ಮರ್ಕಂಜ: ಮರ್ಕಂಜದ ಚೀಮಾಡ್ ನಲ್ಲಿರುವ ಪದ್ಮನಾಭ ಅವರ ಮನೆಗೆ ಬೆಳಕು ಹರಿಯಿತು.
ಈ ಮನೆಗೆ ಕಳೆದ ಅನೇಕ ವರ್ಷಗಳಿಂದ ವಿದ್ಯುತ್ ಸಂಪರ್ಕ ಬಿಡಿ, ರೇಶನ್ ಕಾರ್ಡೂ ಇರಲಿಲ್ಲ. ಯುವ ಬ್ರಿಗೆಡ್ ಗಮನಕ್ಕೆ ಈ ಸಂಗತಿ ಬಂದ ಬಳಿಕ ಮನೆಗೆ ಬೆಳಕು ಹರಿದಿತ್ತು. ಇದೀಗ ಮನೆಯಲ್ಲಿ ವಿದ್ಯುತ್ ದೀಪ ಉರಿಯುವ ಮೂಲಕ ಬೆಳಕೇ ಹರಿದಿದೆ. ಹೀಗಾಗಿ ಯುವಬ್ರಿಗೆಡ್ ತಂಡಕ್ಕೆ ಮನೆಯವರಿಂದ ಧನ್ಯವಾದ. ಸಾಮಾಜಿಕ ಕೆಲಸ ಮಾಡುತ್ತಿರುವ ಯುವಬ್ರಿಗೆಡ್ ತಂಡಕ್ಕೆ ಸುಳ್ಯನ್ಯೂಸ್.ಕಾಂ ಕಡೆಯಿಂದಲೂ ಅಭಿನಂದನೆ.
ಮರ್ಕಂಜದ ಚೀಮಾಡ್ ನಲ್ಲಿರುವ ಪದ್ಮನಾಭ ಅವರ ಮನೆಗೆ ಯುವ ಬ್ರಿಗೇಡ್ ಕಡೆಯಿಂದ ಸೋಲಾರ್ ಅಳವಡಿಸಿಕೊಡಲಾಗಿತ್ತು.ನಂತರ ತಹಶೀಲ್ದಾರಾದ ಕುಂಞಿ ಅಹಮ್ಮದ್ ಅವರ ಸಹಾಯದಿಂದ ರೇಶನ್ ಕಾರ್ಡ್ ಹಾಗೂ ಇತರೆ ಸೌಲಭ್ಯಗಳನ್ನು ದೊರಕಿಸಿ ಕೊಡಲಾಗಿತ್ತು. ಭಾನುವಾರ ಮಧುಕಿರಣ್ ಅನ್ನಪೂರ್ಣ ಎಲೆಕ್ಟ್ರಿಕಲ್, ವೆಂಕಟ್ರಮಣ ಗೌಡ ಪರಿವಾರಕಾನ , ರವಿಕುಮಾರ್ ಕುರುಂಜಿ ಇವರೆಲ್ಲರ ಸಹಕಾರದೊಂದಿಗೆ ಯುವ ಬ್ರಿಗೇಡ್ ತಂಡವು ಉಚಿತವಾಗಿ ವಿದ್ಯುತ್ ವಯರಿಂಗ್ ವ್ಯವಸ್ಥೆ ಮಾಡಿತು.ಈಗ ಬೆಳಕು ಹರಿದಿದೆ.
ಆಗಸ್ಟ್ 2ರಿಂದ 8ರವರೆಗೆ ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಮುಕ್ತ ಹಾಗೂ ಬಾಲಕಿಯರ ಚೆಸ್…
ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…
ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…
ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…
ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…