ನಿನ್ನೆ,ಇಂದು ,ನಾಳೆ..

September 12, 2019
5:00 PM
ಬಾಲ್ಯ ಕಳೆದು ಹೋಗಿದೆ
ಇಂದು ಬೀಗುತ್ತಿದೆ ಯೌವನ
ಬೆನ್ನ ಹಿಂದೆ ಬರುತಿರುವುದು
ಮುಪ್ಪಲ್ಲವೇ…?
ಮನದಲ್ಲಿ ಹಳೆನೆನಪು
ಡಂಗೂರ ಸಾರುತಿರೆ
ಮುಪ್ಪಿನ ಚಿಂತೆಯೇಕೆ ಮನಕೆ?
ಬೇಡವೆಂದರೂ ಬರುವ ಮುಪ್ಪು
ಕರೆದಾಗ ಬರುವುದೇ ಬಾಲ್ಯ ?
ನಿನ್ನೆ,ನಾಳೆಯ ಅರಿವಿಲ್ಲದೆ
ಇಂದು ಮನದಲ್ಲಿ ‘ಅಹಂ’
ನಿನ್ನೆ ಆಡಿದ ಜಗಳ
ಇಂದು ಅದೇ..!
ಬದಲಾವಣೆ ಇದೆ
ನಿನ್ನೆ ಆಟಿಕೆಗಳಿಗಾಗಿ
ಇಂದು ಮೂರಡಿ ಜಾಗಕ್ಕಾಗಿ
ನಾಳೆ ನಿನ್ನೆಯ ದಿನಗಳ ಹಿನ್ನೋಟವಷ್ಟೇ..!
ನಿನ್ನೆ ಅಂತರಾಳದ ಮಾತು
ಇಂದು ಜಗಳದಿಂದ ಮುನಿಸು
ನಾಳೆ ಬರೀ ಚಿಂತೆ
ಮತ್ತೆ ಚಿತೆ
ಇದೇ ಮನುಜನ ಜೀವನ
ನಿನ್ನೆ ಇಂದು ನಾಳೆಗಳ ಸಮಾಗಮ
     ಅಪೂರ್ವ ಕೊಲ್ಯ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

E20 ಪೆಟ್ರೋಲ್‌ : ದೇಶದ ಹಿತದ ಹೆಸರಿನಲ್ಲಿ ಸಾಮಾನ್ಯರ ಹೆಗಲಿನ ಮೇಲೆ ಹೆಚ್ಚು”ವರಿ”ಯೇ?
July 8, 2026
12:42 PM
by: ಮಹೇಶ್ ಪುಚ್ಚಪ್ಪಾಡಿ
ವಿವಾಹದ ಬದಲಾಗುತ್ತಿರುವ ಮುಖ
July 5, 2026
2:16 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ
July 5, 2026
7:42 AM
by: ಮಹೇಶ್ ಪುಚ್ಚಪ್ಪಾಡಿ
ಜಾಕ್‌ಫ್ರೂಟ್ ಸ್ಪೈಸಿ – ಹಲಸಿನ ಕಾಯಿಯಿಂದ 5 ನಿಮಿಷದಲ್ಲಿ ರುಚಿಕರ ಸ್ನ್ಯಾಕ್..!
July 4, 2026
3:44 PM
by: ದಿವ್ಯ ಮಹೇಶ್

You cannot copy content of this page - Copyright -The Rural Mirror