(ಫೈಲ್ ಚಿತ್ರ)
ಮಂಗಳೂರು: ಕ್ಯಾಂಪ್ಕೋ ನಿಯಮಿತ ಮಂಗಳೂರು ಹಾಗೂ ರುಡಸೆಟ್ ಉಜಿರೆ ಇವುಗಳ ಆಶ್ರಯದಲ್ಲಿ ಫೆ.3 ರಿಂದ 12 ರವರೆಗೆ ಅಡಿಕೆ ಮತ್ತು ತೆಂಗಿನಮರ ಏರುವ ತರಬೇತಿ ಶಿಬಿರ ನಡೆಯಲಿದೆ.
20 ರಿಂದ 45 ವರ್ಷ ವಯೋಮಾನದ ಯುವಕರಿಗೆ ತರಬೇತಿ ಶಿಬಿರ ನಡೆಯಲಿದೆ. ಉಜಿರೆಯ ರುಡಸೆಟ್ ತರಬೇತಿ ಕೇಂದ್ರದಲ್ಲಿ ನಡೆಯುವ ಈ ಶಿಬಿರದಲ್ಲಿ ಭಾಗವಹಿಸಲು ಆಸಕ್ತರು ತಮ್ಮ ಹೆಸರನ್ನು ವಿನಯ ಕುಮಾರ್ ಇವರಲ್ಲಿ ಜ.25 ರ ಒಳಗಾಗಿ ಹೆಸರನ್ನು ನೊಂದಾಯಿಸಕೊಳ್ಳಬೇಕಾಗಿ ಪ್ರಕಟಣೆ ತಿಳಿಸಿದೆ. ಸಂಪೂರ್ಣ ಇನ್ ಹೌಸ್ ಕಾರ್ಯಕ್ರಮ ಇದಾಗಿದ್ದು ಅಭ್ಯರ್ಥಿಗಳು ಶಿಬಿರಪೂರ್ತಿ ಇರಬೇಕಾಗುತ್ತದೆ. ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದ್ದು , ಹತ್ತು ದಿನಗಳಿಗೆ ಬೇಕಾದ ಬಟ್ಟೆ, ದಿನ ಉಪಯೋಗಿ ವಸ್ತುಗಳನ್ನು ಬರುವಾಗ ಅಭ್ಯರ್ಥಿಗಳು ತರಬೇಕಾಗಿದೆ.
ಸಂಪರ್ಕ ವಿಳಾಸ:
ವಿನಯ ಕುಮಾರ್
ಡೈರೆಕ್ಟರ್ ರುಡ್ ಸೆಟ್, ಉಜಿರೆ
ದೂರವಾಣಿ: 9483599244
ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…
ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…