ಸುಳ್ಯ: ನಗರ ಪಂಚಾಯತ್ ವ್ಯಾಪ್ತಿಯ ಜಯನಗರದ ಕೈೂಂಗೋಡಿ ರಸ್ತೆ ಬದಿಯಲ್ಲಿರುವ ನೀರಿನ ಟ್ಯಾಂಕ್ ಸ್ವಚ್ಛತಾ ಕಾರ್ಯದಲ್ಲಿ ಸ್ಥಳೀಯ ಯವಕರು ತೊಡಗಿಸಿಕೊಂಡರು.
ಕಳೆದ ಕೆಲವು ವರ್ಷಗಳಿಂದ ಇಲ್ಲಿ ಕುಡಿಯುವ ನೀರಿನ ಟ್ಯಾಂಕ್ ಶುಚಿಗೊಳಿಸಿರಲಿಲ್ಲ. ಹೀಗಾಗಿ ಸಾರ್ವಜನಿಕ ಕುಡಿಯುವ ನೀರಿನ ಮೂಲ, ಕೆರೆ, ನದಿ, ಬಾವಿ ನೀರಿನ ಟ್ಯಾಂಕ್ ಶುಚಿತ್ವವು ಪ್ರಾಮುಖ್ಯ ಎಂಬುದನ್ನು ಅರಿತು ಈ ಬಗ್ಗೆ ಆಡಳಿತಕ್ಕೂ ಜಾಗೃತಿ ಮೂಡಿಸಲು ಸ್ಥಳೀಯ ಯುವಕರು ಮುಂದಾದರು.
ಇಲ್ಲಿ ವಿದ್ಯುತ್ ಕೈಕೊಟ್ಟರೆ ನೀರೂ ಇಲ್ಲವಾಗುತ್ತದೆ. ಎರಡು ವಾರ್ಡಿನ ಸುಮಾರು 40-50 ಕುಟುಂಬ ಈ ಟ್ಯಾಂಕ್ ನೀರನ್ನು ಅವಲಂಬಿಸಿದ್ದಾರೆ.
ಸುಳ್ಯ ಜಯನಗರದ ಜನಸಾಮಾನ್ಯ ಶ್ರಮಿಕ ಯುವಕರಾದ ದೀಕ್ಷಿತ್ ಕುಮಾರ್ ಜಯನಗರ, ಸುಂದರ ಕುದ್ಪಾಜೆ , ಅವಿಲ್ ಜಯನಗರ, ಉಮೇಶ್ ಕುದ್ಪಾಜೆ, ಗೋಪಾಲ ನಾರಾಜೆ,ವಿವೇಕ್ ಕುದ್ಪಾಜೆ, ಬಾಬು ಕೆಪಿ. , ಸಚಿನ್ ಕೊಯಿಂಗೋಡಿ, ದೇವಪ್ಪ ಜಯನಗರ ಒಂದಾಗಿ, ಟ್ಯಾಂಕ್ ಸ್ವಚ್ಚತಾ ಕಾರ್ಯವನ್ನು ನಡೆಸಿದ್ದಾರೆ.
ನಾಗಾಲ್ಯಾಂಡ್ನಲ್ಲಿ ರಬ್ಬರ್ ಕೃಷಿ ಸುಮಾರು 29,794 ಹೆಕ್ಟೇರ್ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್ನಲ್ಲಿ ಸೂಕ್ತ…
ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…
ಸೆ.8ರಿಂದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ.…
ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ…
ಶಿಕ್ಷಕರ ದಿನಾಚರಣೆ ಶಿಕ್ಷಕರನ್ನು ಸನ್ಮಾನಿಸುವ ದಿನ ಮಾತ್ರವಲ್ಲ, ಶಿಕ್ಷಕತ್ವ ಮತ್ತು ಶಿಕ್ಷಣದ ನಿಜವಾದ…
ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…