ಪುತ್ತೂರು: ಕರ್ನಾಟಕ ಸರಕಾರದ ಅರಣ್ಯ ಇಲಾಖೆಯ ಆಧೀನದಲ್ಲಿರುವ ಗೇರು ಅಭಿವೃದ್ಧಿ ನಿಗಮದ ನೂತನ ಆಡಳಿತ ಮಂಡಳಿಗೆ ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯದ ಪ್ರಧಾನ ವಿಜ್ಞಾನಿ ಹಾಗೂ ಪ್ರಭಾರ ನಿರ್ದೇಶಕ ಡಾ. ಯಂ. ಗಂಗಾಧರ ನಾಯಕ್ ರವರು ಕೇಂದ್ರ ಸರಕಾರ ನಾಮ ನಿರ್ದೇಶನದನ್ವಯ ಪ್ರತಿನಿಧಿಯಾಗಿ ಆಯ್ಕೆಯಾಗಿರುತ್ತಾರೆ.
ಕೇಂದ್ರ ಸರಕಾರದ ಕೃಷಿ ಹಾಗೂ ರೈತಕಲ್ಯಾಣ ಮಂತ್ರಾಲಯದ ತೋಟಗಾರಿಕಾ ಆಯುಕ್ತರು ಕೊಚಿನ್ ನಲ್ಲಿರುವ ಗೇರು ಹಾಗೂ ಕೋಕೋ ಅಭಿವೃದ್ಧಿಯ ನಿರ್ದೇಶಕರ ಶಿಫಾರಿಸ್ಸಿನ ಮೇರೆಗೆ ಈ ನೇಮಕಾತಿಯನ್ನು ಮಾಡಿರುತ್ತಾರೆ.
ಡಾ ಯಂ.ಜಿ. ನಾಯಕ್ ರವರು ಕಳೆದ 30 ವರ್ಷಗಳಿಂದ ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ತೋಟಗಾರಿಕಾ ವಿಜ್ಞಾನಿಯಾಗಿದ್ದು ತಳಿ ಅಭಿವೃದ್ಧಿ, ವೈವಿಧ್ಯತೆ ಸಂರಕ್ಷಣೆ, ಪುನಶ್ಚೇತನ, ಸಾಂದ್ರ ಮತ್ತು ಘನ ಸಾಂದ್ರ ಗೇರು ಕೃಷಿ ಪದ್ದತಿ, ಗೇರು ನರ್ಸರಿ ಹಾಗೂ ಯೋಗ್ಯ ತಳಿಗಳ ಗಿಡಗಳನ್ನು ರೈತರಿಗೆ ಒದಗಿಸುವುದು, ರೈತರಿಗೆ ಹಾಗೂ ಅಭಿವೃದ್ಧಿ ಇಲಾಖೆಗಳಿಗೆ ಮಾಹಿತಿ ಹಾಗೂ ಸಲಹೆ ನೀಡುವಿಕೆ ಮೂಲಕ ಗೇರು ಅಭಿವೃದ್ಧಿಗೆ ಮಹತ್ತರ ಕೊಡುಗೆಯನ್ನು ಕೊಟ್ಟಿರುತ್ತಾರೆ. ರೈತರೊಂದಿಗೆ ನೇರ ಸಂಪರ್ಕ ಹಾಗೂ ಕೃಷಿ ವಿಸ್ತರಣೆಯಲ್ಲಿ ಬಹಳಷ್ಟು ಶ್ರಮಿಸಿರುತ್ತಾರೆ. ಗೇರು ಅಭಿವೃದ್ಧಿ ನಿಗಮದ ಆಡಳಿತ ಮಂಡಳಿಯ ಸದಸ್ಯತ್ವ ಇದೀಗ ಇವರ ಸಾಧನೆಗೆ ಹಿಡಿದ ಕೈಗನ್ನಡಿ.
ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್ನಲ್ಲಿ…
ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…
ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…
ಇಂಪೀರಿಯಲ್ ಕಾಲೇಜ್ ಲಂಡನ್ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…
ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…