Advertisement
ಅನುಕ್ರಮ

ಡೆಂಘೆ ಜ್ವರ ಬಂದರೆ ಏನು ಮಾಡಬಹುದು ?

Share
ಡಾ.ಆದಿತ್ಯ ಚಣಿಲ BHMS(Intern)

 

 

 

 

 

ಡೆಂಘೆ…! ಹೆಸರು ಕೇಳಿದಾಗಲೇ ದಂಗಾಗುವ ಮಂದಿ ಹಲವಾರು.

ಹಾಗಿದ್ದರೆ ಏನಿದು ಡೆಂಘೆ ಜ್ವರ ?. ಸರಳವಾಗಿ ಹೇಳುವುದಾದರೆ ಇಂದೊಂದು ಸೋಂಕು ರೋಗ . ಈಡೀಸ್ ಎಂಬ ಸೋಂಕು ಪೀಡಿತ ಸೊಳ್ಳೆ ಮನುಷ್ಯನಿಗೆ ಕಚ್ಚಿದಾಗ ಇದು ಹರಡುತ್ತದೆ . ಈ ಸೊಳ್ಳೆಯ ಜೀವಾವಧಿ 2 ವಾರ ಮಾತ್ರ . ಇದು ಹೆಚ್ಚಾಗಿ ಮಳೆಗಾಲದಲ್ಲಿ ಕಂಡುಬರುತ್ತದೆ.  ಮುಖ್ಯವಾಗಿ ನೀರಿನಲ್ಲಿ ಕೊಳಚೆ ಅಥವಾ ಶೇಖರಣೆಯಾದ ನೀರಿನಲ್ಲಿ ತನ್ನ ಸಂತಾನೋತ್ಪತ್ತಿ ಮಾಡುತ್ತದೆ .

ಹೇಗೆ ಹರಡುವುದು?: ಇದು ಈ ರೋಗ ಸೋಂಕಿತ ವ್ಯಕ್ತಿಯ ರಕ್ತವನ್ನು ಆಹಾರಕ್ಕಾಗಿ ಕಚ್ಚಿದಾಗ ತನಗೆ ಹರಡುತ್ತದೆ ಇದು ಯಾರಿಗೆಲ್ಲ ಕಚ್ಚುತ್ತದೋ ಅವರಿಗೆಲ್ಲ ಈ ರೋಗ ಹರಡುತ್ತದೆ.
ಇದನ್ನ ತಡೆಯೋದು ಹೇಗೆ ಎಂಬ ಪ್ರಶ್ನೆಗೆ, ಸೊಳ್ಳೆ ಕಚ್ಚದಂತೆ ತಡೆಯುವುದೇ ತಡೆಯುವ ಮೊದಲ ಸೂತ್ರ. ಇದಕ್ಕಾಗಿ   ಪೂರ್ತಿ ತೋಳಿರುವ ಉಡುಪು ಧರಿಸುವುದು
ಸೊಳ್ಳೆ ಪರದೆ, ನೀರು ಶೇಖರಣೆಯಾಗದಂತೆ ನೋಡಿಕೊಳ್ಳುವುದು , ಸೊಳ್ಳೆ ಬತ್ತಿಯ ಬಳಕೆ ಇತ್ಯಾದಿಗಳೇ ಮೊದಲ ರಕ್ಷಣೆ.

ಡೆಂಘೆ ಲಕ್ಷಣಗಳು ಏನು ?

2-7 ದಿನಗಳು ಜ್ವರ , ತಲೆನೋವು , ಕಣ್ಣು ಗುಡ್ಡೆ ನೋವು, ಮೈಕೈ ನೋವು, ಕೆಂಪಾದ ಚರ್ಮ , ಸುಸ್ತಾಗುವುದು ಮೊದಲ ಲಕ್ಷಣ.

ಡೆಂಘೆ ಕಂಡುಬಂದಲ್ಲಿ ಏನು ಮಾಡಬೇಕು?:

ಮೊದಲ ಸೂತ್ರ ವಿಶ್ರಾಂತಿ. ವೈದ್ಯರ ಸಲಹೆ ಅಥವಾ ಭೇಟಿಯಾಗುವುದು.

 

ಚಿಕಿತ್ಸೆ ಬಳಿಕ ನಾವು ಏನೆಲ್ಲಾ ಮಾಡಬಹುದು ?:

1.ಪಪ್ಪಾಯಿ ಎಲೆ ಮದ್ದು : ಪಪ್ಪಾಯಿ ಎಲೆ ತೊಳೆದು ಅದರ ಸ್ವಲ್ಪ ರಸವನ್ನು ಹಿಂಡಿ ಅರ್ಧ ಗ್ಲಾಸ್ ನೀರಿನೊಡನೆ ಸೇರಿಸಿ ಕುಡಿಯಿರಿ ಇದು ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಪ್ಲೇಟ್ಲೆಟ್ ಅಂಶವನ್ನು ಹೆಚ್ಚು ಮಾಡುತ್ತದೆ ( ಮಿತಿಗಿಂತ ಜಾಸ್ತಿ ಪಪ್ಪಾಯಿ ಎಲೆಯ ರಸ ಕುಡಿಯಬಾರದು)

2 ಅರಸಿನ,  ಕಾಳುಮೆಣಸು ಗಳನ್ನು ಬಿಸಿ ಹಾಲಿಗೆ ಇದನ್ನು ಮಿಶ್ರಮಾಡಿ ಕುಡಿಯುವುದು . ಅರಸಿನ- ಬೆಲ್ಲ ತಿಂದರೂ ಉತ್ತಮ

3.ತುಳಸಿ-ಕಾಳುಮೆಣಸು (ತುಳಸಿ-ಕಾಳುಮೆಣಸು ನೀರಲ್ಲಿ ಬೆರೆಸಿ ಕುಡಿಯುವುದು)

4.ದಾಳಿಂಬೆ-ಪಪ್ಪಾಯಿ ತಿನ್ನುವುದು

5.ಬೀಟ್ರೋಟ್- ನಿಂಬೆ ರಸ

ಈ ಸೂತ್ರಗಳು ಮೈ ಕೈ ನೋವನ್ನು ದೂರಗೊಳಿಸುತ್ತದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 09-09-2026 | ಕರ್ನಾಟಕದಲ್ಲಿ ಮಳೆಯ ಚಿತ್ರಣ ಬದಲಾಗುತ್ತಿದೆ – ಸೆ.11ರಿಂದ ಕರಾವಳಿಯಲ್ಲಿ ಬದಲಾವಣೆ

ಕರ್ನಾಟಕದಲ್ಲಿ ಮಳೆಯ ಸಾಧ್ಯತೆ ಒಟ್ಟಾರೆ ಇಳಿಮುಖವಾಗುತ್ತಿದ್ದು, ಕರಾವಳಿಯಲ್ಲಿ ಸೆ.11ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.…

2 hours ago

ಕ್ಯಾಂಪ್ಕೋ ಅಭಿವೃದ್ಧಿಯ ಹಾದಿಯಲ್ಲಿ: ₹2,900 ಕೋಟಿ ಅಡಿಕೆ ವ್ಯವಹಾರದ ನಡುವೆ ಮುಂದಿರುವ ಸವಾಲುಗಳೇನು?

2025-26ರಲ್ಲಿ ಕ್ಯಾಂಪ್ಕೋದ ಅಡಿಕೆ ಖರೀದಿ ಪ್ರಮಾಣ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದ್ದರೂ, ಬೆಲೆ ಏರಿಕೆಯಿಂದ…

10 hours ago

ಅಡಿಕೆಯಷ್ಟೇ ಅಲ್ಲ ಅದೇ ಮರಕ್ಕೆ ವೆನಿಲ್ಲಾ ಬಳ್ಳಿ | ಅಸ್ಸಾಂನಲ್ಲಿ ಅಡಿಕೆಯ ಜೊತೆಗೆ ಇನ್ನೊಂದು ಬೆಳೆ..

ಅಸ್ಸಾಂನ ಗುಹಾಟಿ ಸಮೀಪದ 10 ಅರಣ್ಯ ಅಂಚಿನ ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು…

17 hours ago

ದೇಶಾದ್ಯಂತ ಮುಂಗಾರು ಬಿತ್ತನೆ 1,086 ಲಕ್ಷ ಹೆಕ್ಟೇರ್ ದಾಟಿದೆ – ಕರ್ನಾಟಕದಲ್ಲಿ ಭತ್ತ, ದ್ವಿದಳ ಧಾನ್ಯ ಕೃಷಿ ಕುಸಿತ

ದೇಶದ ಪ್ರಸಕ್ತ ಮುಂಗಾರು ಬೆಳೆಗಳ ಬಿತ್ತನೆ ಪ್ರದೇಶ 1,086 ಲಕ್ಷ ಹೆಕ್ಟೇರ್ ದಾಟಿದ್ದರೂ…

18 hours ago

ಜಾನುವಾರುಗಳ ಮೇವಿನ ಕೊರತೆಗೆ ಅಜೋಲಾ ಪರಿಹಾರ – ರಾಜ್ಯದಲ್ಲಿ 12 ಸಾವಿರ ಘಟಕಗಳ ಸ್ಥಾಪನೆಗೆ ಚಾಲನೆ

ರಾಜ್ಯದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು ಒದಗಿಸಲು ₹3.78 ಕೋಟಿ ವೆಚ್ಚದಲ್ಲಿ 12…

19 hours ago

ಹವಾಮಾನ ವರದಿ | 08-09-2026 | ಕರಾವಳಿಯಲ್ಲಿ ಮೋಡ ಹೆಚ್ಚಳ – ಸೆ.12ರ ಬಳಿಕ ಬಂಗಾಳಕೊಲ್ಲಿ ಬದಲಾವಣೆ?

ಕರಾವಳಿಯಲ್ಲಿ ಮೋಡದ ವಾತಾವರಣ ಹೆಚ್ಚಾಗಿದ್ದು, ಮಧ್ಯಾಹ್ನದ ನಂತರ ತೀರ ಮತ್ತು ಘಟ್ಟದ ಕೆಳಭಾಗಗಳಲ್ಲಿ…

1 day ago