ಡೆಂಘೆ…! ಹೆಸರು ಕೇಳಿದಾಗಲೇ ದಂಗಾಗುವ ಮಂದಿ ಹಲವಾರು.
ಹಾಗಿದ್ದರೆ ಏನಿದು ಡೆಂಘೆ ಜ್ವರ ?. ಸರಳವಾಗಿ ಹೇಳುವುದಾದರೆ ಇಂದೊಂದು ಸೋಂಕು ರೋಗ . ಈಡೀಸ್ ಎಂಬ ಸೋಂಕು ಪೀಡಿತ ಸೊಳ್ಳೆ ಮನುಷ್ಯನಿಗೆ ಕಚ್ಚಿದಾಗ ಇದು ಹರಡುತ್ತದೆ . ಈ ಸೊಳ್ಳೆಯ ಜೀವಾವಧಿ 2 ವಾರ ಮಾತ್ರ . ಇದು ಹೆಚ್ಚಾಗಿ ಮಳೆಗಾಲದಲ್ಲಿ ಕಂಡುಬರುತ್ತದೆ. ಮುಖ್ಯವಾಗಿ ನೀರಿನಲ್ಲಿ ಕೊಳಚೆ ಅಥವಾ ಶೇಖರಣೆಯಾದ ನೀರಿನಲ್ಲಿ ತನ್ನ ಸಂತಾನೋತ್ಪತ್ತಿ ಮಾಡುತ್ತದೆ .
ಹೇಗೆ ಹರಡುವುದು?: ಇದು ಈ ರೋಗ ಸೋಂಕಿತ ವ್ಯಕ್ತಿಯ ರಕ್ತವನ್ನು ಆಹಾರಕ್ಕಾಗಿ ಕಚ್ಚಿದಾಗ ತನಗೆ ಹರಡುತ್ತದೆ ಇದು ಯಾರಿಗೆಲ್ಲ ಕಚ್ಚುತ್ತದೋ ಅವರಿಗೆಲ್ಲ ಈ ರೋಗ ಹರಡುತ್ತದೆ.
ಇದನ್ನ ತಡೆಯೋದು ಹೇಗೆ ಎಂಬ ಪ್ರಶ್ನೆಗೆ, ಸೊಳ್ಳೆ ಕಚ್ಚದಂತೆ ತಡೆಯುವುದೇ ತಡೆಯುವ ಮೊದಲ ಸೂತ್ರ. ಇದಕ್ಕಾಗಿ ಪೂರ್ತಿ ತೋಳಿರುವ ಉಡುಪು ಧರಿಸುವುದು
ಸೊಳ್ಳೆ ಪರದೆ, ನೀರು ಶೇಖರಣೆಯಾಗದಂತೆ ನೋಡಿಕೊಳ್ಳುವುದು , ಸೊಳ್ಳೆ ಬತ್ತಿಯ ಬಳಕೆ ಇತ್ಯಾದಿಗಳೇ ಮೊದಲ ರಕ್ಷಣೆ.
ಡೆಂಘೆ ಲಕ್ಷಣಗಳು ಏನು ?
2-7 ದಿನಗಳು ಜ್ವರ , ತಲೆನೋವು , ಕಣ್ಣು ಗುಡ್ಡೆ ನೋವು, ಮೈಕೈ ನೋವು, ಕೆಂಪಾದ ಚರ್ಮ , ಸುಸ್ತಾಗುವುದು ಮೊದಲ ಲಕ್ಷಣ.
ಡೆಂಘೆ ಕಂಡುಬಂದಲ್ಲಿ ಏನು ಮಾಡಬೇಕು?:
ಮೊದಲ ಸೂತ್ರ ವಿಶ್ರಾಂತಿ. ವೈದ್ಯರ ಸಲಹೆ ಅಥವಾ ಭೇಟಿಯಾಗುವುದು.
ಚಿಕಿತ್ಸೆ ಬಳಿಕ ನಾವು ಏನೆಲ್ಲಾ ಮಾಡಬಹುದು ?:
1.ಪಪ್ಪಾಯಿ ಎಲೆ ಮದ್ದು : ಪಪ್ಪಾಯಿ ಎಲೆ ತೊಳೆದು ಅದರ ಸ್ವಲ್ಪ ರಸವನ್ನು ಹಿಂಡಿ ಅರ್ಧ ಗ್ಲಾಸ್ ನೀರಿನೊಡನೆ ಸೇರಿಸಿ ಕುಡಿಯಿರಿ ಇದು ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಪ್ಲೇಟ್ಲೆಟ್ ಅಂಶವನ್ನು ಹೆಚ್ಚು ಮಾಡುತ್ತದೆ ( ಮಿತಿಗಿಂತ ಜಾಸ್ತಿ ಪಪ್ಪಾಯಿ ಎಲೆಯ ರಸ ಕುಡಿಯಬಾರದು)
2 ಅರಸಿನ, ಕಾಳುಮೆಣಸು ಗಳನ್ನು ಬಿಸಿ ಹಾಲಿಗೆ ಇದನ್ನು ಮಿಶ್ರಮಾಡಿ ಕುಡಿಯುವುದು . ಅರಸಿನ- ಬೆಲ್ಲ ತಿಂದರೂ ಉತ್ತಮ
3.ತುಳಸಿ-ಕಾಳುಮೆಣಸು (ತುಳಸಿ-ಕಾಳುಮೆಣಸು ನೀರಲ್ಲಿ ಬೆರೆಸಿ ಕುಡಿಯುವುದು)
4.ದಾಳಿಂಬೆ-ಪಪ್ಪಾಯಿ ತಿನ್ನುವುದು
5.ಬೀಟ್ರೋಟ್- ನಿಂಬೆ ರಸ
ಈ ಸೂತ್ರಗಳು ಮೈ ಕೈ ನೋವನ್ನು ದೂರಗೊಳಿಸುತ್ತದೆ.
ಮಿಜೋರಾಂದ ಚಾಂಫೈ ಜಿಲ್ಲೆಯಲ್ಲಿ ₹54.88 ಲಕ್ಷ ಮೌಲ್ಯದ 98 ಚೀಲ ಅಡಿಕೆ ವಶಪಡಿಸಲಾಗಿದೆ.…
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಏಪ್ರಿಲ್ 19ರಿಂದ ಮಳೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ.…
ಗ್ರಾಮ ಮತ್ತು ನಗರ ಜೀವನ ಪರಸ್ಪರ ವಿರುದ್ಧವಲ್ಲ, ಪೂರಕ ಶಕ್ತಿಗಳು. ಸಮತೋಲನವೇ ಸಮೃದ್ಧ…
ದೇಶದಲ್ಲಿ ಹವಾಮಾನ ತೀವ್ರ ಬದಲಾವಣೆ ಕಂಡುಬರುತ್ತಿದ್ದು, 13 ರಾಜ್ಯಗಳಲ್ಲಿ ಮಳೆ ಮತ್ತು ಗಾಳಿ…
ಅಂಜನಾದ್ರಿ ಬೆಟ್ಟ ಏರಲು ಮಧ್ಯಾಹ್ನ 11ರಿಂದ ಸಂಜೆ 4ರವರೆಗೆ ನಿರ್ಬಂಧ ವಿಧಿಸಲಾಗಿದೆ. ಬಿಸಿಲಿನ…
ರಾಜ್ಯದಲ್ಲಿ ಉಷ್ಣಾಂಶ ಏರಿಕೆ ಮುಂದುವರಿದಿದ್ದು, ಕಲಬುರಗಿಯಲ್ಲಿ 43.2°C ದಾಖಲಾಗಿದೆ. ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ…