ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮ ನೀರ ನೆಮ್ಮದಿಯತ್ತ ಎಂಬ ಯೋಜನೆಯನ್ನು ಕಳೆದ ವರ್ಷ ಹಮ್ಮಿಕೊಂಡಿದೆ. ಪಡ್ರೆ ಗ್ರಾಮದಲ್ಲಿ ಜಲಸಂರಕ್ಷಣೆ ಹಾಗೂ ಜಲ ಅಭಿಯಾನ ಕಳೆದ ವರ್ಷ ಹಮ್ಮಿಕೊಂಡಿತ್ತು. ಇದಕ್ಕಾಗಿ ಪಡ್ರೆಯ ಹೊಳೆಯಲ್ಲಿ ಹೊಳೆಯ ಆಸುಪಾಸಿನ ಜನರೆಲ್ಲಾ ಹೊಳೆ ನಡಿಗೆ ಮೂಲಕ ಅಧ್ಯಯನ ಮಾಡಿ ಎಲ್ಲಿ , ಹೇಗೆ ಕಟ್ಟ ಕಟ್ಟಬೇಕು, ಜಲಸಂರಕ್ಷಣೆ ಮಾಡಬೇಕು ಎಂದು ಯೋಜನೆ ಹಾಕಿಕೊಂಡಿದ್ದರು. ಈ ವರ್ಷ ಅದರ ಅನುಷ್ಠಾನ. ಈ ಅನುಷ್ಠಾನ ಕಾರ್ಯಕ್ರಮವೂ ಸಮಾಜದ ಇತರ ಕಡೆಗಳಲ್ಲಿ ಪ್ರೇರಣೆಯಾಗಬೇಕು ಎಂಬ ಉದ್ದೇಶದಿಂದ ಇನ್ನೊಂದು ವಿನೂತನ ಜಾಗೃತಿ ಅಭಿಯಾನ “ಚಿಣ್ಣರೇ, ಕಟ್ಟ ನೋಡೋಣು ಬನ್ನಿ…”
ಮುಂದಿನ ಒಂದು ತಿಂಗಳು ತೋಡುಗಳಿಗೆ ಕಟ್ಟ ಕಟ್ಟುವ ಸಮಯ. ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮ ಈ ವರ್ಷ ಈ ಋತುವಿನಲ್ಲಿ ಹೊಸದೊಂದು ಕಾರ್ಯಕ್ರಮ ಹಾಕಿಕೊಂಡಿದೆ. ಅದುವೇ ಎಳೆ ಪೀಳಿಗೆಗೆ ಕಟ್ಟದ ಬಗ್ಗೆ ಕಂಡರಿವು ಮೂಡಿಸುವ ಯೋಜನೆ.
ಡಿ.1 ರಿಂದ ಪಡ್ರೆಯಲ್ಲಿ ’ನೀರ ನೆಮ್ಮದಿಯತ್ತ ಪಡ್ರೆ’ ( ನೀನೆಪ) ತಂಡ ’ಕಟ್ಟ ಕಟ್ಟುವ ಹಬ್ಬ’ ಆಚರಿಸಲು ತೊಡಗುತ್ತದೆ. ಡಿಸೆಂಬರ್ ಕೊನೆಯ ವರೆಗೆ ಇಲ್ಲಿ ಸುಮಾರು ಎರಡು- ಮೂರು ಡಜನ್ ಕಟ್ಟಗಳ ನಿರ್ಮಾಣವಾಗಲಿದೆ. ಈ ಸಂದರ್ಭದಲ್ಲಿ ಊರ – ಪರವೂರವರಗೆ ಮತ್ತು ಸುತ್ತುಮುತ್ತಲಿನ ಶಾಲೆಯ ಎಳೆಯರಿಗೆ ಈ ತಂತ್ರಜ್ಞಾನದ ತಿಳಿವಳಿಕೆ ಹಂಚುವುದನ್ನೇ ಈ ತಂಡ ಹಬ್ಬದ ಉದ್ದೇಶವಾಗಿಟ್ಟುಕೊಂಡಿದೆ.
ನೆರೆಯ ಕೇರಳ – ಕರ್ನಾಟಕದ ಶಾಲಾ ಕಾಲೇಜಿನ ಅಧ್ಯಾಪಕರು ನೀನೆಪದ ’ಕಟ್ಟ ದರ್ಶನ’ದ ಸಂಯೋಜಕರನ್ನು ಸಂಪರ್ಕಿಸಿ ದಿನ ಗೊತ್ತು ಮಾಡಿಕೊಂಡು ಪಡ್ರೆಗೆ ಭೇಟಿ ನೀಡಬಹುದು. ಕಟ್ಟ ನಿರ್ಮಾಣದ ರೀತಿ, ಅದರ ಮಹತ್ವಗಳ ಬಗ್ಗೆ ಅಲ್ಲಲ್ಲಿನ ಕೃಷಿಕ ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಡುತ್ತಾರೆ.
ಈ ಅವಕಾಶವನ್ನು ಸುತ್ತಲಿನ ಶಾಲಾ-ಕಾಲೇಜುಗಳ ಪರಿಸರ ಕ್ಲಬ್ಬು, ಎನ್ನೆಸ್ಸೆಸ್ ಇತ್ಯಾದಿ ಘಟಕಗಳ ಪ್ರತಿನಿಧಿಗಳು, ಕೃಷಿಕರ ಗುಂಪುಗಳು ಬಳಸಿಕೊಳ್ಳಬಹುದು. ಆಸಕ್ತರು ’ಕಟ್ಟ ದರ್ಶನ’ದ ಸಂಯೋಜಕ ಶ್ರೀಹರಿ ಆರ್ ಅವರನ್ನು (94950 66261) ಸಂಪರ್ಕಿಸಬಹುದು.
ಚಿಕ್ಕ ವಯಸ್ಸಿನ ಕುಕನೂರಿನ ಶಿವಾನಂದ ಕ್ರಿಕೆಟ್ ಫೀಲ್ಡಿಂಗ್ ಮಾಡುತ್ತಿದ್ದ. ಚಂಡು ಕಳ್ಳಿಯ ಪೊದೆಯಲ್ಲಿ…
ಬಹುತೇಕ ಕೊಳೆತು ಮಣ್ಣುಪಾಲಾಗುವ ಗೇರುಹಣ್ಣಿಗೂ(Cashew fruit) ಮೌಲ್ಯವಿದೆ. ಆದರೆ ಮೌಲ್ಯವರ್ಧನೆ(Value addition) ಮಾಡಿದಾಗ ಮಾತ್ರ!…
ಬಿದಿರು(Bamboo) ನಾನಾರಿಗಲ್ಲದವಳು ಎಂಬ ಸಂತ ಶಿಶುನಾಳ ಶರೀಪರ(Shishunala Sharifa) ಹಾಡನ್ನು ನೀವು ಕೇಳಿರುತ್ತೀರಿ.…
ಇಂದು ಮೊಬೈಲ್ ಫೋನ್(Mobile Phone) ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ಫೋನ್ ಅನ್ನು…
ಕಳೆದ ಬಾರಿ ಕೆಂಪು ಮೆಣಸಿನಕಾಯಿ(Red chilli) ಬೆಲೆ(Price hike) ಗಗನಕ್ಕೇರಿತ್ತು. ಈ ಬಾರಿ…
ಈಗಿನ ಪ್ರಕಾರ ಮುಂದಿನ 10 ದಿನಗಳವರೆಗೂ ರಾಜ್ಯದ ಅಲ್ಲಲ್ಲಿ ಮಳೆ ಮುಂದುವರಿಯುವ ಲಕ್ಷಣಗಳಿವೆ.