Advertisement
ಸುದ್ದಿಗಳು

ಕರೋನಾ ವೈರಸ್ ತಡೆಯ ಸ್ವಯಂಸೇವಕನಾಗಬಹುದು | ಸರಕಾರದ ಜೊತೆ ಹೀಗೆ ಕೈಜೋಡಿಸಬಹುದು | ನೀವು ಆಸಕ್ತರೇ….

Share

ಮಂಗಳೂರು: ಕರೋನಾ ಭೀತಿ ಎಲ್ಲೆಡೆ ಹರಡಿದೆ. ಯುವಕರು ನಾವಾದರೆ , ವೈರಸ್ ತೊಲಗಿಸಿ ಈ ದೇಶದ ಜನರ ರಕ್ಷಣೆಯ ಜವಾಬ್ದಾರಿ ನಾವು ಹೊರುವವರಾದರೆ ಸ್ವಯಂ ಸೇವಕರಾಗಿ ಕೆಲಸ ಮಾಡಲು ಅವಕಾಶ ಇದೆ. ರೆಡ್ ಕ್ರಾಸ್, ಕರ್ನಾಟಕ ಮತ್ತು ಡಿಐಪಿಆರ್ (ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಸರಕಾರ)  ಜೊತೆ ಕೈಜೋಡಿಸುವ ಮೂಲಕ ಕರೋನಾ ವಿರುದ್ಧ ಹೋರಾಡಲು  ಅವಕಾಶವಿದೆ. ಇಲ್ಲಿ

 ಹೇಗೆ ಸ್ವಯಂಸೇವಕನಾಗುವುದು?:

ಕರೋನಾ ವೈರಸ್ ತಡೆಯಲು ಈಗ ಭಯಗೊಳ್ಳುವುದರ ಬದಲಾಗಿ ಜಾಗೃತಿ ಅನಿವಾರ್ಯವಾಗಿದೆ. ಜನರಿಗೆ ಸೂಕ್ತ ಮಾಹಿತಿ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಬೇಕಿದೆ. ಜನರನ್ನು ಮಾನಸಿಕವಾಗಿ ಗಟ್ಟಿಗೊಳಿಸುವ ಕೆಲಸ ಆಗಬೇಕಿದೆ. ಭಯಗೊಳ್ಳುವುದರಿಂದ ವೈರಸ್ ಹರಡುವುದು  ತಡೆಯುವುದು  ಸಾದ್ಯವಿಲ್ಲ, ಬದಲಾಗಿ ಜಾಗೃತಗೊಳ್ಳುವುದು ಪರಿಹಾರ. ಹೀಗಾಗಿ ಯಾರೂ ನಾವು ಸುಮ್ಮನಿರಲು ಸಾಧ್ಯವಿಲ್ಲ. ಇದಕ್ಕಾಗಿ ಹೋರಾಟ ಅಗತ್ಯ, ನಾಯಕತ್ವ ಅಗತ್ಯ. ಇಂತಹ ನಾಯಕನಾಗುವವರು ಸರಕಾರದ ಜೊತೆ ಕೈಜೋಡಿಸಬಹುದು. ಇಂತಹ   ಸೇವೆ ಸಲ್ಲಿಸಲು ಸ್ವಯಂಸೇವಕರಿಗೆ ವೇದಿಕೆ ನೀಡುವಲ್ಲಿ ಮಾಹಿತಿ ಮತ್ತು ಪ್ರಚಾರ ಇಲಾಖೆ (ಡಿಐಪಿಆರ್) ಭಾರತೀಯ ರೆಡ್‌ಕ್ರಾಸ್,  ಮತ್ತು ಕರ್ನಾಟಕ ರಾಜ್ಯ ಕಾರ್ಮಿಕ ಸಂಸ್ಥೆಯೊಂದಿಗೆ ಮುಂದೆ ಬಂದಿದೆ.  ಎರಡು ವಿಧದಲ್ಲಿ  ಕೆಲಸ ಮಾಡಬಹುದಾಗಿದೆ. ಮನೆಯಲ್ಲಿ  ಕುಳಿತು ಜಾಗೃತಿ ಮಾಡಬಹುದು, ಕಣದಲ್ಲಿ  ಇಳಿದು ಕೆಲಸ ಮಾಡಬಹುದು. ಇದಕ್ಕಿಂತಲೂ ಮೊದಲು ನೋಂದಣಿ ಮಾಡಿಕೊಳ್ಳಬೇಕು. ಅದರ ಲಿಂಕ್ ಇಲ್ಲಿದೆ..

https://covid19.karnataka.gov.in/

ಮನೆಯಲ್ಲಿಯೇ ಕುಳಿತು ಇಂಟರ್ನೆಟ್ ಮೂಲಕ  ಕೆಲಸ ಮಾಡಬಹುದು. ವಿವಿಧ ಗ್ರೂಪು, ಯೂಟ್ಯೂಬ್ ಮೂಲಕ ಕಳಿಸುವ ಲಿಂಕ್ ಗಳ ಮೂಲಕ ಜಾಗೃತಿಗೊಳಿಸುವ ಕೆಲಸ ಮಾಡಬಹುದು.

ಕಣದಲ್ಲಿ  ಇಳಿದು ಕೆಲಸ ಮಾಡುವ ಸಂದರ್ಭ ಸ್ಥಳಗಳಿಗೆ ತೆರಳಿ ಪರಿಶೀಲನೆಯೂ ಇರುತ್ತದೆ. ಸುಳ್ಳು ಸುದ್ದಿ ಹರಡುವುದು  ತಡೆಯಲಾಗುತ್ತದೆ. ನಾಗರಿಕ ವರದಿಗಾರರಾಗಿ ಅಥವಾ ಸರ್ಕಾರಿ ಅಧಿಕಾರಿಯಾಗಿ ರೀತಿಯಲ್ಲಿ  ಕೆಲಸ ಮಾಡಬೇಕಾಗುತ್ತದೆ.

 

 

 

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

2 hours ago

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

3 hours ago

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

1 day ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

2 days ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

2 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

2 days ago