Advertisement
ಯಕ್ಷಗಾನ : ಮಾತು-ಮಸೆತ

ನೀನು ತಾಯಿಯಾಗಿ ಉಳಿಯುತ್ತಿಯೋ, ಹೆಂಡತಿಯಾಗಿ ಉಳಿಯುತ್ತಿಯೋ….

Share

 

ಶೇಣಿ ಗೋಪಾಲಕೃಷ್ಣ ಭಟ್ಟರ ‘ಹಿರಣ್ಯಕಶಿಪು’
(ಪ್ರಸಂಗ : ಪ್ರಹ್ಲಾದ ಚರಿತ್ರೆ)

ಸಂದರ್ಭ : ಹರಿನಾಮಸ್ಮರಣೆಯನ್ನು ಬಿಡದ ಮಗನ ಕುರಿತು ಕ್ರೋಧ. ಆತನನ್ನು ಕೊಲ್ಲಿಸಲು ಯತ್ನಿಸಿದರೂ ವಿಫಲ. ಕೊನೆಗೆ ಮಡದಿಯ ಮೂಲಕ ವಿಷ ಕೊಡುವ ನಿರ್ಧಾರ.

“…. ನೀನು ತಾಯಿಯಾಗಿ ಉಳಿಯುತ್ತಿಯೋ, ಹೆಂಡತಿಯಾಗಿ ಉಳಿಯುತ್ತಿಯೋ.. ಅಂದರೆ ಇದೋ… ಹಿಡಿ… ಇದನ್ನು ಪ್ರಹ್ಲಾದನಿಗೆ ಕೊಡತಕ್ಕದ್ದು. ಇಷ್ಟವಿಲ್ಲವೋ…. ನನಗೆ ಕೊಡು ಕಯಾದು… ಇದು ನಿನಗೆ ಅಪ್ಪಣೆ.
…ಗೃಹಿಣಿಯಾಗಿ ಬಂದ ಮೇಲೆ ನಿನ್ನ ಕೈಯಿಂದ ಅಘ್ರ್ಯ, ನಿನ್ನ ಕೈಯಿಂದ ಅನ್ನಪಾನಗಳನ್ನು ಸ್ವೀಕರಿಸಿದ್ದೇನೆ. ಮಕ್ಕಳಿಗೆ ತಾಯಿಯಾಗಿ ಇಕ್ಕಿದೆ. ಗಂಡನಿಗೆ ಹೆಂಡತಿಯಾಗಿ ಇಕ್ಕಿದೆ… ಕಯಾದು.. ನಿನ್ನ ಕೈಯಲ್ಲಿರುವ ಹಾಲಾಹಲ ನನಗೆ ಇಕ್ಕು. ಅಲ್ಲಿದಿದ್ದರೆ ಅವನಿಗೆ (ಪ್ರಹ್ಲಾದನಿಗೆ) ಕೊಡು. ನೆಟ್ಟ ಕೈಯಿಂದ ಕೀಳುವುದಕ್ಕೆ ಯತ್ನಿಸಿದೆ. ಕಿತ್ತರೂ ಅದು ಮತ್ತೂ ಮತ್ತೂ ಬೇರನ್ನು ಎಲ್ಲಿಯೋ ಕ್ಷೇತ್ರದಲ್ಲಿ ಉಳಿಸಿಕೊಂಡಿದೆ. ಈಗ ಬೇರನ್ನೇ ಸುಡುವ ಯೋಚನೆ ನನ್ನದು. ಸ್ವಾತಂತ್ರ್ಯ ನಿನಗೆ ಕೊಟ್ಟಿದ್ದೇನೆ. ನೀನು ಮಗನಿಗೆ ತಾಯಿಯಾದರೆ ಸಾಕೋ; ಅಲ್ಲ, ನನಗೆ ಅರ್ಧಶರೀರೆಯಾಗಬೇಕೋ ನಿನಗೆ ಬಿಟ್ಟದ್ದು.. ನೀನು ಅವನಿಗೆ ಕೊಡುವುದಿಲ್ಲಾ… ನನಗೆ ಕೊಡು ಕಯಾದು.. ನನ್ನ ಆಜ್ಞೆ.

(ವಿಷ ಕುಡಿದು ಬದುಕಿ ಪುನಃ ತಂದೆಯಲ್ಲಿಗ ಪ್ರಹ್ಲಾದ ಬಂದಾಗ)
.. ಹೌದು ಮಗನೇ… ವಿಷ ಮೇಲೆ ಇದ್ದರೂ ಕೂಡಾ ಒಳಗೆ ನಿನ್ನ ಕುರಿತಾದ ‘ಅಮೃತ’ ನನಗೂ ಇದೆ. ನಿನ್ನಮ್ಮನಿಗೂ ಉಂಟು. ಆದ ಕಾರಣ ಆ ಪ್ರೇಮಾಮೃತದ ಮೇಲಿನ ‘ವಿಷ’ ಆಯಿತದು. ಬುಡದಲ್ಲಿದ್ದಂತಹ ಅಮೃತ ಈ ವಿಷದಲ್ಲಿ ಸೇರಿದ್ದು ಗೊತ್ತಾಗಲಿಲ್ಲ….
ನಿನಗೆ ಸಂಪೂರ್ಣ ಬೆಂಬಲ.. ಇನ್ನೊಬ್ಬನಿದ್ದಾನೆ.. ಮಗನೇ, ನಿನ್ನ ಅಪ್ಪ ನಾನು ಎಂದು ಊರಿನವರಿಗೆ ಮುಖ ತೋರಿಸಲು ನಾಚಿಕೆಯಾಗುತ್ತದೆ. ನನಗೆ, ಯಾಕೆ? ಪ್ರಪಂಚವನ್ನೇ ರಕ್ಷಿಸುವ ಮಹಾಪ್ರಭು ನಾನು. ಅಂತಹ ನಾನು ನಿನಗೆ ಅಪ್ಪನಾಗಿ ನನ್ನ ರಕ್ಷೆಯಲ್ಲಿ ನೀನಿಲ್ಲ, ಕಂಡವರ ಕೈಯ ರಕ್ಷೆಯಲ್ಲಿದ್ದಿ ಅಂತಾದ್ರೆ…..

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್‌ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…

5 hours ago

ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ

ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…

6 hours ago

ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ ; ಔಷಧಿಗಿಂತ ಉತ್ತಮ ಜೀವನಶೈಲಿಯೇ ಪರಿಹಾರ: ರಾಘವೇಶ್ವರ ಶ್ರೀ

ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…

7 hours ago

ಕೇರಳದಲ್ಲಿ ಭಾರಿ ಮಳೆ ಆರ್ಭಟ : ಮಲಪ್ಪುರಂನಲ್ಲಿ ಸರಣಿ ಭೂಕುಸಿತ , ಸಂಚಾರ ಸಂಪೂರ್ಣ ಸ್ಥಗಿತ

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…

10 hours ago