ಸುಡು ಬಿಸಿಲ ಬೇಗೆಯದು
ಬೇಯುತಿಹರು ಜನರು
ಬರಗಾಲದ ಭೀತಿಯದು
ಬೆನ್ನತ್ತಿದೆ ಬೆಂಬಿಡದೆ..
ಶ್ರಮಕೆ ಪ್ರತಿಫಲವ
ಬಯಸುವ ನೇಗಿಲಯೋಗಿಯ
ಅಕ್ಷಿಗಳು ಅರಸುತಲಿಹುದು
ಆಗಸದಿ ಮಳೆ ನಕ್ಷತ್ರವನು.
ಶಪಿಸುತಿಹರು ಜನ
ರಣಬಿಸಿಲ ಕಾವನು
ನಾನಾ ತೆರದಿ ಜರಿಯುತ
ಬೇಡಿಕೆಯೊಂದ ಇಟ್ಟಿಹರು ಭಗವಂತನಲ್ಲಿ
ಸಸ್ಯಶ್ಯಾಮಲೆ ನೊಂದಿಹಳು
ದಿನಪನ ತಾಪಕೆ
ಇಳೆ ಬರಡಾಗಿಹುದು
ವರುಷಧಾರೆಯ ಕಾಣದೇ….
# ನಯನ.ಜಿ.ಎಸ್.
ಕೋಟೆ ಮುಂಡುಗಾರು
ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್ನಲ್ಲಿ…
ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…
ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…
ಇಂಪೀರಿಯಲ್ ಕಾಲೇಜ್ ಲಂಡನ್ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…
ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…