Advertisement
ಯಕ್ಷಗಾನ : ಮಾತು-ಮಸೆತ

ನೀನು ತಾಯಿಯಾಗಿ ಉಳಿಯುತ್ತಿಯೋ, ಹೆಂಡತಿಯಾಗಿ ಉಳಿಯುತ್ತಿಯೋ….

Share

 

Advertisement
Advertisement

ಶೇಣಿ ಗೋಪಾಲಕೃಷ್ಣ ಭಟ್ಟರ ‘ಹಿರಣ್ಯಕಶಿಪು’
(ಪ್ರಸಂಗ : ಪ್ರಹ್ಲಾದ ಚರಿತ್ರೆ)

Advertisement

ಸಂದರ್ಭ : ಹರಿನಾಮಸ್ಮರಣೆಯನ್ನು ಬಿಡದ ಮಗನ ಕುರಿತು ಕ್ರೋಧ. ಆತನನ್ನು ಕೊಲ್ಲಿಸಲು ಯತ್ನಿಸಿದರೂ ವಿಫಲ. ಕೊನೆಗೆ ಮಡದಿಯ ಮೂಲಕ ವಿಷ ಕೊಡುವ ನಿರ್ಧಾರ.

“…. ನೀನು ತಾಯಿಯಾಗಿ ಉಳಿಯುತ್ತಿಯೋ, ಹೆಂಡತಿಯಾಗಿ ಉಳಿಯುತ್ತಿಯೋ.. ಅಂದರೆ ಇದೋ… ಹಿಡಿ… ಇದನ್ನು ಪ್ರಹ್ಲಾದನಿಗೆ ಕೊಡತಕ್ಕದ್ದು. ಇಷ್ಟವಿಲ್ಲವೋ…. ನನಗೆ ಕೊಡು ಕಯಾದು… ಇದು ನಿನಗೆ ಅಪ್ಪಣೆ.
…ಗೃಹಿಣಿಯಾಗಿ ಬಂದ ಮೇಲೆ ನಿನ್ನ ಕೈಯಿಂದ ಅಘ್ರ್ಯ, ನಿನ್ನ ಕೈಯಿಂದ ಅನ್ನಪಾನಗಳನ್ನು ಸ್ವೀಕರಿಸಿದ್ದೇನೆ. ಮಕ್ಕಳಿಗೆ ತಾಯಿಯಾಗಿ ಇಕ್ಕಿದೆ. ಗಂಡನಿಗೆ ಹೆಂಡತಿಯಾಗಿ ಇಕ್ಕಿದೆ… ಕಯಾದು.. ನಿನ್ನ ಕೈಯಲ್ಲಿರುವ ಹಾಲಾಹಲ ನನಗೆ ಇಕ್ಕು. ಅಲ್ಲಿದಿದ್ದರೆ ಅವನಿಗೆ (ಪ್ರಹ್ಲಾದನಿಗೆ) ಕೊಡು. ನೆಟ್ಟ ಕೈಯಿಂದ ಕೀಳುವುದಕ್ಕೆ ಯತ್ನಿಸಿದೆ. ಕಿತ್ತರೂ ಅದು ಮತ್ತೂ ಮತ್ತೂ ಬೇರನ್ನು ಎಲ್ಲಿಯೋ ಕ್ಷೇತ್ರದಲ್ಲಿ ಉಳಿಸಿಕೊಂಡಿದೆ. ಈಗ ಬೇರನ್ನೇ ಸುಡುವ ಯೋಚನೆ ನನ್ನದು. ಸ್ವಾತಂತ್ರ್ಯ ನಿನಗೆ ಕೊಟ್ಟಿದ್ದೇನೆ. ನೀನು ಮಗನಿಗೆ ತಾಯಿಯಾದರೆ ಸಾಕೋ; ಅಲ್ಲ, ನನಗೆ ಅರ್ಧಶರೀರೆಯಾಗಬೇಕೋ ನಿನಗೆ ಬಿಟ್ಟದ್ದು.. ನೀನು ಅವನಿಗೆ ಕೊಡುವುದಿಲ್ಲಾ… ನನಗೆ ಕೊಡು ಕಯಾದು.. ನನ್ನ ಆಜ್ಞೆ.

Advertisement

(ವಿಷ ಕುಡಿದು ಬದುಕಿ ಪುನಃ ತಂದೆಯಲ್ಲಿಗ ಪ್ರಹ್ಲಾದ ಬಂದಾಗ)
.. ಹೌದು ಮಗನೇ… ವಿಷ ಮೇಲೆ ಇದ್ದರೂ ಕೂಡಾ ಒಳಗೆ ನಿನ್ನ ಕುರಿತಾದ ‘ಅಮೃತ’ ನನಗೂ ಇದೆ. ನಿನ್ನಮ್ಮನಿಗೂ ಉಂಟು. ಆದ ಕಾರಣ ಆ ಪ್ರೇಮಾಮೃತದ ಮೇಲಿನ ‘ವಿಷ’ ಆಯಿತದು. ಬುಡದಲ್ಲಿದ್ದಂತಹ ಅಮೃತ ಈ ವಿಷದಲ್ಲಿ ಸೇರಿದ್ದು ಗೊತ್ತಾಗಲಿಲ್ಲ….
ನಿನಗೆ ಸಂಪೂರ್ಣ ಬೆಂಬಲ.. ಇನ್ನೊಬ್ಬನಿದ್ದಾನೆ.. ಮಗನೇ, ನಿನ್ನ ಅಪ್ಪ ನಾನು ಎಂದು ಊರಿನವರಿಗೆ ಮುಖ ತೋರಿಸಲು ನಾಚಿಕೆಯಾಗುತ್ತದೆ. ನನಗೆ, ಯಾಕೆ? ಪ್ರಪಂಚವನ್ನೇ ರಕ್ಷಿಸುವ ಮಹಾಪ್ರಭು ನಾನು. ಅಂತಹ ನಾನು ನಿನಗೆ ಅಪ್ಪನಾಗಿ ನನ್ನ ರಕ್ಷೆಯಲ್ಲಿ ನೀನಿಲ್ಲ, ಕಂಡವರ ಕೈಯ ರಕ್ಷೆಯಲ್ಲಿದ್ದಿ ಅಂತಾದ್ರೆ…..

 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ

Published by
ನಾ.ಕಾರಂತ ಪೆರಾಜೆ

Recent Posts

ದಿಢೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣ | ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ |

ದಶಕಗಳ ಹಿಂದೆ ವಿಮಾ ಸಂಸ್ಥೆಯೊಂದು ಸಾಗವಾನಿ ಬೆಳೆಯಲು ರೈತರ ಷೇರು ಪಡೆದುಕೊಂಡು ಹತ್ತೊ…

14 hours ago

ಮಾವು ಮಾಂತ್ರಿಕ ಹಾಗೂ ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ

ನಾಡು ಮಾವು ಸಂರಕ್ಷಣೆ ಕೆಲಸದ ಮೊದಲ ದಿನವದು. ನವೆಂಬರ್ 2022. ಕಸಿ ಕಡ್ಡಿಗಳನ್ನು…

14 hours ago

ಭಾರತದಲ್ಲಿ ಏರಿದ ತಾಪಮಾನ | ಅತ್ತ ತಾಂಜೇನಿಯಾದಲ್ಲಿ ಭಾರೀ ಮಳೆ, ಪ್ರವಾಹ | 155 ಮಂದಿ ಸಾವು |

ಭಾರತದಲ್ಲಿ(India) ಉರಿ ಬಿಸಿಲಿನ ತಾಪ(Heat) ಏರುತ್ತಿದ್ದರೆ ತಾಂಜೇನಿಯಾದಲ್ಲಿ (Tanzania) ಕಳೆದ ವಾರದಿಂದ ಭಾರೀ…

19 hours ago

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು | ದೂರ ಸಾಗಿದ ಮಳೆ | ಬಿಸಿ ಗಾಳಿಯ ಮುನ್ಸೂಚನೆ |

ಮಳೆ ಬರುವ ಕುರುಹೇ ಇಲ್ಲ. ಎಲ್ಲೆಲ್ಲೂ ಬಿಸಿಗಾಳಿಯ ಅಬ್ಬರ, ನೆತ್ತಿ ಸುಡುವ ಸೂರ್ಯ. ರಾಜ್ಯಾದ್ಯಂತ…

19 hours ago

ಹವಾಮಾನ ವೈಪರೀತ್ಯ | ಕೃಷಿ ಕಾರ್ಮಿಕರಿಗೆ ಈಗ ಬಿಸಿಗಾಳಿ ಸಂಕಷ್ಟ | ಕೃಷಿಗೂ ಸಮಸ್ಯೆ-ಕೃಷಿ ಬೆಳವಣಿಗೆ ಕುಂಠಿತ |

ತಾಪಮಾನ ಏರಿಕೆಯಿಂದ ಹಲವು ಕಡೆ ಸಮಸ್ಯೆಯಾಗುತ್ತಿದೆ. ಕೃಷಿ ನಷ್ಟದ ಜೊತೆಗೆ ಗ್ರಾಮೀಣ ಭಾಗದಲ್ಲಿ…

20 hours ago

ಮಳೆಗಾಗಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ |

ಮಳೆಗಾಗಿ ಪುತ್ತೂರಿನ ಶ್ರೀ‌ಮಹಾಲಿಂಗೇಶ್ವರ ದೇವಳದಲ್ಲಿ‌ ಪರ್ಜನ್ಯ ಜ‌ಪ ನೆರವೇರಿತು.

21 hours ago