ಸುಡು ಬಿಸಿಲ ಬೇಗೆಯದು
ಬೇಯುತಿಹರು ಜನರು
ಬರಗಾಲದ ಭೀತಿಯದು
ಬೆನ್ನತ್ತಿದೆ ಬೆಂಬಿಡದೆ..
ಶ್ರಮಕೆ ಪ್ರತಿಫಲವ
ಬಯಸುವ ನೇಗಿಲಯೋಗಿಯ
ಅಕ್ಷಿಗಳು ಅರಸುತಲಿಹುದು
ಆಗಸದಿ ಮಳೆ ನಕ್ಷತ್ರವನು.
ಶಪಿಸುತಿಹರು ಜನ
ರಣಬಿಸಿಲ ಕಾವನು
ನಾನಾ ತೆರದಿ ಜರಿಯುತ
ಬೇಡಿಕೆಯೊಂದ ಇಟ್ಟಿಹರು ಭಗವಂತನಲ್ಲಿ
ಸಸ್ಯಶ್ಯಾಮಲೆ ನೊಂದಿಹಳು
ದಿನಪನ ತಾಪಕೆ
ಇಳೆ ಬರಡಾಗಿಹುದು
ವರುಷಧಾರೆಯ ಕಾಣದೇ….
# ನಯನ.ಜಿ.ಎಸ್.
ಕೋಟೆ ಮುಂಡುಗಾರು
ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…
ಪಶ್ಚಿಮ ಬಂಗಾಳ ಕರಾವಳಿಯಲ್ಲಿ ರೂಪುಗೊಳ್ಳಲಿರುವ ವಾಯುಭಾರ ಕುಸಿತದಿಂದ ಕರ್ನಾಟಕದಲ್ಲಿ ಮತ್ತೆ ಮುಂಗಾರು ಚುರುಕುಗೊಳ್ಳುವ…
ಆಗಸ್ಟ್ 2ರಿಂದ 8ರವರೆಗೆ ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಮುಕ್ತ ಹಾಗೂ ಬಾಲಕಿಯರ ಚೆಸ್…
ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…
ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…