Advertisement
ಅನುಕ್ರಮ

ನೀರಿನ ಬರಕ್ಕೆ ರಬ್ಬರ್ ತೋಟ ಕಾರಣವೇ?

Share

ಈ ಬೇಸಿಗೆ ನೀರಿಲ್ಲದೆ ಎಲ್ಲರನ್ನೂ ಕಂಗಾಲಾಗಿಸಿಬಿಟ್ಟಿದೆ. ಕರಾವಳಿಯಲ್ಲಿ ಒಂದೆರಡಾದರೂ ಮಳೆ ಬರಲು ಮೇ ತಿಂಗಳ 23 ನೇ ತಾರೀಕು ಬರಬೇಕಾಯಿತು. ಮಾರ್ಚ್ ಕೊನೆಗೆ ಅಥವ ವಿಷುವಿನ ಸಮಯ ಅಂದರೆ ಏಪ್ರಿಲ್ ಹತ್ತರಿಂದ ನಂತರ ಮಳೆ ಬರುವ ಕ್ರಮ ಸಾಮಾನ್ಯವಾಗಿರುತ್ತದೆ ಎಂಬ ನೆನಪಿನ ಭಂಡಾರವನ್ನು ಹಿರಿಯ ಕೃಷಿಕರು ನಮ್ಮ ಮುಂದೆ ಬಿಚ್ಚುತ್ತಾರೆ.

ಆದರೆ ಈ ವರ್ಷ ಪಂಚಾಂಗ ಹೇಳುವ ಸಮಯದಲ್ಲಿ ಮಳೆ ಬರಲೇ ಇಲ್ಲ. ನದಿ ಬತ್ತಿತು, ತೋಡು ಬತ್ತಿತು, ಕೆರೆ, ಬಾವಿ, ಸುರಂಗಗಳೆಲ್ಲ ನೀರಿನ ಕೊರತೆಯನ್ನು ಪ್ರಸ್ತುತಪಡಿಸಲು ಆರಂಭಿಸಿಯಾಯಿತು. ಕೊಟ್ಟ ಕೊನೆಯ ಆಸೆಯಾಗಿದ್ದ ಕೊಳವೆಬಾವಿಗಳು ಕೂಡ ಕೈಕೊಟ್ಟವು. ಇಡೀ ಬೇಸಿಗೆಯಲ್ಲಿ ಮಕ್ಕಳನ್ನು ನೋಡಿದಂತೆ, ಸಾಕಿ ಸಲಹಿದಂತೆ ಇದ್ದ ಅಡಿಕೆ ಮತ್ತು ತೆಂಗಿನ ತೋಟಗಳು ಕೊನೆಯ ಒಂದೂವರೆ ತಿಂಗಳಿನಲ್ಲಿ ವ್ಯರ್ಥವಾಯಿತು. ಪಟ್ಟ ಶ್ರಮಗಳೆಲ್ಲ ನಿರರ್ಥಕವಾದವು. ಸಹಜವಾಗಿ ಕೃಷಿಕರು ವೇದನೆ ಪಡುತ್ತಾರೆ. ಅಸಹಾಯಕರಾಗಿ ಮಾತನಾಡುತ್ತಾರೆ. ಅವರಲ್ಲಿ ಇವರಲ್ಲಿ ಮಳೆ ತಡವಾದ ಬಗ್ಗೆ, ನೀರಿನ ಲಭ್ಯತೆಗಳ ಬಗ್ಗೆ ಮಾತಿಗಿಳಿಯುತ್ತಾರೆ. ನಿಟ್ಟುಸಿರುಬಿಡುತ್ತಾರೆ. ಇಂತಹ ಅಸಹಾಯಕ ಸನ್ನಿವೇಶದಲ್ಲಿ ಕೆಲವೊಂದು ಕಾರಣಗಳು ಹುಟ್ಟಿಕೊಂಡು ಸಂದೇಹದಿಂದ ನೋಡುವ ಮಾನಸಿಕತೆ ಬೆಳೆಯುವುದು ಸಹಜ.

ಇಲ್ಲಿಯೂ ಆದುದು ಅದೇ. ಅಡಿಕೆ ತೋಟ ನೀರಿನ ಅಭಾವದಿಂದ ಬಾಡಿ ಬಸವಳಿದು ತುದಿ ರಟ್ಟಿಸಿಕೊಂಡು ಇದ್ದಾಗ ಯಾರಿಗೋ ನೀರಿನ ಅಭಾವಕ್ಕೆ ರಬ್ಬರ್ ಕೃಷಿಯೇ ಕಾರಣವಾಗಿರಬಹುದೆ ಎಂಬ ಅನುಮಾನ ಕಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾತುಗಳು ಕೇಳಿಬಂದವು. ಕೆಲವರು ಬಲವಾಗಿ ನಿರಾಕರಿಸಿದರೆ ಇನ್ನು ಹಲವರು ರಬ್ಬರ್ ಕೃಷಿಯ ಮೇಲೆ ಒಂದಷ್ಟು ಸಂಶಯಪಟ್ಟರು. ಸಾಕಷ್ಟು ಮಂದಿ ಹಿರಿಯರು ಕೂಡ ರಬ್ಬರ್ ಮರಗಳ ಮೇಲೆಯೇ ಸಂಶಯಪಡುತ್ತಾರೆ. ಇದೊಂದು ಬಂದ ಮೇಲೆಯೇ ನಮ್ಮ ಊರಿನ ನೀರೊಸರು ಕಡಿಮೆಯಾದದ್ದು ಎಂಬುದು ಅವರ ವಾದ. ಮೊನ್ನೆ ಬೇಳದ ಸಾಯಿಮಂದಿರದಲ್ಲಿ ಮದುವೆಗೆ ಹೋಗಿದ್ದೆ. ಅಲ್ಲಿಯ ವಾತಾವರಣವೆಂದರೆ ಅಡಿಕೆ ಪತ್ತಾಯಕ್ಕೆ ಹೊಕ್ಕುಕುಳಿತ ಸ್ಥಿತಿ. ಅಲ್ಲಿ ನೀರಿನ ಕೊರತೆ, ನೀರೊರತೆ ಭೂಮಿಯಲ್ಲಿ ಕಡಿಮೆಯಾದ ಬಗ್ಗೆ ಚರ್ಚೆ ಜೋರಿತ್ತು. ಅಲ್ಲಿಯೇ ಸೊಂಪಾಗಿ ಬೆಳೆದು ನಿಂತಿದ್ದ ರಬ್ಬರ್ ತೋಟವನ್ನು ತೋರಿಸಿ ಕೆಲವರು ಹೇಳುತ್ತಿದ್ದರು “ ನೋಡಿ ಹೇಳುವುದಕ್ಕೆ ಎದುರೇ ಉದಾಹರಣೆ ಇದೆ, ನಾವು ಗುಡ್ಡದಲ್ಲಿರುವ ಎಲ್ಲ ಮರಗಳು ಸೊಪ್ಪು ಬಾಡಿದ ಸ್ಥಿತಿಯಲ್ಲಿದ್ದರೆ ರಬ್ಬರ್ ಮರಗಳು ಹಚ್ಚ ಹಸಿರಾಗಿ ಗಾಳಿಗೆ ತೂಗಿ ತೊನೆಯುತ್ತಿದೆ. ಈ ಸಮಯದಲ್ಲಿಯೂ ಅದು ಹಾಲಿಳಿಸಬೇಕೆಂದಾದರೆ ಭೂಮಿಯೊಳಗಿನ ಅದೆಷ್ಟು ನೀರನ್ನು ಅದು ಹೀರಿರಬೇಡ. ಇದ್ದ ನೀರೆಲ್ಲ ಅದರ ಬೇರು ಹೀರಿದ ಮೇಲೆ ಮತ್ತೆ ಬೇರೆಡೆಗೆ ಹೋಗಲು ನೀರಾದರೂ ಎಲ್ಲಿ” ಎಂದು. ಇದು ಅಧ್ಯಯನಯೋಗ್ಯ ವಿಷಯ ಎಂಬುದರಲ್ಲಿ ಎರಡು ಮಾತಿಲ್ಲ.
ಇನ್ನೊಂದು ತರ್ಕವಿದೆ. ಅದರ ಪ್ರಕಾರ ಹಿಂದೆ ರಬ್ಬರ್ ಕಾಲಿಡುವ ಮೊದಲು ನೀರಿತ್ತು ಹೌದು. ಆದರೆ ಅದರ ನಂತರ ನೀರಿನ ಬಳಕೆ ಎಷ್ಟು ಹೆಚ್ಚಾಯಿತು ಎಂಬುದನ್ನು ನಾವು ವಿಮರ್ಶೆ ಮಾಡಿದ್ದಿದೆಯೇ? ಅದೆಷ್ಟು ಕೃಷಿ ವಿಸ್ತರಣೆ ಆಯಿತು, ಕೈಗಾರಿಕೆಗಳು ಬೆಳೆದವು, ಜನಸಂಖ್ಯೆ ಹೆಚ್ಚಾಯಿತು, ನಗರಗಳು ಬೆಳೆದವು. ಹೀಗೆಲ್ಲ ನೀರಿನ ಬಳಕೆಯೂ ಹೆಚ್ಚಾಯಿತು, ಅಂತರ್ಜಲಕ್ಕೆ ಕನ್ನವನ್ನೂ ಕೊರೆದೆವು. ಎಲ್ಲವೂ ಸೇರಿ ನೀರೊರತೆ ಕಡಿಮೆಯಾಯಿತು. ಹೀಗೆನ್ನುವವರು ರಬ್ಬರ್ ತೋಟ ಮಾಡಿದ ನಂತರ ನಮ್ಮ ಸುರಂಗದಲ್ಲಿ, ಬಾವಿಯಲ್ಲಿ ನೀರೊಸರು ಹೆಚ್ಚಿದೆ. ರಬ್ಬರ್ ಗುಡ್ದದಲ್ಲಿ ಬಿದ್ದ ಮಳೆನೀರು ಕಣಿಯಾಗಿ ಹರಿಯದೆ ಅಲ್ಲಿಯೇ ಇಂಗುತ್ತದೆ. ಆದ್ದರಿಂದ ಅಂತರ್ಜಲಕ್ಕೆ ಪೂರಕ ರಬ್ಬರ್ ತೋಟ ಎಂಬವರು ಇದ್ದಾರೆ.

ಯಾವುದಿದ್ದರೂ ನಾವು ಹೊಸ ಬೆಳೆಗಳಿಗೆ ಕಾಲಿಡುವ ಮೊದಲು ಅದು ನಮ್ಮ ನೆಲದ ಸತ್ವಕ್ಕೆ ಪೂರಕವೇ ವಿನಾಶಕಾರಿಯೇ ಎಂಬುದನ್ನು ನಾವು ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಅಕೇಶಿಯಾದ ಕಾಡನ್ನು ಸರಕಾರವೇ ಬೆಳೆಸಿತು. ಮರ ಬೆಳೆದು ನಿಂತಾಗ ಅದು ಪರಿಸರಕ್ಕೆ ಪೂರಕವಲ್ಲ ಎಂಬ ಅಂಶ ತಿಳಿದು ಅದರ ನಾಶಕ್ಕೆ ಮುಂದಾಗಬೇಕಾಯಿತು. ಆದರೆ ಅದು ನಾಶವಾಗದಷ್ಟು ವಿಸ್ತೃತವಾಗಿ ಬೆಳೆದು ಪಸರಿಸಿದ್ದು ನಿಜವಾಗಿಯೂ ಅದು ಪರಿಸರಕ್ಕೆ ಪೂರಕವಲ್ಲದಿದ್ದರೆ ಅದನ್ನು ಅಳಿಸುವುದು ಕೂಡ ದುಸ್ತರವಾಗಲಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಶಂ. ನಾ. ಖಂಡಿಗೆ

ಕೃಷಿಕ, ಬರಹಗಾರರು

Published by
ಶಂ. ನಾ. ಖಂಡಿಗೆ

Recent Posts

ಹವಾಮಾನ ವರದಿ | 20.09.2026 |ಕರ್ನಾಟಕದಲ್ಲಿ ಸೆ.25ರವರೆಗೆ ಮಳೆಯ ಲಕ್ಷಣ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಸಾಧ್ಯತೆ

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಉ ತ್ತಮ ಮಳೆಯ…

2 hours ago

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಸೆ.22ರಿಂದ ಇನ್ನಷ್ಟು ಚುರುಕು, 7 ದಿನಗಳ ಎಚ್ಚರಿಕೆ

ಕರ್ನಾಟಕದಲ್ಲಿ ಮಳೆಯ ಚಟುವಟಿಕೆ ಮತ್ತೆ ಹೆಚ್ಚಾಗುವ ಸೂಚನೆ ದೊರೆತಿದ್ದು, ಮುಂದಿನ ಏಳು ದಿನಗಳ…

6 hours ago

ತೆಂಗಿನಕಾಯಿ ರಫ್ತಿನಲ್ಲಿ ಭಾರತ ಶೇ.62ರಷ್ಟು ಏರಿಕೆ

ಭಾರತದ ತೆಂಗಿನಕಾಯಿ ರಫ್ತು ಮೌಲ್ಯ ಒಂದೇ ವರ್ಷದಲ್ಲಿ ಶೇ.62ರಷ್ಟು ಏರಿಕೆಯಾಗಿ ₹7,038 ಕೋಟಿಗೆ…

1 day ago

ಸಮುದ್ರ ಮಾರ್ಗದಲ್ಲಿ ಅಡಿಕೆ ಸಾಗಾಟ : ಒಡಿಶಾದ ಬಾಲಸೋರ್‌ನಲ್ಲಿ ₹2 ಕೋಟಿಗೂ ಅಧಿಕ ಅಡಿಕೆ ವಶ- ಅಡಿಕೆ ಜಾಲದ ಹಿಂದೆ ಬಿದ್ದಿರುವ ಪೊಲೀಸರು

ಒಡಿಶಾದ ಬಾಲಸೋರ್‌ನಲ್ಲಿ ಸಮುದ್ರ ಮಾರ್ಗದ ಮೂಲಕ ಅಡಿಕೆ ಸಾಗಾಟದ ಹಲವು ಪ್ರಕರಣಗಳು ಪತ್ತೆಯಾಗಿದ್ದು,…

1 day ago

ಹವಾಮಾನ ವರದಿ | 19-09-2026 | ಸೆ.22 ರಿಂದ ಮಳೆ ಹೆಚ್ಚಳದ ಸೂಚನೆ – ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ

ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಮುಂದುವರಿಯುವ ಸೂಚನೆ ಇದ್ದು, ಸೆ.22ರಿಂದ ಕರಾವಳಿ–ಮಲೆನಾಡಿನಲ್ಲಿ ಮಳೆ…

1 day ago

ಗೋಮಯದಿಂದ ಗಣೇಶನ ಮೂರ್ತಿ – ದೇಶದಾದ್ಯಂತ ಸಾವಿರಾರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿತರಣೆ

ತಂದೆಯ ನೆನಪಿಗಾಗಿ ಇಂದೋರ್‌ನ ವ್ಯಕ್ತಿಯೊಬ್ಬರು ಗೋಮಯದಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ…

1 day ago