Advertisement
ಸುದ್ದಿಗಳು

ಖಗೋಳ ವೀಕ್ಷಕರಿಗೊಂದು ಅಪರೂಪದ ವಿದ್ಯಮಾನ | ಮೇ.13 ರಂದು ಬೆಳಗ್ಗೆ ಕಾಣಿಸಲಿದೆ ಸ್ವಾನ್ ಧೂಮಕೇತು |

Share

ಆಗಸದಲ್ಲಿ ಬುಧವಾರ (ಮೇ13) ಬೆಳಗಿನ ಜಾವ ಅಚ್ಚರಿಯ ವಿದ್ಯಮಾನವೊಂದು ಘಟಿಸಲಿದೆ. ಭೂಮಿಯ ಸಮೀಪ ಅಂದರೆ 8.33 ಕೋಟಿ ಕಿ.ಮೀ.ದೂರದಲ್ಲಿ ಸ್ವಾನ್ ಧೂಮಕೇತು ಹಾದು ಹೋಗಲಿದೆ. ಇದು ಈ ಧೂಮಕೇತು 5.7 ರಷ್ಟು ಪ್ರಕಾಶಮಾನ (Magnitude) ಹೊಂದಿದೆ. ಕನಿಷ್ಟ 6.0 ರಷ್ಟು ಕಾಂತಿ ಹೊಂದಿರುವ ಯಾವುದೇ ಆಕಾಶಕಾಯ ಬರಿಗಣ್ಣಿಗೆ ಗೋಚರಿಸುತ್ತದೆ.

ಸಮಭಾಜಕ ವೃತ್ತದಿಂದ ದಕ್ಷಿಣ ಭಾಗದಲ್ಲಿ ವಾಸಿಸುವ ಮಂದಿ ಈ ಧೂಮಕೇತುವನ್ನು ಬರಿ ಕಣ್ಣಿನಿಂದ ವೀಕ್ಷಿಸಬಹುದಾಗಿದೆ.ನಾವು ಉತ್ತರ ಭಾಗದಲ್ಲಿರುವ ಕಾರಣ ಬರಿಗಣ್ಣಿಗೆ ಗೋಚರಿಸುವ ಸಾಧ್ಯತೆ ಕಡಿಮೆ. ಆದಾಗ್ಯೂ ದೂರದರ್ಶಕದ ಮೂಲಕ ವೀಕ್ಷಿಸಬಹುದಾಗಿದೆ. ಬೆಳಗ್ಗೆ ಸುಮಾರು 4.30 ರ ನಂತರ ಈಶಾನ್ಯ ಉತ್ತರ ಭಾಗದಲ್ಲಿ ಮೀನ ರಾಶಿಯಲ್ಲಿ ಕಾಣಿಸಿಕೊಳ್ಳಲಿದೆ.

ಮೇ.27 ಕ್ಕೆ ಈ ಧೂಮಕೇತು ಸೂರ್ಯನನ್ನು ಸಮೀಪಿಸಲಿದೆ. CometSWAN ಎಂಬ ಟ್ವಿಟರ್ ಖಾತೆಯಲ್ಲಿ ಈ ಧೂಮಕೇತುವಿನ ಚಲನೆಯನ್ನು ಅನುಸರಿಸಬಹುದು.

ಏನಿದು ಧೂಮಕೇತು:  ಅಸಂಖ್ಯಾತ ಕ್ಷುದ್ರ ಕಾಯಗಳು ಸೂರ್ಯನಿಗೆ ಪರಿಭ್ರಮಣೆ ಹಾಕುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಹೆಚ್ಚಿನ ಧೂಳಿನ ಅಂಶ ಹೊಂದಿರುತ್ತವೆ.ಅವು ಸೂರ್ಯನ ಸಮೀಪ ಬರುತ್ತಿದ್ದಂತೆ ಸೂರ್ಯನ ವಿಪರೀತ ಶಾಖಕ್ಕೆ ಧೂಳಿನ ಹೊಗೆಯನ್ನು ಬಾಲದ ರೂಪದಲ್ಲಿ ಹೊರಸೂಸುತ್ತವೆ. ಅದುವೇ ಧೂಮಕೇತು.

76 ವರ್ಷಗಳಿಗೊಮ್ಮೆ ಸೂರ್ಯನ ಸಮೀಪ ಬರುವ ಹ್ಯಾಲಿ ಧೂಮಕೇತುವಿನಂತೆ ನಿಗದಿತ ಕಕ್ಷೆಯಲ್ಲಿ ಚಲಿಸುವ ಧೂಮಕೇತುಗಳೂ ಇವೆ.ಇನ್ನೂ ಒಂದು ಧೂಮಕೇತು ATLAS ಇದೇ ಮೇ 23 ರಂದು ಭೂಮಿಯ ಸಮೀಪ ಹಾದು ಹೋಗಲಿದೆ. ಇದು ಮೇ 31 ರಂದು ಸೂರ್ಯನ ಸಮೀಪ ದಾಟಿಹೋಗಲಿದೆ.ಇದು ಕೂಡಾ ಬರಿಗಣ್ಣಿಗೆ ಗೋಚರಿಸುವ ಸಾಧ್ಯತೆ ಕಡಿಮೆ.

ಮಾಹಿತಿ :

 

 

 

ಪಿ ಜಿ ಎಸ್ ಎನ್ ಪ್ರಸಾದ್ ಬಾಳಿಲ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅವೈಜ್ಞಾನಿಕ ಮಳೆ ವರದಿ ಶೈಕ್ಷಣಿಕ ವಲಯಕ್ಕೆ ತೊಂದರೆ – ಹವಾಮಾನ ಮುನ್ಸೂಚನೆ ಕುರಿತು ಎಸ್.ಎಲ್. ಭೋಜೆಗೌಡ ಕಳವಳ

ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…

4 hours ago

ಹವಾಮಾನ ವರದಿ | 26-07-2026 | ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕು – ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ | ಕರಾವಳಿ–ಮಲೆನಾಡಿನಲ್ಲಿ 10 ದಿನ ಮಳೆಯ ಸಾಧ್ಯತೆ

ಪಶ್ಚಿಮ ಬಂಗಾಳ ಕರಾವಳಿಯಲ್ಲಿ ರೂಪುಗೊಳ್ಳಲಿರುವ ವಾಯುಭಾರ ಕುಸಿತದಿಂದ ಕರ್ನಾಟಕದಲ್ಲಿ ಮತ್ತೆ ಮುಂಗಾರು ಚುರುಕುಗೊಳ್ಳುವ…

4 hours ago

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

1 day ago

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…

2 days ago

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…

2 days ago