ಕಳೆದು ಹೋದ ಆ ಹೊತ್ತು

June 9, 2019
7:00 PM

ಅಮ್ಮ ಕೊಟ್ಟ ಕೈ ತುತ್ತು
ಅಪ್ಪ ಕೊಟ್ಟ ಸಿಹಿ ಮುತ್ತು
ಅಜ್ಜಿ ಕಥೆಗಾಗಿ ಹಂಬಲಿಸುತ್ತಿದ್ದ ಹೊತ್ತು
ಇಂದು ಕಳೆದು ಹೋದ ಅಮೂಲ್ಯ ಸಂಪತ್ತು||೧||

ಮರಳಲಿ ಮನೆ ಕಟ್ಟಿದ ಆ ದಿನಗಳು
ಅಪ್ಪನ ಹೆಗಲೇರಿ ಆಡಿದ ನೆನಪುಗಳು
ಓಡಿ ಆಡಿ ಬಿದ್ದಾಗ ಆದ ಗಾಯಗಳು
ಇಂದಿನ ಬದುಕಿಗೆ ಸುಂದರ ಸ್ವಪ್ನಗಳು||೨||

ಬಾಲ್ಯ ಕಳೆದಿದೆ,ಯೌವ್ವನ ಬಂದಿದೆ
ಸೈಕಲ್ ಗಾಡಿ ಗುಜುರಿ ಅಂಗಡಿ ಸೇರಿದೆ
ಮನೆಯ ಮುಂದೆ ಕಾರು ಬಂದು ನಿಂತಿದೆ
ಯೌವನದ ಅಮಲಿನಲಿ ಬದುಕೇ ಬದಲಾಗಿದೆ||೩||

ಆಧುನಿಕತೆಯ ಸೋಗಿನಲಿ ಕಾಲ ಓಡುತಿದೆ
ಭರದ ನಡಿಗೆಯಲಿ ಕಾಲ್ಗಳು ಸೋತಿದೆ
ಬಾಲ್ಯದ ನಗು ಇಂದು ಸತ್ತು ಹೋಗಿದೆ
ಹೋರಾಟವೇ ಇಂದಿನ ಬದುಕಾಗಿದೆ||೪||

ಮತ್ತೊಮ್ಮೆ ಹೋಗಬೇಕು ಬಾಲ್ಯದ ನೆನಪಿಗೆ
ಹುರುಪು ತುಂಬುವುದು ಇಂದಿನ ಬದುಕಿಗೆ
ಎಲ್ಲರ ಬಾಳಲ್ಲೂ ಬಾಲ್ಯದ ಸವಿ ಇರಲಿ ಹೀಗೆ
ನೀಡಲಿ ಹೊಸ ಚೈತನ್ಯ ಮುಂದಿನ ಬಾಳಿಗೆ||೫||

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಅಪ್ಪ ಯಾಕೆ ವಿಚಿತ್ರವಾಗಿ ಕಾಣುತ್ತಾನೆ?
July 19, 2026
7:52 AM
by: ಮಹೇಶ್ ಪುಚ್ಚಪ್ಪಾಡಿ
ಆರೋಪದ ಆಚೆ ನಿಂತು ಒಮ್ಮೆ ಯೋಚಿಸಿದ್ದೀರಾ..?
July 12, 2026
11:57 AM
by: ಮಹೇಶ್ ಪುಚ್ಚಪ್ಪಾಡಿ
E20 ಪೆಟ್ರೋಲ್‌ : ದೇಶದ ಹಿತದ ಹೆಸರಿನಲ್ಲಿ ಸಾಮಾನ್ಯರ ಹೆಗಲಿನ ಮೇಲೆ ಹೆಚ್ಚು”ವರಿ”ಯೇ?
July 8, 2026
12:42 PM
by: ಮಹೇಶ್ ಪುಚ್ಚಪ್ಪಾಡಿ
ವಿವಾಹದ ಬದಲಾಗುತ್ತಿರುವ ಮುಖ
July 5, 2026
2:16 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror