ಪುತ್ತೂರು: ನವ್ಯ ಕಾವ್ಯ ಕರ್ನಾಟಕದ ಮೊತ್ತ ಮೊದಲ, ಕನ್ನಡ ಕವಿತೆಗಳ ಪ್ರಕಟಣೆ ಮತ್ತು ಪ್ರಸಾರಕ್ಕಾಗಿಯೇ ನಿರ್ಮಿತವಾದ ಅಂತರ್ಜಾಲ ತಾಣ. ಈ ತಾಣದ ಮೂಲಕ ಕಾವ್ಯ ಲಹರಿ 2019 ಕವನ ಸ್ಪರ್ಧೆಯನ್ನು ಆಯೋಜಿಸಿದೆ.
ನವ್ಯ ಕಾವ್ಯ ಜಾಲತಾಣವು ಉದಯೋನ್ಮುಖ ಕನ್ನಡ ಕವಿ-ಕವಯಿತ್ರಿಗಳ ಪ್ರತಿಭಾ ಪ್ರದರ್ಶನಕ್ಕೆ ಮತ್ತು ಕಾವ್ಯಾಸಕ್ತರ ಮನೋರಂಜನೆಗೆ ತಕ್ಕುದಾದ ವೇದಿಕೆಯಾಗಿದ್ದು, ನವರಸಯುಕ್ತ ಕವನಗಳ ಭರಪೂರ ಆನಂದವನ್ನು ಪಡೆಯಬಹುದು. ಅಲ್ಲದೆ ನವ ಪೀಳಿಗೆಯಲ್ಲಿ ಕನ್ನಡ ಸಾಹಿತ್ಯದ ಕುರಿತಾಗಿ ಆಸಕ್ತಿಯನ್ನು ಚಿಗುರಿಸಿ, ಯುವಕ-ಯುವತಿಯರನ್ನು
ಕನ್ನಡದಲ್ಲಿ ಸೃಜನಶೀಲ ಕವನಗಳನ್ನು ಬರೆಯಲು ಪ್ರೇರೇಪಿಸಿ, ತನ್ಮೂಲಕ ಕನ್ನಡ ನುಡಿ ಮತ್ತು ಕನ್ನಡ ಸಾಹಿತ್ಯದ ಉಳಿವು-ಬೆಳವಿಗೆ ಅಳಿಲ ಸೇವೆಯನ್ನು ಸಲ್ಲಿಸುವ ಉದ್ದೇಶವೂ ಇದರ ಹಿಂದಿದೆ.
ನವ್ಯ ಕಾವ್ಯ ಜಾಲತಾಣವು ಈ ವರ್ಷವೂ ಕವನ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧೆಯ ವಿವರಗಳನ್ನು ಚಿತ್ರದಲ್ಲಿ ನೀಡಲಾಗಿದೆ. ಆಸಕ್ತರು ನೊಂದಣಿಯನ್ನು ಮಾಡಲು https://imjo.in/3P6bUe ಕೊಂಡಿಯನ್ನು ಉಪಯೋಗಿಸಿ. ಹೆಚ್ಚಿನ ವಿವರಗಳಿಗೆ +919164561755, ಅನೀಶ್ ಪಿ ವಿ ಇವರಿಗೆ ಕರೆ ಮಾಡಬಹುದು.
ಜಾಲತಾಣದ ವೀಕ್ಷಣಗೆ http://www.navyakavya.in ಭೇಟಿ ಕೊಡಬಹುದು.
ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.
''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…
ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…
ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.
ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್ ಇಂಡಸ್ಟ್ರೀಸ್(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…
ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…