Advertisement
ಸುದ್ದಿಗಳು

ಖಾಸಗೀ ಆಸ್ಪತ್ರೆಗಳಿಂದ ನಡೆಯುತ್ತಿದೆ ಕೊರೋನಾ ದಂಧೆ | ಮೌನಕ್ಕೆ ಜಾರಿದ ಜನಪ್ರತಿನಿಧಿಗಳು – ಆರೋಪ |

Share
ಮಂಗಳೂರು: ಕೊರೋನಾ ವೈರಸ್ ತೀವ್ರವಾಗಿ ಹರಡುತ್ತಿದ್ದು, ಜನತೆ ಭಯಭೀತಿಗೊಳಗಾಗಿದ್ದರೆ, ಈ ನಡುವೆ ಖಾಸಗೀ ಆಸ್ಪತ್ರೆಗಳು ಕೊರೋನಾ ಹೆಸರಿನಲ್ಲಿ ಜನತೆಯನ್ನು ವಿಪರೀತವಾಗಿ ಸುಲಿಗೆ ಮಾಡುವ ಮೂಲಕ ಹಗಲು ದರೋಡೆ ನಡೆಸುತ್ತಿದೆ. ಲಾಕ್ಡೌನ್ ನಿಂದಾಗಿ ಜನರ ಬದುಕು ತೀರಾ ತತ್ತರಿಸಿದ್ದು, ಉದ್ಯೋಗವಿಲ್ಲದೆ,ಕಾಸಿಲ್ಲದೆ, ಆಹಾರವಿಲ್ಲದೆ ಕಂಗಾಲಾಗಿರುವ ಈ ಸಂದರ್ಭದಲ್ಲಿ ಕೊರೋನಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಸರಕಾರಗಳು ಹಾಗೂ ಜನಪ್ರತಿನಿಧಿಗಳು ದಿನ್ಯಮೌನ ವಹಿಸುವ ಮೂಲಕ ಪರೋಕ್ಷವಾಗಿ ಸಹಕರಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು
ಸಿಪಿಐಎಂ  ದ.ಕ.ಜಿಲ್ಲಾ ನಾಯಕರಾದ ಜಯಂತಿ ಬಿ.ಶೆಟ್ಟಿ ಹೇಳಿದರು.
ಅವರು ಕೊರೋನಾ ನಿಗ್ರಹಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿಫಲತೆಯ ವಿರುದ್ದ ಸಿಪಿಐಎಂ ಹಮ್ಮಿಕೊಂಡ ವಾರಾಚರಣೆ ಕಾರ್ಯಕ್ರಮದ ಭಾಗವಾಗಿ ಪಕ್ಕಲಡ್ಕದಲ್ಲಿ ಜರುಗಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.  ಪ್ರತಿಭಟನೆಯಲ್ಲಿ ಭಾಗವಹಿಸಿದ ಸಿಐಟಿಯು ಜಿಲ್ಲಾ ಮುಖಂಡರಾದ ಜಯಲಕ್ಷ್ಮಿಯವರು ಮಾತನಾಡುತ್ತಾ, ಲಾಕ್ಡೌನ್ ನಿಂದಾಗಿ ವಿವಿಧ ವಿಭಾಗದ ಕಾರ್ಮಿಕರು ತೀರಾ ಸಂಕಷ್ಟದಲ್ಲಿದ್ದು, ಇಲ್ಲಿಯವರೆಗೂ ಯಾವುದೇ ಪರಿಹಾರವನ್ನು ಘೋಷಿಸಿಲ್ಲ. ಬದಲಾಗಿ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಯುದ್ಧದ ಉನ್ಮಾದವನ್ನು ಸ್ರಷ್ಠಿಸಲಾಗಿದೆ. ದೇಶದ ಆರ್ಥಿಕತೆಯ ಜೊತೆಗೆ ಜನರ ಬದುಕನ್ನು ಸರ್ವನಾಶ ಮಾಡಲು ಕೇಂದ್ರದ ನರೇಂದ್ರ ಮೋದಿ ಸರಕಾರ ಹವಣಿಸುತ್ತಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಸಿಪಿಐಎಂ ಜಿಲ್ಲಾ ನಾಯಕರಾದ ಜೆ.ಬಾಲಕೃಷ್ಣ ಶೆಟ್ಟಿ, ಇತರ ಸ್ಥಳೀಯ ಕಾರ್ಮಿಕ ನಾಯಕರಾದ ಲೀಲಾ ಜೆ, ರೋಹಿಣಿ, ಗೀತಾ, ಭಾರತಿ, ವಿಮಲ ಮುಂತಾದವರು ಉಪಸ್ಥಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಉತ್ತರ ಭಾರತದಲ್ಲಿ ಮಂಗಳೂರು ಚಾಲಿ ಅಡಿಕೆಗೆ ಋತುಮಾನ ಬೇಡಿಕೆ | ಯಾವ ತಿಂಗಳಲ್ಲಿ ಹೆಚ್ಚು ಲಾಭ? ಯಾವಾಗ ಮಾರುಕಟ್ಟೆ ಮಂದಗತಿ?

ಉತ್ತರ ಭಾರತದಲ್ಲಿ ಮಂಗಳೂರು ಚಾಲಿ ಅಡಿಕೆಯ ಬೇಡಿಕೆ ಯಾವ ತಿಂಗಳಲ್ಲಿ ಹೆಚ್ಚು ಗೊತ್ತಾ?…

5 hours ago

ವಿದೇಶಿ ಅಡಿಕೆ ಶಂಕೆ – ತೆರಿಗೆ ವಂಚನೆ ವಿವಾದ | ವಶಪಡಿಸಿಕೊಂಡ 380 ಚೀಲ ಬಿಡುಗಡೆಗೆ ಕೇರಳ ಹೈಕೋರ್ಟ್ ನಿರಾಕರಣೆ

ಕಸ್ಟಮ್ಸ್‌ ವಶಪಡಿಸಿಕೊಂಡಿದ್ದ 380 ಚೀಲ ಅಡಿಕೆ ಬಿಡುಗಡೆಗೆ ಕೇರಳ ಹೈಕೋರ್ಟ್ ನಿರಾಕರಿಸಿದೆ. ಅಡಿಕೆ…

6 hours ago

ಆಂಧ್ರಪ್ರದೇಶದ ಹೊಸ ಪ್ರಯೋಗ : ರೈತನ ತೋಟದಿಂದ ನೇರವಾಗಿ ಮನೆ ಬಾಗಿಲಿಗೆ ಕೃಷಿ ಉತ್ಪನ್ನ

ಆಂಧ್ರಪ್ರದೇಶ ಸರ್ಕಾರ ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವ “Farm-to-Home”…

21 hours ago

ಭಾರತ ಕೃಷಿಯಲ್ಲಿ ಭರ್ಜರಿ ದಾಖಲೆ : ಆಹಾರ ಉತ್ಪಾದನೆ 3765 ಮಿಲಿಯನ್ ಟನ್!

2025-26ರಲ್ಲಿ ಭಾರತದಲ್ಲಿ 3765.63 ಲಕ್ಷ ಟನ್ ಆಹಾರ ಉತ್ಪಾದನೆ ಸಾಧ್ಯತೆ ಇದ್ದು, ಇದು…

1 day ago

ಮಂಗಳೂರಿನಲ್ಲಿ ಉದ್ಯೋಗಾವಕಾಶ : ಮೇ 30ರಂದು ಕಸ್ಟಮರ್ ಸಪೋರ್ಟ್ ಹಾಗೂ ಟೆಲಿಕಾಲರ್ ಹುದ್ದೆಗಳಿಗೆ ನೇರ ಸಂದರ್ಶನ

ವಿ.ಆರ್.ಎನ್ ಇನ್ಪೋಟೆಕ್ ಕಂಪೆನಿಯ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಹಾಗೂ ಟೆಲಿಕಾಲರ್ ಹುದ್ದೆಗಳಿಗೆ ಮೇ…

1 day ago

ಬ್ಲಿಂಕಿಟ್‌ನಲ್ಲಿ ಉದ್ಯೋಗಾವಕಾಶ : ಜೂನ್ 1ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಬ್ಲಿಂಕಿಟ್ ಕಂಪೆನಿಯ ಪಿಕ್ಕರ್ ಹಾಗೂ ಪ್ಯಾಕರ್ ಹುದ್ದೆಗಳಿಗೆ ಜೂನ್ 1ರಂದು ಮಂಗಳೂರಿನಲ್ಲಿ ನೇರ…

1 day ago