ಡೆಂಘೆ…! ಹೆಸರು ಕೇಳಿದಾಗಲೇ ದಂಗಾಗುವ ಮಂದಿ ಹಲವಾರು.
ಹಾಗಿದ್ದರೆ ಏನಿದು ಡೆಂಘೆ ಜ್ವರ ?. ಸರಳವಾಗಿ ಹೇಳುವುದಾದರೆ ಇಂದೊಂದು ಸೋಂಕು ರೋಗ . ಈಡೀಸ್ ಎಂಬ ಸೋಂಕು ಪೀಡಿತ ಸೊಳ್ಳೆ ಮನುಷ್ಯನಿಗೆ ಕಚ್ಚಿದಾಗ ಇದು ಹರಡುತ್ತದೆ . ಈ ಸೊಳ್ಳೆಯ ಜೀವಾವಧಿ 2 ವಾರ ಮಾತ್ರ . ಇದು ಹೆಚ್ಚಾಗಿ ಮಳೆಗಾಲದಲ್ಲಿ ಕಂಡುಬರುತ್ತದೆ. ಮುಖ್ಯವಾಗಿ ನೀರಿನಲ್ಲಿ ಕೊಳಚೆ ಅಥವಾ ಶೇಖರಣೆಯಾದ ನೀರಿನಲ್ಲಿ ತನ್ನ ಸಂತಾನೋತ್ಪತ್ತಿ ಮಾಡುತ್ತದೆ .
ಹೇಗೆ ಹರಡುವುದು?: ಇದು ಈ ರೋಗ ಸೋಂಕಿತ ವ್ಯಕ್ತಿಯ ರಕ್ತವನ್ನು ಆಹಾರಕ್ಕಾಗಿ ಕಚ್ಚಿದಾಗ ತನಗೆ ಹರಡುತ್ತದೆ ಇದು ಯಾರಿಗೆಲ್ಲ ಕಚ್ಚುತ್ತದೋ ಅವರಿಗೆಲ್ಲ ಈ ರೋಗ ಹರಡುತ್ತದೆ.
ಇದನ್ನ ತಡೆಯೋದು ಹೇಗೆ ಎಂಬ ಪ್ರಶ್ನೆಗೆ, ಸೊಳ್ಳೆ ಕಚ್ಚದಂತೆ ತಡೆಯುವುದೇ ತಡೆಯುವ ಮೊದಲ ಸೂತ್ರ. ಇದಕ್ಕಾಗಿ ಪೂರ್ತಿ ತೋಳಿರುವ ಉಡುಪು ಧರಿಸುವುದು
ಸೊಳ್ಳೆ ಪರದೆ, ನೀರು ಶೇಖರಣೆಯಾಗದಂತೆ ನೋಡಿಕೊಳ್ಳುವುದು , ಸೊಳ್ಳೆ ಬತ್ತಿಯ ಬಳಕೆ ಇತ್ಯಾದಿಗಳೇ ಮೊದಲ ರಕ್ಷಣೆ.
ಡೆಂಘೆ ಲಕ್ಷಣಗಳು ಏನು ?
2-7 ದಿನಗಳು ಜ್ವರ , ತಲೆನೋವು , ಕಣ್ಣು ಗುಡ್ಡೆ ನೋವು, ಮೈಕೈ ನೋವು, ಕೆಂಪಾದ ಚರ್ಮ , ಸುಸ್ತಾಗುವುದು ಮೊದಲ ಲಕ್ಷಣ.
ಡೆಂಘೆ ಕಂಡುಬಂದಲ್ಲಿ ಏನು ಮಾಡಬೇಕು?:
ಮೊದಲ ಸೂತ್ರ ವಿಶ್ರಾಂತಿ. ವೈದ್ಯರ ಸಲಹೆ ಅಥವಾ ಭೇಟಿಯಾಗುವುದು.
ಚಿಕಿತ್ಸೆ ಬಳಿಕ ನಾವು ಏನೆಲ್ಲಾ ಮಾಡಬಹುದು ?:
1.ಪಪ್ಪಾಯಿ ಎಲೆ ಮದ್ದು : ಪಪ್ಪಾಯಿ ಎಲೆ ತೊಳೆದು ಅದರ ಸ್ವಲ್ಪ ರಸವನ್ನು ಹಿಂಡಿ ಅರ್ಧ ಗ್ಲಾಸ್ ನೀರಿನೊಡನೆ ಸೇರಿಸಿ ಕುಡಿಯಿರಿ ಇದು ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಪ್ಲೇಟ್ಲೆಟ್ ಅಂಶವನ್ನು ಹೆಚ್ಚು ಮಾಡುತ್ತದೆ ( ಮಿತಿಗಿಂತ ಜಾಸ್ತಿ ಪಪ್ಪಾಯಿ ಎಲೆಯ ರಸ ಕುಡಿಯಬಾರದು)
2 ಅರಸಿನ, ಕಾಳುಮೆಣಸು ಗಳನ್ನು ಬಿಸಿ ಹಾಲಿಗೆ ಇದನ್ನು ಮಿಶ್ರಮಾಡಿ ಕುಡಿಯುವುದು . ಅರಸಿನ- ಬೆಲ್ಲ ತಿಂದರೂ ಉತ್ತಮ
3.ತುಳಸಿ-ಕಾಳುಮೆಣಸು (ತುಳಸಿ-ಕಾಳುಮೆಣಸು ನೀರಲ್ಲಿ ಬೆರೆಸಿ ಕುಡಿಯುವುದು)
4.ದಾಳಿಂಬೆ-ಪಪ್ಪಾಯಿ ತಿನ್ನುವುದು
5.ಬೀಟ್ರೋಟ್- ನಿಂಬೆ ರಸ
ಈ ಸೂತ್ರಗಳು ಮೈ ಕೈ ನೋವನ್ನು ದೂರಗೊಳಿಸುತ್ತದೆ.
ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…
ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.
ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…
04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…