Advertisement
MIRROR FOCUS

ಕೃಷ್ಣಜನ್ಮಾಷ್ಟಮಿ ಶುಭಾಶಯ | ಕೃಷ್ಣನೆಂದರೆ ಪ್ರೀತಿ…..

Share

ಅದೊಂದು ವಿಶೇಷ ಸಮಾರಂಭ.  ರಂಗು ರಂಗಿನ ಕಾರ್ಯಕ್ರಮ. ನಗುವಿನಲೆಯಲ್ಲಿ  ತುಂಬಿರುವ  ವಾತಾವರಣ . ಪುಟ್ಟ ಪುಟ್ಟ  ಕಂದಮ್ಮಗಳು.    ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿ ಚೆಂದಕೆ ಆಭರಣಗಳನ್ನು ಹಾಕಿ ಅಚೀಚೆ ತಿರುಗುತ್ತಾ , ಮಕ್ಕಳ ಹಿಂದೆ ಅವರ ಅಮ್ಮಂದಿರೂ  ಹೆಜ್ಜೆ ಹಾಕುತ್ತಾ  ಪರಿಸರಕ್ಕೊಂದು ವಿಶೇಷ ಕಳೆ ಬಂದಂತಾಗಿದೆ. ಏನು  ಸ್ಕೂಲ್ ಡೇ ವರ್ಣನೆ ಅಂದುಕೊಂಡಿರಾ

? ಅಲ್ಲಪ್ಪಾ ಅಲ್ಲ. ಇದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದ ದೃಶ್ಯ.  ಅಲ್ಲಿ ಮಕ್ಕಳ ಕಲರವವೇ ತುಂಬಿತ್ತು. ತೊದಲು ನುಡಿಗೆ ಸಣ್ಣನೆಯ ದನಿಯ ಸಂಗೀತ  ಹೊಸ ಲೋಕವನ್ನೇ ಸೃಷ್ಟಿ ಸಿತ್ತು. ಮಕ್ಕಳ ಚಟುವಟಿಕೆಗೆ, ಹೆತ್ತವರ ಸೃಜನಶೀಲತೆಗೊಂದು ವೇದಿಕೆ ಸಿದ್ದವಾಗಿತ್ತು.  ಮಕ್ಕಳೆಂದರೆ  ದೇವರೇ ಅಲ್ಲವೆ ? ಮುಗ್ಧ ಮನಸಿನ ಕಂದಮ್ಮಗಳು. ಅವುಗಳ ಜಗತ್ತೇ ಸುಂದರ. ಅಲ್ಕಿ ಕಳೆಯುವ ಕ್ಷಣಗಳೇ ಅಮೂಲ್ಯ.
ಕೃಷ್ಣ ನೆಂದರೆ ಮನಸಿಗೆ ಹತ್ತಿರದವನು. ಗಣೇಶನನ್ನು ಎಷ್ಟು ಆರಾಧಿಸುತ್ತೇವೋ ಕೃಷ್ಣ ನನ್ನು ಅಷ್ಟೇ ಪ್ರೀತಿಸುತ್ತೇವೆ.  ನಾವು ನ ಎಳೆಯುತ್ತಾ ಕೃಷ್ಣ ನ ಬಾಲ್ಯ ಲೀಲೆಗಳನ್ನು ಕೇಳುತ್ತಾ ಬೆಳೆದುದು. ಕೃಷ್ಣ ನ ಬಗ್ಗೆ   ಎಷ್ಟು ಹೇಳಿದರೂ ಮುಗಿಯದ ಕಥೆಗಳು . ಒಂದಕ್ಕಿಂತ ಒಂದು ವಿಭಿನ್ನ ಸಾಹಸಗಳು. ಹುಟ್ಟಿದ ದಿನದಿಂದಲೇ ಅವನ ಸಾಹಸ ಯಾತ್ರೆಗಳು ಆರಂಭ. ಸೆರೆ ಮನೆಯಿಂದ  ಗೋಕುಲದ  ಪಯಣವೂ ರೋಚಕವೇ. ಇನ್ನೂ ಗೋಕುಲದಲ್ಲಿ ಶ್ರೀ ಕೃಷ್ಣ ನ ಬೆಳವಣಿಗೆಯ ಪ್ರತಿ ಹಂತವೂ ಒಂದು ಕಥೆಯೇ. ಕೃಷ್ಣ ನೆಂದು ಒಡೆಯನಾಗಿಯೇ  ಇರಲಿಲ್ಲ. ಸಾಮಾನ್ಯ ರಲ್ಲಿ ಸಾಮಾನ್ಯ ನಾಗಿ ಇದ್ದವ. ಎಲ್ಲಿ ಬೇಕೋ ಅಲ್ಲಿ ತನ್ನ ಶಕ್ತಿಯ ಉಪಯೋಗ ಮಾಡುತ್ತಿದ್ದವ. ಎಲ್ಲಾ ಮಕ್ಕಳಂತೆ   ತುಂಟ. ಇಂದೂ ಮಕ್ಕಳು ಜಾಸ್ತಿ ಉಪದ್ರ ಮಾಡಿದರೂ  ಹೇಳುವುದು ಕೃಷ್ಣನ ನ್ನೇ. ಇವ ನೋಡು ಕೃಷ್ಣನಂತೆ  ತುಂಟನೆಂದು. ಕೃಷ್ಣ  ಎಲ್ಲರಿಗೂ ಇಷ್ಟವಾಗುವಂತವ. ಅವನು  ದೇವರಾದರೂ ನಮ್ಮ ನಿಮ್ಮೆಲ್ಲರಂತೆ.  ಸ್ವಯಂ ಶಕ್ತಿ ವಂತನಾದರೂ ಎಲ್ಲೂ ಅನಗತ್ಯ ಪ್ರದರ್ಶನ ಮಾಡದೆ  ಅಗತ್ಯವಿದ್ದಾಗ ಪ್ರಯೋಗಿಸುವವ. ಯಾರು ಸಂಪೂರ್ಣ ಆತನಿಗೆ ಶರಣಾಗುತ್ತರೋ ಅವರನ್ನು ಸದಾ ಕಾಯುವವ.  ಕಷ್ಟಗಳು ಬಂದಾಗ , ನೆನೆದವರ ಮನದಲ್ಲಿ ನಾ ಬಂದೆ ಎಂದು ಅಲ್ಲಿರುವನಾತ.
ಬದುಕಿನ  ದುಃಖದ ಕ್ಷಣದಲ್ಲಿ ಎಲ್ಲರನ್ನು ನೆನಪಿಸಿ ಕೊಳ್ಳುತ್ತೇವೆ. ಆದರೆ ಖುಷಿಯಲ್ಲಿದ್ದಾಗಲೂ ನೆನಪಾಗುವವರು, ಮನಸ್ಸಿಗೆ  ಹತ್ತಿರದವರು. ಕೃಷ್ಣ ಕಷ್ಟದಲ್ಲೂ, ಖುಷಿಯಲ್ಲೂ  ನೆನಪಾಗುವವ. ಅವನ ಹುಟ್ಟು ಹಬ್ಬವೆಂದರೆ ಸಂಭ್ರಮವಲ್ಲವೆ?  ತಿಂಡಿಗಳೆಂದರೆ  ,ಅದರಲ್ಲೂ ಸಿಹಿಯೆಂದರೆ ಬಲು ಇಷ್ಟ. ಕೃಷ್ಣಾಷ್ಟಮಿಯಂದು  ತರತರದ ಉಂಡೆಗಳು , ಚಕ್ಕುಲಿಗಳು, ಉದ್ದಿನ ಕಡುಬು, ಪಾಯಸ , ರಸಾಯನ , ಹಾಲು, ಬೆಣ್ಣೆ , ಮೊಸರು ಹೀಗೆ ಬಗೆಬಗೆಯ ನೈವೇದ್ಯವನ್ನು ಸಮರ್ಪಿಸುವುದು  ಮೆಚ್ಚಿನ ಕೆಲಸ.  ಬಹಳ ನಿರೀಕ್ಷಿಸಿ ಆಚರಿಸುವ ತಿಂಡಿಗಳ ಹಬ್ಬವೇ ಅಷ್ಟಮಿ.
ಎಲ್ಲರಿಗೂ ಹಬ್ಬದ ಶುಭಾಶಯ ಗಳು.
#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ : ಮಂಗಳೂರು ಮಹಾನಗರಪಾಲಿಕೆ ಸೂಚನೆ

2026ರ ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಮಂಗಳೂರು ಮಹಾನಗರಪಾಲಿಕೆ ಸೂಚಿಸಿದ್ದು, POP…

3 hours ago

ಹವಾಮಾನ ವರದಿ | 09-09-2026 | ಕರ್ನಾಟಕದಲ್ಲಿ ಮಳೆಯ ಚಿತ್ರಣ ಬದಲಾಗುತ್ತಿದೆ – ಸೆ.11ರಿಂದ ಕರಾವಳಿಯಲ್ಲಿ ಬದಲಾವಣೆ

ಕರ್ನಾಟಕದಲ್ಲಿ ಮಳೆಯ ಸಾಧ್ಯತೆ ಒಟ್ಟಾರೆ ಇಳಿಮುಖವಾಗುತ್ತಿದ್ದು, ಕರಾವಳಿಯಲ್ಲಿ ಸೆ.11ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.…

11 hours ago

ಕ್ಯಾಂಪ್ಕೋ ಅಭಿವೃದ್ಧಿಯ ಹಾದಿಯಲ್ಲಿ: ₹2,900 ಕೋಟಿ ಅಡಿಕೆ ವ್ಯವಹಾರದ ನಡುವೆ ಮುಂದಿರುವ ಸವಾಲುಗಳೇನು?

2025-26ರಲ್ಲಿ ಕ್ಯಾಂಪ್ಕೋದ ಅಡಿಕೆ ಖರೀದಿ ಪ್ರಮಾಣ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದ್ದರೂ, ಬೆಲೆ ಏರಿಕೆಯಿಂದ…

18 hours ago

ಅಡಿಕೆಯಷ್ಟೇ ಅಲ್ಲ ಅದೇ ಮರಕ್ಕೆ ವೆನಿಲ್ಲಾ ಬಳ್ಳಿ | ಅಸ್ಸಾಂನಲ್ಲಿ ಅಡಿಕೆಯ ಜೊತೆಗೆ ಇನ್ನೊಂದು ಬೆಳೆ..

ಅಸ್ಸಾಂನ ಗುಹಾಟಿ ಸಮೀಪದ 10 ಅರಣ್ಯ ಅಂಚಿನ ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು…

1 day ago

ದೇಶಾದ್ಯಂತ ಮುಂಗಾರು ಬಿತ್ತನೆ 1,086 ಲಕ್ಷ ಹೆಕ್ಟೇರ್ ದಾಟಿದೆ – ಕರ್ನಾಟಕದಲ್ಲಿ ಭತ್ತ, ದ್ವಿದಳ ಧಾನ್ಯ ಕೃಷಿ ಕುಸಿತ

ದೇಶದ ಪ್ರಸಕ್ತ ಮುಂಗಾರು ಬೆಳೆಗಳ ಬಿತ್ತನೆ ಪ್ರದೇಶ 1,086 ಲಕ್ಷ ಹೆಕ್ಟೇರ್ ದಾಟಿದ್ದರೂ…

1 day ago

ಜಾನುವಾರುಗಳ ಮೇವಿನ ಕೊರತೆಗೆ ಅಜೋಲಾ ಪರಿಹಾರ – ರಾಜ್ಯದಲ್ಲಿ 12 ಸಾವಿರ ಘಟಕಗಳ ಸ್ಥಾಪನೆಗೆ ಚಾಲನೆ

ರಾಜ್ಯದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು ಒದಗಿಸಲು ₹3.78 ಕೋಟಿ ವೆಚ್ಚದಲ್ಲಿ 12…

1 day ago