Advertisement
ಅನುಕ್ರಮ

ಕಳೆದು ಹೋದ ಆ ಹೊತ್ತು

Share

ಅಮ್ಮ ಕೊಟ್ಟ ಕೈ ತುತ್ತು
ಅಪ್ಪ ಕೊಟ್ಟ ಸಿಹಿ ಮುತ್ತು
ಅಜ್ಜಿ ಕಥೆಗಾಗಿ ಹಂಬಲಿಸುತ್ತಿದ್ದ ಹೊತ್ತು
ಇಂದು ಕಳೆದು ಹೋದ ಅಮೂಲ್ಯ ಸಂಪತ್ತು||೧||

ಮರಳಲಿ ಮನೆ ಕಟ್ಟಿದ ಆ ದಿನಗಳು
ಅಪ್ಪನ ಹೆಗಲೇರಿ ಆಡಿದ ನೆನಪುಗಳು
ಓಡಿ ಆಡಿ ಬಿದ್ದಾಗ ಆದ ಗಾಯಗಳು
ಇಂದಿನ ಬದುಕಿಗೆ ಸುಂದರ ಸ್ವಪ್ನಗಳು||೨||

ಬಾಲ್ಯ ಕಳೆದಿದೆ,ಯೌವ್ವನ ಬಂದಿದೆ
ಸೈಕಲ್ ಗಾಡಿ ಗುಜುರಿ ಅಂಗಡಿ ಸೇರಿದೆ
ಮನೆಯ ಮುಂದೆ ಕಾರು ಬಂದು ನಿಂತಿದೆ
ಯೌವನದ ಅಮಲಿನಲಿ ಬದುಕೇ ಬದಲಾಗಿದೆ||೩||

ಆಧುನಿಕತೆಯ ಸೋಗಿನಲಿ ಕಾಲ ಓಡುತಿದೆ
ಭರದ ನಡಿಗೆಯಲಿ ಕಾಲ್ಗಳು ಸೋತಿದೆ
ಬಾಲ್ಯದ ನಗು ಇಂದು ಸತ್ತು ಹೋಗಿದೆ
ಹೋರಾಟವೇ ಇಂದಿನ ಬದುಕಾಗಿದೆ||೪||

ಮತ್ತೊಮ್ಮೆ ಹೋಗಬೇಕು ಬಾಲ್ಯದ ನೆನಪಿಗೆ
ಹುರುಪು ತುಂಬುವುದು ಇಂದಿನ ಬದುಕಿಗೆ
ಎಲ್ಲರ ಬಾಳಲ್ಲೂ ಬಾಲ್ಯದ ಸವಿ ಇರಲಿ ಹೀಗೆ
ನೀಡಲಿ ಹೊಸ ಚೈತನ್ಯ ಮುಂದಿನ ಬಾಳಿಗೆ||೫||

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಸರಿಯಾದ ಆಹಾರ ಪದ್ಧತಿಯೇ ರೋಗಮುಕ್ತ ಜೀವನದ ಮೂಲ – ರಾಘವೇಶ್ವರ ಶ್ರೀ

ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯ ಧರ್ಮಸಭೆಯಲ್ಲಿ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು…

7 hours ago

ಹವಾಮಾನ ವರದಿ | 30-07-2026 | ಕರ್ನಾಟಕದಲ್ಲಿ ಇನ್ನೆರಡು ದಿನ ಉತ್ತಮ ಮಳೆ

ಮಧ್ಯಪ್ರದೇಶದಲ್ಲಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು…

11 hours ago

ಸಮಾಜಕ್ಕೆ ಸರಿದಾರಿಯನ್ನು ತೋರುವುದು ಗುರುವಿನ ಕಾರ್ಯ : ರಾಘವೇಶ್ವರ ಶ್ರೀ

ಗೋಕರ್ಣದ ಅಶೋಕೆಯ ಮೂಲಮಠದಲ್ಲಿ 'ಅನ್ನಬ್ರಹ್ಮ ಚಾತುರ್ಮಾಸ್ಯ' ಆರಂಭಗೊಂಡಿದ್ದು, ಸಮಾಜಕ್ಕೆ ಸರಿಯಾದ ದಾರಿ ತೋರಿಸುವುದು…

20 hours ago

ಅಪೊಲೊ ಫಾರ್ಮಸಿಯಲ್ಲಿ ಉದ್ಯೋಗಾವಕಾಶ : ಆಗಸ್ಟ್‌ 1ರಂದು ಪುತ್ತೂರಿನಲ್ಲಿ ನೇರ ಸಂದರ್ಶನ

ಅಪೊಲೊ ಫಾರ್ಮಸಿ ವತಿಯಿಂದ ವಿವಿಧ ಹುದ್ದೆಗಳ ಭರ್ತಿಗಾಗಿ ಆಗಸ್ಟ್‌ 1ರಂದು ಪುತ್ತೂರಿನಲ್ಲಿ ನೇರ…

20 hours ago

ಹವಾಮಾನ ವರದಿ | 29-07-2026 | ಆ.2 ರಿಂದ ಮಳೆಯ ಸ್ಥಿತಿ ಏನಾಗಬಹುದು..?

ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಇನ್ನೂ ಬಿಟ್ಟುಬಿಟ್ಟು ಮಳೆ ಮುಂದುವರಿಯಲಿದೆ. ಆದರೆ…

2 days ago

ಆಸ್ಪತ್ರೆಗಳಲ್ಲಿ ಬಳಕೆಯಾಗದ ಔಷಧ ಮರುಬಳಕೆ – ಹಣವೂ ಉಳಿಯುತ್ತದೆ, ಪರಿಸರವೂ ಕಾಪಾಡುತ್ತದೆ..!

ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…

2 days ago