ಬೆಳ್ಳಾರೆ: ಕಳಂಜ ಬಾಳಿಲ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಕಳಂಜ ರೈತ ಸ್ನೇಹಿತರ ಕೂಟದ ಜಂಟಿ ಸಹಯೋಗದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಾಣು ಹಾಗು ಸಾವಯವ ಗೊಬ್ಬರ ತಯಾರಿಕ ಘಟಕದ ಉತ್ಪನ್ನ ಸಾವಯವ ಸೂಕ್ಷ್ಮಾಣು ಪೋಷಕಾಂಶ ಗೊಬ್ಬರದ ಕುರಿತು ಮಾಹಿತಿ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮವು ಕೋಟೆಮುಂಡುಗಾರಿನ ಸಂಘದ ಪ್ರಧಾನ ಕಚೇರಿ ಸಭಾಭವನದಲ್ಲಿ ನಡೆಯಿತು.
ಮಾಹಿತಿ ಮತ್ತು ತರಬೇತುದಾರ ವಿಷ್ಣುಮೂರ್ತಿ.ಜಿ.ರಾವ್ ಸಾವಯವ ಪೋಷಕಾಂಶ ಗೊಬ್ಬರ ತಯಾರಿಕೆ ಮತ್ತು ಬಳಸುವಿಕೆಯ ರೀತಿ, ಗೊಬ್ಬರದ ಪ್ರಮಾಣದ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಾಹಿತಿದಾರ ಮತ್ತು ಗ್ರಾಮದ ಕೃಷಿಕರ ಮಧ್ಯೆ ವಿವಿಧ ಪ್ರಶ್ನೋತ್ತರ ಹಾಗು ಚರ್ಚೆಗಳು ನಡೆಯಿತು.
ಕಾರ್ಯಕ್ರಮದಲ್ಲಿ ಕಳಂಜ ಬಾಳಿಲ ಪ್ರಾಕೃಪಸ ಸಂಘದ ಅಧ್ಯಕ್ಷ ಸುಧಾಕರ.ರೈ ಎ.ಎಂ, ಉಪಾಧ್ಯಕ್ಷ ಲಿಂಗಪ್ಪ ಗೌಡ ತಂಟೆಪ್ಪಾಡಿ, ನಿರ್ದೇಶಕರಾದ ಕುಞ್ಞಂಣ್ಣ ನಾಯ್ಕ ಬಾಳೆಗುಡ್ಡೆ, ಮುಗುಪ್ಪು ಕೂಸಪ್ಪ ಗೌಡ, ವಿಶ್ವನಾಥ ರೈ ಕಳಂಜ, ಕಾರ್ಯನಿರ್ವಹಣಾಧಿಕಾರಿ ವೆಂಕಪ್ಪಯ್ಯ.ಕೆ, ಹಾಗೂ ಕಳಂಜ ಗ್ರಾಮದ ರೈತರು, ಕೃಷಿಕರು ಉಪಸ್ಥಿತರಿದ್ದರು.
ಕಳಂಜ ರೈತ ಸ್ನೇಹಿತರ ಕೂಟದ ಸಂಚಾಲಕ ಪವನ ವೆಂಕಟ್ರಮಣ ಭಟ್ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು.
ದಕ್ಷಿಣ-ಪೂರ್ವ ಏಷ್ಯಾದಿಂದ ಆಮದು ಮಾಡಿದ ಅಡಿಕೆಯನ್ನು ಬಾಂಗ್ಲಾದೇಶ ಮೂಲದ ಅಡಿಕೆಯೆಂದು ತಪ್ಪಾಗಿ ಘೋಷಿಸಿ…
ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 24ರವರೆಗೂ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…
ಗ್ರಾಮೀಣ ಹಾಗೂ ಸಾರಿಗೆ ಸಂಪರ್ಕದಿಂದ ವಂಚಿತ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸೇವೆ ಹೆಚ್ಚಿಸುವ…
ಕರ್ನಾಟಕದಲ್ಲಿ ಮಳೆ ಚಟುವಟಿಕೆ ಸದ್ಯಕ್ಕೆ ಇಳಿಕೆಯಾಗಿದ್ದು, ಕರಾವಳಿಯಲ್ಲಿ ಮುಂದಿನ 10 ದಿನವೂ ಚದುರಿದ…
ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…
ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…