Advertisement
ಧಾರ್ಮಿಕ

ಗಣೇಶ ಹಬ್ಬ | ಬಯಲು ಆಲಯದ ಗಣಪ

Share

ಹಬ್ಬ ಬಂತೆಂದರೆ ಮನೆಮನಗಳಲ್ಲಿ ಸಂಭ್ರಮದ ವಾತಾವರಣ. ದಿನನಿತ್ಯದ ಬದುಕಿನ ಜಂಜಾಟಗಳನ್ನು ಬದಿಗಿಟ್ಟು ಮನೆಮಂದಿ ಎಲ್ಲಾಒಟ್ಟಾಗಿ ಸೇರಿಹಬ್ಬದ ಆಚರಣೆ ಜೊತೆಗೆ ಭೂರಿಭೋಜನ ಮಾಡುವ ಸದಾವಕಾಶ ದೊರೆಯುವುದು ಇಂತಹ ಸಂದರ್ಭಗಳಲ್ಲಿಯೇ. ಅದರಲ್ಲೂ ತಿಂಡಿ ಪ್ರಿಯನಾದ ಗಣೇಶನ ಹಬ್ಬದಲ್ಲಿ ಬಗೆಬಗೆಯ ತಿಂಡಿಗಳಿಗೆ ತುಸು ಹೆಚ್ಚಿನ ಪ್ರಾಧಾನ್ಯತೆಎಂದರೆತಪ್ಪಲ್ಲ.

ಭಾರತಾದ್ಯಂತ ಅದ್ಧೂರಿಯಾಗಿ ಆಚರಿಸುವ ಹಬ್ಬವಾದ ಗಣೇಶಚೌತಿ ಅಂದಾಕ್ಷಣ  ಮೊದಲು ನೆನಪಾಗುವುದು  “ಶ್ರೀ ಕ್ಷೇತ್ರ ಸೌತಡ್ಕ”.
ನಾವು ನೋಡಿದಂತೆ ಹೆಚ್ಚಿನ ಎಲ್ಲಾ ದೇವಸ್ಥಾನಗಳಲ್ಲೂ ದೇವರನ್ನುಗರ್ಭಗುಡಿಯಲ್ಲಿಟ್ಟು ಪೂಜಿಸಲಾಗುತ್ತದೆ.ಆದರೆ ಬೆಳ್ತಂಗಡಿ ತಾಲೂಕಿನ ಊರುಕೊಕ್ಕಡಕ್ಕೆ ಸನಿಹವಾದ “ಸೌತಡ್ಕ”ದಲ್ಲಿ ನೆಲೆಸಿರುವ ಗಣಪ ಮಾತ್ರ ಸಕಲ ಜೀವರಾಶಿಗಳಿಗೂ ಮುಕ್ತವಾಗಿ ದರ್ಶನ ನೀಡುತ್ತಾಎಲ್ಲರಿಗಿಂತ ಭಿನ್ನನೆನಿಸಿಕೊಂಡಿದ್ದಾನೆ.

ಇತಿಹಾಸದ ಪ್ರಕಾರ ಸುಮಾರು 800 ವರ್ಷಗಳ ಹಿಂದೆರಾಜರ ಆಳ್ವಿಕೆಯಲ್ಲಿ ರಾಜವಂಶಸ್ಥರಿಗೆ ಸೇರಿದ ದೇವಾಲಯ ಈ ಊರಿನಲ್ಲಿಇತ್ತಂತೆ. ಕಾಲಾನಂತರ ಈ ದೇವಸ್ಥಾನವು ಸಂಗ್ರಾಮವೊಂದರಲ್ಲಿ ನಾಶವಾಯಿತು. ಹಲವು ವರ್ಷಗಳ ನಂತರ ಗೋವನ್ನು ಮೇಯಿಸುತ್ತಿದ್ದ ಬಾಲಕರಿಗೆ ಸುಂದರವಾದ ಗಣೇಶನ ವಿಗ್ರಹವೊಂದು ದೊರೆಯಿತು. ಅವರು ಪ್ರಸ್ತುತ ಈಗ ಇರುವ ಮರದ ಬುಡಕ್ಕೆ ವಿಗ್ರಹವನ್ನುತಂದುಇಟ್ಟು, ತಮ್ಮಜಾಗದಲ್ಲಿ ಬೆಳೆದಿದ್ದ ಸೌತೆಕಾಯಿಗಳನ್ನು ತಂದು ಪ್ರತಿದಿನ ಪೂಜಿಸುತ್ತಿದ್ದರು.ಅಂದಿನಿಂದ ಈ ಪ್ರದೇಶ “ಸೌತಡ್ಕ” ಎಂದು ಪ್ರಸಿದ್ದಿಯಾಯಿತು ಎನ್ನುತ್ತದೆ ಸ್ಥಳ ಪುರಾಣ.

ತದ ನಂತರ ಇಲ್ಲಿಯ ಬ್ರಾಹ್ಮಣರೊಬ್ಬರು ಗಣೇಶನಿಗೆ ಗೋಪುರ ಕಟ್ಟಲು ನಿರ್ಧರಿಸಿದಾಗ ದೇವರು ದನ ಮೇಯಿಸುವ ಬಾಲಕನ ರೂಪದಲ್ಲಿ ಕನಸಿನಲ್ಲಿ ಬಂದು ತನಗೆ ಗೋಪುರ ಕಟ್ಟಿಸುವುದಾದರೆ ಕಾಶಿಯಲ್ಲಿರುವ ತನ್ನತಂದೆ ವಿಶ್ವನಾಥನಿಗೆ ಕಾಣಿಸುವಷ್ಟುಎತ್ತರದ ಗೋಪುರವನ್ನು ದಿನ ಬೆಳಗಾಗುವುದರೊಳಗಾಗಿ ಕಟ್ಟಬೇಕು ಎಂದು ಹೇಳದನಂತೆ. ಅಂದಿನಿಂದ ಇಲ್ಲಿಗೋಪುರ ಕಟ್ಟುವ ನಿರ್ಧಾರವನ್ನು ಕೈ ಬಿಡಲಾಯಿತು.ಹೀಗಾಗಿ ಇಲ್ಲಿಗಣೇಶ ವರ್ಷದ 365 ದಿನವೂ ಭಕ್ತರಿಗೆ ಮುಕ್ತವಾಗಿ ದರ್ಶನ ನೀಡುತ್ತಾನೆ.

ಇಂದು ನಾವು ಅಲ್ಲಲ್ಲಿ ಸಾರ್ವಜನಿಕವಾಗಿ ಗಣೇಶನ ಮೂರ್ತಿಗಳನ್ನು ಇಟ್ಟು ಪೂಜಿಸುವುದನ್ನು ಕಾಣುತ್ತೇವೆ. ಆದರೆ ಕೊಕ್ಕಡದ ಪರಿಸರದಲ್ಲಿ ಗಣೇಶ ಎಂದರೆ ಅದು “ಸೌತಡ್ಕ ಮಹಾಗಣಪತಿ”.ಈ ಪರಿಸರದ ಜನ ತಮ್ಮ ಮನೆಗಳಲ್ಲಿ ಅಪ್ಪ, ಪಂಕಜ್ಜಾಯ, ಮೋದಕ ಇತ್ಯಾದಿ ಬಗೆ ಬಗೆಯ ಭಕ್ಷ್ಯಗಳನ್ನು ಮಾಡಿ ಸೌತಡ್ಕದ ಗಣೇಶನಿಗೆ ಅರ್ಪಿಸಿದ ನಂತರ ಪ್ರಸಾದವಾಗಿ ಸೇವಿಸುತ್ತಾರೆ. ಪ್ರಸಿದ್ಧಿ ಪಡೆದಿರುವ ಇಲ್ಲಿಯ ಗಣೇಶನಿಗೆ ಚೌತಿಯ ದಿನದಂದು 108 ತೆಂಗಿನ ಕಾಯಿಗಳ ಗಣಪತಿಹೋಮ, ಪಂಚಾಮೃತದೊಂದಿಗೆ 108 ಸೀಯಾಳ ಅಭೀಷೇಕ ಅಪ್ಪ, ಪಂಜಕಜ್ಜಾಯ, ಪಾಯಸ, ನೈವೇಧ್ಯ, ಹಣ್ಣು ಹಂಪಲು ತಾಂಬೂಲ ಸಮರ್ಪಿಸಲಾಗುತ್ತದೆ.

# ವಂದನಾರವಿ ಕೆ.ವೈ.ವೇಣೂರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದಿಲ್ಲ

ಮೈಸೂರು ಜಿಲ್ಲೆಯ ಮೇಲ್ಸೇತುವೆ ಕಾಮಗಾರಿಗಳ ವೇಳೆ ಯಾವುದೇ ಮರಗಳನ್ನು ಕಡಿಯುವುದಿಲ್ಲ ಎಂದು ಸಂಸದ…

2 hours ago

ರಾಜ್ಯದ ಹಲವೆಡೆ ಮಳೆ; ಕುಕನೂರಿನಲ್ಲಿ 7 ಸೆಂ.ಮೀ ಮಳೆ

ರಾಜ್ಯದ ಒಳನಾಡಿನ ಕೆಲವೆಡೆ ಮಳೆಯಾಗಿದ್ದು, ಕುಕನೂರಿನಲ್ಲಿ 7 ಸೆಂ.ಮೀ ಮಳೆಯಾಗಿದೆ. ಕಲಬುರಗಿಯಲ್ಲಿ 41…

2 hours ago

ಹವಾಮಾನ ವರದಿ | 07-05-2026 | ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು : ಕರಾವಳಿ-ಮಲೆನಾಡಿನಲ್ಲಿ ಮುಂದಿನ 10 ದಿನ ಮಳೆ ಸಾಧ್ಯತೆ,

08.05.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯ ಪ್ರಕಾರ ರಾಜ್ಯದ ಹಲವು…

19 hours ago

ಕೆಲವು ರಾಜ್ಯಗಳಲ್ಲಿ ಸುಡುವ ಬಿಸಿಲು, ಇನ್ನೂ ಕೆಲವು ಕಡೆ ಮಳೆ – ದೇಶಾದ್ಯಂತ ಹವಾಮಾನ ವೈಪರೀತ್ಯ

ದೇಶದ ಹಲವೆಡೆ ಬಿಸಿಗಾಳಿ ತೀವ್ರವಾಗಿದ್ದು, ಕೆಲ ರಾಜ್ಯಗಳಲ್ಲಿ ಮಳೆ ಹಾಗೂ ಮೋಡ ಕವಿದ…

1 day ago

ಪರಿಸರ ಸಂರಕ್ಷಣೆಯಿಂದ ಮಾತ್ರ ಸುಸ್ಥಿರ ಆರೋಗ್ಯ ಸಾಧ್ಯ

ಪರಿಸರ ಮಾಲಿನ್ಯ ಮತ್ತು ಹಸಿರು ಹೊದಿಕೆ ನಾಶದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಪ್ರಕೃತಿ…

1 day ago

ಸ್ಥಳೀಯ ಸಂಸ್ಥೆ ಚುನಾವಣೆ ಶೀಘ್ರ – ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದಲ್ಲಿ ಬಾಕಿ ಇರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಶೀಘ್ರದಲ್ಲೇ ನಡೆಸಲು ಸರ್ಕಾರ ಸಿದ್ಧವಿದೆ…

1 day ago