ಸುಳ್ಯ:ಮಾವಿನಕಟ್ಟೆ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನ ಕೆರೆಗೆ ಬಿದ್ದಿದ್ದ ಕಾಡುಕೋಣದ ಮರಿ ಶನಿವಾರ ಸಂಜೆಯ ಹೊತ್ತಿಗೆ ಕಾಡು ಸೇರಿತು. ಶನಿವಾರ ಬೆಳಗ್ಗಿನಿಂದಲೇ ಸತತ ಪ್ರಯತ್ನದ ಬಳಿಕ ಕಾಡು ಸೇರಲು ಸಾಧ್ಯವಾಯಿತು.
ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನ ಉದಯಗಿರಿ ಇಲ್ಲಿಯ ಕೆರೆಗೆ ಶುಕ್ರವಾರ ರಾತ್ರಿ ಆಯ ತಪ್ಪಿ ಕಾಡುಕೋಣ ಬಿದ್ದಿತ್ತು. ಶನಿವಾರ ಬೆಳಗ್ಗೆ ಸ್ಥಳೀಯರಿಗೆ ತಿಳಿದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಬಳಿಕ ಸಂಜೆಯವರೆಗೆ ಕಾರ್ಯಾಚರಣೆ ನಡೆದಿತ್ತು.
ಕಾಡುಕೋಣ ಬಿದ್ದ ವಿಷಯ ತಿಳಿದು ಜನ ಸಾಗರವೇ ಕೆರೆಯ ಕಡೆಗೆ ಬಂದಿತ್ತು. ಬೆಳಗ್ಗಿನಿಂದಲೇ ಕಾಡು ಕೋಣ ರಕ್ಷಣೆ ಕಾರ್ಯ ಪ್ರಾರಂಭವಾಯಿತು. ನೀರಿಗೆ ಬಿದ್ದು ಸುಸ್ತಾಗಿದ್ದ ಕಾಡುಕೋಣವನ್ನು ಕೋಣವನ್ನು ಹೊರ ಹಾಕುವುದು ತ್ರಾಸದಾಯಕವಾಯಿತು. ಅರಣ್ಯ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನ ದಲ್ಲಿ ಯುವಕರ ಶ್ರಮದಿಂದ ಸಂಜೆಯ ವರೆಗೂ ಕಾರ್ಯ ಮುಂದುವರೆಯಿತು. ಕಾಡುಕೋಣವನ್ನು ರಕ್ಷಣೆ ಮಾಡುವುದು ಎಲ್ಲರ ಕಾಳಜಿಯಾಗಿತ್ತು. ಬೆಳಗ್ಗೆ ಅಡಿಕೆ ಮರದ ಪಾಲ ಹಾಕಿದ್ದರೆ ನಂತರ ಹಗ್ಗದ ಸಹಾಯದಿಂದ ಮೇಲೆಳೆದು ಓಡುವಂತೆ ಮಾಡಲಾಯಿತು. ಕೊನೆಗೂ ಸಂಜೆಯ ವೇಳೆಗೆ ಕಾಡುಕೋಣ ಕಾಡು ಸೇರಿತು.
ಈ ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಅರಣ್ಯ ಇಲಾಖೆ ವಂದನೆ ಸಲ್ಲಿಸಿದೆ. ವನ್ಯ ಜೀವಿಗಳ ರಕ್ಷಣೆ ನಮ್ಮದು. ಪರಿಸರ ಉಳಿಸಿ ಎಂಬ ಘೋಷ ವಾಕ್ಯ ಮೊಳಗಿತು.
ಬಿಹಾರದ ಯುರೆನ್ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…
ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…
2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…
ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…