ಮಂಗಳೂರು : 2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆಯಿಂದಾಗಿ ಮುಂದೂಡಲಾಗಿರುತ್ತದೆ. ದೂರದರ್ಶನದಲ್ಲಿ ಕನ್ನಡ, ಇಂಗ್ಷಿಷ್, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಸಿದ್ಧಪಡಿಸಿರುವ ಪಾಠಗಳನ್ನು ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ 4.30 ಗಂಟೆವರೆಗೆ ದೂರದರ್ಶನದಲ್ಲಿ ಪ್ರಸಾರ (ಚಂದನ ವಾಹಿನಿಯಲ್ಲಿ) ಮಾಡಲಾಗುತ್ತಿದೆ. ಇದೇ ಕಾರ್ಯಕ್ರಮದ ಮರು ಪ್ರಸಾರವನ್ನು ಮರುದಿನ ಬೆಳಿಗ್ಗೆ 6 ಗಂಂಟೆಯಿಂದ 7.30 ರವರೆಗೆ ಎಲ್ಲಾ ದಿನಗಳಂದು ನಡೆಸಲಾಗುವುದು.
ಬೇಸಿಗೆ ರಜಾ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸಲು ಅವರ ಸೃಜನಾತ್ಮಕತೆಯನ್ನು ಪ್ರೋತ್ಸಾಹಿಸಲು ಹಾಗೂ ಮನರಂಜನೆಗಾಗಿ ‘ಮಕ್ಕಳವಾಣಿ’ ಎಂಬ ಕಾರ್ಯಕ್ರಮ ಮಕ್ಕಳವಾಣಿ ಯೂಟ್ಯೂಬ್ ಚಾನಲ್ನಲ್ಲಿ ಈಗಾಗಲೇ ಪ್ರಸಾರವಾಗುತ್ತಿದೆ. ಸದರಿ ಕಾರ್ಯಕ್ರಮವನ್ನು ಮತ್ತೊಮ್ಮೆ ದೂರದರ್ಶನದ (ಚಂದನ ವಾಹಿನಿಯಲ್ಲಿ) ಮೂಲಕ ಏಪ್ರಿಲ್ 29 ರಿಂದ ಮೇ. 28 ರವರೆಗೆ ಸಂಜೆ 5 ಗಂಟೆಯಿಂದ 5.30 ರವರೆಗೆ ಪ್ರಸಾರ ಮಾಡಲಾಗುವುದು. ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದು ಪರೀಕ್ಷಾ ಸಿದ್ಧತೆಯನ್ನು ಮಾಡಿಕೊಳ್ಳಲು ಹಾಗೂ ಜ್ಞಾನಾರ್ಜನೆಯನ್ನು ಮಾಡಿಕೊಳ್ಳಲು ಅನುಕೂಲವಾಗುವುದು ಎಂದು ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು ಇವರ ಪ್ರಕಟಣೆ ತಿಳಿಸಿದೆ.
ರಾಜ್ಯದಲ್ಲಿ ಮುಂಗಾರು ಇನ್ನೂ ದುರ್ಬಲವಾಗಿದ್ದು, ಸುಳ್ಯ, ಕಡಬ ಹಾಗೂ ಸೋಮವಾರಪೇಟೆ ಭಾಗಗಳಲ್ಲಿ ಮಾತ್ರ…
ದಕ್ಷಿಣ ಸ್ಪೇನ್ನಲ್ಲಿ ಭೀಕರ ಕಾಡ್ಗಿಚ್ಚಿನಿಂದ 12 ಮಂದಿ ಸಾವನ್ನಪ್ಪಿದ್ದು, 23 ಮಂದಿ ನಾಪತ್ತೆಯಾಗಿದ್ದಾರೆ.…
ತೀವ್ರ ಬಿಸಿಯ ಅಪಾಯದಲ್ಲಿರುವ ವಿಶ್ವದ ಟಾಪ್-50 ನಗರಗಳಲ್ಲಿ 14 ಭಾರತೀಯ ನಗರಗಳು ಸೇರಿವೆ.…
ಚೀನಾಕ್ಕೆ ಹಲಸಿನ ಹಣ್ಣು ರಫ್ತು ಹೆಚ್ಚಿಸುವ ಮೂಲಕ ವಿದೇಶಿ ವಿನಿಮಯ ಆದಾಯವನ್ನು ಹೆಚ್ಚಿಸಲು…
ಕರ್ನಾಟಕದಲ್ಲಿ ಮುಂಗಾರು ತಾತ್ಕಾಲಿಕ ವಿರಾಮ ಪಡೆದಿದ್ದು, ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಮಾತ್ರ…
ಮೊಬೈಲ್ ನೆಟ್ವರ್ಕ್ ಇಲ್ಲದ ಪ್ರದೇಶಗಳಲ್ಲಿಯೂ ಸಂಪರ್ಕಕ್ಕಾಗಿ BSNL ₹1.34 ಲಕ್ಷದ ಸ್ಯಾಟಲೈಟ್ ಫೋನ್…