Advertisement
ಸುದ್ದಿಗಳು

ಕಲ್ಮಡ್ಕದಲ್ಲಿ ಆಪರೇಶನ್ “ಪೆರ್ಮರಿ” : ನಾಯಿಯ ಕಾಡಿದ ಹೆಬ್ಬಾವು ಕಾಡಿಗೆ..!

Share

ಕಲ್ಮಡ್ಕ: ಸುಳ್ಯ ತಾಲೂಕಿನ ಕಲ್ಮಡ್ಕದ ಕೈಲಾರು ಈಶ್ವರ ಭಟ್ ಅವರ ತೋಟದಲ್ಲಿ  ಒಂದೇ ಸಮನೆ  ನಾಯಿ ಬೊಗಳುತ್ತಿತ್ತು. ಹೋಗಿ ನೋಡಿದಾಗ ಅವರ ಸಾಕು ನಾಯಿಯೊಂದನ್ನು ಹೆಬ್ಬಾವು ಹಿಡಿದು ತಿನ್ನುವ ಸ್ಥಿತಿಯಲ್ಲಿತ್ತು, ನಾಯಿ ಬದುಕಿಗಾಗಿ ಹೋರಾಟ ಮಾಡುತ್ತಿತ್ತು. ಇತರ  ನಾಯಿಗಳು ಬೊಗಳುತ್ತಾ  ರಕ್ಷಣೆಗೆ ಮುಂದಾಗುತ್ತಾ ಸಹಾಯಕ್ಕಾಗಿ ಯಜಮಾನನ್ನು  ಕರೆಯುತ್ತಿತ್ತು.

ಏನಿದು ನಾಯಿ ವಿಪರೀತ ಬೊಗಳುತ್ತದೆ ಎಂದು ಈಶ್ವರ ಭಟ್ಟರು ತೋಟಕ್ಕೆ ಹೋದಾಗ ಹೆಬ್ಬಾವು ನಾಯಿಯನ್ನು ಕಾಡುತ್ತಿತ್ತು, ಹೋರಾಟ ನಡೆಯುತ್ತಿತ್ತು. ಈಶ್ವರ ಭಟ್ ಸ್ಥಳಕ್ಕೆ ಬಂದಾಗ ಹೆಬ್ಬಾವು ನಾಯಿಯನ್ನು ಬಿಟ್ಟು ತೆಂಗಿನ ಮರದ ಬುಡದ ಕಸದೆಡೆಯಲ್ಲಿ ಅವಿತು ಕುಳಿತಿತ್ತು. ಇದನ್ನು ಅರಿತ ಈಶ್ವರ ಭಟ್  ಹೆಬ್ಬಾವನ್ನು ಕಾರ್ಮಿಕರೊಂದಿಗೆ ಸೇರಿ ಹಿಡಿದು ಗೋಣಿ ಚೀಲದಲ್ಲಿ ತುಂಬಿ ಕಲ್ಮಡ್ಕದ ಬಂಟಮಲೆ ತಪ್ಪಲಿನ ಕಾಡಿಗೆ ಸುರಕ್ಷಿತವಾಗಿ ಬಿಟ್ಟು ತನ್ನ ಪರಿಸರ ಪ್ರೇಮವನ್ನು ಮತ್ತು ಪ್ರಾಣಿ ದಯೆಯನ್ನು ಮೆರೆದರು. ಈಗ ಎರಡೂ ಪ್ರಾಣಿಗಳು ಸೇಫ್ ಮೋಡ್ ನಲ್ಲಿ…!. ಈಶ್ವರ ಭಟ್ಟದ ಪರಿಸರ ಪ್ರೇಮ, ಹಾವು ಹಿಡಿಯುವ ಧೈರ್ಯ ಮೆಚ್ಚುಗೆಗೆ ಕಾರಣವಾಯಿತು.

(Photo : ಸುರೇಶ್ಚಂದ್ರ ಕಲ್ಮಡ್ಕ)

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 20-03-2026 | ಕರಾವಳಿ–ಮಲೆನಾಡಿಗೆ ಮಳೆ ಸೂಚನೆ..! | ರಾಜ್ಯದಲ್ಲಿ ಯಾವ ದಿನದಿಂದ ಮಳೆ ಚುರುಕು..?

ರಾಜ್ಯದಲ್ಲಿ ಸಧ್ಯಕ್ಕೆ ಮಳೆ ಕಡಿಮೆಯಾಗಿದ್ದು ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು–ಮೋಡದ ವಾತಾವರಣ ಮುಂದುವರಿಯಲಿದೆ. ಇಂದು…

2 hours ago

ಅಡಿಕೆ ಮಾರುಕಟ್ಟೆ | ಗುಣಮಟ್ಟದ ಅಡಿಕೆಗೆ ಬೇಡಿಕೆ….!

ಉತ್ತಮ ಗುಣಮಟ್ಟದ ಅಡಿಕೆಗಳಿಗೆ ₹530 ದರ ಸ್ಥಿರವಾಗಿದ್ದು ಹೊಸ ಅಡಿಕೆಗೆ ಸ್ಪಷ್ಟ ಬೇಡಿಕೆ…

4 hours ago

ಕಾಳುಮೆಣಸು ಕೃಷಿಯಲ್ಲಿ ಟೆಕ್ ಕ್ರಾಂತಿ | ಟಿಶ್ಯೂ ಕಲ್ಚರ್‌ ವಿಧಾನದಿಂದ ಇಳುವರಿ ಹೆಚ್ಚಳ – ಕೃಷಿ ಸಚಿವರ ಭೇಟಿ

ಹೊಸ ತಂತ್ರಜ್ಞಾನಗಳಿಂದ ಕಾಳುಮೆಣಸು ಕೃಷಿಯಲ್ಲಿ ಇಳುವರಿ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆ ಕಂಡುಬಂದಿದ್ದು,…

7 hours ago

ಹವಾಮಾನ ವರದಿ | 19-03-2026 | ಇಂದು ಗುಡುಗು ಮಳೆ ಅಬ್ಬರ… ನಾಳೆಯಿಂದ ರಾಜ್ಯದಲ್ಲಿ ಮಳೆ ಕಡಿಮೆಯಾಗುತ್ತದಾ?

ರಾಜ್ಯದ ಹಲವೆಡೆ ಇಂದು ಸಂಜೆ ಗುಡುಗು ಸಹಿತ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.…

1 day ago

ಶಾಸ್ತ್ರ ಮತ್ತು ಆಧುನಿಕತೆಯ ಸಮನ್ವಯದ ಹಬ್ಬ — ಯುಗಾದಿ

ಯುಗಾದಿ ಹಬ್ಬವು ಕೇವಲ ಹೊಸ ವರ್ಷದ ಆರಂಭವಲ್ಲ; ಅದು ಕಾಲತತ್ತ್ವ, ಪ್ರಕೃತಿ ಚಕ್ರ…

1 day ago

ಹವಾಮಾನ ವರದಿ | 18-03-2026 | ಗುಡುಗು-ಆಲಿಕಲ್ಲು ಮಳೆ ಅಲರ್ಟ್‌ | ರಾಜ್ಯಾದ್ಯಂತ ಹವಾಮಾನ ಬದಲಾವಣೆ..!

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಂಜೆ ಹಾಗೂ ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ…

2 days ago