ಗುತ್ತಿಗಾರು: ಗುತ್ತಿಗಾರು ಕೃಷ್ಣ ನಗರದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ 4 ಗ್ರಾಮಗಳ ಆಯ್ದ ಅತೀ ಬಡಕುಟುಂಬಗಳಿಗೆ ಅಕ್ಕಿ ಹಾಗೂ ದಿನಸಿ ಸಾಮಾಗ್ರಿ ವಿತರಣಾ ಕಾರ್ಯಕ್ರಮ ಈಚೆಗೆ ನಡೆಯಿತು.
ದೇವಚಳ್ಳ, ಗುತ್ತಿಗಾರು , ನಾಲ್ಕೂರು, ಮಡಪ್ಪಾಡಿ ಗ್ರಾಮಗಳಲ್ಲಿರುವ ಅತೀ ಬಡ ಕುಟುಂಬವನ್ನು ಆಯ್ಕೆ ಮಾಡಿದ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಅಕ್ಕಿ ಹಾಗೂ ದಿನಸಿ ಸಾಮಾಗ್ರಿ ವಿತರಣಾ ಮಾಡಿತು.
ಸಮಿತಿ ಅಧ್ಯಕ್ಷ ಸುರೇಶ್ ಪಾಟಾಳಿ ಕಂದ್ರಪ್ಪಾಡಿ, ಪ್ರಧಾನ ಕಾರ್ಯದರ್ಶಿ ಮೋಹನ ಕಡ್ತಲ್ ಕಜೆ, ಉಪಾಧ್ಯಕ್ಷ ನವೀನ ಪುಲ್ಲಡ್ಕ, ಗೌರವಾಧ್ಯಕ್ಷ ಮೋನಪ್ಪ ಚತ್ರಪ್ಪಾಡಿ, ಕೋಶಾಧಿಕಾರಿ ರೇವಂತ್ ಹೆಡ್ಡನಮನೆ, ಗುತ್ತಿಗಾರು ಗ್ರಾಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು, ಸದಸ್ಯರಾದ ರಾಕೇಶ್ ಮೆಟ್ಟಿನಡ್ಕ, ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಕಿಶೋರ್ ಕುಮಾರ್ ಪೈಕ ಹಾಗೂ ಅಯ್ಯಪ್ಪ ಸೇವಾ ಸಮಿತಿ ಪದಾಧಿಕಾರಿಗಳಾದ ಅಶ್ವಿತ್ ಪರಮಲೆ, ಮನೋಜ್ ಗುಡ್ಡೆ, ಪ್ರಸನ್ನ ಕಾಯರ, ರಂಜಿತ್ ಕಡ್ಲಾರ್, ಋತೇಶ್ ಬಲ್ಕಜೆ, ಹೇಮಂತ್ ಕುಮಾರ್ ಕೊರ್ತ್ಯಡ್ಕ, ಧ್ರವಕುಮಾರ್ ಪರಮಲೆ, ಮೋಹನ್ ಹರಿಹರ, ಶ್ರೀನಿವಾಸ ಗುತ್ತಿಗಾರು, ಸುಮಂತ್ ಶೀರಡ್ಕ, ಸೋಮಪ್ಪ ಕೋವೆಕ್ಕೋಡಿ, ಹಾಗೂ ಶಶಿಧರ ದೇರಾಜೆ ಉಪಸ್ಥಿತರಿದ್ದರು.
ನೀರಿನ ಕೊರತೆಯಿಂದ ಅಡಿಕೆ ತೋಟದ ಒಂದು ಭಾಗವನ್ನು ಹಲಸು ತೋಟವನ್ನಾಗಿ ಪರಿವರ್ತಿಸಿದ ಪುತ್ತೂರಿನ…
"ಜೀವನ ಎಷ್ಟು ದೀರ್ಘ ಎಂಬುದಲ್ಲ, ಅದು ಎಷ್ಟು ಅರ್ಥಪೂರ್ಣ ಎಂಬುದೇ ನಿಜವಾದ ಲೆಕ್ಕ.…
ಜುಲೈ 8ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ. ಕರಾವಳಿ…
ದೇಶದಾದ್ಯಂತ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ…
ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲ್ಚಾರ್ ಉದ್ಯಮಿಯ…