ಎಣ್ಮೂರು : ಎಣ್ಮೂರು ಸರಕಾರಿ ಪ್ರೌಡಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಅನ್ನ ನೀಡುವ ಭತ್ತದ ಬೇಸಾಯದ ನೇಜಿ ನಾಟಿ ಕುರಿತು ತಿಳುವಳಿಕೆ ನೀಡುವ ಶಿಕ್ಷಣದೊಂದಿಗೆ ನೇಜಿ ಕೃಷಿ ಪಾಠ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಶಾಲಾ ಎಸ್ಡಿಎಂಸಿ ಮಾಜಿ ಅದ್ಯಕ್ಷ ಸೋಮಪ್ಪ ಗೌಡ ಕುಳ್ತಿಗೆ ನೇಜಿ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಅವರು ಭತ್ತದಿಂದ ಅಕ್ಕಿ ತಯಾರಿಸುವ ವಿಧಾನ ಮತ್ತು ಸಾವಯುವ ಜೀನನಾಂಶಕ ಅಕ್ಕಿಯ ಮಹತ್ವದ ಕುರಿತು ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಶೀತಲ್ ಭತ್ತ ಬೇಸಾಯದಲ್ಲಿ ಗದ್ದೆ ಹದಗೊಳಿಸುವ ನಾಟಿ ನೆಡುವ ವಿಧಾನಗಳ ಕುರಿತು ಮಾಹಿತಿ ಒದಗಿಸಿದರು. ಅಕ್ಷರಾ ದಾಸೋಹ ಸಿಬಂದಿಗಳಾದ ಪ್ರೇಮ ಪರ್ಲಡ್ಕ, ಪ್ರಮೀಳಾ ರೈ ಕಸ್ತೂರಿ ಪಾಡ್ದನ ಹಾಡಿ ಬಾಲ ರೈತ ಮಕ್ಕಳ ಗಮನ ಸೆಳೆದರು.
ಶಿಕ್ಷಕರಾದ ದಿವ್ಯಾ ಎಂ.ಕೆ,ಉಷಾ ಕೆ.ಎಸ್ ಸಂತೋಷ್ ಮಕ್ಕಳ ಜತೆ ನಾಟಿ ಕಾರ್ಯದಲ್ಲಿ ಸಹಕರಿಸಿದರು. ಶಿಕ್ಷಕ ಮೋಹನ ಗೌಡ ಎ ಸ್ವಾಗತಿಸಿ ಜೆಸಿಂತಾ ಮೊಂತೇರೋ ವಂದಿಸಿದರು.
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…
ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…
ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…
2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…
ನಾಗಾಲ್ಯಾಂಡ್ನಲ್ಲಿ ರಬ್ಬರ್ ಕೃಷಿ ಸುಮಾರು 29,794 ಹೆಕ್ಟೇರ್ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್ನಲ್ಲಿ ಸೂಕ್ತ…
ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…