ಕಳೆದು ಹೋದ ಆ ಹೊತ್ತು

June 9, 2019
7:00 PM

ಅಮ್ಮ ಕೊಟ್ಟ ಕೈ ತುತ್ತು
ಅಪ್ಪ ಕೊಟ್ಟ ಸಿಹಿ ಮುತ್ತು
ಅಜ್ಜಿ ಕಥೆಗಾಗಿ ಹಂಬಲಿಸುತ್ತಿದ್ದ ಹೊತ್ತು
ಇಂದು ಕಳೆದು ಹೋದ ಅಮೂಲ್ಯ ಸಂಪತ್ತು||೧||

Advertisement
Advertisement

ಮರಳಲಿ ಮನೆ ಕಟ್ಟಿದ ಆ ದಿನಗಳು
ಅಪ್ಪನ ಹೆಗಲೇರಿ ಆಡಿದ ನೆನಪುಗಳು
ಓಡಿ ಆಡಿ ಬಿದ್ದಾಗ ಆದ ಗಾಯಗಳು
ಇಂದಿನ ಬದುಕಿಗೆ ಸುಂದರ ಸ್ವಪ್ನಗಳು||೨||

Advertisement

ಬಾಲ್ಯ ಕಳೆದಿದೆ,ಯೌವ್ವನ ಬಂದಿದೆ
ಸೈಕಲ್ ಗಾಡಿ ಗುಜುರಿ ಅಂಗಡಿ ಸೇರಿದೆ
ಮನೆಯ ಮುಂದೆ ಕಾರು ಬಂದು ನಿಂತಿದೆ
ಯೌವನದ ಅಮಲಿನಲಿ ಬದುಕೇ ಬದಲಾಗಿದೆ||೩||

ಆಧುನಿಕತೆಯ ಸೋಗಿನಲಿ ಕಾಲ ಓಡುತಿದೆ
ಭರದ ನಡಿಗೆಯಲಿ ಕಾಲ್ಗಳು ಸೋತಿದೆ
ಬಾಲ್ಯದ ನಗು ಇಂದು ಸತ್ತು ಹೋಗಿದೆ
ಹೋರಾಟವೇ ಇಂದಿನ ಬದುಕಾಗಿದೆ||೪||

Advertisement

ಮತ್ತೊಮ್ಮೆ ಹೋಗಬೇಕು ಬಾಲ್ಯದ ನೆನಪಿಗೆ
ಹುರುಪು ತುಂಬುವುದು ಇಂದಿನ ಬದುಕಿಗೆ
ಎಲ್ಲರ ಬಾಳಲ್ಲೂ ಬಾಲ್ಯದ ಸವಿ ಇರಲಿ ಹೀಗೆ
ನೀಡಲಿ ಹೊಸ ಚೈತನ್ಯ ಮುಂದಿನ ಬಾಳಿಗೆ||೫||

 

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
ಚುನಾವಣೆ ಹಾಗೂ “ನೀತಿ” ಸಂಹಿತೆ ಮತ್ತು ಜಗಳ…! |
April 18, 2024
3:00 PM
by: ಮಹೇಶ್ ಪುಚ್ಚಪ್ಪಾಡಿ
ದೇವರು ಧರ್ಮ ಭಕ್ತಿ ಒಂದು ಒಣ ಆಡಂಬರವಲ್ಲ, ಅದು ನಮ್ಮ ಆತ್ಮಸಾಕ್ಷಿಯ ನಡವಳಿಕೆ | ರಾಮನವಮಿ ಪ್ರಯುಕ್ತ ಬರೆಯುತ್ತಾರೆ ವಿವೇಕಾನಂದ. ಎಚ್. ಕೆ.
April 17, 2024
4:37 PM
by: ವಿವೇಕಾನಂದ ಎಚ್‌ ಕೆ
ಅಡಿಕೆ ತೋಟಕ್ಕೆ ಉದಿ ಏಕೆ ಹಾಕಬೇಕು…?
April 15, 2024
7:55 PM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror