Advertisement
The Rural Mirror ಕಾಳಜಿ

ಕಾಡಿಗೆ “ಡಾಮರು” ಸುರಿತಾರಾ…..! ವ್ಯವಸ್ಥೆ ನೋಡಿದರೆ ನಿಮಗೇ ಅಚ್ಚರಿಯಾಗುತ್ತದೆ…….!

Share

ಸುಳ್ಯ: ರಸ್ತೆಗೆ  ಡಾಮರು ಹಾಕುವುದು , ಕಾಡಿಗೆ ಡಾಮರು ಸುರಿಯುವುದು…!.

Advertisement
Advertisement
Advertisement
Advertisement

ಇದೊಂದು ಅಚ್ಚರಿ ಹಾಗೂ ಪ್ರಶ್ನಾರ್ಹ ಸಂಗತಿ. ಆದರೆ ಈ ಬಗ್ಗೆ ಮಾತನಾಡುವವರು, ಪ್ರಶ್ನೆ ಮಾಡುವವರು ಯಾರು ?. ಅಧಿಕಾರಿಗಳು ನೋಡ್ತಾರಾ , ಇಲಾಖೆಗಳು ಬರ್ತಾವಾ ? ಜನಪ್ರತಿನಿಧಿಗಳು ಕೇಳ್ತಾರಾ ? ಜನರು ಮಾತಾಡ್ತಾರಾ ?

Advertisement

ಹೌದು, ಸುಮಾರು ಒಂದು ಪಿಕ್ ಅಪ್ ನಲ್ಲಿ ಹಿಡಿಯಬಹುದಾದಷ್ಟು ಜಲ್ಲಿ ಮಿಶ್ರಣ ಮಾಡಿರುವ ಡಾಮರು ಕಾಡಿನಲ್ಲಿ ಸುರಿಯಲಾಗಿದೆ. ಜನ   ಓಡಾಟ ವಿರಳ ಇರುವ ಪ್ರದೇಶದವಲ್ಲಿ ಈ ಡಾಮರು ಸುರಿಯಲಾಗಿದೆ. ಹಾಗಿದ್ದರೆ ಎಲ್ಲಿ  ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

 

Advertisement

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ದೈವಸ್ಥಾನದ ಬಳಿಯ ಮೊಗ್ರ ಭಜನಾ ಮಂದಿರದಿಂದ ಕೊಂಚ ದೂರದಲ್ಲಿ  ರಬ್ಬರ್ ತೋಟವೊಂದರ ಬಳಿಯ ಕಿರಾಲ್ ಬೋಗಿ ಮರದ ಪಕ್ಕ ಮಿಕ್ಸ್ ಮಾಡಿರುವ ಡಾಮರು  ಸುರಿಯಲಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ಮೊಗ್ರ -ಏರಣಗುಡ್ಡೆ -ಎಡೋಣಿ ರಸ್ತೆಗೆ ಡಾಮರು ಹಾಕಲಾಗಿತ್ತು. ಇದಕ್ಕೆ ಈ ಬಾರಿ ಅಲ್ಲಲ್ಲಿ ತೇಪೆ ಮಾಡುತ್ತಾ ಬರಲಾಗಿತ್ತು. ಕೊನೆಗೆ ಉಳಿದ ಡಾಮರು ಇಲ್ಲಿ  ಸುರಿಯಲಾಗಿದೆಯೇ ಎಂಬ ಸಂದೇಹ ಇಲ್ಲಿ ಮೂಡಿದೆ.

Advertisement

 

Advertisement

ಇಲ್ಲಿರುವ ಪ್ರಶ್ನೆ ಇದಲ್ಲ. ಇದು ಗುತ್ತಿಗೆದಾರ ಹಣವೇ ಆಗಿರಬಹುದು, ಆದರೆ ಅದು ಸರಕಾರದಿಂದ ಮಂಜೂರಾಗುವ ಹಣ. ಜನರ ತೆರಿಗೆಯ ಹಣ. ಅದನ್ನು ಹೀಗೆ ಎಸೆದು ಹೋಗುವದು ಎಷ್ಟು ಸರಿ. ಮೊಗ್ರ -ಏರಣಗುಡ್ಡೆ -ಎಡೋಣಿ ರಸ್ತೆ ಅಭಿವೃದ್ಧಿಗೆ ಹಲವು ವರ್ಷಗಳಿಂದ ಒತ್ತಾಯ ಕೇಳಿಬರುತ್ತಿದೆ. ಅಲ್ಲಲ್ಲಿ  ಹೊಂಡಗಳು ಇವೆ.  ಒಂದು ಸೇತುವೆಗೆ ಹಲವು ವರ್ಷಗಳಿಂದ ಬೇಡಿಕೆ ಇದೆ.  ಇದೇ ರಸ್ತೆಯಲ್ಲಿ ಈಗಲೂ ಕೆಲವು ಕಡೆ ಹೊಂಡಗಳು ಇವೆ. ಕನಿಷ್ಠ ಇಲ್ಲಿಗಾದರೂ ಈ ಡಾಮರು ಹಾಕಬಹುದಾಗಿತ್ತು ಎಂಬುದು ಜನರ ಒತ್ತಾಯ. ಅದೂ ಅಲ್ಲದೆ ಇದೇ ರಸ್ತೆಯನ್ನು  ಕಾಂಕ್ರೀಟ್ ರಸ್ತೆ ಮೂಲಕ ಅಭಿವೃದ್ಧಿ ಮಾಡಲಾಗಿದೆ. ಅದರ ಆರಂಭಕ್ಕೆ ಡಾಮರು ಹಾಕಬಹುದಾಗಿತ್ತು. ಅವಕಾಶಗಳು ಸಾಕಷ್ಟು ಇತ್ತು. ಅದಿಲ್ಲದೆ ಹೀಗೆ ರಸ್ತೆ ಬದಿಯ ಕಾಡಿಗೆ ಎಸೆದು ಹೋಗುವುದು  ಎಷ್ಟು ಸರಿ ಎಂಬ ಪ್ರಶ್ನೆ ಈಗ ಜನರು ಕೇಳುತ್ತಾರೆ. ಯಾವ ಜನಪ್ರತಿನಿಧಿ ಈ ಬಗ್ಗೆ ಮಾತನಾಡುತ್ತಾರೆ ? ಯಾವ ಅಧಿಕಾರಿ ಇಂತಹವರ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ? ಯಾರು ಚೌಕೀದಾರ್ ಆಗುತ್ತಾರೆ ?

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಯುವಕರಲ್ಲಿ ಹೆಚ್ಚುತ್ತಿರುವ ಸ್ಥೂಲ ಕಾಯ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…

5 hours ago

ತುಮಕೂರು ಜಿಲ್ಲೆಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…

5 hours ago

ಹವಾಮಾನ ವರದಿ | 24-02-2025 | ಫೆ.28 ರಂದು ಅಲ್ಲಲ್ಲಿ ಮಳೆಯ ಸಾಧ್ಯತೆ ಇದೆ |

ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

5 hours ago

ಹವಾಮಾನ ವರದಿ | 23-02-2025 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

1 day ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

3 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

4 days ago