Advertisement
ಸುದ್ದಿಗಳು

ಖಗೋಳ ವೀಕ್ಷಕರಿಗೊಂದು ಅಪರೂಪದ ವಿದ್ಯಮಾನ | ಮೇ.13 ರಂದು ಬೆಳಗ್ಗೆ ಕಾಣಿಸಲಿದೆ ಸ್ವಾನ್ ಧೂಮಕೇತು |

Share

ಆಗಸದಲ್ಲಿ ಬುಧವಾರ (ಮೇ13) ಬೆಳಗಿನ ಜಾವ ಅಚ್ಚರಿಯ ವಿದ್ಯಮಾನವೊಂದು ಘಟಿಸಲಿದೆ. ಭೂಮಿಯ ಸಮೀಪ ಅಂದರೆ 8.33 ಕೋಟಿ ಕಿ.ಮೀ.ದೂರದಲ್ಲಿ ಸ್ವಾನ್ ಧೂಮಕೇತು ಹಾದು ಹೋಗಲಿದೆ. ಇದು ಈ ಧೂಮಕೇತು 5.7 ರಷ್ಟು ಪ್ರಕಾಶಮಾನ (Magnitude) ಹೊಂದಿದೆ. ಕನಿಷ್ಟ 6.0 ರಷ್ಟು ಕಾಂತಿ ಹೊಂದಿರುವ ಯಾವುದೇ ಆಕಾಶಕಾಯ ಬರಿಗಣ್ಣಿಗೆ ಗೋಚರಿಸುತ್ತದೆ.

Advertisement
Advertisement

ಸಮಭಾಜಕ ವೃತ್ತದಿಂದ ದಕ್ಷಿಣ ಭಾಗದಲ್ಲಿ ವಾಸಿಸುವ ಮಂದಿ ಈ ಧೂಮಕೇತುವನ್ನು ಬರಿ ಕಣ್ಣಿನಿಂದ ವೀಕ್ಷಿಸಬಹುದಾಗಿದೆ.ನಾವು ಉತ್ತರ ಭಾಗದಲ್ಲಿರುವ ಕಾರಣ ಬರಿಗಣ್ಣಿಗೆ ಗೋಚರಿಸುವ ಸಾಧ್ಯತೆ ಕಡಿಮೆ. ಆದಾಗ್ಯೂ ದೂರದರ್ಶಕದ ಮೂಲಕ ವೀಕ್ಷಿಸಬಹುದಾಗಿದೆ. ಬೆಳಗ್ಗೆ ಸುಮಾರು 4.30 ರ ನಂತರ ಈಶಾನ್ಯ ಉತ್ತರ ಭಾಗದಲ್ಲಿ ಮೀನ ರಾಶಿಯಲ್ಲಿ ಕಾಣಿಸಿಕೊಳ್ಳಲಿದೆ.

Advertisement

ಮೇ.27 ಕ್ಕೆ ಈ ಧೂಮಕೇತು ಸೂರ್ಯನನ್ನು ಸಮೀಪಿಸಲಿದೆ. CometSWAN ಎಂಬ ಟ್ವಿಟರ್ ಖಾತೆಯಲ್ಲಿ ಈ ಧೂಮಕೇತುವಿನ ಚಲನೆಯನ್ನು ಅನುಸರಿಸಬಹುದು.

ಏನಿದು ಧೂಮಕೇತು:  ಅಸಂಖ್ಯಾತ ಕ್ಷುದ್ರ ಕಾಯಗಳು ಸೂರ್ಯನಿಗೆ ಪರಿಭ್ರಮಣೆ ಹಾಕುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಹೆಚ್ಚಿನ ಧೂಳಿನ ಅಂಶ ಹೊಂದಿರುತ್ತವೆ.ಅವು ಸೂರ್ಯನ ಸಮೀಪ ಬರುತ್ತಿದ್ದಂತೆ ಸೂರ್ಯನ ವಿಪರೀತ ಶಾಖಕ್ಕೆ ಧೂಳಿನ ಹೊಗೆಯನ್ನು ಬಾಲದ ರೂಪದಲ್ಲಿ ಹೊರಸೂಸುತ್ತವೆ. ಅದುವೇ ಧೂಮಕೇತು.

Advertisement

76 ವರ್ಷಗಳಿಗೊಮ್ಮೆ ಸೂರ್ಯನ ಸಮೀಪ ಬರುವ ಹ್ಯಾಲಿ ಧೂಮಕೇತುವಿನಂತೆ ನಿಗದಿತ ಕಕ್ಷೆಯಲ್ಲಿ ಚಲಿಸುವ ಧೂಮಕೇತುಗಳೂ ಇವೆ.ಇನ್ನೂ ಒಂದು ಧೂಮಕೇತು ATLAS ಇದೇ ಮೇ 23 ರಂದು ಭೂಮಿಯ ಸಮೀಪ ಹಾದು ಹೋಗಲಿದೆ. ಇದು ಮೇ 31 ರಂದು ಸೂರ್ಯನ ಸಮೀಪ ದಾಟಿಹೋಗಲಿದೆ.ಇದು ಕೂಡಾ ಬರಿಗಣ್ಣಿಗೆ ಗೋಚರಿಸುವ ಸಾಧ್ಯತೆ ಕಡಿಮೆ.

ಮಾಹಿತಿ :

Advertisement

 

Advertisement

 

 

Advertisement

ಪಿ ಜಿ ಎಸ್ ಎನ್ ಪ್ರಸಾದ್ ಬಾಳಿಲ

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಶಿಶಿಲದಲ್ಲಿರುವ ಈ ದೈವದ ವಿಶೇಷತೆ..! | ಜೋಡಿ ದೈವಗಳಿಗೆ ಜೀವಂತ ಕೋಳಿ ಅರ್ಪಣೆ |

ಗ್ರಾಮೀಣ ಭಾಗದ ನಂಬಿಕೆಗಳು ಮಾನಸಿಕವಾಗಿ ಹೆಚ್ಚು ಶಕ್ತಿ ನೀಡುತ್ತವೆ. ಅಂತಹದೊಂದು ನಂಬಿಕೆ ಶಿಶಿಲದಲ್ಲಿ…

5 mins ago

ಕೋವಿ ಡಿಪಾಸಿಟ್‌ ಪ್ರಕರಣ | ಮಹತ್ವದ ತೀರ್ಪು | ಚುನಾವಣಾ ಕಾಲದಲ್ಲಿ ಕೋವಿ ಡಿಪಾಸಿಟ್‌ಗೆ ಪರಿಹಾರ |

ಚುನಾವಣೆಯ ಸಮಯದಲ್ಲಿ ಕೋವಿ ಠೇವಣಾತಿಯ ಬಗ್ಗೆ ಕೃಷಿಕರ ಸಂಕಷ್ಟಕ್ಕೆ ನ್ಯಾಯಾಲಯವು ಪರಿಹಾರ ನೀಡಿದೆ.

1 hour ago

ಬಹುಬೆಳೆ ಬೆಳೆದು ಉತ್ತಮ ಫಸಲು ಪಡೆದ ರೈತ | ಕೃಷಿಗೆ ರೈತ ಅನುಸರಿಸಿದ ಕ್ರಮಗಳಾವುವು..?

ಮಿಶ್ರ ಬೆಳೆ, ಪರ್ಯಾಯ ಬೆಳೆ, ಬಹು ಬೆಳೆ(Mixed cropping, alternating cropping, multiple…

9 hours ago

ಸ್ಟ್ರೀಟ್ ಫುಡ್ ವರ್ಸಸ್ ಆರೋಗ್ಯ | ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ

ಆಹಾರ ಹಾಗೂಆಹಾರ ಪದ್ಧತಿಗಳ ಬಗ್ಗೆ ವಿವೇಕ್‌ ಆಳ್ವ ಅವರು ಬರೆದಿದ್ದಾರೆ.

9 hours ago

ಸಕ್ಕರೆ ತಿನ್ನುವುದಕ್ಕಿಂತ ಶುಗರ್ ಫ್ರೀ ಸೇವನೆ ಹೆಚ್ಚು ಅಪಾಯಕಾರಿ…! |

`ಶುಗರ್ ಫ್ರೀ’(Sugar Free) ಎಂಬ ಹೆಸರಿನಲ್ಲಿ ಕೃತಕ ಸಿಹಿಕಾರಕಗಳ(Artificial sweet) ಟ್ರೆಂಡ್(Trend) ಹೆಚ್ಚುತ್ತಿರುವ…

10 hours ago