ಸುಳ್ಯ: ನಾಡಿನೆಲ್ಲೆಡೆ ಕರೋನಾ ವೈರಸ್ ಹರಡುವುದನ್ನು ತಡೆಯಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಿದೆ. ಇದೇ ವೇಳೆ ರೋಗನಾಶಕವಾದ ಮಂತ್ರಗಳಿಂದ ಲೋಕಕಲ್ಯಾಣಕ್ಕಾಗಿ ಮನೆಮನೆಗಳಲ್ಲಿ ಯಜ್ಞಾನುಷ್ಠಾನ ನಡೆಯತ್ತಿದೆ. ಸುಳ್ಯ ತಾಲೂಕಿನ ವಿವಿದೆಡೆ ಈ ಯಜ್ಞ ನಡೆಯುತ್ತಿದೆ. ಈ ಮೂಲಕ ಲೋಕ ಹಿತ, ಜನರಿಗೆ ಮಾನಸಿಕ ಧೈರ್ಯ ತುಂಬುವ ಕಾರ್ಯ ನಡೆಯುತ್ತಿದೆ.
ಗುತ್ತಿಗಾರು ಗ್ರಾಮದ ಹಿರಿಯ ವೈದಿಕ ವಿದ್ವಾಂಸರೂ, ಮಾರ್ಗದರ್ಶಕರೂ ಆಗಿರುವ ವೇದಗುರು ಕರುವಜೆ ಕೇಶವ ಜೋಯಿಸರ ನೇತೃತ್ವದಲ್ಲಿ ಮಾ.20 ನೇ ತಾರೀಕಿನಿಂದ ನಿರಂತರವಾಗಿ ರೋಗನಾಶಕವಾದ ಮಂತ್ರಗಳಿಂದ ಲೋಕಕಲ್ಯಾಣಕ್ಕಾಗಿ ಮನೆಮನೆಗಳಲ್ಲಿ ಯಜ್ಞಾನುಷ್ಠಾನ ನಡೆಯತ್ತಿದೆ. ಯಜ್ಞದ ಸಂದರ್ಭ ವೈಜ್ಞಾನಿಕ ರೀತಿಯಲ್ಲಿ ಅಂತರ ಕಾಪಾಡಿಕೊಂಡು ಯಜ್ಞಾನುಷ್ಠಾನ ನಡೆಯತ್ತಿರುವುದು ವಿಶೇಷವಾಗಿದೆ.
ಲೋಕಕ್ಕೆ ಬಾಧಿತವಾದಂತ ಕೋವಿಡ್-19 (ಕರೋನಾ) ವೈರಸ್ ಶೀಘ್ರದಲ್ಲಿ ನಾಶವಾಗುವುದರ ಜೊತೆ ಈ ಸಮರದಲ್ಲಿ ನಿರಂತರ ತೊಡಗಿಸಿಕೊಂಡಿರುವ ಈ ದೇಶದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತ ವರ್ಗ , ಅಧಿಕಾರಿಗಳು, ವೈದ್ಯಕೀಯ ವಿಭಾಗ , ಆರಕ್ಷಕರು ,ಸೈನ್ಯ , ಹಾಗೂ ದೇಶದ ಸಮಸ್ತ ಪ್ರಜಾಜನರ ಕ್ಷೇಮವನ್ನು ಸಂಕಲ್ಪಿಸಿ ಔಷಧೀಯ ವಸ್ತಗಳು ಹಾಗೂ ವನಸ್ಪತಿಗಳನ್ನು ಯಜ್ಞ ದ ಮೂಲಕ ಭಗವಂತನಿಗೆ ಸಮರ್ಪಿಸಲಾಗಿದೆ.
ಸುಳ್ಯ ಹಾಗೂ ಕಡಬ ತಾಲೂಕಿನ ಹಲವೆಡೆಗಳಲ್ಲಿ ಈ ಕಾರ್ಯ ನಡೆಸಲಾಗಿದ್ದು ಈ ಗುತ್ತಿಗಾರು ಭಾಗದಲ್ಲಿ ಮುರಳೀಕೃಷ್ಣ ವಳಲಂಬೆ ,ಪ್ರಸಾದ ಜೋಷಿ, ಶ್ಯಾಮಕೃಷ್ಣ ಹೊಸವಳಿಕೆ , ಅಚಿಂತ್ಯರಾಮ ಶರ್ಮ, ಕರುವಜೆ ಶಿವಸುಬ್ರಹ್ಮಣ್ಯ ಶರ್ಮಾ ಮೊದಲಾದವರ ನಿರಂತರ ಸಹಕಾರದೊಂದಿಗೆ ಈ ಯಜ್ಞ ಸಂಪನ್ನಗೊಳ್ಳುತ್ತಿದೆ.
ಸಮಾಜದ ಎಲ್ಲ ಮನೆಗಳಲ್ಲಿ ಇಂತಹ ಯಜ್ಞದ ಅನುಷ್ಠಾನ ನಡೆಯಲಿ ಎಂಬ ಸದಾಶಯದೊಂದಿಗೆ ಕೇಶವ ಜೋಯಿಸರು ಈ ಕಾರ್ಯವನ್ನು ನಡೆಸುತ್ತಿದ್ದಾರೆ.
12.07.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…
ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತು ಒಂದು ನಿಗೂಢ ಗ್ರಹವಾಗಿದ್ದು, ಆಧ್ಯಾತ್ಮಿಕತೆ, ಕರ್ಮ, ಮತ್ತು ಜೀವನದಲ್ಲಿ…
ಕೋಲಾರ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಗ್ರಾಮ ಪಂಚಾಯತಿ ಸೇರಿದಂತೆ ಯಾವುದೇ…
ಹಾವೇರಿ ಜಿಲ್ಲೆಯಲ್ಲಿ ಹರಿಯುವ ವರದಾ ಹಾಗೂ ತುಂಗಭದ್ರಾ ನದಿಗಳಲ್ಲಿ ನೀರಿನ ಮಟ್ಟ ಕ್ರಮೇಣ…
ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, 23 ಅಸಂಘಟಿತ ವರ್ಗಗಳ…
ಹಾವೇರಿ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆಯಿಂದಾಗಿ 148.57 ಹೆಕ್ಟೇರ್ ಪ್ರದೇಶದಲ್ಲಿದ್ದ…