ಬಾಳುಗೋಡು: ಛೆ…… ಆನೆಗೆ ಕಡಿಮೆಯೇ ಆಗಿಲ್ಲ…!. ಹೀಗೆಂದು ಪ್ರೀತಿ ತೋರಿಸುತ್ತಿರುವವರು ಬಾಳುಗೋಡು ಪ್ರದೇಶದ ಜನ. ಅರಣ್ಯ ಇಲಾಖೆ ತನ್ನ ಪ್ರಯತ್ನ ಮಾಡುತ್ತಿದ್ದರೂ ಕಾಡಾನೆಗೆ ಒಂದಿಲ್ಲೊಂದು ಕಾಟ ತಪ್ಪಲಿಲ್ಲ. ಈಗ ಚೇತರಿಕೆ ಕಂಡುಬಂದಿಲ್ಲ. ಕೀವು ತುಂಬಿದ ಕಾಲಿನಲ್ಲಿ ಅತ್ತಿತ್ತ ಓಡಾಡುತ್ತಿದೆ.
ಬಾಳುಗೋಡು ಮೀಸಲು ಅರಣ್ಯದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸಲಗದ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಕಂಡುಬಂದಿಲ್ಲ . ಸ್ಥಳೀಯ ಮಂದಿ ಕಾಡಿಗೆ ತೆರಳಿ ಆನೆಯ ಚಲನವಲನವನ್ನು ವೀಕ್ಷಿಸಿದ್ದಾರೆ. ಜೊತೆಗೆ ಬೈನೆ ಮರದ ಆಹಾರವನ್ನು ಆನೆಗೆ ನೀಡಿ ಬಂದಿದ್ದಾರೆ.ಈ ವೇಳೆ ಆನೆಯು ಚಿಕಿತ್ಸೆ ಪಡೆದ ನಂತರದಲ್ಲಿ ಕೂಡ ಚೇತರಿಕೊಳ್ಳದಿರುವುದು ಅವರಿಗೆ ಕಂಡುಬಂದಿದೆ.ಆನೆಯು ಶಕ್ತಿ ಹೀನವಾಗಿದ್ದು ನೋವು ಉಲ್ಬಣಿಸಿ ನಡೆಯಲು ಕಷ್ಟ ಪಡುತ್ತಿದೆ.
ಈ ನಡುವೆ ಅರಣ್ಯ ಇಲಾಖೆ ಸಿಬಂದಿಗಳು ಪಟಾಕಿ ಸಿಡಿಸಿ ಆನೆಯನ್ನು ಓಡಿಸಲು ಯತ್ನಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆನೆಯು ಓಡಲಾಗದೆ ಚಡಪಡಿಸುತಿದ್ದ ಬಗ್ಗೆಯು ಸ್ಥಳಿಯರು ಮಾಹಿತಿ ನೀಡಿದ್ದು ಇದೇ ರೀತಿ ಆನೆಯನ್ನು ಬಿಟ್ಟರೆ ಅದರ ಆರೋಗ್ಯ ಪೂರ್ಣವಾಗಿ ಹದಗೆಡಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.
ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…
26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…
ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್…
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…
ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…
ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…