ಮರ್ಕಂಜ: ಮರ್ಕಂಜದ ಚೀಮಾಡ್ ನಲ್ಲಿರುವ ಪದ್ಮನಾಭ ಅವರ ಮನೆಗೆ ಬೆಳಕು ಹರಿಯಿತು.
ಈ ಮನೆಗೆ ಕಳೆದ ಅನೇಕ ವರ್ಷಗಳಿಂದ ವಿದ್ಯುತ್ ಸಂಪರ್ಕ ಬಿಡಿ, ರೇಶನ್ ಕಾರ್ಡೂ ಇರಲಿಲ್ಲ. ಯುವ ಬ್ರಿಗೆಡ್ ಗಮನಕ್ಕೆ ಈ ಸಂಗತಿ ಬಂದ ಬಳಿಕ ಮನೆಗೆ ಬೆಳಕು ಹರಿದಿತ್ತು. ಇದೀಗ ಮನೆಯಲ್ಲಿ ವಿದ್ಯುತ್ ದೀಪ ಉರಿಯುವ ಮೂಲಕ ಬೆಳಕೇ ಹರಿದಿದೆ. ಹೀಗಾಗಿ ಯುವಬ್ರಿಗೆಡ್ ತಂಡಕ್ಕೆ ಮನೆಯವರಿಂದ ಧನ್ಯವಾದ. ಸಾಮಾಜಿಕ ಕೆಲಸ ಮಾಡುತ್ತಿರುವ ಯುವಬ್ರಿಗೆಡ್ ತಂಡಕ್ಕೆ ಸುಳ್ಯನ್ಯೂಸ್.ಕಾಂ ಕಡೆಯಿಂದಲೂ ಅಭಿನಂದನೆ.
ಮರ್ಕಂಜದ ಚೀಮಾಡ್ ನಲ್ಲಿರುವ ಪದ್ಮನಾಭ ಅವರ ಮನೆಗೆ ಯುವ ಬ್ರಿಗೇಡ್ ಕಡೆಯಿಂದ ಸೋಲಾರ್ ಅಳವಡಿಸಿಕೊಡಲಾಗಿತ್ತು.ನಂತರ ತಹಶೀಲ್ದಾರಾದ ಕುಂಞಿ ಅಹಮ್ಮದ್ ಅವರ ಸಹಾಯದಿಂದ ರೇಶನ್ ಕಾರ್ಡ್ ಹಾಗೂ ಇತರೆ ಸೌಲಭ್ಯಗಳನ್ನು ದೊರಕಿಸಿ ಕೊಡಲಾಗಿತ್ತು. ಭಾನುವಾರ ಮಧುಕಿರಣ್ ಅನ್ನಪೂರ್ಣ ಎಲೆಕ್ಟ್ರಿಕಲ್, ವೆಂಕಟ್ರಮಣ ಗೌಡ ಪರಿವಾರಕಾನ , ರವಿಕುಮಾರ್ ಕುರುಂಜಿ ಇವರೆಲ್ಲರ ಸಹಕಾರದೊಂದಿಗೆ ಯುವ ಬ್ರಿಗೇಡ್ ತಂಡವು ಉಚಿತವಾಗಿ ವಿದ್ಯುತ್ ವಯರಿಂಗ್ ವ್ಯವಸ್ಥೆ ಮಾಡಿತು.ಈಗ ಬೆಳಕು ಹರಿದಿದೆ.
ಮೈಸೂರು ಜಿಲ್ಲೆಯ ಮೇಲ್ಸೇತುವೆ ಕಾಮಗಾರಿಗಳ ವೇಳೆ ಯಾವುದೇ ಮರಗಳನ್ನು ಕಡಿಯುವುದಿಲ್ಲ ಎಂದು ಸಂಸದ…
ರಾಜ್ಯದ ಒಳನಾಡಿನ ಕೆಲವೆಡೆ ಮಳೆಯಾಗಿದ್ದು, ಕುಕನೂರಿನಲ್ಲಿ 7 ಸೆಂ.ಮೀ ಮಳೆಯಾಗಿದೆ. ಕಲಬುರಗಿಯಲ್ಲಿ 41…
08.05.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯ ಪ್ರಕಾರ ರಾಜ್ಯದ ಹಲವು…
ದೇಶದ ಹಲವೆಡೆ ಬಿಸಿಗಾಳಿ ತೀವ್ರವಾಗಿದ್ದು, ಕೆಲ ರಾಜ್ಯಗಳಲ್ಲಿ ಮಳೆ ಹಾಗೂ ಮೋಡ ಕವಿದ…
ಪರಿಸರ ಮಾಲಿನ್ಯ ಮತ್ತು ಹಸಿರು ಹೊದಿಕೆ ನಾಶದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಪ್ರಕೃತಿ…
ರಾಜ್ಯದಲ್ಲಿ ಬಾಕಿ ಇರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಶೀಘ್ರದಲ್ಲೇ ನಡೆಸಲು ಸರ್ಕಾರ ಸಿದ್ಧವಿದೆ…