Advertisement
MIRROR FOCUS

ಕಾರ್ಗಿಲ್‌ ವಿಜಯ ದಿವಸ್‌ | ವೀರ ಯೋಧರಿಗೆ ಶತ ಶತ ನಮನ |

Share

ಜುಲೈ  26. ಕಾರ್ಗಿಲ್ ವಿಜಯ ದಿವಸ್ | ಮತ್ತೊಮ್ಮೆ ಮೊಳಗಲಿ ಜೈ ಹಿಂದ್ | ಹುತಾತ್ಮರಾದ ವೀರ ಯೋಧರಿಗೆ ಶತ ಶತ ನಮನ |


ಭಾರತದ ಗಡಿಯೊಳಗೆ ನುಗ್ಗಿದ ಪಾಕ್‌  ಸೈನಿಕರು ಹಾಗೂ ಉಗ್ರರನ್ನು ಹಿಮ್ಮೆಟ್ಟಿಸಿದ ವಿಜಯದ ದಿನ. ಈ ವಿಜಯದ  ಜೊತೆಗೆ ಈ ಯುದ್ದದಲ್ಲಿ ಭಾರತೀಯ 530 ಯೋಧರು ಹುತಾತ್ಮರಾದರು. ಈ ದಿನವು ಭಾರತೀಯ ಇತಿಹಾಸದಲ್ಲಿ ‘ಕಾರ್ಗಿಲ್ ವಿಜಯ ದಿವಸ’ವಾಗಿ  ಉಳಿಯಿತು. ಭಾರತೀಯ ಸೈನಿಕರ ಧೈರ್ಯ ಸಾಹಸಕ್ಕೆ ದೇಶದಾದ್ಯಂತ ‌ಮೆಚ್ಚುಗೆ ವ್ಯಕ್ತವಾಯಿತು. ಯುದ್ಧದಲ್ಲಿ  ಹುತಾತ್ಮರಾದ ಯೋಧರಿಗೆ ವೀರ ಚಕ್ರ ನೀಡಿ ಗೌರವಿಸಲಾಯಿತು. ದೇಶಕ್ಕಾಗಿ ವೀರಮರಣವಪ್ಪಿದ ಸೈನಿಕರ ಸ್ಮರಣಾರ್ಥ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಗುತ್ತಿದೆ.

 

 

1999 ರ ಮೇ 9ರಂದು ಭಾರತದ ಗಡಿಯೊಳಗೆ ಪಾಕಿಸ್ತಾನದ ಸೈನಿಕರು  ಮತ್ತು ಉಗ್ರರು ನುಸುಳಿದ್ದು ಯುದ್ಧಕ್ಕೆ ಕಾರಣವಾಯಿತು. ಜಮ್ಮು ಕಾಶ್ಮೀರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಗುರಿಯೊಂದಿದೆ  ಪಾಕ್ ​ ಸೈನಿಕರು ದಾಳಿ ಪ್ರಾರಂಭಿಸಿದ್ದರು. ಆದರೆ ಕದನ ವಿರಾಮದಲ್ಲಿದ್ದ ಭಾರತೀಯ ಸೇನೆ ಸರಕಾರದ ಆದೇಶಕ್ಕಾಗಿ ಕಾಯುತ್ತಿತ್ತು, ಆದರೆ ಉಗ್ರರು ಹಾಗೂ ಪಾಕ್‌ ಸೈನಿಕರು ಅರ್ಧ ಭಾಗ ಆಕ್ರಮಿಸಿದ್ದರು. ಹೀಗಾಗಿ ಯುದ್ಧ ಅನಿವಾರ್ಯವಾಯಿತು. ಅಂದು ಭಾರತದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ದಿಟ್ಟ ನಿರ್ಧಾರ ಕೈಗೊಂಡು  ಸೇನಾಧಿಕಾರಿಗೆ ಯುದ್ಧ ಘೋಷಿಸಲು ಸೂಚಿಸಿದರು. ಅಧಿಕಾರಿಗಳ ಆದೇಶದಂತೆ ಕಾರ್ಗಿಲ್ ಬೆಟ್ಟಕ್ಕೆ ತೆರಳಿದ ಭಾರತೀಯ ಸೈನಿಕರು ರಣಾಂಗಣದಲ್ಲಿ ಹೋರಾಡಿದರು. ಯಶಸ್ಸು ಪಡೆದರು. ಈ ಹೊತ್ತಿಗೆ  ಯುದ್ದದಲ್ಲಿ ಭಾರತೀಯ 530 ಯೋಧರು ಹುತಾತ್ಮರಾದರು.  ಜಲೈ26 ರಂದು ಉಗ್ರರನ್ನು ಮತ್ತು ಪಾಕ್​ ಸೈನಿಕರನ್ನು  ಹಿಮ್ಮೆಟ್ಟಿಸಿ ಅಧಿಕೃತವಾಗಿ ಜಯವನ್ನು ಘೋಷಿಸಿದ ದಿನವಾಯಿತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಭಾರೀ ಮಳೆ ಹಿನ್ನೆಲೆ – ದಕ್ಷಿಣ ಕನ್ನಡದಲ್ಲಿ ಇಂದು ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ ಜುಲೈ 23ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ…

12 hours ago

ಹವಾಮಾನ ವರದಿ | 22.07.2026 | ಉತ್ತರ ಕನ್ನಡ, ಉಡುಪಿಯಲ್ಲಿ ಉತ್ತಮ ಮಳೆಯ ಸಾಧ್ಯತೆ; ರಾಜ್ಯದಲ್ಲಿ ಮಳೆ ಚಟುವಟಿಕೆ ಮುಂದುವರಿಕೆ

23.07.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ ಕರಾವಳಿ: ಕಾಸರಗೋಡು, ದಕ್ಷಿಣ…

1 day ago

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ

ಆಮದುಗೊಂಡ ಕಳಪೆ ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಮಿಶ್ರಣ ಮಾಡಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ…

2 days ago

ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಬಿಟ್ಟು ಬಿಟ್ಟು ಸಾಧಾರಣ ಮಳೆ…

2 days ago

ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ

ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…

3 days ago

ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್

ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…

3 days ago