ಸುಡು ಬಿಸಿಲ ಬೇಗೆಯದು
ಬೇಯುತಿಹರು ಜನರು
ಬರಗಾಲದ ಭೀತಿಯದು
ಬೆನ್ನತ್ತಿದೆ ಬೆಂಬಿಡದೆ..
ಶ್ರಮಕೆ ಪ್ರತಿಫಲವ
ಬಯಸುವ ನೇಗಿಲಯೋಗಿಯ
ಅಕ್ಷಿಗಳು ಅರಸುತಲಿಹುದು
ಆಗಸದಿ ಮಳೆ ನಕ್ಷತ್ರವನು.
ಶಪಿಸುತಿಹರು ಜನ
ರಣಬಿಸಿಲ ಕಾವನು
ನಾನಾ ತೆರದಿ ಜರಿಯುತ
ಬೇಡಿಕೆಯೊಂದ ಇಟ್ಟಿಹರು ಭಗವಂತನಲ್ಲಿ
ಸಸ್ಯಶ್ಯಾಮಲೆ ನೊಂದಿಹಳು
ದಿನಪನ ತಾಪಕೆ
ಇಳೆ ಬರಡಾಗಿಹುದು
ವರುಷಧಾರೆಯ ಕಾಣದೇ….
# ನಯನ.ಜಿ.ಎಸ್.
ಕೋಟೆ ಮುಂಡುಗಾರು
ನೀರಿನ ಕೊರತೆಯಿಂದ ಅಡಿಕೆ ತೋಟದ ಒಂದು ಭಾಗವನ್ನು ಹಲಸು ತೋಟವನ್ನಾಗಿ ಪರಿವರ್ತಿಸಿದ ಪುತ್ತೂರಿನ…
"ಜೀವನ ಎಷ್ಟು ದೀರ್ಘ ಎಂಬುದಲ್ಲ, ಅದು ಎಷ್ಟು ಅರ್ಥಪೂರ್ಣ ಎಂಬುದೇ ನಿಜವಾದ ಲೆಕ್ಕ.…
ಜುಲೈ 8ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ. ಕರಾವಳಿ…
ದೇಶದಾದ್ಯಂತ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ…
ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲ್ಚಾರ್ ಉದ್ಯಮಿಯ…