವರ್ಷ ಭಾರೀ ಮಳೆಯ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರು ಕಂಗಾಲಾಗಿದ್ದರು. ಶೇ.70 ರಷ್ಟು ಅಡಿಕೆ ನಾಶವಾಗಿತ್ತು. ಅದರ ಹೊಡೆತದಿಂದ ಹೊರಬರುವ ಹೊತ್ತಿಗೆ ಈ ಬಾರಿಯೂ ಭಾರೀ ಮಳೆಯ ಕಾರಣದಿಂದ ಮತ್ತೆ ಕೊಳೆರೋಗ ವಕ್ಕರಿಸಿದೆ. ಹಲವು ತೋಟಗಳಲ್ಲಿ ಅಡಿಕೆ ಉದುರುತ್ತಿದೆ. ಬೆಳೆಗಾರರಿಗೆ ಹೊಡೆತದ ಮೇಲೆ ಹೊಡೆತ ಬಿದ್ದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಇದೆ. ಹಾಗಿದ್ದರೂ ಒಮ್ಮೆಲೇ ಸುರಿದ ಭಾರೀ ಮಳೆ ಅಡಿಕೆಗೆ ಸಂಕಷ್ಟ ತಂದಿದೆ. ಕಳೆದ ಬಾರಿಯ ರೋಗ ಬಾಧೆಗೆ ತತ್ತರಿಸಿದ್ದ ಅಡಿಕೆ ಮರಕ್ಕೆ ಈ ಬಾರಿಯ ಮಳೆಗೆ ತಕ್ಷಣವೇ ಶೀಲೀಂದ್ರವು ಚುರುಕಾಗಿ ಕೊಳೆರೋಗಕ್ಕೆ ಕಾರಣವಾಗಿದೆ. ಪುತ್ತೂರು ತಾಲೂಕಿನ ಹಲವು ಕಡೆಗಳಲ್ಲಿ  ಕೊಳೆರೋಗ ಕಂಡುಬಂದರೆ ಸುಳ್ಯ ತಾಲೂಕಿನ ಬೆಳ್ಳಾರೆ, ಪಂಜ ಸೇರಿದಂತೆ ವಿವಿಧ ಕಡೆಯ ಬೆಳೆಗಾರರು ಕೊಳೆರೋಗ ಇರುವ ಬಗ್ಗೆ ಹೇಳುತ್ತಾರೆ. ಎರಡು ಬಾರಿ ಔಷಧಿ ಸಿಂಪಡನೆ ನಂತರವೂ ಕೊಳೆರೋಗ ಬಾಧಿಸಿಸುತ್ತಿದೆ ಎಂದು ಬೆಳೆಗಾರರು ಅಳಲು ತೋಡುತ್ತಾರೆ. ಹೀಗಾಗಿ ಏನೂ ಮಾಡಲಾಗದೆ ಕೈಚೆಲ್ಲಿ ಕುಳಿತುಕಜೊಳ್ಳಬೇಕಾದ ಸ್ಥಿತಿ ಇದೆ. ಸಪ್ಟಂಬರ್ ವರೆಗೆ ಕೊಳೆರೋಗದ ಲಕ್ಷಣ ಇರಲಿಲ್ಲ. ನಂತರ ಕಾಣಿಸಿದೆ ಎಂದು ಕೃಷಿಕ ಜಯಗೋವಿಂದ ಹೇಳಿದರೆ  ಪುತ್ತೂರು ತಾಲೂಕಿನ ಕರ್ನೂರಿನ ಸತೀಶ್ ಅವರು ಹೇಳುವಂತೆ ಕಳೆದ ವರ್ಷದಷ್ಟೇ ಈ ಬಾರಿ ಕೊಳೆರೋಗ ಬಾಧಿಸಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಾಗಿದೆ ಎನ್ನುತ್ತಾರೆ.

ಪುತ್ತೂರು ತಾಲೂಕಿನ ಕರ್ನೂರಿನ ಸತೀಶ್ ಅವರ ತೋಟದಲ್ಲಿ

ಹಾಗೆ ನೋಡಿದರೆ ಕೊನೆಯ ಈ ಅವಧಿಯಲ್ಲಿ ಮಳೆ ಹೆಚ್ಚಾಗಿದೆ. ಬಾಳಿಲದ ಪಿ ಜಿ ಎಸ್ ಎನ್ ಪ್ರಸಾದ್ ಅವರ ಮಾಹಿತಿ ಪ್ರಕಾರ ಪೂರ್ವಫಲ್ಗುಣಿ ಅಥವಾ ಹುಬ್ಬಾ ನಕ್ಷತ್ರ (ಆಗಸ್ಟ್ 31 – ಸೆಪ್ಟೆಂಬರ್ 12) ದ ಅವಧಿಯಲ್ಲಿ ದಾಖಲಾದ ಮಳೆ = 813 ಮಿ.ಮೀ. ಕಳೆದ ವರ್ಷ ಕೇವಲ 52 ಮಿ.ಮೀ.

ಸರಾಸರಿ (ಮಿ.ಮೀ.ಗಳಲ್ಲಿ)
1976 – 2000 = 196
2001 – 2019 = 269
1976 – 2019 = 228
ಗರಿಷ್ಟ = 813 ( 2019 )
ದ್ವಿತೀಯ ಗರಿಷ್ಟ=613 ( 2007 )
ಕನಿಷ್ಟ =028 (1991 )

ದಿನವೊಂದರಲ್ಲಿ ದಾಖಲಾದ ಗರಿಷ್ಟ ಮಳೆ 158 ಮಿ.ಮೀ (8/9/2019)

ತಕ್ಷಣವೇ ಗಮನಹರಿಸುವುದು  ಸೂಕ್ತ:

ಆಡಳಿತವು ತಕ್ಷಣವೇ ಬೆಳೆಗಾರರ ಸಂಕಷ್ಟದ ಕಡೆಗೆ ಗಮನಹರಿಸಬೇಕಿದೆ. ಏಕೆಂದರೆ ಸತತ ಎರಡು ವರ್ಷ ಕೊಳೆರೋಗದಿಂದ ಅಡಿಕೆ ನಾಶವಾಗಿದೆ. ಅಡಿಕೆ ಬೆಳೆಗಾರರಿಗೆ ಇಡೀ ವರ್ಷದ ಆದಾಯವೂ ಇದೇ ಆಗಿದೆ. ಹೀಗಾಗಿ ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ ಏನು ಮಾಡಬಹುದು  ಎಂಬುದರ ಬಗ್ಗೆ ಚಿಂತನೆ ನಡೆಸಬೇಕಿದೆ. ಏಕೆಂದರೆ ಸತತ ಎರಡು ವರ್ಷಗಳಿಂದ ಅಡಿಕೆಗೆ ವ್ಯಾಪಕವಾಗಿ ಕೊಳೆರೊಗ ಬಾಧಿಸಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಇಂಡೋನೇಷ್ಯಾದ ಸ್ಟಾರ್ಟ್‌ಅಪ್‌ನಿಂದ ಬಾಂಗ್ಲಾದೇಶ, ಮಾಲ್ಡೀವ್ಸ್‌ಗೆ ಅಡಿಕೆ ರಫ್ತು – ಜಾಗತಿಕ ಮಾರುಕಟ್ಟೆಯಲ್ಲಿ ಅಡಿಕೆಗೆ ಬೇಡಿಕೆ ಹೆಚ್ಚಳ

ಇಂಡೋನೇಷ್ಯಾದ ಸ್ಟಾರ್ಟ್‌ಅಪ್ ಸಂಸ್ಥೆ ಬಾಂಗ್ಲಾದೇಶ ಹಾಗೂ ಮಾಲ್ಡೀವ್ಸ್‌ಗೆ ಅಡಿಕೆ ರಫ್ತು ಮಾಡಿದೆ. ಜಾಗತಿಕ…

10 hours ago

ಬಿಡದಿ ಟೌನ್‌ಶಿಪ್‌ಗೆ 2 ಲಕ್ಷಕ್ಕೂ ಹೆಚ್ಚು ಮರಗಳ ಕತ್ತರಿ…? – ಯೋಜನೆಗೆ ಪರಿಸರವಾದಿಗಳು, ರೈತರಿಂದ ತೀವ್ರ ವಿರೋಧ

ಬಿದದಿ ಎಐ ಟೌನ್‌ಶಿಪ್ ಯೋಜನೆಗಾಗಿ ಸುಮಾರು 2 ಲಕ್ಷ ಮರಗಳನ್ನು ಕಡಿಯಬೇಕಾಗುವ ಸಾಧ್ಯತೆ…

10 hours ago

ಹವಾಮಾನ ವರದಿ | 16-06-2026 | ರಾಜ್ಯದಲ್ಲಿ ಇನ್ನೂ ದುರ್ಬಲ ಮಳೆ ಚಟುವಟಿಕೆ – ಜೂ.22 ರಿಂದ ಕರಾವಳಿಯಲ್ಲಿ ಮುಂಗಾರು ಚೇತರಿಕೆ ಸಾಧ್ಯತೆ

ರಾಜ್ಯದಲ್ಲಿ ಮುಂಗಾರು ಅತಿ ದುರ್ಬಲವಾಗಿದ್ದು, ಜೂನ್ 22 ರಿಂದ ಕರಾವಳಿ ಭಾಗದಲ್ಲಿ ಅಲ್ಪ…

16 hours ago

ಅಡಿಕೆ ಒಡೆದು ಉದುರುತ್ತಿದೆಯೇ..? ಕಾರಣ ಕೇವಲ ಬೋರಾನ್ ಕೊರತೆ ಅಷ್ಟೇ ಅಲ್ಲ- ಕೀಟವೂ ಇರಬಹುದು ಎನ್ನುತ್ತಾರೆ ವಿಜ್ಞಾನಿಗಳು

ಅಡಿಕೆ ಒಡೆದು ಬೀಳುವ ಸಮಸ್ಯೆಗೆ ಬೋರಾನ್ ಕೊರತೆ ಮಾತ್ರವಲ್ಲ, ಪೆರಿಯಾಂತ್ ಮೈಟ್ ಕೀಟದ…

1 day ago

ಎಲ್ ನಿನೋ ಅಧಿಕೃತವಾಗಿ ಆರಂಭ – ಕರಾವಳಿ ಕರ್ನಾಟಕದ ಮಳೆ ಮೇಲೆ ಪರಿಣಾಮ ಬೀಳುತ್ತಾ? ಹವಾಮಾನ ಇಲಾಖೆ ನಿಗಾ

ಭಾರತೀಯ ಹವಾಮಾನ ಇಲಾಖೆ ಎಲ್ ನಿನೋ ಆರಂಭಗೊಂಡಿರುವುದನ್ನು ಅಧಿಕೃತವಾಗಿ ದೃಢಪಡಿಸಿದೆ. ಕರಾವಳಿ ಕರ್ನಾಟಕದಲ್ಲಿ…

1 day ago

ಬರಗಾಲದಿಂದ ಹೆಚ್ಚಾಗಬಹುದು ಆ್ಯಂಟಿಬಯೋಟಿಕ್ ಪ್ರತಿರೋಧ..! ಹೊಸ ಸಂಶೋಧನೆಯ ಎಚ್ಚರಿಕೆ

ಬರಗಾಲದ ಪರಿಸ್ಥಿತಿಗಳು ಮಣ್ಣಿನಲ್ಲಿನ ಬ್ಯಾಕ್ಟೀರಿಯಾಗಳಲ್ಲಿ ಆ್ಯಂಟಿಬಯೋಟಿಕ್ ಪ್ರತಿರೋಧ ಹೆಚ್ಚಿಸಲು ಕಾರಣವಾಗಬಹುದು ಎಂದು ಹೊಸ…

2 days ago