Advertisement
MIRROR FOCUS

ಈ ಬಾರಿಯೂ ಅಡಿಕೆ ಬೆಳೆಗಾರರನ್ನು ಕಾಡಿತು ಕೊಳೆರೋಗ

Share

ಅಡಿಕೆಗೆ ಕೊಳೆರೋಗ ಬಾಧಿಸಿದೆ. ಕೆಲವು ಕಡೆಗಳಲ್ಲಿ ವಿಪರೀತವಾದ ಕೊಳೆರೋಗ ಕಂಡುಬಂದಿದೆ. ಸುಳ್ಯ , ಪುತ್ತೂರು, ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ  ಕೊಳೆರೋಗ ಈಗ ಸದ್ದು ಮಾಡುತ್ತಿದೆ. ಎರಡು ಬಾರಿ ಔಷಧಿ ಸಿಂಪಡಣೆ ನಂತರವೂ ಕೊಳೆರೋಗ ಕಂಡುಬಂದಿರುವುದು ಬೆಳೆಗಾರಿಗೆ ಆತಂಕ ಮೂಡಿಸಿದೆ. 


ಅಡಿಕೆಗೆ ಈ ಬಾರಿಯೂ ಕೊಳೆರೋಗ ಬಾಧಿಸಿದೆ. ಕಳೆದ ವರ್ಷ ಭಾರೀ ಮಳೆಯ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರು ಕಂಗಾಲಾಗಿದ್ದರು. ಶೇ.70 ರಷ್ಟು ಅಡಿಕೆ ನಾಶವಾಗಿತ್ತು. ಅದರ ಹೊಡೆತದಿಂದ ಹೊರಬರುವ ಹೊತ್ತಿಗೆ ಈ ಬಾರಿಯೂ ಭಾರೀ ಮಳೆಯ ಕಾರಣದಿಂದ ಮತ್ತೆ ಕೊಳೆರೋಗ ವಕ್ಕರಿಸಿದೆ. ಹಲವು ತೋಟಗಳಲ್ಲಿ ಅಡಿಕೆ ಉದುರುತ್ತಿದೆ. ಬೆಳೆಗಾರರಿಗೆ ಹೊಡೆತದ ಮೇಲೆ ಹೊಡೆತ ಬಿದ್ದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಇದೆ. ಹಾಗಿದ್ದರೂ ಒಮ್ಮೆಲೇ ಸುರಿದ ಭಾರೀ ಮಳೆ ಅಡಿಕೆಗೆ ಸಂಕಷ್ಟ ತಂದಿದೆ. ಕಳೆದ ಬಾರಿಯ ರೋಗ ಬಾಧೆಗೆ ತತ್ತರಿಸಿದ್ದ ಅಡಿಕೆ ಮರಕ್ಕೆ ಈ ಬಾರಿಯ ಮಳೆಗೆ ತಕ್ಷಣವೇ ಶೀಲೀಂದ್ರವು ಚುರುಕಾಗಿ ಕೊಳೆರೋಗಕ್ಕೆ ಕಾರಣವಾಗಿದೆ. ಪುತ್ತೂರು ತಾಲೂಕಿನ ಹಲವು ಕಡೆಗಳಲ್ಲಿ  ಕೊಳೆರೋಗ ಕಂಡುಬಂದರೆ ಸುಳ್ಯ ತಾಲೂಕಿನ ಬೆಳ್ಳಾರೆ, ಪಂಜ ಸೇರಿದಂತೆ ವಿವಿಧ ಕಡೆಯ ಬೆಳೆಗಾರರು ಕೊಳೆರೋಗ ಇರುವ ಬಗ್ಗೆ ಹೇಳುತ್ತಾರೆ. ಎರಡು ಬಾರಿ ಔಷಧಿ ಸಿಂಪಡನೆ ನಂತರವೂ ಕೊಳೆರೋಗ ಬಾಧಿಸಿಸುತ್ತಿದೆ ಎಂದು ಬೆಳೆಗಾರರು ಅಳಲು ತೋಡುತ್ತಾರೆ. ಹೀಗಾಗಿ ಏನೂ ಮಾಡಲಾಗದೆ ಕೈಚೆಲ್ಲಿ ಕುಳಿತುಕಜೊಳ್ಳಬೇಕಾದ ಸ್ಥಿತಿ ಇದೆ. ಸಪ್ಟಂಬರ್ ವರೆಗೆ ಕೊಳೆರೋಗದ ಲಕ್ಷಣ ಇರಲಿಲ್ಲ. ನಂತರ ಕಾಣಿಸಿದೆ ಎಂದು ಕೃಷಿಕ ಜಯಗೋವಿಂದ ಹೇಳಿದರೆ  ಪುತ್ತೂರು ತಾಲೂಕಿನ ಕರ್ನೂರಿನ ಸತೀಶ್ ಅವರು ಹೇಳುವಂತೆ ಕಳೆದ ವರ್ಷದಷ್ಟೇ ಈ ಬಾರಿ ಕೊಳೆರೋಗ ಬಾಧಿಸಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಾಗಿದೆ ಎನ್ನುತ್ತಾರೆ.

ಪುತ್ತೂರು ತಾಲೂಕಿನ ಕರ್ನೂರಿನ ಸತೀಶ್ ಅವರ ತೋಟದಲ್ಲಿ

ಹಾಗೆ ನೋಡಿದರೆ ಕೊನೆಯ ಈ ಅವಧಿಯಲ್ಲಿ ಮಳೆ ಹೆಚ್ಚಾಗಿದೆ. ಬಾಳಿಲದ ಪಿ ಜಿ ಎಸ್ ಎನ್ ಪ್ರಸಾದ್ ಅವರ ಮಾಹಿತಿ ಪ್ರಕಾರ ಪೂರ್ವಫಲ್ಗುಣಿ ಅಥವಾ ಹುಬ್ಬಾ ನಕ್ಷತ್ರ (ಆಗಸ್ಟ್ 31 – ಸೆಪ್ಟೆಂಬರ್ 12) ದ ಅವಧಿಯಲ್ಲಿ ದಾಖಲಾದ ಮಳೆ = 813 ಮಿ.ಮೀ. ಕಳೆದ ವರ್ಷ ಕೇವಲ 52 ಮಿ.ಮೀ.

ಸರಾಸರಿ (ಮಿ.ಮೀ.ಗಳಲ್ಲಿ)
1976 – 2000 = 196
2001 – 2019 = 269
1976 – 2019 = 228
ಗರಿಷ್ಟ = 813 ( 2019 )
ದ್ವಿತೀಯ ಗರಿಷ್ಟ=613 ( 2007 )
ಕನಿಷ್ಟ =028 (1991 )

ದಿನವೊಂದರಲ್ಲಿ ದಾಖಲಾದ ಗರಿಷ್ಟ ಮಳೆ 158 ಮಿ.ಮೀ (8/9/2019)

ತಕ್ಷಣವೇ ಗಮನಹರಿಸುವುದು  ಸೂಕ್ತ:

ಆಡಳಿತವು ತಕ್ಷಣವೇ ಬೆಳೆಗಾರರ ಸಂಕಷ್ಟದ ಕಡೆಗೆ ಗಮನಹರಿಸಬೇಕಿದೆ. ಏಕೆಂದರೆ ಸತತ ಎರಡು ವರ್ಷ ಕೊಳೆರೋಗದಿಂದ ಅಡಿಕೆ ನಾಶವಾಗಿದೆ. ಅಡಿಕೆ ಬೆಳೆಗಾರರಿಗೆ ಇಡೀ ವರ್ಷದ ಆದಾಯವೂ ಇದೇ ಆಗಿದೆ. ಹೀಗಾಗಿ ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ ಏನು ಮಾಡಬಹುದು  ಎಂಬುದರ ಬಗ್ಗೆ ಚಿಂತನೆ ನಡೆಸಬೇಕಿದೆ. ಏಕೆಂದರೆ ಸತತ ಎರಡು ವರ್ಷಗಳಿಂದ ಅಡಿಕೆಗೆ ವ್ಯಾಪಕವಾಗಿ ಕೊಳೆರೊಗ ಬಾಧಿಸಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 17 – 08 -2026 | ಕರ್ನಾಟಕದಲ್ಲಿ ಮುಂದಿನ ದಿನಗಳ ಹವಾಮಾನ ಹೇಗಿರಲಿದೆ?

ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 10 ದಿನಗಳವರೆಗೆ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…

2 hours ago

₹2,500 ಕೋಟಿಗೂ ಅಧಿಕ ತೆರಿಗೆ ವಂಚನೆ ಪತ್ತೆ..! ಅಡಿಕೆ ಆಮದು ಜಾಲದ ಹಿಂದೆ ಏನಿತ್ತು?

ದಕ್ಷಿಣ-ಪೂರ್ವ ಏಷ್ಯಾದಿಂದ ಆಮದು ಮಾಡಿದ ಅಡಿಕೆಯನ್ನು ಬಾಂಗ್ಲಾದೇಶ ಮೂಲದ ಅಡಿಕೆಯೆಂದು ತಪ್ಪಾಗಿ ಘೋಷಿಸಿ…

9 hours ago

ಹವಾಮಾನ ವರದಿ | 16-08-2026 | ಕರಾವಳಿ–ಮಲೆನಾಡಿನಲ್ಲಿ ಮಳೆ ಕಡಿಮೆ – ಉತ್ತರ ಒಳನಾಡಿನಲ್ಲಿ 19 ರಿಂದ ಮಳೆ ಹೆಚ್ಚಳ ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 24ರವರೆಗೂ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…

1 day ago

ಗ್ರಾಮೀಣ ಸಂಪರ್ಕಕ್ಕೆ 15 ಸಾವಿರ ಹೊಸ ಬಸ್‌ಗಳು: ಸಾರಿಗೆ ಸಚಿವ

ಗ್ರಾಮೀಣ ಹಾಗೂ ಸಾರಿಗೆ ಸಂಪರ್ಕದಿಂದ ವಂಚಿತ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸೇವೆ ಹೆಚ್ಚಿಸುವ…

1 day ago

ಹವಾಮಾನ ವರದಿ | 15-08-2026 | ಕರಾವಳಿಯಲ್ಲಿ ಮುಂದಿನ 10 ದಿನವೂ ಮಳೆ ಚದುರಿಕೆ; ಒಳನಾಡಿನಲ್ಲಿ ಆಗಸ್ಟ್ 18–19ರಿಂದ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮಳೆ ಚಟುವಟಿಕೆ ಸದ್ಯಕ್ಕೆ ಇಳಿಕೆಯಾಗಿದ್ದು, ಕರಾವಳಿಯಲ್ಲಿ ಮುಂದಿನ 10 ದಿನವೂ ಚದುರಿದ…

2 days ago

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

2 days ago