ಪುತ್ತೂರು: ನವ್ಯ ಕಾವ್ಯ ಕರ್ನಾಟಕದ ಮೊತ್ತ ಮೊದಲ, ಕನ್ನಡ ಕವಿತೆಗಳ ಪ್ರಕಟಣೆ ಮತ್ತು ಪ್ರಸಾರಕ್ಕಾಗಿಯೇ ನಿರ್ಮಿತವಾದ ಅಂತರ್ಜಾಲ ತಾಣ. ಈ ತಾಣದ ಮೂಲಕ ಕಾವ್ಯ ಲಹರಿ 2019 ಕವನ ಸ್ಪರ್ಧೆಯನ್ನು ಆಯೋಜಿಸಿದೆ.
ನವ್ಯ ಕಾವ್ಯ ಜಾಲತಾಣವು ಉದಯೋನ್ಮುಖ ಕನ್ನಡ ಕವಿ-ಕವಯಿತ್ರಿಗಳ ಪ್ರತಿಭಾ ಪ್ರದರ್ಶನಕ್ಕೆ ಮತ್ತು ಕಾವ್ಯಾಸಕ್ತರ ಮನೋರಂಜನೆಗೆ ತಕ್ಕುದಾದ ವೇದಿಕೆಯಾಗಿದ್ದು, ನವರಸಯುಕ್ತ ಕವನಗಳ ಭರಪೂರ ಆನಂದವನ್ನು ಪಡೆಯಬಹುದು. ಅಲ್ಲದೆ ನವ ಪೀಳಿಗೆಯಲ್ಲಿ ಕನ್ನಡ ಸಾಹಿತ್ಯದ ಕುರಿತಾಗಿ ಆಸಕ್ತಿಯನ್ನು ಚಿಗುರಿಸಿ, ಯುವಕ-ಯುವತಿಯರನ್ನು
ಕನ್ನಡದಲ್ಲಿ ಸೃಜನಶೀಲ ಕವನಗಳನ್ನು ಬರೆಯಲು ಪ್ರೇರೇಪಿಸಿ, ತನ್ಮೂಲಕ ಕನ್ನಡ ನುಡಿ ಮತ್ತು ಕನ್ನಡ ಸಾಹಿತ್ಯದ ಉಳಿವು-ಬೆಳವಿಗೆ ಅಳಿಲ ಸೇವೆಯನ್ನು ಸಲ್ಲಿಸುವ ಉದ್ದೇಶವೂ ಇದರ ಹಿಂದಿದೆ.
ನವ್ಯ ಕಾವ್ಯ ಜಾಲತಾಣವು ಈ ವರ್ಷವೂ ಕವನ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧೆಯ ವಿವರಗಳನ್ನು ಚಿತ್ರದಲ್ಲಿ ನೀಡಲಾಗಿದೆ. ಆಸಕ್ತರು ನೊಂದಣಿಯನ್ನು ಮಾಡಲು https://imjo.in/3P6bUe ಕೊಂಡಿಯನ್ನು ಉಪಯೋಗಿಸಿ. ಹೆಚ್ಚಿನ ವಿವರಗಳಿಗೆ +919164561755, ಅನೀಶ್ ಪಿ ವಿ ಇವರಿಗೆ ಕರೆ ಮಾಡಬಹುದು.
ಜಾಲತಾಣದ ವೀಕ್ಷಣಗೆ http://www.navyakavya.in ಭೇಟಿ ಕೊಡಬಹುದು.
ಬಿಹಾರದ ಯುರೆನ್ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…
ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…
2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…
ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…