Advertisement
Exclusive - Mirror Hunt

ಎಚ್ಚರಿಕೆ…. ನಾಕೂರುಗಯದಲ್ಲಿ ಮೊಸಳೆ ಇದೆ….!

Share

ಪಂಜ: ಎಚ್ಚರಿಕೆ…. ಎಚ್ಚರಿಕೆ… ಕಡಬ ತಾಲೂಕಿನ ನಾಕೂರುಗಯದಲ್ಲಿ  ಮೊಸಳೆ ಇದೆ. ತೀರ್ಥಸ್ನಾನ ಮಾಡುವ ಭಕ್ತರೇ, ನದಿಗೆ ಹಾಲೆರೆಯುವ ಭಕ್ತರೇ ಸ್ವಲ್ಪ ಗಮನಿಸಿಕೊಳ್ಳಿ.

Advertisement
Advertisement

 

Advertisement

ಕಡಬ ತಾಲೂಕಿನ ಪುಳಿಕುಕ್ಕು ಬಳಿಯ ನಾಕೂರುಗಯದಲ್ಲಿ ಮೊಸಳೆ ಕಂಡುಬಂದಿದೆ. ಈ ಮೊಸಳೆ ಗಯದಲ್ಲಿ ಮಾತ್ರವಲ್ಲ ಪುಳಿಕುಕ್ಕು ಪ್ರದೇಶದ ಕುಮಾರಧಾರಾ ನದಿಯಲ್ಲಿ  ಓಡಾಡುತ್ತಿರುತ್ತದೆ ಎಂದು ಈಗ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ನದಿ ಸಮೀಪದ ಕೃಷಿಕರ ನಾಯಿಯನ್ನು ಹಿಡಿದಿದೆ ಎಂದೂ ತಿಳಿಸಿದ್ದಾರೆ.

Advertisement

Advertisement

ನಾಕೂರುಗಯಕ್ಕೆ ಅನೇಕ ಭಕ್ತಾದಿಗಳು ಪ್ರತಿದಿನ ಆಗಮಿಸುತ್ತಾರೆ. ತೀರ್ಥಸ್ನಾನ ಮಾಡಲು ಆಗಮಿಸಿದರೆ, ಇನ್ನೂ ಕೆಲವರು ನದಿಗೆ ಹಾಲು ಬಿಡಲು ಆಗಮಿಸುತ್ತಾರೆ. ಈ ನಾಕೂರುಗಯದಲ್ಲಿ ನೀರಿನ ಒಳಗಡೆ ದೇವಸ್ಥಾನ ಇದೆ ಎಂಬ ನಂಬಿಕೆ ಭಕ್ತರಲ್ಲಿದೆ ಇದೆ. ಹೀಗಾಗಿ ಭಕ್ತಿಯಿಂದ ಆಗಮಿಸುವ ಜನರಿಗೆ ಮೊಸಳೆಯ ಸಂಗತಿ ತಿಳಿಯದೆ ನೀರಿಗೆ ಇಳಿಯುವ ಸಂದರ್ಭ ಅಪಾಯ ಆಗುವ ಸಾಧ್ಯತೆ ಇದೆ. ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಮೊಸಳೆ ವ್ಯಕ್ತಿಯನ್ನು ಹಿಡಿದುಕೊಂಡು ಮೊಸಳೆ ನೀರೊಳಗೆ ಮುಳುಗಿದ ದೃಶ್ಯ ಹರಿದಾಡುತ್ತಿತ್ತು. ಈಗ ಇಲ್ಲೂ ಅಂತಹ ಅಪಾಯ ತಪ್ಪಿಸಲು ಕ್ರಮ ಆಗಬೇಕಿದೆ. ಜಾಗೃತಿ ಮೂಡಬೇಕಿದೆ.

Advertisement

ಈ ಕಾರಣದಿಂದ ಅರಣ್ಯ ಇಲಾಖೆ ಹಾಗೂ ಸ್ಥಳೀಯ ಪಂಚಾಯತ್ ಗಮನಿಸಿ ಸೂಚನಾ ಫಲಕ ಅಳವಡಿಕೆ ಮಾಡಬೇಕಿದೆ. ಎಚ್ಚರಿಕಾ ಫಲಕ ಅಳವಡಿಕೆ ಬಗ್ಗೆ ನಾಕೂರು ಗಯ ಹಿತರಕ್ಷಣಾ ವೇದಿಕೆಯೂ ಗಮನಹರಿಸಬೇಕಿದೆ.

 

Advertisement
  • ಚಿತ್ರ ಕೃಪೆ: ಶಿವಸುಬ್ರಹ್ಮಣ್ಯ  ಕಲ್ಮಡ್ಕ , ಪತ್ರಕರ್ತ
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

View Comments

Published by
ದ ರೂರಲ್ ಮಿರರ್.ಕಾಂ

Recent Posts

ದಿಢೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣ | ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ |

ದಶಕಗಳ ಹಿಂದೆ ವಿಮಾ ಸಂಸ್ಥೆಯೊಂದು ಸಾಗವಾನಿ ಬೆಳೆಯಲು ರೈತರ ಷೇರು ಪಡೆದುಕೊಂಡು ಹತ್ತೊ…

9 hours ago

ಮಾವು ಮಾಂತ್ರಿಕ ಹಾಗೂ ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ

ನಾಡು ಮಾವು ಸಂರಕ್ಷಣೆ ಕೆಲಸದ ಮೊದಲ ದಿನವದು. ನವೆಂಬರ್ 2022. ಕಸಿ ಕಡ್ಡಿಗಳನ್ನು…

9 hours ago

ಭಾರತದಲ್ಲಿ ಏರಿದ ತಾಪಮಾನ | ಅತ್ತ ತಾಂಜೇನಿಯಾದಲ್ಲಿ ಭಾರೀ ಮಳೆ, ಪ್ರವಾಹ | 155 ಮಂದಿ ಸಾವು |

ಭಾರತದಲ್ಲಿ(India) ಉರಿ ಬಿಸಿಲಿನ ತಾಪ(Heat) ಏರುತ್ತಿದ್ದರೆ ತಾಂಜೇನಿಯಾದಲ್ಲಿ (Tanzania) ಕಳೆದ ವಾರದಿಂದ ಭಾರೀ…

13 hours ago

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು | ದೂರ ಸಾಗಿದ ಮಳೆ | ಬಿಸಿ ಗಾಳಿಯ ಮುನ್ಸೂಚನೆ |

ಮಳೆ ಬರುವ ಕುರುಹೇ ಇಲ್ಲ. ಎಲ್ಲೆಲ್ಲೂ ಬಿಸಿಗಾಳಿಯ ಅಬ್ಬರ, ನೆತ್ತಿ ಸುಡುವ ಸೂರ್ಯ. ರಾಜ್ಯಾದ್ಯಂತ…

13 hours ago

ಹವಾಮಾನ ವೈಪರೀತ್ಯ | ಕೃಷಿ ಕಾರ್ಮಿಕರಿಗೆ ಈಗ ಬಿಸಿಗಾಳಿ ಸಂಕಷ್ಟ | ಕೃಷಿಗೂ ಸಮಸ್ಯೆ-ಕೃಷಿ ಬೆಳವಣಿಗೆ ಕುಂಠಿತ |

ತಾಪಮಾನ ಏರಿಕೆಯಿಂದ ಹಲವು ಕಡೆ ಸಮಸ್ಯೆಯಾಗುತ್ತಿದೆ. ಕೃಷಿ ನಷ್ಟದ ಜೊತೆಗೆ ಗ್ರಾಮೀಣ ಭಾಗದಲ್ಲಿ…

14 hours ago

ಮಳೆಗಾಗಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ |

ಮಳೆಗಾಗಿ ಪುತ್ತೂರಿನ ಶ್ರೀ‌ಮಹಾಲಿಂಗೇಶ್ವರ ದೇವಳದಲ್ಲಿ‌ ಪರ್ಜನ್ಯ ಜ‌ಪ ನೆರವೇರಿತು.

15 hours ago