ಮರ್ಕಂಜ: ಮರ್ಕಂಜದ ಚೀಮಾಡ್ ನಲ್ಲಿರುವ ಪದ್ಮನಾಭ ಅವರ ಮನೆಗೆ ಬೆಳಕು ಹರಿಯಿತು.
ಈ ಮನೆಗೆ ಕಳೆದ ಅನೇಕ ವರ್ಷಗಳಿಂದ ವಿದ್ಯುತ್ ಸಂಪರ್ಕ ಬಿಡಿ, ರೇಶನ್ ಕಾರ್ಡೂ ಇರಲಿಲ್ಲ. ಯುವ ಬ್ರಿಗೆಡ್ ಗಮನಕ್ಕೆ ಈ ಸಂಗತಿ ಬಂದ ಬಳಿಕ ಮನೆಗೆ ಬೆಳಕು ಹರಿದಿತ್ತು. ಇದೀಗ ಮನೆಯಲ್ಲಿ ವಿದ್ಯುತ್ ದೀಪ ಉರಿಯುವ ಮೂಲಕ ಬೆಳಕೇ ಹರಿದಿದೆ. ಹೀಗಾಗಿ ಯುವಬ್ರಿಗೆಡ್ ತಂಡಕ್ಕೆ ಮನೆಯವರಿಂದ ಧನ್ಯವಾದ. ಸಾಮಾಜಿಕ ಕೆಲಸ ಮಾಡುತ್ತಿರುವ ಯುವಬ್ರಿಗೆಡ್ ತಂಡಕ್ಕೆ ಸುಳ್ಯನ್ಯೂಸ್.ಕಾಂ ಕಡೆಯಿಂದಲೂ ಅಭಿನಂದನೆ.
ಮರ್ಕಂಜದ ಚೀಮಾಡ್ ನಲ್ಲಿರುವ ಪದ್ಮನಾಭ ಅವರ ಮನೆಗೆ ಯುವ ಬ್ರಿಗೇಡ್ ಕಡೆಯಿಂದ ಸೋಲಾರ್ ಅಳವಡಿಸಿಕೊಡಲಾಗಿತ್ತು.ನಂತರ ತಹಶೀಲ್ದಾರಾದ ಕುಂಞಿ ಅಹಮ್ಮದ್ ಅವರ ಸಹಾಯದಿಂದ ರೇಶನ್ ಕಾರ್ಡ್ ಹಾಗೂ ಇತರೆ ಸೌಲಭ್ಯಗಳನ್ನು ದೊರಕಿಸಿ ಕೊಡಲಾಗಿತ್ತು. ಭಾನುವಾರ ಮಧುಕಿರಣ್ ಅನ್ನಪೂರ್ಣ ಎಲೆಕ್ಟ್ರಿಕಲ್, ವೆಂಕಟ್ರಮಣ ಗೌಡ ಪರಿವಾರಕಾನ , ರವಿಕುಮಾರ್ ಕುರುಂಜಿ ಇವರೆಲ್ಲರ ಸಹಕಾರದೊಂದಿಗೆ ಯುವ ಬ್ರಿಗೇಡ್ ತಂಡವು ಉಚಿತವಾಗಿ ವಿದ್ಯುತ್ ವಯರಿಂಗ್ ವ್ಯವಸ್ಥೆ ಮಾಡಿತು.ಈಗ ಬೆಳಕು ಹರಿದಿದೆ.
ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…
ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…